Pages

Sunday, April 4, 2010

ನಮ್ಮ ಪರಂಪರೆ ಮತ್ತು ಸಾಮಾಜಿಕ ಸ್ವಾಸ್ಥ್ಯ

--> -->
ಮನುಷ್ಯನಿಗೆ ಅಂತಿಮವಾಗಿ ಬೇಕಾಗಿರುವುದು ಏನು?
ಯಾರಿಗೆ ಈ ಪ್ರಶ್ನೆ ಕೇಳಿದರೂ ಸಿಗುವ ಉತ್ತರ ಸುಖವಾದ ಜೀವನ. ಹಾಗಾದರೆಸುಖದ ಕಲ್ಪನೆ ಏನು?
ಸ್ವಾಮಿ ಸುಖಬೋಧಾನಂದರು ಒಂದುಚಿಕ್ಕ ಕಥೆ ಹೇಳುತ್ತಾರೆ. ಶ್ರೀಮಂತರೊಬ್ಬರ ಮನೆಯಲ್ಲಿ ಸಾಕಿದ್ದ ನಾಯಿಯನ್ನು ವಾಯುವಿಹಾರಾರ್ಥ ರಸ್ತೆಗೆ ಬಿಟ್ಟಿರುತ್ತಾರೆ. ರಸ್ತೆಯಲ್ಲಿ ಹೋಗುತ್ತಿದ್ದ ನಾಯಿಯು ಒಂದುಒಣಮೂಳೆ ಕಂಡು ಅದನ್ನು ಬಾಯಲ್ಲಿ ಕಚ್ಚಿಕೊಳ್ಳುತ್ತದೆ. ಅದನ್ನು ಕಡಿದು ಕಡಿದು ವಸಡಲ್ಲಿ ರಕ್ತಸ್ರಾವವಾಗುತ್ತೆ. ಮೂಳೆಯಿಂದರಕ್ತ ಬರುತ್ತಿದೆ ಎಂದು ತಿಳಿದ ನಾಯಿಯು ಅದನ್ನು ಚಪ್ಪರಿಸುತ್ತಾಸಂತೋಷಪಡುತ್ತದೆ.ಶ್ರೀಮಂತನ ಮನೆಯ ಮೃಷ್ಟಾನ್ನ ವನ್ನು ಬಿಟ್ಟುಒಣಮೂಳೆಕಡಿಯುತ್ತಾ ತನ್ನ ಬಾಯಲ್ಲಿ ವಸರಿರುವ ರಕ್ತವನ್ನೇ ಚಪ್ಪರಿಸುವ ನಾಯಿಯಂತೆ ನಮ್ಮ ಸ್ಥಿತಿಯೂ ಆಗಿದೆ. ಸುಖದ ಭ್ರಮೆಯಲ್ಲಿ ನಾವು ಹುಡುಕುತ್ತಿರುವುದೆಲ್ಲಾ ಮುಂದೆ ನಮ್ಮನ್ನುನಾಶಮಾಡುತ್ತದೆಂಬ ಪರಿವೆ ನಮಗಿಲ್ಲ. ಮಧ್ಯಪಾನ,ಧೂಮಪಾನ , ವೇಶ್ಯಾಸಹವಾಸ ಎಲ್ಲವೂ ಇಷ್ಟೆ. ತತ್ಕಾಲದಲ್ಲಿ ಸುಖದ ಭ್ರಮೆಯಲ್ಲಿ ತೇಲುವ ನಾವು ಶಾಶ್ವತ ದು:ಖಕ್ಕೆ ನಮ್ಮನ್ನು ಬಲಿಗೊಟ್ಟುಕೊಳ್ಳುತ್ತೇವೆ. ಇದೇ ವೇಳೆನಮ್ಮಮನೆಯಲ್ಲೇ ಲಭ್ಯವಿರುವ ಸುಖವನ್ನುನಾವು ತಿರಸ್ಕರಿಸಿರುತ್ತೇವೆ.ಈ ಹಿನ್ನೆಲೆಯಲ್ಲಿ ಈಗ ನಾವು ನಮ್ಮ ಪರಂಪರೆ ಮತ್ತುಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಚಿಂತನ-ಮಂಥನ ನಡೆಸೋಣ.
* ಎಲ್ಲರೂ ಸುಖವಾಗಿರಲಿ:
ಸರ್ವೇಪಿ ಸುಖಿನ: ಸಂತು
ಸರ್ವೇ ಸಂತು ನಿರಾಮಯಾ:
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದು:ಖ ಭಾಗ್ಭವೇತ್||
ಎಲ್ಲರೂ ಸುಖವಾಗಿರಲಿ, ಎಲ್ಲರೂನಿಶ್ಚಿಂತರಾಗಿರಲಿ,ಎಲ್ಲರೂಆರೋಗ್ಯವಾಗಿರಲಿ, ಯಾರಿಗೂ ದು:ಖ ಬರುವುದು ಬೇಡ. ಎಲ್ಲರೂ ಎಂದರೆಯಾರು? ನಮ್ಮ ಮನೆಯವರೇ? ನಮ್ಮೂರಿನವರೇ? ನಮ್ಮ ಜಾತಿಯವರೇ? ನಮ್ಮ ಧರ್ಮದವರೇ? ನಮ್ಮಭಾಷೆಯವರೇ? ಅಥವಾ ಕೇವಲ ಮನುಷ್ಯರೇ? ನಮ್ಮ ಪೂರ್ವಜರ ಚಿಂತನೆ ಅದೆಲ್ಲವನ್ನೂ ಮೀರಿದ್ದು. ಎರಡುಕಾಲಿನಮನುಷ್ಯರು, ನಾಲ್ಕು ಪ್ರಾಣಿಗಳಷ್ಟೇ ಅಲ್ಲ, ಸೃಷ್ಟಿಯ ಗಿಡಮರಬಳ್ಳಿಗಳು,ಜಲಚರಗಳು, ಕ್ರಿಮಿಕೀಟಗಳು, ಎಲ್ಲವೂ ಸುಖವಾಗಿರಲಿ, ಎಂಬುದು ಅವರ ನಿತ್ಯ ಸಂಕಲ್ಪವಾಗಿತ್ತು.ನಮ್ಮ ಚಿಂತನೆಇದೇ ಆದರೆ ಇನ್ನು ದೇಶದಲ್ಲಿ ಸಂಘರ್ಷವಿರಲು ಸಾಧ್ಯವೇ?
ಕಾಲೇ ವರ್ಷತು ಪರ್ಜನ್ಯ:
ಪೃಥ್ವೀ ಸಸ್ಯಶಾಲಿನೀ
ದೇಶೋಯಂ ಕ್ಷೋಭ ರಹಿತ:
ಸಜ್ಜನಾ ಸಂತು ನಿರ್ಭಯಾ:
ಕಾಲಕಾಲಕ್ಕೆ ಮಳೆಯಾಗಲಿ, ಭೂಮಿ ಸಸ್ಯಶಾಮಲೆಯಾಗಿರಲಿ, ದೇಶವುಕ್ಷೋಭರಹಿತವಾಗಿರಲಿ, ಪ್ರಜೆಗಳು ನಿರ್ಭಯದಿಂದ ಬಾಳಲಿ.
* ಹೆಣ್ಣು ಮಕ್ಕಳು ದೇವಿಯ ಸ್ವರೂಪ:
ದಿನಬೆಳಗಾದರೆ ದಿನಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ನಾವು ಕಾಣುವುದೇನು? ಪತ್ನಿಯನ್ನು ಬೆಂಕಿಯಲ್ಲಿ ಸುಟ್ಟ ಪತಿ! ವರದಕ್ಷಿಣೆಗಾಗಿ ಹೆಣ್ಣಿಗೆ ಹಿಂಸೆ! ಅಪ್ರಾಪ್ತ ಬಾಲಕಿಯಮೇಲೆ ಅತ್ಯಾಚಾರ! ಮಗಳಿನಮೇಲೆಯೇ ತಂದೆಯ ಅತ್ಯಾಚಾರ!!
ಸುದ್ಧಿ ಓದುವಾಗ ತಲೆಸುತ್ತಿ ಬರುತ್ತದೆ. ಯಾಕೆ ಹೀಗೆಲ್ಲಾ? ಹೆಣ್ಣಿನ ಬಗ್ಗೆ ನಮ್ಮ ಪೂರ್ವಜರ ಕಲ್ಪನೆ ಏನಿತ್ತು?
ಯತ್ರ ನಾರ್ಯಸ್ತು ಪೂಜ್ಯಂತೇ
ರಮಂತೇ ತತ್ರ ದೇವತಾ:||
ಎಲ್ಲಿ ಸ್ತ್ರೀಯರು ಪೂಜ್ಯಭಾವದಿಂದಕಾಣಲ್ಪಡುವರೋ ಅಲ್ಲಿ ದೇವತೆಗಳು ಸಂತೋಷವಾಗಿರುತ್ತಾರೆ. ಒಬ್ಬ ಕವಿ ಹೇಳಿದ " ಹರ್ ಬಾಲಾ ದೇವೀಕಿ ಪ್ರತಿಮಾ" ಎಲ್ಲಾ ಹೆಣ್ಣು ಮಕ್ಕಳು ದೇವಿಯ ಸ್ವರೂಪ. ಇಂತಹಾ ಚಿಂತನೆ ನಮ್ಮದಾದರೆ ಯಾವಹೆಣ್ಣು ದೌರ್ಜನ್ಯಕ್ಕೆ ಒಳಗಾಗಲು ಸಾಧ್ಯ? ಬದಲಿಗೆ ಅವಳು ಸಂತಸವಾಗಿದ್ದು ಉಳಿದವರಿಗೆ ತಾಯಿಯ ಪ್ರೀತಿಯನ್ನುಕೊಡಬಲ್ಲಳು .
* ಧರ್ಮದ ಹತ್ತು ಮುಖಗಳು:
ಧೃತಿ: ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹ: |
ಧೀರ್ವಿದ್ಯಾ ಸತ್ಯಮಕ್ರೋಧ: ದಶಕಂ ಧರ್ಮ ಲಕ್ಷಣಮ್||
ಧರ್ಮದ ಹತ್ತು ಲಕ್ಷಣಗಳನ್ನು ನೋಡೋಣ.
ಧೃತಿ: - ಏನೇ ಅಡ್ಡಿಬಂದರೂ ಎದೆಗುಂದದೆ ಮುಂದುವರೆಯುವ ಉತ್ಸಾಹ
ಕ್ಷಮಾ- ನಮ್ಮನ್ನು ಯಾರೇ ನಿಂದಿಸಿದರೂ ಅವರನ್ನು ಕ್ಷಮಿಸಿ ಪ್ರೀತಿಯಿಂದ ನೋಡುವಗುಣ
ದಮ: - ಹಿತಮಿತವಾಗಿ ಇಂದ್ರಿಯಗಳಿಂದಅನುಭವಿಸುವ ಕಲೆ
ಅಸ್ತೇಯಮ್- ಕಳ್ಳತನ ಮಾಡದಿರುವಿಕೆ
ಶೌಚಮ್- ಮನಸ್ಸನ್ನು ದೇಹವನ್ನು ಶುಚಿಯಾಗಿಟ್ಟುಕೊಳ್ಳುವುದು
ಇಂದ್ರಿಯನಿಗ್ರಹ: - ಹೊರಗಿನ ಆಸೆಗಳಿಗೆ ಬಲಿಯಾಗದಂತೆ ಹತೋಟಿ
ಧೀ: - ಬುದ್ಧಿಶಕ್ತಿ, ವಿವೇಚನೆ
ವಿದ್ಯಾ- ತಿಳುವಳಿಕೆ
ಸತ್ಯಮ್- ಸತ್ಯವನ್ನೇ ಹೇಳುವುದು
ಅಕ್ರೋಧ: - ಸಿಟ್ಟಾಗದಿರುವುದು
ಮೇಲಿನ ಹತ್ತು ಗುಣಗಳನ್ನು ಹೊಂದಿದ್ದರೆಅವನು ಧರ್ಮಮಾರ್ಗದಲ್ಲಿ ನಡೆದಂತೆ
* ಚತುರ್ವಿದ ಪುರುಷಾರ್ಥಗಳು
ಧರ್ಮ, ಅರ್ಥ,ಕಾಮ ಮೋಕ್ಷ: ಇದುನಾಲ್ಕು ಪುರುಷಾರ್ಥಗಳು.
ಮನುಷ್ಯ ಹೇಗೆ ಬಾಳಬೇಕೆಂಬುದಕ್ಕೆಇದೊಂದು ಸೂತ್ರ. ಧರ್ಮ ಮತ್ತು ಮೋಕ್ಷದ ಚೌಕಟ್ಟಿನಲ್ಲಿ ಅರ್ಥಕಾಮಗಳನ್ನು ಅನುಭವಿಸುವ ಸೂತ್ರ.
ಧರ್ಮದಿಂದ ಗಳಿಸು , ಮೋಕ್ಷದಗಮನವಿಟ್ಟು ಕಾಮವನ್ನು ಅನುಭವಿಸು. ಹೀಗಾದಾಗ ಮನುಷ್ಯನು ತಾನು ಬದುಕಲುಬೇಕಾದಷ್ಟನ್ನು ಧರ್ಮಮಾರ್ಗದಲ್ಲಿಬೇರೆಯವರಿಗೆ ಅನ್ಯಾಯವಾಗದಂತೆಸಂಪಾದಿಸಿ ಅಂತಿಮವಾದ ಮೋಕ್ಷದಗಮನದಲ್ಲಿ ಹಿತಮಿತವಾದ ಕಾಮವನ್ನು ಅನುಭವಿಸುತ್ತಾ ಜೀವನ ಮಾಡಿದರೆಅದೊಂದು ಸ್ವರ್ಗ. ಅವನಿಗಷ್ಟೇ ಅಲ್ಲಸಮಾಜಕ್ಕೂ, ಅಲ್ಲವೇ?
ವಿವಾಹ ಬಂಧನ:
ಗೊರೂರು ರಾಮಸ್ವಾಮಿ ಅಯ್ಯಂಗಾರರಹೆಸರು ಕೆಳಿದ್ದೀರಿ. ಅವರೊಮ್ಮೆ ಅಮೇರಿಕಾಪ್ರವಾಸದಲ್ಲಿದ್ದಾಗ ಅವರ ಪಕ್ಕದಲ್ಲಿದ್ದಅವರ ಪತ್ನಿಯಕಡೆ ಕೈ ತೋರಿಸಿದ ಅಮೇರಿಕಾ ವ್ಯಕ್ತಿ ಕೇಳಿದ-
-ಇವರು ಯಾರು?
ಗೊರೂರರು ಹೇಳಿದರು- ಇವರು ನನ್ನಪತ್ನಿ.
ಅಮೇರಿಕಾ ವ್ಯಕ್ತಿ ಮತ್ತೆ ಕೇಳಿದ- ಎಷ್ಟುದಿನಗಳಿಂದ ಜೊತೆಯಲ್ಲಿದ್ದೀರಿ?
- ನಲವತ್ತು ವರ್ಷಗಳಿಂದ.
ನಲವತ್ತು ವರ್ಷಗಳಿಂದ ಜೊತೆಯಲ್ಲಿಜೀವನ ಮಾಡ್ತಾ ಇದೀರಾ!!? ಎಂದುಆಶ್ಚರ್ಯಚಕಿತನಾಗುತ್ತಾನೆ. ಅದಕ್ಕೆಗೊರೂರರು ಹೇಳುತ್ತಾರೆ. ಅಷ್ಟೇ ಅಲ್ಲ. ನಮ್ಮ ದೇಶದಲ್ಲಿ ಒಮ್ಮೆಮದುವೆಯಾದಮೇಲೆ ಸಾಯುವವರೆಗೂಪತಿಪತ್ನಿಯರಾಗೇ ಇರುತ್ತೇವೆ.
ಇದು ನಮ್ಮ ಭಾರತೀಯ ಪರಂಪರೆ. ನಮಗೆ ಈ ಬಗ್ಗೆ ಏನೂ ವಿಶೇಷವೆನಿಸುವುದಿಲ್ಲ. ಆದರೆ ಈಗ ಹೆಚ್ಚುತ್ತಿರುವ ಏಡ್ಸ್ ಅಂತ ಮಾರಣಾಂತಿಕಖಾಯಿಲೆಗಳ ಮೂಲ ಹುಡುಕಿದಾಗ ಅಡೆತಡೆಯಿಲ್ಲದ ನಿಯಮ ಬಾಹಿರ ಗಂಡು-ಹೆಣ್ಣಿನ ಸಂಪರ್ಕಗಳೇ ಕಾರಣವೆಂಬುದು ಸಾಬೀತಾಗಿದೆ. ಮದ್ದೇ ಇಲ್ಲದ ಮಾರಣಾಂತಿಕ ಖಾಯಿಲೆಗೆ ಮದ್ದೆಂದರೆ ನಮ್ಮ ಪರಂಪರೆಯ ವಿವಾಹ ಬಂಧನ ಮತ್ತು ಅದರ ಪಾಲನೆ.
ಮುಂದುವರೆಯುವುದು....

Friday, April 2, 2010

ನಿಮ್ಮ ಸಂದೇಹಕ್ಕೆ ಸುಧಾಕರ ಶರ್ಮರ ಸಮಾಧಾನ




ವೇದಸುಧೆ ಕೇಳಿದ ಪ್ರಶ್ನೆ:
ಭೂಪಾಲ್ ಅನಿಲ ದುರಂತವಾದಾಗ ಯಾವ ಮನೆಯಲ್ಲಿ ನಿತ್ಯಹೋಮ ಮಾಡುವ ಪದ್ದತಿ ಇತ್ತೋ ಮನೆಯ ಜನರಿಗೆ ಅನಿಲ ದುರಂತದಿಂದ ಯಾವ ತೊಂದರೆಯಾಗಲಿಲ್ಲವೆಂಬ ಸುದ್ದಿ ಓದಿದ್ದ ನೆನಪು. ಬಗ್ಗೆ ಮಾಹಿತಿ ಕೊಡಿ. ನಿತ್ಯಹೋಮ ಆಚರಿಸುವ ಬಗ್ಗೆಯೂ ತಿಳಿಸಿ.




ಶ್ರೀಸುಧಾಕರ ಶರ್ಮರ ಉತ್ತರ:
ಅಗ್ನಿಯನ್ನು ಒಂದೆಡೆ ಸ್ಥಾಪಿಸಿ `ಸ್ವಾಹಾ' ಎಂದು ಅಗ್ನಿಗೆ ಆಹುತಿಯನ್ನು ನೀಡುವ ಯಜ್ಞಕ್ಕೆ `ದ್ರವ್ಯ ಯಜ್ಞ' ಅಥವಾ 'ದೇವ ಯಜ್ಞ' ಎಂದು ಹೆಸರು. (ಯಜ್ಞದ ವಿಸ್ತೃತ ಅರ್ಥ `ಯಜ್ಞೋ ವೈ ಶ್ರೇಷ್ಠತಮಂ ಕರ್ಮ' - ಎಲ್ಲ ಶ್ರೇಷ್ಠತಮ ಕರ್ಮಗಳೆಲ್ಲವೂ ಯಜ್ಞವೇ!) ಬೆಂಕಿಗೆ ಒಂದು ವಿಶೇಷಗುಣವಿರುವುದು ಎಲ್ಲರ ಅನುಭವಕ್ಕೂ ಬಂದಿರುವುದೇ. ಬೆಂಕಿಗೆ ಏನನ್ನು ಹಾಕುತ್ತೇವೆಯೋ ಅದನ್ನುವಿಘಟಿಸಿ ಪರಿಸರಕ್ಕೆ ಹರಡುತ್ತದೆ. ಲೋಬಾನ ಹಾಕಿದರೆ `ಘಂ' ಎಂಬ ಸುಗಂಧವನ್ನು ಹರಡುತ್ತದೆ. ಮೆಣಸಿನಕಾಯನ್ನು ಹಾಕಿದರೆಘಾಟ'ನ್ನು ಹರಡುತ್ತದೆ.ಈ ಗುಣವನ್ನು ಕಂಡವರು ಬೆಂಕಿಗೆ ಔಷಧೀಯ ಗುಣವುಳ್ಳ ವಸ್ತುಗಳನ್ನು ಹಾಕಿದರೆ ಔಷಧೀಯ ಗುಣಗಳೇ ಪರಿಸರಕ್ಕೆಹರಡುತ್ತಲ್ಲವೇ?! - ಎಂದು ದೇವ ಅಥವಾ ದ್ರವ್ಯಯಜ್ಞದಲ್ಲಿ ಔಷಧೀಯ ಗುಣಗಳಿರುವ ವಸ್ತುಗಳನ್ನೇ ಹಾಕಿ (ರವಿಕೆ ಕಣ, ರೇಷ್ಮೆ ವಸ್ತ್ರ, ದುಡ್ಡು-ಕಾಸು ಮೊದಲಾದುವನ್ನು ಹಾಕುವುದು ಅವೈಜ್ಞಾನಿಕ ಮತ್ತು ಅವೈದಿಕ) ಪರಿಸರ ಶುದ್ಧತೆಯನ್ನು ಕಾಪಾಡಿಕೊಳ್ಳುವವ್ಯವಸ್ಥೆಯನ್ನು ಮಾಡಿದರು. ಅರಳೀಮರದ ಕಡ್ಡಿ, ಆಲದ ಕಡ್ಡಿ, ತುಪ್ಪ, ಎಳ್ಳು, ಬೆಲ್ಲ, ಕೊಬ್ಬರಿ, ಅರಳು, ಭತ್ತ, ದರ್ಭೆ, ಅಮೃತಬಳ್ಳಿ, ಔದುಂಬರ (ಅತ್ತಿ), ಬಿಲ್ವ, ತುಳಸಿ ಮುಂತಾಗಿ ಅನೇಕ ದ್ರವ್ಯಗಳಿವೆ. ಭೂಪಾಲ್ ಅನಿಲ ದುರಂತದ ಸಂದರ್ಭದಲ್ಲಿ `ಅಗ್ನಿಹೋತ್ರ'ದಅಭ್ಯಾಸವಿರುವವರು, ಅಗ್ನಿಹೋತ್ರ ಮಾಡಿ ವಾಯುವಿನಲ್ಲಿಯ ದೋಷವನ್ನು ಪರಿಹರಿಸಿಕೊಂಡಿದ್ದಾರೆ. (ಇದಕ್ಕೆ ಸಂಬಂಧಿಸಿದಅನ್ನು ಸಧ್ಯದಲ್ಲೇ ಒದಗಿಸುವೆ). ಆಯುರ್ವೇದದಲ್ಲಿ ವಿಶಿಷ್ಟ ದ್ರವ್ಯಗಳನ್ನು ಬಳಸಿಕೊಂಡು ರೋಗನಿವಾರಣೇಮಾಡುವ, ಮಾಡಿಕೊಳ್ಳುವ ಉಲ್ಲೇಖಗಳಿವೆ. (ಧೂಮಪಾನ! ತಂಬಾಕಿನದಲ್ಲ ಬಿಡಿ!) ಹೀಗೊಂದು ಪ್ರಶ್ನೆ ಕೇಳಬಹುದು - ಬೆಂಕಿಗೆವಸ್ತುಗಳನ್ನು ಹಾಕಿದರೆ ಸಾಕಲ್ಲ, ಮಂತ್ರಗಳನ್ನು ಹೇಳಬೇಕ್ಯಾಕೆ? ಮಂತ್ರಗಳನ್ನು ಸುಮ್ಮನೆ ಹೇಳುವುದಲ್ಲ, ಮಂತ್ರ ತಿಳಿದೇಹೇಳಬೇಕು. (ತಜ್ಜಪಸ್ತದರ್ಥಭಾವನಮ್ - ಪತಂಜಲಿ) ಅರ್ಥ ತಿಳಿದು ಹೇಳಿದಾಗಲೇ ಜಪ. ಇಲ್ಲವಾದಲ್ಲಿ ಗಿಣಿಪಾಠ!! ಅರ್ಥತಿಳಿದುಮಂತ್ರಗಳನ್ನು ಹೇಳಿದಾಗ ನಮ್ಮ ಅಂತರಂಗದ ಶುದ್ಧತೆಗೆ ಅದು ಕಾರಣವಾಗುತ್ತದೆ. ಏಕಕಾಲಕ್ಕೆ ಹೊರ ಮತ್ತು ಒಳಪರಿಸರಗಳನ್ನು ಶುದ್ಧೀಕರಿಸುವ ವ್ಯವಸ್ಥೆಯೇ ಯಜ್ಞ.
ಇಷ್ಟಾದಮೇಲೆಯೂ ಈ ಯಾವುದೇ ಮಾತುಗಳನ್ನು ನಂಬಬೇಕಾದ್ದಿಲ್ಲ. ಕೆಲವು ತಿಂಗಳುಗಳಾದರೂ `ಅಗ್ನಿಹೋತ್ರ'ದಪ್ರಯೋಗವನ್ನು ನಿಮ್ಮ ಮನೆಯಲ್ಲಿ ಮಾಡಿರಿ. ಏನಾದರೂ ಧನಾತ್ಮಕ ಬದಲಾವಣೆ ಕಂಡರೆ, ಆಗ ಮಾತ್ರ ಒಪ್ಪಬಹುದು. *ಆರೋಗ್ಯಕರ ವಸ್ತುಗಳನ್ನು ಹಾಕಿ * ಮಂತ್ರಗಳ ಅರ್ಥ ತಿಳಿದು ಮಾಡಿ. `
----------------------------------------------------------------------------
ವೇದಾಧ್ಯಾಯೀ ಸುಧಾಕರಶರ್ಮರಲ್ಲಿ ವೇದಸುಧೆಯ ಮನವಿ:

ಎಲ್ಲರಿಗಾಗಿ ವೇದ ತಾಣದಲ್ಲಿ ವೇದಪಾಠವನ್ನು ದಯಮಾಡಿ ಬೇಗ ಆರಂಭಿಸಿ. ಕೆಲವಾದರೂ ವೇದ ಮಂತ್ರಗಳನ್ನು ಸ್ವರಸಹಿತ ನೀವು ತಾಣದಲ್ಲಿ ಪೇರಿಸಿದರೆ ಅದನ್ನು ಕೇಳಿಕೊಂಡು ನಮ್ಮಂತ ಕೆಲವರಾದರೂ ಕಲಿಯಬಹುದು. ಜೊತೆಗೆ ಅದರ ಅರ್ಥವನ್ನು ಬರಹರೂಪದಲ್ಲಿ ಪ್ರಕಟಿಸಿದರೂ ಸರಿ ಅಥವಾ ಆಡಿಯೋ ಹಾಕಿದರೂ ಸರಿ. ಈ ಪ್ರಯತ್ನ ಬೇಗ ಆಗಬೇಕು. ಇದು ಬಲು ಜನರ ಅಪೇಕ್ಷೆ. ಕನಿಷ್ಟ ವಾರಕ್ಕೊಂದಾದರೂ ಮಂತ್ರ ವನ್ನು ಅರ್ಥ ಸಹಿತ ಕಲಿಯುವಂತಾದರೆ ಉತ್ತಮ. ಇಲ್ಲೊಂದು ಮಾತು - ತಾವು ಮುಂದಿನ ನಿಮ್ಮ ಬರಹದಲ್ಲಿ ವೇದಮಂತ್ರವನ್ನು ಜನಸಾಮಾನ್ಯರು ಹೇಗೆ ಕಲಿಯಬೇಕು? ಅದಕ್ಕೇನಾದರೂ ನೀತಿ ನಿಯಮಾವಳಿಗಳಿವೆಯೇ? ಎಂಬ ಬಗ್ಗೆ ಬರೆದರೆ ಉತ್ತಮ.ನಿಮ್ಮಿಂದ ಈ ಬಗ್ಗೆ ಒಂದು ಪ್ರತಿಕ್ರಿಯೆ ಬಂದರೂ ಅದನ್ನು ಪ್ರಮುಖವಾಗಿಯೇ ಪ್ರಕಟಿಸಲಾಗುವುದು.


Thursday, April 1, 2010

ಮೃತ್ಯುವು ಕೇಕೆ ಹಾಕುತ್ತಾ ಕುಣಿಯುತ್ತಿದೆ

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ|
ಮೃತ್ಯು ಕುಣಿಯುತಲಿಹುದು ಕೇಕೆ ಹಾಕುತಲಿ|
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ|
ಎತ್ತಲಿದಕೆಲ್ಲ ಕಡೆ ಮಂಕುತಿಮ್ಮ||

ಇಂದು ಈ ಭೂಮಿಯನ್ನು ದುರ್ದೈವವೊಂದು ಮುತ್ತಿದೆ. ಮೃತ್ಯುವು ಕೇಕೆ ಹಾಕುತ್ತಾ ಕುಣಿಯುತ್ತಿದೆ. ಪ್ರತಿದಿನದ ಲೋಕದ ವಾರ್ತೆಗಳು ತಲೆ ಸುತ್ತು ಬರಿಸುತ್ತಿವೆ. ಇದಕ್ಕೆಲ್ಲಾ ಕಡೆ ಎಂದು?

ಡಿ ವಿ ಜಿ ಯವರು ಆದಿನಗಳ ಬಗ್ಗೆಯೇ ಅಷ್ಟು ನೊಂದು ಮನದಾಳದ ನೋವನ್ನು ಕಗ್ಗದಮೂಲಕ ಹೊರಹಾಕಿದ್ದಾರೆ. ಇಂದು ಡಿ ವಿ ಜಿ ಬದುಕಿದ್ದರೆ! ಗಾಂಧೀಜಿ ಬದುಕಿದ್ದರೆ! ಮೊನ್ನೆ ತಾನೇ ಚಪಲ ಚನ್ನಿಗರಾಯ ನಿತ್ಯಾನಂದ[ಸ್ವಾಮಿ]ಯ ರಾದ್ಧಾಂತ! ರೇಣುಕಾಚಾರ್ಯ ಜಯಲಕ್ಷ್ಮಿ ವಿಲಾಸ!! ದೇಶದ ಹಣ ರಾಜಾರೋಶವಾಗಿ ಲೂಟಿ ಮಾಡುತ್ತಿರುವ ರಾಜಕಾರಣಿಗಳು! ದೇಶದ ಭದ್ರತೆಗೆ ಸವಾಲೊಡ್ದಿರುವ ಆತಂಕವಾದಿಗಳು! ಕೊಲೆ ಸುಲಿಗೆಗಳು! ಅತ್ಯಾಚಾರಗಳು!!
ಇದು ದುರ್ದೈವವಲ್ಲವೇ? ಇಂತಹ ಸುದ್ಧಿಗಳಿಂದ ತಲೆ ಸುತ್ತಿಬರಬೇಡವೇ? ಇದಕ್ಕೆಲ್ಲಾ ಕಡೆ ಎಂದು? ಉತ್ತರಿಸುವವರಾರು? ಉತ್ತರಿಸಬೇಕಾದ ಯುವಕರೆಲ್ಲಾ ಟಿ.ವಿ. ಮುಂದೆ ಕುಳಿತು ಕ್ರಿಕೆಟ್ ನೋಡುತ್ತಾ ಕೇಕೆ ಹಾಕುತ್ತಿದ್ದಾರೆ! ಆ ಭಗವಂತನೇ ಧರೆಗೆ ಇಳಿದು ಬರಬೇಕೆ?
------------------------------------------------------------------------------------------------
ಇಳೆಯ ಬಿಟ್ಟಿನ್ನು ಮೆತ್ತಲುಮೈದದ ಪ್ರೇತ
ವಲೆವಂತೆ ಲೋಕ ತಲ್ಲಣಿಸುತಿಹುದು|
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ|
ತಳಮಳಕೆ ಕಡೆಯೆಂದೋ? ಮಂಕುತಿಮ್ಮ||

ಇಹವನ್ನು ತೊರೆದು ಪರವನ್ನೂ ಮುಟ್ಟದ ಪ್ರೇತವು ದಿಕ್ಕುತಪ್ಪಿ ಅಲೆಯುವಂತೆ ಜಗತ್ತು ಹಪಹಪಿಸುತ್ತಿದೆ. ಇದ್ದ ಹಳೆಯ ಧರ್ಮವು ಸತ್ತು ಹೋಗಿದೆ. ಹೊಸ ಧರ್ಮವು ಹುಟ್ಟಿಲ್ಲ. ಈಗಿನ ತಲ್ಲಣಕೆ ಕೊನೆ ಎಂದೋ?- ಎಂದು ಡಿ ವಿ ಜಿ ಯವರು ಆತಂಕ ವ್ಯಕ್ತಪಡಿಸುತ್ತಾರೆ.
ಡಿವಿಜಿಯವರು ಏಳೆಂಟು ದಶಕಗಳ ಹಿಂದೆ ಕಂಡುಕೊಂಡ ಸತ್ಯವು ಇಂದು ಇನ್ನೂ ಹೆಚ್ಚು ಅನ್ವಯವಾಗುವಂತೆ ತೋರುತ್ತಿದೆ. ನಮ್ಮ ಋಷಿ ಮುನಿಗಳು ತಮ್ಮ ತಪಸ್ಸಿನ ಫಲವಾಗಿ ಹಾಕಿಕೊಟ್ಟ ಮಾರ್ಗವನ್ನು ಸಂದೇಹದಿಂದ ನೋಡುತ್ತಾ ಅದನ್ನು ಗೊಡ್ಡು ಎಂದು ದೂರತಳ್ಳಿ[ಹಳೆ ಧರ್ಮ ಸತ್ತಿಹುದು] ಹೊಸ ದಾರಿಯನ್ನು ಕಂಡುಕೊಳ್ಳಲಾಗದೆ ತಲ್ಲಣಗೊಂಡಿರುವ ನಮ್ಮ ಇಂದಿನ ಸ್ಥಿತಿಯು ಅಂದು ಡಿ ವಿ ಜಿ ಕಂಡ ಸ್ಥಿತಿಗಿಂತಲೂ ಇನ್ನೂ ಕೆಟ್ಟಿದೆಯಲ್ಲವೇ?
ನಮ್ಮ ಪೂರ್ವಜರು ಬೆಳೆಸಿದ್ದ ಧರ್ಮ ವೃಕ್ಷದಡಿಯಲ್ಲಿ ಮರವೇ ಕಾಣದಂತೆ ಕಳೆ ಬೆಳೆದಿರುವುದು ನಿಜ. ಆ ಕಳೆಯನ್ನು ತೆಗೆದು ಮರಕ್ಕೆ ಗೊಬ್ಬರ ನೀರು ಹಾಕಿ ಬೆಳೆಸ ಬೇಕೋ ಅಥವಾ ಮರದ ಸುತ್ತ ಕಳೆಯಿದೆ ಎಂದು ಮರವನ್ನೇ ಉರುಳಿಸ ಬೇಕೋ? ಮರವನ್ನು ಉರುಳಿಸುವ ಕೆಲಸವಂತೂ ಭರದಿಂದ ಸಾಗಿದೆ.ನೆರಳು ಮಾಯವಾಗಿದೆ. ಜನತೆ ಕಂಗಾಲಾಗಿದ್ದಾರೆ. ಕಳೆ ತೆಗೆದು ಮರವನ್ನು ಉಳಿಸುವ ಕೆಲಸ ಆಗಬೇಕಿದೆ. ಅದು ನಮ್ಮ ಕೈಲೇ ಇದೆ.

ಸುಭಾಷಿತ ರತ್ನ -ದಿನಕ್ಕೊಂದು ಸುಭಾಷಿತ

1 ನೇ ಏಪ್ರಿಲ್ 2010

ಅಹಂಕಾರ ಮಮಕಾರಗಳ ತ್ಯಾಗದಿಂದಲೇ ಸುಖ

ನಾಸ್ತಿ ವಿದ್ಯಾಸಮಂ ಚಕ್ಷು: ನಾಸ್ತಿ ಸತ್ಯಸಮ: ತಪ:|
ನಾಸ್ತಿ ರಾಗಸಮಂ ದು:ಖಂ ನಾಸ್ತಿ ತ್ಯಾಗಸಮಂ ಸುಖಮ್ ||

ವಿದ್ಯೆಗೆ ಸಮನಾದ ಕಣ್ಣಿಲ್ಲ. ಸತ್ಯಕ್ಕೆ ಸಮನಾದ ತಪಸ್ಸಿಲ್ಲ. ರಾಗಕ್ಕೆ ಸಮನಾದ ದು:ಖವಿಲ್ಲ. ತ್ಯಾಗಕ್ಕೆ ಸಮನಾದ ಸುಖವಿಲ್ಲ.

ವಿದ್ಯಾವಂತನಾಗದೆ ಕಣ್ಣಿದ್ದರೂ ಕುರುಡನಂತೆಯೇ. ಕುರುಡನೂ ವಿದ್ಯಾವಂತನಾಗಿದ್ದರೆ ಅವನು ಕುರುಡನಲ್ಲ. ಮಾನವನಿಗೆ ವಿದ್ಯೆಯೇ ನಿಜವಾದ ಕಣ್ಣು. ಜೀವನದಲ್ಲಿ ಸತ್ಯವಂತನಾಗಿ ಬಾಳಿದರೆ ಅದರ ಮುಂದೆ ಯಾವ ತಪಸ್ಸೂ ಕಡಿಮೆಯೇ.

ದು:ಖಕ್ಕೆ ಮೂಲ ಯಾವುದು? ಇದು ನನ್ನದು, ನನ್ನದು ಎಂಬ ಅನುರಾಗ. ನನ್ನದೆಂಬುದಕ್ಕೆ ಕಿಂಚಿತ್ ನೋವಾಗುವುದನ್ನೂ ಮನ ಸಹಿಸದು.ಮಿತಿಮೀರಿದ ಪ್ರೀತಿಯೇ ಅನುರಾಗ. ಅದರಿಂದಲೇ ದು:ಖ. ನನ್ನದೇನೂ ಇಲ್ಲ, ಅವನದೇ ಎಲ್ಲಾ, ಎಂದು ಎಲ್ಲಾ ಆ ಭಗವಂತನದೇ ಎಂದು ತಿಳಿದರೆ ದು:ಖಕ್ಕೆ ಕಾರಣವೆಲ್ಲಿ?

ನನಗಾಗಿ ಎಷ್ಟು ಮಾಡಿಕೊಂಡರೂ ಇನ್ನೂ ಬೇಕೆಂಬ ಅತೃಪ್ತಿ ಇದ್ದೇ ಇರುತ್ತದೆ. ಆದರೆ ಕೈಲಾಗದವನಿಗೆ ಒಂದಿಷ್ಟು ಸಹಾಯ ಮಾಡಿ ನೋಡಿ, ಅವನ ಕಣ್ಣಲ್ಲಿ ನಲಿವು ಕಂಡಾಗ ಆಗುವ ಸಂತೋಷಕ್ಕಿಂತ ಬೇರೆ ಏನು ಬೇಕು?
-------------------------------------------------------------------
2 ನೇ ಏಪ್ರಿಲ್ 2010

ಜಠರಂ ಪೂರಯೇದರ್ಧಂ

ತದರ್ಧಂ ತು ಜಲೇನ ಚ|
ವಾಯೋ: ಸಂಚಾರೇಣಾರ್ಥಂ ತು
ಭಾಗಯೇಕಂ ವಿಸರ್ಜಯೇತ್||

ಹೊಟ್ಟೆಯ ಅರ್ಧಭಾಗ ಆಹಾರ, ಉಳಿದರ್ಧದಲ್ಲಿ ಅರ್ಧಭಾಗ ನೀರು, ಕಾಲುಭಾಗವನ್ನು ಗಾಳಿಯ ಸಂಚಾರಕ್ಕಾಗಿ ಬಿಡಬೇಕು.

ನಮ್ಮ ಪೂರ್ವಜರ ಸೂತ್ರ ಹೇಗಿದೆ ನೋಡಿ.ಜಾನಪದದಲ್ಲಿ ಒಂದು ಮಾತಿದೆ. ಒಂದು ಹೊತ್ತು ಉಂಡವ ಯೋಗಿ. ಎರಡೊತ್ತು ಉಂಡವ ಭೋಗಿ, ಮೂರೊತ್ತು ಉಂಡವ ರೋಗಿ, ನಾಲ್ಕೊತ್ತು ಉಂಡವನನ್ನು ಹೊತ್ಕೊಂಡ್ ಹೋಗಿ. ಈ ಎರಡೂ ಸೂತ್ರಗಳು ಮಿತಾಹಾರವನ್ನೇ ಹೇಳುತ್ತವೆ. ಮನುಷ್ಯನಾದರೋ ಬಾಯಿ ಚಪಲಕ್ಕೆ ಹೆಚ್ಚೆಚ್ಚು ಆಹಾರ ಸೇವಿಸಿ ರೋಗಕ್ಕೆ ತುತ್ತಾಗುತ್ತಾನೆ.
----------------------------------------------------------------------
3ನೇ ಏಪ್ರಿಲ್ 2010

ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವ:|
ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||

ಪ್ರಿಯವಾದ ಮಾತಿನಿಂದ ಎಲ್ಲಾ ಪ್ರಾಣಿಗಳೂ ಸಂತೋಷಪಡುತ್ತವೆ. ಆದ್ದರಿಂದ ಸದಾ ಪ್ರಿಯವಾದ ಮಾತುಗಳನ್ನೇ ಆಡಬೇಕು. ಪ್ರಿಯವಾದ ಮಾತಿಗೆ ಬಡತನವುಂಟೆ?

ಭಗವಂತನು ಕರುಣಿಸಿರುವ ಅದ್ಭುತ ಸಂಪತ್ತೆಂದರೆ ಮಾತು. ಮನುಷ್ಯನನ್ನು ಸಂತೋಷಗೊಳಿಸಲು ಎಲ್ಲಕ್ಕಿಂತಲೂ ಉತ್ತಮಮಾರ್ಗವೆಂದರೆ ಮಾತು. ಯಾವುದರಿಂದಲೂ ಸಮಾಧಾನಪಡಿಸಲಾಗದ್ದು ಒಳ್ಳೆಯ ಮಾತಿನಿಂದ ಸಾಧ್ಯವಾಗುತ್ತದೆ. ಮಾತೇಮುತ್ತು. ಮಾತೇ ಮೃತ್ಯು. ಒಳ್ಳೆಯ ಮಾತನ್ನಾಡಿ ಸಮಾಜದಲ್ಲಿ ಒಳ್ಳೆಯವನೆನಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮಾತಿನಿಂದಲೇಮತ್ತೊಬ್ಬರಿಗೆ ತಲೆನೋವು ತರುವ ಜನರೂ ಇದ್ದಾರೆ. ಕೆಲವರಿಗೆ ಮಾತು ಒಂದು ಚಟ.ಆದರೆ ನಿರ್ಮಲ ಹೃದಯದಿಂದಮತ್ತೊಬ್ಬರಿಗೆ ಕಿರಿಕಿರಿಯಾಗದಂತೆ ಮಾತನಾಡುವುದು ಒಂದು ಕಲೆಯೂ ಹೌದು, ಗುಣವೂ ಹೌದು. ಪ್ರಿಯವಾದ ಮಾತಿಗೆಬಡತನವಿಲ್ಲ. ಪ್ರಿಯವಾದ ಮಾತನ್ನೇ ಆಡೋಣ.

---------------------------------------------------------------------------------------------


Wednesday, March 31, 2010

ಆತ್ಮೀಯ ವೇದ ಬಂಧುಗಳೇ,
ವೇದದ ಬಗ್ಗೆ ವೇದಾಧ್ಯಾಯೀ ಸುಧಾಕರ ಶರ್ಮರ ಸರಳವ್ಯಾಖ್ಯಾನವನ್ನು ಜನಸಾಮಾನ್ಯರಿಗೆ ಪ್ರಚುರ ಪಡಿಸಬೇಕೆಂಬ ಉದ್ಧೇಶದಿಂದಆರಂಭಿಸಿರುವ ಈ ಬ್ಲಾಗಿನಲ್ಲಿ ಶರ್ಮರಿಗೆ ಬರೆಯಲು ತಾಂತ್ರಿಕ ಅಡಚಣೆಗಳಾದುದರಿಂದ ಬೇರೆಯ ತಾಣವನ್ನೇ [ವೇದಸುಧೆ ಡಾಟ್ ವೆಬ್ಸ್ ಡಾಟ್ ಕಾಮ್] ಆರಂಭಿಸಿದೆ. ಆದರೆ ಅನೇಕ ಮಿತ್ರರು ವೇದ ಸುಧೆಯ ಬ್ಲಾಗೇ ಸಾಕು, ಬೇರೆ ತಾಣಗಳನ್ನು ನಿರ್ವಹಿಸಲುಕಷ್ಟವಾಗುತ್ತದೆಂಬ ಸಲಹೆ ನೀಡಿದ್ದಾರೆ.ಅವರ ಸಲಹೆಯನ್ನು ಸ್ವೀಕರಿಸಿ ವೇದಸುಧೆಗೇ ಒಂದಿಷ್ಟು ಅಲಂಕಾರ ಮಾಡಿದ್ದೇನೆ. ಎಂದಿನಂತೆವೇದಸುಧೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.ಶರ್ಮರಿಗೆ ಮನವಿಮಾಡಿ ಕೆಲವು ವೇದ ಮಂತ್ರಗಳನ್ನು ಎಲ್ಲರಿಗಾಗಿ ವೇದ ತಾಣದಲ್ಲಿ ಕಲಿಸುವ ಕೃಪೆಮಾಡಬೇಕೆಂದು ಕೋರುವೆ. ಅದರ ಅರ್ಥ ವಿವರಣೆಯನ್ನು ಈ ಬ್ಲಾಗಿನಲ್ಲಿ ಕನ್ನಡದಲ್ಲಿ ಪ್ರಕಟಿಸುವ ಪ್ರಯತ್ನಮಾಡಲಾಗುವುದು.

ವೇದವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?

೧೯.೯.೨೦೦೩ ರಂದು ಬೇಲೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ವೇದಾಧ್ಯಾಯೀ ಸುಧಾಕರ ಶರ್ಮರು ವೇದವನ್ನು ಸರಿಯಾಗಿಅರ್ಥಮಾಡಿಕೊಳ್ಳುವ ಬಗೆ ಹೇಗೆ? ಎಂಬ ವಿಚಾರವಾಗಿ ಬಹು ಸರಳ ಮತ್ತು ಸ್ಪಷ್ಟ ಮಾತುಗಳಲ್ಲಿ ಉಪನ್ಯಾಸವನ್ನು ಮಾಡಿದ್ದಾರೆ. ಅಂದುಮಾಡಿದ ಉಪನ್ಯಾಸಕ್ಕೆ ಅಕ್ಷರಕೊಡುವ ಪ್ರಯತ್ನ ಮಾಡುತ್ತಿರುವೆ. ಒಂದು ವೇಳೆ ಬರೆಯುವಾಗ ಅಕ್ಷರ ತಪ್ಪಾಗಿ ಅರ್ಥ ತಪ್ಪಾದರೆ ಅದುನನ್ನ ತಪ್ಪು. ಆದರೆ ಅವರ ಮಾತುಗಳನ್ನು ಒಪ್ಪದಿದ್ದರೆ ದಯಮಾಡಿ ಓದುಗರು ಪ್ರತಿಕ್ರಿಯಿಸಿದರೆ ಶ್ರೀಯುತರ ಗಮನಕ್ಕೆ ತಂದುಅವರಿಂದಲೇ ಸಮಾಧಾನದ ಉತ್ತರ ಕೊಡಿಸುವೆ. ಇನ್ನು ಮುಂದೆ ಅವರದೇ ಮಾತು ಕೇಳಿ.......
ನಾವು ಯಾವುದೇ ಪದದ ಅರ್ಥ ಗೊತ್ತಿಲ್ಲವೆಂದಾಗ ನಿಘಂಟಿನ ಮೊರೆಹೋಗುವುದು ಸಹಜ. ಸಂಸ್ಕೃತ ಭಾಷೆಗೂ ನಿಘಂಟಿದೆ. ಆದರೆಅದರಲ್ಲಿ ಎರಡುರೀತಿಯ ನಿಘಂಟಿದೆ. ಈ ಸೂಕ್ಷ್ಮ ನಮಗೆ ತಿಳಿದರೆ ವೇದದ ಅರ್ಥ ತಿಳಿಯುವುದು ಸುಲಭವಾಗುತ್ತೆ. ಆಪ್ಟೆ ಅಥವಾಬೇರಾರೋ ಬರೆದಿರುವ ಒಂದು ರೀತಿಯ ಸಂಸ್ಕೃತ ನಿಘಂಟಿನ ಪರಿಚಯ ಎಲ್ಲರಿಗಿದೆ. ಆದರೆ ವೇದಗಳಲ್ಲಿ ಉಪಯೋಗಿಸಿರುವ ಭಾಷೆಸಂಸ್ಕೃತ ಅಲ್ಲ. ವೇದ ಇರುವುದು ವೇದದ್ದೇ ಭಾಷೆಯಲ್ಲಿ.ಇದರಿಂದ ಸಂಸ್ಕೃತ ಹುಟ್ಟಿದೆಯೇ ಹೊರತೂ ವೇದ ವಿರುವುದು ವೇದಭಾಷೆಯಲ್ಲಿ, ಸಂಸ್ಕೃತದಿಂದಲ್ಲ. ಈ ರಹಸ್ಯ ತಿಳಿಯದಾಗ ಆಭಾಸವಾಗುತ್ತೆ. ವೇದದ ಅರ್ಥ ಗೊತ್ತಾಗದಿದ್ದಾಗ ನಾವು ಮಾಡುವುದಾದರೂ ಏನು, ಯಾವುದಾದರೂ ಸಂಸ್ಕೃತ ನಿಘಂಟನ್ನು ನೋಡುವೆವು. ಆಗ ದಾರಿ ತಪ್ಪುತ್ತೇವೆ. ವೇದಗಳು ವೇದಭಾಷೆಯಲ್ಲಿರುವುದರಿಂದ ವೇದದನಿಘಂಟನ್ನೇ ನೋಡಬೇಕೇ ಹೊರತು ಸಂಸ್ಕೃತ ನಿಘಂಟನ್ನಲ್ಲ. ವೇದದ ನಿಘಂಟನ್ನು ಯಾಸ್ಕರರು ನಿರೂಪಿಸಿದ್ದಾರೆ. ಇದನ್ನುನಿರುಕ್ತ ಎಂದು ಕರೆಯುತ್ತೇವೆ. ಉಧಾಹರಣೆಗೆ "ಅಧ್ವರ " ಎಂಬ ಪದಕ್ಕೆ ನಿರುಕ್ತದಲ್ಲಿ ಯಾಸ್ಕರಾಚಾರ್ಯರು ಹೇಳುವರು" ಧ್ವರ ಇತಿಹಿಂಸಾ ಕರ್ಮ".ಧ್ವರ ಎಂದರೆ ಹಿಂಸೆ ಎಂದಾಗ ಅಧ್ವರ ಎಂದರೆ ಅಹಿಂಸೆ." ಅಗ್ನೇಯೆ ಯಜ್ಞಮಧ್ವರಂ" ಯಜ್ಞಕ್ಕೆ ಅಧ್ವರ ವೆಂತಲೂಕರೆಯುವುದರಿಂದ ಯಜ್ಞ ಎಂದರೆ ಅಹಿಂಸೆ ಎಂದಾಯ್ತು. ಆದ್ದರಿಂದ ಯಜ್ಞಯಾಗಾದಿಗಳಲ್ಲಿ ಹಿಂಸೆಗೆ ಅವಕಾಶವೇ ಇಲ್ಲ. ಆದರೆ ಅಶ್ವಮೇಧಯಾಗ ದಲ್ಲಿ ಕುದುರೆಯನ್ನು ಬಲಿಕೊಡುತ್ತಿದ್ದರಂತಲ್ಲಾ ? ಎಂದು ಕೇಳುವವರಿದ್ದಾರೆ. ಆದರೆ ಅಶ್ವಮೇಧಯಾಗದ ಸರಿಯಾದ ಅರ್ಥಮಾಡಿಕೊಳ್ಳದ ದುಶ್ಪರಿಣಾಮ ಇದು. ಸಂಸ್ಕೃತ ನಿಘಂಟಿನಲ್ಲಿ ಅರ್ಥ ಹುಡುಕಿದಾಗ ಆಭಾಸವಾಗುವ ಅವಕಾಶವಿದೆ. ಅಶ್ವ ಎಂದರೆ ಕುದುರೆ, ಮೇಧ ಎಂದರೆ ಬಲಿಕೊಡು ಎಂದಾಗಿಬಿಡುತ್ತದೆ.[ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಸಂಕ್ಷಿಪ್ತ ಕನ್ನಡ ನಿಘಂಟಿನ ಪುಟ ೭೯ ರಲ್ಲಿಅಶ್ವಮೇಧ= ಕುದುರೆಯನ್ನು ಬಲಿಕೊಡುವ ಒಂದು ಯಾಗವೆಂದು ಬರೆದಿದೆ] ವೇದದ ಪದಗಳ ಅರ್ಥವನ್ನು ಸಂಸ್ಕೃತ ನಿಘಂಟಿನಲ್ಲಿಹುಡುಕಿದರೆ ಇಂತಹ ಆಭಾಸ ವಾಗುತ್ತದೆ. ಯಜ್ಞ ಎಂದರೆ ಅಹಿಂಸೆ ಎಂದು ವೇದದಲ್ಲಿಯೇ ಹೇಳಿರುವಾಗ ಅಶ್ವಮೇಧ= ಕುದುರೆಯನ್ನುಬಲಿಕೊಡುವ ಒಂದು ಯಾಗವೆಂದು ಅರ್ಥ ಮಾಡಿಕೊಂಡರೆ ವೇದಕ್ಕೆ ನಾವು ಅಪಚಾರ ಮಾಡಿದಂತಲ್ಲವೇ?
ನಾವೀಗ ಯಾಸ್ಕರಾಚಾರ್ಯರ ನಿರುಕ್ತದಲ್ಲಿ ಇದರ ಅರ್ಥ ಹುಡುಕಿದಾಗ ನಮಗೆ ಸರಿಯಾದ ಅರ್ಥ ಸಿಗುತ್ತೆ. ಒಂದೊಂದೂಪದದನಿರ್ಮಾಣ ಹೇಗಾಯ್ತು ಎಂದು ಯಾಸ್ಕರಾಚಾರ್ಯರು ವಿವರಿಸುತ್ತಾರೆ. ಅಶ್ವ ಎಂಬ ಶಬ್ಧ ಯಾವ ಮೂಲದಿಂದ ಬಂತು? ಎಂದಾಗ ಅಶ್ಎಂಬ ಮೂಲ ಧಾತುವಿನಿಂದ ಅಶ್ವ ಪದ ಮೂಡಿಬಂದಿದೆ. ಅಶ್ ಎಂದರೆ ಭಕ್ಷಣೆ [ತಿನ್ನು], ಯಾವುದು ತಿನ್ನುತ್ತದೋಅದಕ್ಕೆ ಅಶ್ವ ವೆಂದುಹೆಸರು. ಇದನ್ನು ನಾವು ಶುದ್ಧ ಯೌಗಿಕ ಅರ್ಥದಲ್ಲಿ ತೆಗೆದುಕೊಂಡಾಗ ನಮಗೆ ಸರಿಯಾಗಿ ಅರ್ಥವಾಗುತ್ತದೆ. ಮೂರು ರೀತಿಯಲ್ಲಿಅರ್ಥವನ್ನು ಹುಡುಕಬೇಕಾಗುತ್ತದೆ.೧]ರೂಢಿಯಲ್ಲಿರುವ ರೂಢಾರ್ಥ ೨] ಧಾತುವಿನಿಂದ ನಿರ್ಮಾಣವಾದ ಯೌಗಿಕಅರ್ಥ ೩]ಇವೆರಡರಬೆರೆಕೆಯಿಂದ ಕಂಡುಕೊಂಡದ್ದು ಯೋಗರೂಢಾರ್ಥ. ಯೋಗರೂಢ ಎಂದರೆ ಧಾತುವಿನಿಂದ ಬಂದ ಅರ್ಥದೊಡನೆ ರೂಢಿಯಿಂದ ಬಂದಅರ್ಥದ ಮಿತಿಯನ್ನು ಹಾಕಿಕೊಂಡು ರೂಢಾರ್ಥವೆನಿಸುತ್ತದೆ. ಆದರೆ ಕೇವಲ ಯೌಗಿಕ ಶಬ್ಧಕ್ಕೆ ಈಮಿತಿಯಿಲ್ಲ. ಒಂದು ಉಧಾಹರಣೆನೋಡೋಣ."ಪಂಕಜ" ಎಂಬ ಪದವನ್ನು ಯೌಗಿಕ ಅರ್ಥದಲ್ಲಿ ತೆಗೆದುಕೊಂಡಾಗ ಪಂಕ ಎಂದರೆಕೆಸರು ಜ ಎಂದರೆ ಹುಟ್ಟಿದ್ದು ಎಂದುಅರ್ಥೈಸಿ ಪಂಕಜ ಎಂದರೆ ಕಮಲ ಎನ್ನುತ್ತೇವೆ. ಆದರೆ ಕೆಸರಿನಲ್ಲಿ ಹುಟ್ಟುವ ಸೊಳ್ಳೆಗಳಿಗೆ ನಾವುಪಂಕಜ ಎಂದು ಕರೆಯುತ್ತೇವೆಯೇ? ಇಲ್ಲ. ಕೆಸರಿನಲ್ಲಿ ಸೊಳ್ಳೆ, ಹುಲ್ಲು, ಕಪ್ಪೆ ಯಾವುದು ಹುಟ್ಟಿದರೂ ಸಹ ರೂಢಿಯ ಬಲದಿಂದಕಮಲಕ್ಕೆ ಮಾತ್ರ ಪಂಕಜ ಕರೆಯುತ್ತೇವೆ.ಅಂದರೆರೂಢಿಯಬಲದಿಂದ ಕೆಸರಿನಲ್ಲಿ ಹುಟ್ಟುವ ಎಲ್ಲಾ ಕ್ರಿಮಿಕೀಟಗಳನ್ನು ಬಿಟ್ಟು ಕಮಲಕ್ಕೆಮಾತ್ರ ಪಂಕಜ ಎಂದು ಕರೆಯಲಾಗಿದೆ. ಇಲ್ಲಿ ಯೌಗಿಕಅರ್ಥವೂ ಇದೆ, ಆದರೆ ರೂಢಿಯಬಲದಿಂದ ಅದನ್ನು ಸಂಕುಚಿತಗೊಳಿಸಿಕೇವಲ ಕಮಲ ಎಂದು ಕರೆಯಲಾಗಿದೆ. ಇದುಯೋಗರೂಢಾರ್ಥಕ್ಕೆ ಉಧಾಹರಣೆ. ಈಗ ಅಶ್ವದ ಅರ್ಥ ನೋಡುವಾಗ ಅಶ್ವ ಎಂದರೆಯಾವುದು ತಿನ್ನುತ್ತದೋ ಅದು , ಎಂದಾಗಕುದುರೆಯು ದಾರಿಯನ್ನುತಿನ್ನುತ್ತದೆ ಅರ್ಥಾತ್ ಕಡಿಮೆ ಮಾಡುತ್ತದೆ , ಹಾಗಾಗಿದಾರಿಯನ್ನು ಕುದುರೆ, ವಾಹನ, ಇತ್ಯಾದಿ ಯಾವುದೇಕಡಿಮೆ ಮಾಡಿದರೂ ಅದನ್ನು ಸಂಕುಚಿತ ಗೊಳಿಸಿ ಅಶ್ವ ಎಂದರೆ ಕುದುರೆಎಂದು ಕರೆಯಲಾಯ್ತು. ಯಾಸ್ಕರು ಹೇಳುತ್ತಾರೆ....ಅಶ್ನಾತಿಅದ್ವಾನಂ ಇತಿ ಅಶ್ವ: , ಅದ್ವಾನ ಎಂದರೆ ರಸ್ತೆ, ಯಾವುದು ರಸ್ತೆಯನ್ನುತಿನ್ನುತ್ತದೋ ಅದು ಅಶ್ವ. ಅಂದರೆ ಕುದುರೆಯು ರಸ್ತೆಯನ್ನುತಿನ್ನುತ್ತದೆ, ಅಂದರೆ ಕ್ರಮಿಸಿ ಕಡಿಮೆ ಮಾಡಿಕೊಡುತ್ತದೆ ಆದ್ದರಿಂದ ಅಶ್ವಎಂದರೆ ಕುದುರೆ ಎಂದು ಅರ್ಥೈಸ ಬಹುದು. ಆದರೆ ಇಷ್ಟಕ್ಕೆನಿಲ್ಲುವಂತಿಲ್ಲ. ನಿಂತರೆ ಪೂರ್ಣ ಅರ್ಥ ವಾಗುವುದಿಲ್ಲ. ತಿನ್ನುವುದೆಲ್ಲವೂಅಶ್ವವೇ. ಅಂದರೆ ಯಾಸ್ಕರಾಚಾರ್ಯರುಹೇಳುತ್ತಾರೆ....ವೇದವನ್ನು ಅರ್ಥಮಾಡಿಕೊಳ್ಳುವಾಗ ಮೂಲ ಧಾತುವಿಗೆ ಹೋಗಬೇಕು, ಯಾವುದು ತಿನ್ನುತ್ತದೋ, ಯಾವುದುಗ್ರಹಿಸುತ್ತದೋ, ಅದು ಅಶ್ವ. ಅಂದರೆ ನಮ್ಮ ಪಂಚೇಂದ್ರಿಯಗಳು. ಕಣ್ಣು ದೃಷ್ಟಿಯನ್ನು, ಕಿವಿಶಬ್ಧವನ್ನು, ಚರ್ಮವು ಸ್ಪರ್ಷವನ್ನು, ನಾಲಿಗೆರುಚಿಯನ್ನು ಮತ್ತು ಮೂಗು ವಾಸನೆಯನ್ನು ಗ್ರಹಿಸುತ್ತವೆ. ಆದ್ದರಿಂದ ಅಶ್ವ ವೆಂದರೆ ನಮ್ಮಪಂಚೇಂದ್ರಿಯಗಳು. ಮೇಧ ಎಂದಾಗ ಒಂದುಅರ್ಥ ಬಲಿಕೊಡು ಎಂದಾದರೆ ಮೇಧೃ ಧಾತುವಿನ ಮತ್ತೊಂದು ಅರ್ಥ ಸಂಗಮೇ. ಅಂದರೆ ಒಟ್ಟುಗೂಡಿಸು. ಅಂದರೆ ಇಂದ್ರಿಯ ನಿಗ್ರಹಿಸುಎಂದರ್ಥ. ಅಂದರೆ ಅಶ್ವಮೇಧ ಯಾಗ ವೆಂದರೆ ನಿಂದ್ರಿಯ ನಿಗ್ರಹ ಮಾಡುವಯಜ್ಞ ಎಂದರ್ಥ. ಅಶ್ವಮೇಧ ಯಾಗದ ಮಂತ್ರಗಳಸರಿಯಾದ ಅರ್ಥವನ್ನು ತಿಳಿದುಕೊಂಡಾಗ ನಮ್ಮ ಇಂದ್ರಿಯ ನಿಗ್ರಹ ಮಾಡಲುಏನು ಮಾಡಬೇಕೆಂಬುದು ಅದರ ಸಾರ. ಇದೇ ಬ್ಲಾಗಿನಲ್ಲಿ ಫೆಬ್ರವರಿ ತಿಂಗಳಲ್ಲಿ ಶರ್ಮರ ಉಪನ್ಯಾಸಗಳಾದ ಯಜ್ಞ ಮತ್ತು ಅಶ್ವಮೇಧಯಾಗ ಬರಹಗಳನ್ನು ನೋಡಿ