Pages

Friday, March 7, 2014

ಮೌನರಾಗ

ಚರ್ಚೆ...ಚರ್ಚೆ...ಚರ್ಚೆ...ಎಲ್ಲಿಯ ವರಗೆ ?
ಜೇನುನೊಣವು ಹೂವಿನ ಮೇಲೆ ಕುಳಿತು ಅದರ ಮಕರಂದದ ಸವಿಯನ್ನು ತಿಳಿಯುವ ವರಗೆ ಶಬ್ಧವನ್ನು ಮಾಡುತ್ತಿರುತ್ತದೆ.ಮಕರಂದದ ಸವಿಯ ಅನುಭವವಾಗುತ್ತಿದ್ದಂತೆ  ಶಬ್ಧವನ್ನು ನಿಲ್ಲಿಸುತ್ತದೆ. ಮನುಷ್ಯನೂ ಅಷ್ಟೆ  ಅಧ್ಯಾತ್ಮವು ಅರ್ಥವಾಗುವವರೆಗೂ ವಾದ  ಮಾಡುತ್ತಿರುತ್ತಾನೆ. ಒಮ್ಮೆ ಅದರ ಸವಿ ತಿಳಿದರೆ ಅದನ್ನು ಅನುಭವಿಸುತ್ತಾ ಮಾತು ಕಡಿಮೆ ಮಾಡುತ್ತಾನೆ.

           ವೇದವು ಪ್ರಶ್ನೆ ಮಾಡಿ ತಿಳಿದುಕೋ ಎನ್ನುತ್ತ್ತದಲ್ಲಾ! ಹೌದು ತಿಳಿದವರನ್ನು ಕೇಳಿ ನಮಗೆ ಗೊತ್ತಿರದ ವಿಷಯವನ್ನು ತಿಳಿದುಕೊಳ್ಳಬೇಕು. ಆದರೆ ನಮ್ಮ ಅರೆ ಬರೆ ತಿಳುವಳಿಕೆಯಿಂದ ವಾದ ಮಾಡಿ ಗೆಲ್ಲಬೇಕೆಂಬ ವಿಚಾರವಿರಬಾರದು.ವಾದದಲ್ಲಿ ಶಕ್ತಿಯ ಅಪವ್ಯಯವಾಗುತ್ತದೆ. ವಿಚಾರವನ್ನು ಆಲಿಸುವುದರಿಂದ ಶಕ್ತಿಯು ಹೆಚ್ಚುತ್ತದೆ.ನಮ್ಮ ಸಂದೇಹಗಳನ್ನೆಲ್ಲಾ ನಮಗಿಂತ ಹೆಚ್ಚು ತಿಳಿದವರಲ್ಲಿ ಕೇಳಿ ಪರಿಹರಿಸಿಕೊಳ್ಳಬೇಕು. ಆದರೆ ಜೀವನ ಪೂರ್ಣ ಅವರು ಹೇಳುವುದಕ್ಕೆ, ನಾನು ಕೇಳುವುದಕ್ಕೆ ,ಎನ್ನುವಂತಾಗಬಾರದು. ನಾನೂ ಹೇಳುವ ಹಂತಕ್ಕೆ ಬೆಳೆಯಬೇಕು. ಆದರೆ ಬೇರೆಯವರು ಕೇಳುವ ವರೆಗೂ ನಾವಾಗಿಯೇ  ಹೇಳುತ್ತಾ ವಲ್ಲದವರಿಗೆ ಹೇರುವ ದುಸ್ಸಾಹಸ ಮಾಡಬಾರದು.ಕೊನೆಗಾದರೂ ಮೌನದಿಂದಲೇ ಶಕ್ತಿಯ ಸಂಚಯನ, ಆಧ್ಯಾತ್ಮಿಕ ಉನ್ನತಿ ಎಂಬ ಅರಿವಿರಬೇಕು.

No comments:

Post a Comment