Pages

Saturday, February 18, 2012

ಸತ್ಯದ ವಿಚಾರಗಳು ಹರಡಲಿ

ಮನವಿ

ಸಾಮಾನ್ಯವಾಗಿ ತುಂಬಾ ಚರ್ಚೆ ಯಾಗುವ ವಿಷಯವೇ "ದೇವರು" 
ವೇದಸುಧೆಯ ಓದುಗರು ಸಾಮಾನ್ಯವಾಗಿ ಎಲ್ಲರೂ ದೇವರ ಅಸ್ಥಿತ್ವವನ್ನು ನಂಬುವವರೇ ಆಗಿದ್ದಾರೆ.ಆದರೂ ಕೆಲವರು ರೂಢಿಯಲ್ಲಿ ಬಂದಿರುವ ವಿಚಾರಕ್ಕೆ ಹೆಚ್ಚು ಮಹತ್ವ ಕೊಟ್ಟರೆ ಕೆಲವರು ವೇದದ ಆಧಾರದ ಮೇಲೆ ದೇವರ ಬಗ್ಗೆ ವಿವರಿಸುತ್ತಾರೆ. ಎಲ್ಲರೂ ವೇದಸುಧೆಯಲ್ಲಿದ್ದಾರೆ. ದೇವರ ಅಸ್ತಿತ್ವವನ್ನು ನಂಬದವರಿಗೂ ವೇದಸುಧೆಯ ಸ್ವಾಗತವಿದೆ. ಒಂದೆ ಒಂದು ಪ್ರಾರ್ಥನೆ ಎಂದರೆ ವಿಷಯವನ್ನು ಹೆಚ್ಚು ಆಳವಾಗಿ ತಿಳಿದುಕೊಳ್ಳುವುದಕ್ಕಾಗಿ ಮಾತ್ರ  ಇಲ್ಲಿ  ಚರ್ಚೆ ಮಾಡುವುದು ಉತ್ತಮ. ನನ್ನದೇ ವಾದ ಗೆಲ್ಲಬೇಕೆಂಬ ನಿಲುವು  ಒಳ್ಳೆಯ ಚರ್ಚೆಗೆ ಆಸ್ಪದ ಕೊಡುವುದಿಲ್ಲ. ಅಲ್ಲದೆ ಒಂದು ವೇಳೆ ನನ್ನ ವಿಚಾರವನ್ನು ಕೆಲವರು ಒಪ್ಪದಿದ್ದರೂ ಚಿಂತೆಯಿಲ್ಲ. ಯಾವತ್ತೋ ಒಂದುದಿನ ಸತ್ಯ ಎಲ್ಲರಿಗೂ ಅರ್ಥವಾಗುವುದರಲ್ಲಿ ಸಂದೇಹವಿಲ್ಲ. ಒಂದು ಉತ್ತಮ ವಾತಾವರಣದಲ್ಲಿ ಚರ್ಚೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿ ಮನವಿ ಮಾಡುವೆ. ಅಷ್ಟೇ ಅಲ್ಲ, ನಮ್ಮ ಹಲವು ಆಚರಣೆಗಳು ಅರ್ಥ ಕಳೆದುಕೊಂಡಿರುವುದು ಸುಳ್ಳಲ್ಲ.  ಅಂಧಾನುಕರಣೆ ಮಾಡುತ್ತಿರುವ ಆಚರಣೆಗಳ ಬಗ್ಗೆಯೂ ಚರ್ಚೆಯಾಗುವುದು ಉತ್ತಮ. ಒಟ್ಟಿನಲ್ಲಿ  ಒಂದು ಉತ್ತಮ ಜೀವನಕ್ಕಾಗಿ , ಆನಂದದ ಜೀವನಕ್ಕಾಗಿ ಬಿಚ್ಚು ಮನಸ್ಸಿನಿಂದ ಇಲ್ಲಿ ಚರ್ಚಿಸೋಣ. ಯಾರೂ ಕೂಡ  ಚರ್ಚೆಯನ್ನು  ತಮ್ಮ ವೈಯಕ್ತಿಕ ಗೆಲುವು ಅಥವಾ ಸೋಲು ಎಂದು ಭಾವಿಸುವುದು ಬೇಡ. ಸತ್ಯದ ವಿಚಾರಗಳು ಹರಡಲಿ. ನಿಜವ ತಿಳಿದುಕೊಳ್ಳುವ ನಮ್ಮ ಹಂಬಲ ಹೆಚ್ಚಲಿ.
-ಹರಿಹರಪುರಶ್ರೀಧರ್
ಸಂಪಾದಕ 

No comments:

Post a Comment