Pages

Tuesday, September 22, 2015

ಮತ್ತೊಮ್ಮೆ ಭಾರತವು ಜಗದ್ಗುರುವಾಗಲು

ನೀವು ಬಲಪಂಥೀಯರಾದರೇನು, ಎಡಪಂಥೀಯರಾದರೇನು, ಮಧ್ಯ ಪಂಥೀಯರಾದರೇನು   ನಿಮಗೆ ಸಮಾಜದಲ್ಲಿ  ಸಮರಸತೆ ಬೇಕೋ ಅಥವಾ ನಿಮ್ಮ ಪಂಥ   ಬೆಳೆಯಬೇಕೋ?  ದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದಾಗ ಯಾರಿಗಾದರೂ ಹೀಗೆ ಅನ್ನಿಸದೇ ಇರದು.ದೇಶದಲ್ಲಿನ ಸಮಸ್ಯೆಗಳನ್ನು ಇನ್ನಷ್ಟು ಜಟಿಲಮಾಡಲು ಎಲ್ಲಾ ಪಂಥಗಳೂ ಸಾಕಷ್ಟು ಹೆಣಗುತ್ತಿವೆ. ಕಾರಣ ಮುಂದಿನ ಚುನಾವಣೆಯಲ್ಲಿ ಅದೇ ಸಮಸ್ಯೆಯೇ ಒಂದು ಪಕ್ಷಕ್ಕೆ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಯಾಗಬೇಕೆಂಬ ಇಚ್ಛೆ ಎಲ್ಲಾ ಪಕ್ಷಗಳಿಗೂ!  ಒಂದೊಂದು ಚಟುವಟಿಕೆಯ ಹಿಂದೆ ಒಂದೊಂದು ರಾಜಕಾರಣ!! ನಿಜವಾಗಿ ದೇಶದ ಜನರಲ್ಲಿ ಸಮರಸತೆಯನ್ನು ಬಯಸುವ ಜನರಿಗೆ ಕಿಮ್ಮತ್ತು ಸಿಗುವುದೇ ಇಲ್ಲ. ನಿಮ್ಮ ಪ್ರಾಮಾಣಿಕ ಸಮಾಜಸೇವೆ ಯಾರಿಗೆ ಬೇಕಿದೆ!!

            ರಾಷ್ಟ್ರದ ಸಮಗ್ರತೆಯ ಬಗ್ಗೆ , ಜನರ ಸಾಮರಸ್ಯದ ಬಗ್ಗೆ, ನೆಮ್ಮದಿಯ ಬಗ್ಗೆ ಕಿಂಚಿತ್ ಕಾಳಜಿಯಿಲ್ಲದ ಪಕ್ಷದ ಚಟುವಟಿಕೆಗಳ  ಬಗ್ಗೆ ಜನರು ಸೂಕ್ಷ್ಮವಾಗಿ ಗಮನಿಸಬೇಕು. ಜನರನ್ನು ಒಡೆದು ರಾಜಕಾರಣ ಮಾಡುತ್ತಾ ದೇಶವನ್ನಾಳುವ ಕನಸು ಕಾಣುವವರ ಬಗ್ಗೆ  ಜನರು ಎಚ್ಚರ ವಹಿಸಬೇಕು. ಭಾರತದಲ್ಲಿರುವ ಎಲ್ಲರೂ ಸೋದದರೆಂಬ ಭಾವನೆಗೆ ಇಂಬು ಕೊಡುವಂತಾಗಬೇಕು. ಈ ಮಣ್ಣಿನಲ್ಲಿ ಹುಟ್ಟಿ, ಇಲ್ಲಿಯ ನೀರು ಕುಡಿದು, ಇಲ್ಲಿಯೇ ಬದುಕಬೇಕಾಗಿರುವ ಎಲ್ಲರೂ ತಾಯಿ ಭಾರತಿಯ ಮಕ್ಕಳೆಂಬ ಒಂದೇ ಮಂತ್ರವನ್ನು ಹೃದಯಲ್ಲಿಟ್ಟುಕೊಂಡು, ಪರಸ್ಪರ ಸೌಹಾರ್ಧಯುತವಾಗಿ ಬಾಳಬೇಕು. ಇದಕ್ಕೆ ಬೇಕಾಗಿರುವುದು ಸ್ಥಳೀಯವಾಗಿ ಕುಳಿತು ಸೌಹಾರ್ಧತೆಯಿಂದ ಚರ್ಚಿಸಿ ತಪ್ಪು ಒಪ್ಪುಗಳನ್ನು ತಿದ್ದಿಕೊಂಡು ನಡೆಯುವ ಸ್ವಭಾವ. ಜಗತ್ತು   ವಿಜ್ಞಾನದ ಯುಗದಲ್ಲಿ ದಾಪುಗಾಲು ಹಾಕುತ್ತಾ ಸಾಗಿದೆ.ಆದರೂ ಜನರ ನೆಮ್ಮದಿ ಹಾಳಾಗಿದೆ.  ಪ್ರಪಂಚವು ಭಾರತದತ್ತ ನೆಮ್ಮದಿಗಾಗಿ ನೋಡುತ್ತಿದೆ! ನಮ್ಮ ಋಷಿಮುನಿಗಳ ಮಾತಿಗೆ ಮಾನ್ಯತೆ ಸಿಗುತ್ತಿದೆ.

ನಾನು ಭಗವಂತನ ಸ್ವರೂಪ|
ನೀನೂ ಅದೇ ಆಗಿದ್ದೀಯೆ|

ಇದು ನಮ್ಮ ಋಷಿ ಮುನಿಗಳ ಮಹಾ ವಾಕ್ಯ. ಈ ಒಂದು ಸರಳ ಮಾತುಗಳು ಜೀವನದಲ್ಲಿ ಕಾರ್ಯರೂಪಕ್ಕೆ ಬಂದರೆ ಜಗತ್ತಿನಲ್ಲಿ  ಸಾಮರಸ್ಯದ   ಕ್ರಾಂತಿಯಾದೀತು!! ತಾಯಿ ಭಾರತಿಯ ಗೌರವವು ಜಗತ್ತಿನಲ್ಲಿ ಹೆಚ್ಚಿ ಮತ್ತೊಮ್ಮೆ ಭಾರತವು ಜಗದ್ಗುರುವಾಗಲು ಈ ಸರಳ ಮಾತುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ಭೇದ ಭಾವಕ್ಕೆ ಆಸ್ಪದವೇ ಇಲ್ಲ...

ಸರ್ವೇ ಭವಂತು ಸುಖಿನಃ
ಸರ್ವೇ  ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖ ಭಾಗ್ಭವೇತ್ ||

ಓಂ ಶಾಂತಿಃ ಶಾಂತಿಃ ಶಾಂತಿಃ

No comments:

Post a Comment