Pages

Sunday, September 11, 2016

ಚಿದಾನಂದರೂಪಃ ಶಿವೋ ಹಮ್ , ಶಿವೋಹಮ್

ಶಂಕರರ ಅಹಂ ನಿರ್ವಿಕಲ್ಪೋ..............ಚಿದಾನಂದರೂಪಃ ಶಿವೋ ಹಮ್ , ಶಿವೋಹಮ್

ಶ್ಲೋಕವನ್ನು ಕೇಳುತ್ತಾ ಅದರ ಅರ್ಥದ ಬಗ್ಗೆ ಚಿಂತನೆ ನಡೆಸುತ್ತಾ ಧ್ಯಾನ ಮಾಡಿದಾಗ ನಮ್ಮ ನಿಜ ಅಸ್ತಿತ್ವ ಏನೆಂಬ ಬಗ್ಗೆ ಸ್ವಲ್ಪವಾದರೂ ಅರಿವುಂಟಾಗುತ್ತದೆ.
ಇಂತಾ ಒಂದು ಪ್ರಯೋಗವನ್ನು ಸತತವಾಗಿ ಒಂದು ತಿಂಗಳು ಮಾಡಿ, ನಿಮ್ಮೆಲ್ಲಾ ಯೋಗಾಭ್ಯಾಸವಾದನಂತರ ಏಳು ನಿಮಿಷಗಳ ಈ ಶ್ಲೋಕವನ್ನು ಕೇಳುತ್ತಾ ಧ್ಯಾನಮಾಡಿ. ಧ್ಯಾನದ ಸ್ಥಿತಿಯಲ್ಲಿ ಶ್ಲೋಕದ ಅರ್ಥವನ್ನು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಿ. ಅಲ್ಪಸ್ವಲ್ಪವಾದರೂ ಅರ್ಥವಾಗದೇ ಇರದು.
ನಾನು ಎಂದರೆ ಕೇವಲ ಶರೀರ, ನಾನು ಎಂದರೆ ಪತ್ನಿಗೆ ಕೇವಲ ಪತಿ, ಮಕ್ಕಳಿಗೆ ಕೇವಲ ತಂದೆ/ತಾಯಿ, ನಾನು ಎಂದರೆ ಕೈ-ಕಾಲು, ರುಂಡ ಮುಂಡಗಳಿರುವ, ಪಂಚೇಂದ್ರಿಯ ಗಳನ್ನು ಹೊಂದಿರುವ, ಮನಸ್ಸು, ಬುದ್ಧಿ, ಅಹಂಕಾರ ವನ್ನು ಹೊಂದಿರುವ ಈ ಶರೀರ............. ಈ ರೀತಿಯ ಭಾವನೆಗಳಿರುವುದರಿಂದ ನಮ್ಮನ್ನು ಅರಿಷಡ್ವರ್ಗಗಳಾದ , ಕಾಮ,ಕ್ರೋಧ,ಲೋಭ, ಮೋಹ, ಮದ ಮತ್ಸರಗಳು ಕಾಡುತ್ತವೆ. ಶರೀರದ ವ್ಯಾಧಿಗಳು ಕಾಡುತ್ತವೆ...ಇಂತಾ ಸ್ಥಿತಿಯಲ್ಲಿ ನಾವು ದೇಹಭಾದಲ್ಲಿದ್ದೀವೆಂದು ಅರ್ಥ.


ಆದರೆ ಇವೆಲ್ಲಾ ಇದ್ದೂ ನನ್ನೊಳಗೆ ಒಂದು ಚೈತನ್ಯವಿದೆ. ಆ ಚೈತನ್ಯವಿಲ್ಲದೆ ಈ ಶರೀರ ಕೊರಡು! ಆ ಚೈತನ್ಯದಿಂದಲೇ ನನ್ನ ಎಲ್ಲಾ ಚಟುವಟಿಕೆಗಳು! ಎಂಬುದರ ಅರಿವುಂಟಾದಾಗ ನನ್ನ ನಿಜಸ್ವರೂಪದ ಅರಿವುಂಟಾಗುತ್ತದೆ. ನನ್ನ ನಿಜಸ್ವರೂಪವೇನು?
ಚಿದಾನಂದರೂಪಃ ಶಿವೋ ಹಮ್ , ಶಿವೋಹಮ್...ಎನ್ನುತಾರೆ ಶಂಕರರು. ನಾನು ಯಾವಾಗಲೂ ಆನಂದ ಸ್ವರೂಪನಾದ ಶಿವನೇ ನಾನು ಎಂಬ ಅರಿವು ಜಾಗೃತವಾದರೆ ನಮ್ಮ ದೇಹಬಾಧೆ ನಮ್ಮನ್ನು ಕಾಡಿಸುವುದಿಲ್ಲ. ವ್ಯಾಧಿ ಶರೀರಕ್ಕೋ? ಮನಸ್ಸಿಗೋ? ನಮ್ಮ ಶರೀರದಲ್ಲಿ ಯಾವುದೇ ನೋವಿರಲಿ ನಮಗೆ ಇಷ್ಟವಾಗುವ ಭಜನೆಯನ್ನೋ, ಹಾಡನ್ನೋ ಕೇಳುತ್ತಾ ಕುಳಿತರೆ ನೋವು ಮರೆತೇ ಹೋಗುತ್ತದೆ. ಹಾಗಾದರೆ ಶರೀರದ ನೋವು ವಾಸಿಯಾಯ್ತೆ. ಇಲ್ಲ. ಅದು ಶರೀರಕ್ಕೆ ಇದ್ದೇ ಇದೆ. ಆದರೆ ನಮ್ಮ ಮನಸ್ಸು ಆ ಕಡೆ ಗಮನ ಕೊಡಲೇ ಇಲ್ಲ. ಪರಿಣಾಮ ನೋವು ನಮ್ಮನ್ನು ಬಾಧಿಸಲೇ ಇಲ್ಲ. ಇನ್ನು ಸಾಕ್ಷಾತ್ ಶಿವನು ನಾನೇ ಎಂಬ ಭಾವ ಬಂದು ಬಿಟ್ಟರೆ ಆಗ ಸಿಗುವ ಆನಂದ ಬಣ್ಣಿಸಲು ಸಾಧ್ಯವಿಲ್ಲ.ಧ್ಯಾನದಿಂದ ಈ ಸ್ಥಿತಿ ಲಭ್ಯವಾಗಬೇಕು. ಆಗ ನಮ್ಮನ್ನು ಯಾವ ರೋಗವೂ ಕಾಡಲಾರದು.

No comments:

Post a Comment