Pages

Tuesday, June 12, 2012

ರುಚಿಗಾಗಿ ತಿಂದರೆ ಭೋಗ,ಹಸಿವಿಗಾಗಿ ತಿಂದರೆ ಯೋಗ

ತುಮಕೂರಿನವರಾದ  ಶ್ರೀ ನಾಗರಾಜ ರಾವ್, ಕೆಂದ್ರ  ಸರ್ಕಾರದ  ಮಾನವ ಸಂಪನ್ಮೂಲ   ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸ್ವಯಂನಿವೃತ್ತಿ ಪಡೆದವರು, ಆರ್ಶ  ಪರಂಪರೆಯಲ್ಲಿ  ಯೋಗ ಅಧ್ಯಯನಮಾಡಿ, ವೇದವನ್ನು ಅನುಷ್ಟಾನಾದಲ್ಲಿಟ್ಟು ಕೊಂಡಿರುವವರು ,ಪ್ರಸ್ತುತ  ಶೃಂಗೇರಿ ಶಾರದಾ ಪೀಠದ  ಗುರುಪರಂಪರೆಯಲ್ಲಿ ಈ ಜ್ಞಾನವನ್ನು ತಿಳಿಸಿಕೊಡುವ ಕೆಲಸವನ್ನು ಮಾಡುತ್ತ ,ಹಲವಾರು ಶಿಬಿರಗಳನ್ನು ನಡೆಸಿರುತ್ತಾರೆ.ವೇದದ ಹಿನ್ನೆಲೆಯಲ್ಲಿ ಯೋಗವನ್ನು ನಿತ್ಯಾನುಷ್ಟಾನದಲ್ಲಿ ಇಟ್ಟುಕೊ ಳ್ಳುವ ಬಗ್ಗೆ ಹಾಸನದ ಶ್ರೀ ಶಂಕರಮಠದಲ್ಲಿ ನಡೆದ ಶಿಬಿರದಲ್ಲಿ ಮಾಡಿದ ಪ್ರವಚನವನ್ನು ನೀವಿಲ್ಲಿ ಕೇಳಬಹುದು.

ನನ್ನ ಮನವಿ:  ಸರಳ ಸಜ್ಜನರಾದ  ಶ್ರೀ ನಾಗರಾಜರಾಯರ ಮಾತುಗಳನ್ನು ಕೇಳುತ್ತಾ ಹೋದಂತೆ  ನಮ್ಮ ಜೀವನದಲ್ಲಿ ಒಂದು ಭರವಸೆ ಮೂಡಿ ಒಂದು   ದೃಷ್ಟಿಕೋಣ  ಮೂಡುವುದರಲ್ಲಿ ಸಂಶಯವಿಲ್ಲ.  ಈ ಆಡಿಯೋ ಕೇಳಿ  ಅದನ್ನು ಅಕ್ಷರ ರೂಪಕ್ಕೆ ತಂದು ಪ್ರಕಟಿಸಿದರೆ ಹಲವರಿಗೆ ಉಪಯೋಗವಾಗುತ್ತದೆ ,ಆದರೆ ನನ್ನ ಸಮಯದ ಅಭಾವದಿಂದ ಶ್ರೀ ನಾಗರಾಜರಾಯರು ಮಾಡಿದ ಪ್ರವಚನವನ್ನು ಎಡಿಟ್  ಮಾಡಿ ಪ್ರಕಟಿಸಲು ಮಾತ್ರ ಸಾಧ್ಯವಾಗಿದೆ. ವೇದಸುಧೆಯ ಸಹೃದಯರು ಯಾರಾದರೂ ಮುಂದೆ ಬಂದು ಈ ಆಡಿಯೋ ಕೇಳಿ ಅದನ್ನು ಬರಹ ರೂಪಕ್ಕೆ ತಂದು  ಲೇಖನ ಒಂದನ್ನು ಸಿದ್ಧ  ಪಡಿಸಿ   ವೇದಸುಧೆ ಗೆ ಕಳಿಸಿಕೊಟ್ಟರೆ  ಅದನ್ನು ಅನ್ಯಾನ್ಯ ತಾಣಗಳಲ್ಲೂ ಪ್ರಕಟಿಸಲಾಗುವುದು. ಓದುಗರ ಸಹಕಾರ ಕೋರುವೆ.
-ಹರಿಹರಪುರಶ್ರಿಧರ್ 
ಸಂಪಾದಕ 

[ಪ್ಲೆಯರ್ ನಲ್ಲಿ ದೋಷ ಕಂಡುಬಂದಿರುವುದರಿಂದ ಸರಿಪಡಿಸಿ ಆಡಿಯೋ ಕ್ಲಿಪ್ ಪ್ರಕಟಿಸಲಾಗಿದೆ, ಆಡಿಯೋ ಕೇಳದಿದ್ದಲ್ಲಿ ದಯಮಾಡಿ ಕಾಮೆಂಟ್ ಕಾಲಮ್ ನಲ್ಲಿ ಬರೆದರೆ ವೇದಸುಧೆಯ ಗಮನಕ್ಕೆ ಬಂದು ಸರಿಪಡಿಸಲು ಅನುಕೂಲವಾಗುತ್ತದೆ]

No comments:

Post a Comment