Pages

Friday, July 25, 2014

ಒಂದು ಮನವಿ

 ವೇದಸುಧೆಯ ಆತ್ಮೀಯ ಅಭಿಮಾನಿಗಳೇ

ಕಳೆದ ಐದಾರು ವರ್ಷಗಳಿಂದ  ಸಾಮಾನ್ಯಜನರಲ್ಲಿ  ವೇದದ ಅರಿವು ಮೂಡಿಸುವ ಪ್ರಾಮಾಣಿಕ ಪ್ರಯತ್ನವನ್ನು ವೇದಸುಧೆಯು ತನ್ನೆಲ್ಲಾ ಸಾಮರ್ಥ್ಯದೊಡನೆ   ಮಾಡುತ್ತಿದೆ. ಕೇವಲ ಬ್ಲಾಗ್ ಬರೆಯುವುದಷ್ಟೇ ನಮ್ಮ ಕೆಲಸವಾಗಿದ್ದರೆ ಬ್ಲಾಗನ್ನು  ಇನ್ನೂ ಚೆನ್ನಾಗಿ ನಡೆಸಬಹುದಿತ್ತು.ಆದರೆ ಇದರ ಜೊತೆ ಜೊತೆಗೇ ವೆಬ್ಸೈಟ್ ಇದೆ. ಪತ್ರಿಕೆಗಳಲ್ಲಿ ಕಾಲಮ್ ಬರೆಯಲಾಗುತ್ತಿದೆ. ಹಲವಾರು ಊರುಗಳಲ್ಲಿ ವೇದದ ಪರಿಚಯ ಕಾರ್ಯಕ್ರಮ ನಡೆಸಲಾಗುತ್ತಿದೆ. ನಿತ್ಯ ಅಗ್ನಿಹೋತ್ರ-ವೇದಪಾಠ ನಡೆಸಲಾಗುತ್ತಿದೆ.ಬ್ಲಾಗ್ ಆರಂಭದ ದಿನಗಳಲ್ಲಿ  ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳ ಏರ್ಪಾಡು, ಆದರ ಆಡಿಯೋ ಗಳನ್ನು  ಬ್ಲಾಗ್ನಲ್ಲಿ ಅಪ್ ಲೋಡ್ ಮಾಡುವುದು...ಇದರಲ್ಲೇ ತಲ್ಲೀನರಾಗಿದ್ದೆವು. ಆ ಸಂದರ್ಭದಲ್ಲಿ ವೇದಸುಧೆಯ ವಾರ್ಷಿಕೋತ್ಸವವನ್ನೂ ಅತ್ಯಂತ ಯಶಸ್ವಿಯಾಗಿ ಮಾಡಿದೆವು. ನಂತರದ ದಿನಗಳಲ್ಲಿ ಶರ್ಮರ ಅನಾರೋಗ್ಯ ದ ಕಾರಣ   ಅವರಿಗೆ ಹೆಚ್ಚು ಒತ್ತದ ಕೊಡದಂತೆ ನಾವೇ ಬರೆಯಲು ಆರಂಭಿಸಿದೆವು. ಅಧ್ಯಯನ ,ಬರವಣಿಗೆ ಜೊತೆ ಜೊತೆಗೇ   ಹಲವಾರು ಸಾಮಾಜಿಕ ಮತ್ತು ವೇದ ಜಾಗೃತಿಯ ಕಾರ್ಯಕ್ರಮಗಳು.ಒಂದರ ಮೇಲೊಂದು. ಇದರಿಂದಾಗಿ ಬ್ಲಾಗ್ ಗೆ ಸರಿಯಾಗಿ ಗಮನಕೊಡಲಾಗುತ್ತಿಲ್ಲ.
ಇಷ್ಟೆಲ್ಲಾ ಪೀಠಿಕೆ ಏಕೆಂದರೆ  ಈ ಬ್ಲಾಗ್ ನಲ್ಲಿ ಮುಖ್ಯವಾಗಿ ಶ್ರೀ ಶರ್ಮರ ಆಡಿಯೋ/ವೀಡಿಯೋ ಗಳು, ಅವರ ಲೇಖನಗಳು , ನಾನು ಮತ್ತು ಕವಿನಾಗರಾಜ್ ಬರೆದಿರುವ ಲೇಖನಗಳು ಹೆಚ್ಚಿವೆ. ಕವಿನಾಗರಾಜರು ಲೇಬಲ್ ಕೊಟ್ಟಿರಬಹುದು. ಆದರೆ ಶರ್ಮರ ಮತ್ತು ನನ್ನ  ಪೋಸ್ಟ್ ಗಳಿಗೆ ಕೆಲವಕ್ಕೆ ಲೇಬಲ್ ಕೊಟ್ಟಿದೆ. ಕೆಲವಕ್ಕೆ ಲೇಬಲ್ ಕೊಟ್ಟಿಲ್ಲ. ನಮಗೀಗ ಒಬ್ಬರ ನೆರವು ಅಗತ್ಯವಿದೆ. ಅವರಿಗೆ ಸೂಕ್ತ ಸಂಭಾವನೆಯನ್ನು ಕೊಡಲಾಗುವುದು. ಅವರು ಮಾಡಬೇಕಾಗಿರುವುದೇನೆಂದರೆ................

೧. ಶ್ರೀ ಶರ್ಮರ  ಆಡಿಯೋ/ವೀಡಿಯೋ/ಬರಹ ಗಳಿಗೆ ಲೇಬಲ್ ಇಲ್ಲದಿದ್ದರೆ ಕೊಡುವುದು

೨. ಶ್ರೀ ಹರಿಹರಪುರಶ್ರೀಧರ್ ಮತ್ತು ಕವಿನಾಗರಾಜರ    ಪೋಸ್ಟ್ ಗಳಿಗೂ ಸೂಕ್ತ ಲೇಬಲ್ ಇಲ್ಲದಿದ್ದರೆ ಕೊಡುವುದು

೩. ವೇದ, ಸಾಮಾಜಿಕ ಚಿಂತನೆ, ರಾಷ್ಟ್ರಭಕ್ತಿಯ ಜಾಗೃತಿಗೆ  ಹೊರತಾದ ಪೋಸ್ಟ್ ಗಳಿದ್ದರೆ ಅಳಿಸುವುದು

೪. ಮುಂದೆ ಬ್ಲಾಗ್ ನಡೆಸಿಕೊಂಡು    ಹೋಗುವುದು

ಆಸಕ್ತರು ನನಗೊಂದು ಮೇಲ್ ಮಾಡಿದರೆ ಅವರಿಗೆ ಪಾಸ್ ವರ್ಡ್ ಕೊಟ್ಟು ಅಗತ್ಯ ಸಲಹೆ ನೀಡಲಾಗುವುದು.

No comments:

Post a Comment