Pages

Tuesday, June 8, 2010

ಪುರೋಹಿತರ ಮನ ಕರಗಲೇ ಇಲ್ಲ!

ನಮ್ಮ ಸೋದರತ್ತೆ ಗೌರಮ್ಮ ನವರು ತಮ್ಮ ಹತ್ತನೆಯ ವರ್ಷದಲ್ಲೇ ಬಾಲ್ಯವಿವಾಹವಾಗಿ ಹನ್ನೆರಡನೆಯ ವಯಸ್ಸಿಗೆ ಪತಿಯನ್ನು ಕಳೆದುಕೊಂಡು, ವಿಧವೆ ಪಟ್ಟ ಕಟ್ಟಿಕೊಂಡು ನಮ್ಮ ಮನೆಯಲ್ಲೇ ತಮ್ಮ ಉಳಿದ ದೀರ್ಘ ಜೀವನವನ್ನು ಅವರ ತಮ್ಮನ ಮಕ್ಕಳಾದ ನಮ್ಮನ್ನೇ ಮಕ್ಕಳೆಂದು ತಿಳಿದು ನಮ್ಮ ಹೆತ್ತ ತಾಯಿ ಗಿಂತಲೂ ಹೆಚ್ಚು ಪ್ರೀತಿಯಿಂದ ನಮ್ಮನ್ನೆಲ್ಲಾ ಬೆಳೆಸುವುದರಲ್ಲೇ ಅವರ ಜೀವನದ ಸಾರ್ಥಕತೆ ಕಂಡುಕೊಂಡ ಮಹಾನ್ ವ್ಯಕ್ತಿ. ೭೫ ನೆಯ ವಯಸ್ಸಿನಲ್ಲಿ ಅವರು ನಮ್ಮ ಮನೆಯಲ್ಲೇ ಕೊನೆಯುಸಿರೆಳೆದರು. ಈ ಘಟನೆ ನಡೆದು ಇಪ್ಪತ್ತೈದು ವರ್ಷಗಳು ಕಳೆದುಹೋಯ್ತು. ಆ ಸಂದರ್ಬದಲ್ಲಿ ನಡೆದ ಒಂದು ಘಟನೆಯನ್ನು ವೇದಸುಧೆಯ ಅಭಿಮಾನಿಗಳ ಗಮನಕ್ಕೆ ತರಬೇಕೆನಿಸುತ್ತಿದೆ.
ಈಗಾಗಲೇ ತಿಳಿಸಿದಂತೆ ನಮ್ಮತ್ತೆ ಗೌರಮ್ಮ ನವರಿಗೆ ಸ್ವಂತ ಮಕ್ಕಳಿಲ್ಲ. ಅವರ ಶ್ರಾದ್ಧ ಕರ್ಮಗಳನ್ನು ಮಾಡುವವರಾರು? ನಮ್ಮ ತಂದೆಗೂ ವಯಸ್ಸಾಗಿದೆ. ಶರೀರದಲ್ಲಿ ತ್ರಾಣವಿಲ್ಲ. ನಾವು ಮಾಡಬೇಕೆಂದರೆ ಅಪ್ಪ-ಅಮ್ಮ ಬದುಕಿರುವಾಗ ನೀವು ಮಾಡಕೂಡದೆಂದು ಹಿರಿಯರು ನಮ್ಮನ್ನು ಕಟ್ಟಿ ಹಾಕಿದರು. ಆಗ ಯಾವ ಶಾಸ್ತ್ರದಲ್ಲಿತ್ತೋ ಗೊತ್ತಿಲ್ಲ ಒಬ್ಬ ಕರ್ತೃವನ್ನು ನೇಮಿಸಿಕೊಂಡಿದ್ದಾಯ್ತು. ಅವರಾರೋ ಮೂರನೆಯ ಸಂಬಂಧವಿಲ್ಲದ ವ್ಯಕ್ತಿ. ಅವರು ಕರ್ತೃವಿನ ಜಾಗದಲ್ಲಿದ್ದು ಶ್ರಾದ್ಧಕರ್ಮಗಳು ನಮ್ಮತ್ತೆ ಮರಣಹೊಂದಿದ ಐದನೆಯ ದಿನ ಶುರುವಾಯ್ತು. ಎರಡು ದಿನಗಳಷ್ಟೇ ಕಳೆದಿದೆ. ಕರ್ತೃ ನಾಪತ್ತೆ ಯಾಗಿಬಿಟ್ಟರು. ಕರ್ಮ ನಡೆಯುವಂತಿಲ್ಲ. ಎಲ್ಲರಿಗೂ ಗಾಭರಿ! ಇದನ್ನೆಲ್ಲಾ ಅತಿಯಾಗಿ ನಂಬಿದ್ದ ನನಗೆ ಆತಂಕ. ಏನಾಗಿ ಬಿಡುತ್ತೋ ಏನೋ!! ಸರಿ, ಕರ್ತೃವನ್ನು ಹೇಗಾದರೂ ಕರೆತರಲು ನನ್ನ ಪ್ರಯತ್ನ ಶುರುವಾಯ್ತು. ನಮ್ಮ ಹುಟ್ಟೂರು ಹರಿಹರಪುರವೆಂಬ ಹಳ್ಳಿ. ಅಲ್ಲಿಗೆ ಸುಮಾರು ಎಂಟು ಮೈಲು ದೂರದ ಹೊಳೆನರಸೀಪುರದಲ್ಲಿ ಕರ್ತೃವಿನ ಮನೆ. ಹೊಳೆನರಸೀಪುರಕ್ಕೆ ಅವರ ಮನೆಗೆ ಹೋದೆ. ಅಲ್ಲಿಲ್ಲ. ಒಬ್ಬ ಪುರೋಹಿತರ ಮನೆಯಲ್ಲಿರುವುದಾಗಿ ತಿಳಿದು ಅಲ್ಲಿ ಹೋದೆ. ಆತ ಆ ಪುರೋಹಿತರೊಡನೆ ಒಂದು ದೇವಸ್ಥಾನಕ್ಕೆ ಹೋಗಿದ್ದಾನೆ. ಅಲ್ಲಿ ಹೋಗಿ ವಿಚಾರಿಸಲಾಗಿ ಪಕ್ಕದಲ್ಲಿದ್ದ ಪುರೋಹಿತರೆಡೆಗೆ ಅವರ ದೃಶ್ಟಿ ಹೋಯ್ತು.
" ಏನು ಗುರುಗಳೇ, ಮೊನ್ನೆಯಿಂದ ನಮ್ಮತ್ತೆ ಕರ್ಮಾದಿಗಳನ್ನು ಕರ್ತೃವಾಗಿ ಮಾಡುತ್ತಿರುವ ಇವರು ಇಂದು ಬಾರದೆ ದಿಕ್ಕೇ ತೋಚದಾಗಿದೆ. ದಯವಿಟ್ಟು ಕಳಿಸಿಕೊಡಿ."-- ನನ್ನ ಕಣ್ಣು ಅದಾಗಲೇ ತೇವವಾಗಿತ್ತು.
ಆ ಪುರೋಹಿತರು ಹೇಳಿದರು" ಅದ್ಯಾವನೋ ಮಾಡಿಸ್ತಾ ಇದಾನಲ್ಲಾ! ಅವನನ್ನೇ ಕೇಳು, ಹೇಗಾದರೂ ಮಾಡಿಕೊಳ್ಳಲಿ, ಇವನನ್ನು ಕಳಿಸುಲ್ಲ."
ನಾನಂತೂ ಧರೆಗೆ ಇಳಿದುಹೋದೆ. ದೇವಸ್ಥಾನದ ಮುಂದೆ ರಸ್ತೆಯಲ್ಲೇ ಆ ಪುರೋಹಿತರ ಪಾದಕ್ಕೆ ಸಾಸ್ಟಾಂಗ ನಮಸ್ಕಾರ ಮಾಡುತ್ತಾ ಕಣ್ಣೀರಿಟ್ಟೆ. ಪುರೋಹಿತರ ಮನ ಕರಗಲೇ ಇಲ್ಲ. ಕೊನೆಗೆ ನಮ್ಮ ಸಂಬಂಧಿಕರೊಬ್ಬರ ಸಹಕಾರದಿಂದ ಬೇರೆ ದಾರಿಯಾಯ್ತು. ಅದು ಬೇರೆ ವಿಚಾರ. ಆದರೆ ಅಂದು ನನಗಾದ ಮಾನಸಿಕ ನೋವು ಈ ಪುರೋಹಿತ ವ್ಯವಸ್ಥೆ ಮೇಲೆ ಕಿಡಿ ಕಾರುವಂತಾಗಿದೆ. ಆದರೂ ಉತ್ತಮ ಮನೋಧರ್ಮದ ಪುರೋಹಿತರುಗಳನ್ನೂ ಕಂಡಿದ್ದೇನೆ. ಹಾಗಾಗಿ ನಾನು ಬಂಡೆದ್ದಿಲ್ಲ!! ಅಂದು ಆ ಪುರೋಹಿತರು ಹಾಗೆ ವರ್ತಿಸಿದ್ದೇಕೆ ಎಂಬುದು ನಿಮಗೆ ತಿಳಿಯಿತಲ್ಲವೇ?
ನೀವೇನು ಹೇಳ್ತೀರಿ?

-ಹರಿಹರಪುರ ಶ್ರೀಧರ್
--------------------------------------------------------------
ಯಾರು ಏನು ಹೇಳಿದರು?
ಸಾಗರದಾಚೆಯ ಇಂಚರ:
ನಿಜಕ್ಕೂ ಕೆಲವೊಮ್ಮೆ ಪುರೋಹಿತರ ಮೇಲೆ ನಂಗೂ ಕೋಪ ಬಂದಿದೆ
ದಿನಕ್ಕೆ ಒಂದೇ ಪೂಜೆ ಯಿದ್ದರೆ ತಾಸು ಬೇಕು,
ಅದೇ ಪೂಜೆ ದಿನಕ್ಕೆ ೧೦ ಇದ್ದರೆ, ೩೦ ನಿಮಿಷ ಸಾಕು
ನಿಮ್ಮ ಘಟನೆ ಮನ ತಟ್ಟುವಂತಿದೆ
June 9, 2010 1:40 PM
--------------------------------------------------------------
ವಿ.ಆರ್.ಭಟ್ :

This Habbit of Purohits are bad, they must understand atleast now! nice article
June 9, 2010 3:14 PM
-------------------------------------------------------------
ವಿಶಾಲ್:
This is a clear example of fear within us.Purohit's arrogance was because of the position he has which he doesn't deserve.Who gave him that position, its we.Why did we give,because of Ignorance and fear.
Lets hope that the society realizes this soon and get out of that dogma.

---------------------------------------------------------

Venkatakrishna.K.K.

ಅಪ್ಪ ಪುರೊಹಿತ, ಆದಕಾರಣ ಮಗ ಪುರೊಹಿತ. ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ. ವಿಚಾರವಿಲ್ಲದ ಆಚಾರ.ಅನಾಚಾರದ ವಿಚಾರ.ಗೊಡ್ಡು ಸಂಪ್ರದಾಯ ಗೊತ್ತಿದೆ,ಶಾಸ್ತ್ರವಿಚಾರ ಗೊತ್ತಿಲ್ಲ. ಇದು ಇಂದಿನ ನೂರಾರು ಪುರೊಹಿತರ ಕತೆ.
June 13, 2010 6:45 PM

------------------------------------------------------------
ತಮ್ಮ ಅಭಿಪ್ರಾಯಗಳನ್ನು ತಿಳಿಸಿರುವ ಸಾಗರದಾಚೆಯ ಇಂಚರ. ಶ್ರೀಯುತ ವಿ.ಆರ್. ಭಟ್ Venkatakrishna.K.K. ಮತ್ತು ಶ್ರೀ ವಿಶಾಲ್ ಅವರುಗಳಿಗೆ ಧನ್ಯವಾದಗಳು. ನಡೆದ ನೈಜ ಘಟನೆಯನ್ನು ಯಥಾವತ್ತಾಗಿ ಬರೆಯಲು ಕಾರಣವಿದೆ. ಇಪ್ಪತ್ತೈದು ವರ್ಷಗಳ ಹಿಂದಿನ ನನ್ನ ಮಾನಸಿಕತೆಗೂ ಇಂದಿನ ಮಾನಸಿಕತೆಗೂ ಅಜಗಜಾಂತರ ವೆತ್ಯಾಸವಿದೆ. ಇರಲಿ. ಶ್ರಾದ್ಧದ ನಿಜಾರ್ಥವನ್ನು ವೇದಾಧ್ಯಾಯೀ ಸುಧಕರಶರ್ಮರು ವೇದದ ಹಿನ್ನೆಲೆಯಲ್ಲಿ ತಿಳಿಸಬೇಕೆಂದು ವಿನಂತಿಸುವೆ.
-ಶ್ರೀಧರ್


Thursday, June 3, 2010

ಮುಕ್ತವಾಗಿ ಮಾತನಾಡೋಣ ಬನ್ನಿ.

ವೇದಸುಧೆಯ ಅಭಿಮಾನಿಗಳೇ,
ದಿನದಿಂದ ದಿನಕ್ಕೆವೇದಸುಧೆಗೆ ಇಣುಕುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡು ಸಂತಸವಾಗಿದೆ. ಶ್ರಮದ ಸಾರ್ಥಕತೆ ಕಾಣುತ್ತಿದೆ. ಡಾ|| ಜ್ಞಾನದೇವ್ ಮುಂತಾದ ಆತ್ಮೀಯರು ಹಿಂದಿನ ಬರಹಗಳಿಗೆಲ್ಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಓದುತ್ತಿರುವ ಹಾಗೂ ವೇದಸುಧೆಯ ಮುನ್ನೆಡೆಗೆ ಪ್ರತ್ಯಕ್ಷ ಪರೋಕ್ಷ ಕಾರಣರಾಗಿರುವ ಎಲ್ಲಾ ಮಿತ್ರರಿಗೂ ಕೃತಜ್ಞತೆಗಳು. ಹೀಗೆಯೇ ಸಹಕಾರ ವಿರಲಿ. ನಿಮ್ಮ ಒಂದೆರಡು ಪದಗಳು ವೇದಸುಧೆಯನ್ನು ಸದಾ ಜಾಗೃತವಾಗಿರಲು ಸ್ಪೂರ್ಥಿಯಾಗುತ್ತವೆಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ವೇದಸುಧೆಯಲ್ಲಿ ಬರೆದದ್ದೇ / ಕೇಳಿದ್ದೇ ಅಂತಿಮ ಸತ್ಯವೆಂದು ಭಾವಿಸಬೇಕಿಲ್ಲ. ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವೇದಸುಧೆಯೊಡನೆ ಹಂಚಿಕೊಳ್ಳಿ. ನಿತ್ಯ ಕರ್ಮಗಳು/ವ್ರತ ಕಥೆಗಳು/ಹಬ್ಬ ಹರಿದಿನಗಳು/ಶ್ರಾದ್ಧಕರ್ಮಗಳು/ ಹವನ-ಹೋಮಗಳು... ಮುಂತಾದ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡೋಣ ಬನ್ನಿ. ಯಾರ ಮನ ನೋಯಿಸುವುದೂ ವೇದಸುಧೆಯ ಉದ್ಧೇಶವಲ್ಲ. ಜ್ಞಾನಿಗಳಿಂದ ವಿಚಾರ ತಿಳಿದುಕೊಳ್ಳಲು ವೇದಸುಧೆಯೊಂದು ವೇದಿಕೆಯಾಗಲಿ, ಎಂಬುದು ಅಪೇಕ್ಷೆ. ಅಂತಿಮವಾಗಿ ಮನುಷ್ಯನ ನೆಮ್ಮದಿಯ ಬದುಕೇ ವೇದಸುಧೆಯ ಪರಮೋದ್ಧೇಶ.

ಶರ್ಮರೊಡನೆ ಮುಕ್ತ ಮಾತುಕತೆ

ಕಳೆದ ೨೯.೫.೨೦೧೦ ಶನಿವಾರ ಶ್ರೀ ಸುಧಾಕರ ಶರ್ಮರು ಹಾಸನಕ್ಕೆ ಬಂದಿದ್ದರು. ರಾತ್ರಿ ಊಟವಾದ ನಂತರ ವೇದಸುಧೆಬಳಗವು ಅವರೊಡನೆ ಮುಕ್ತಮಾತುಕತೆ ನಡೆಸಿತು. ಮಾತುಕತೆಯಲ್ಲಿ ಹಾಸನದ ಶ್ರೀರಾಮಸ್ವಾಮಿ,ಶ್ರೀನಟರಾಜ್ ಪಂಡಿತ್, ಶ್ರೀ ಕವಿ ನಾಗರಾಜ್ ಮತ್ತು ಶ್ರೀಧರ್ ಹಾಗೂ ಬೆಂಗಳೂರಿನ ಡಾ|| ವಿವೇಕ್ ಮತ್ತು ಕೃಷ್ಣಮೂರ್ತಿ ಇದ್ದರು. ಶ್ರೀ ಶರ್ಮರ ನಿಷ್ಠುರ ನುಡಿಗಳಿಗೆ ನಮ್ಮ ನಿಷ್ಠುರ ಪ್ರಶ್ನೆಗಳು. ಆದರೆ ಯಾರಿಗೂ ಮನಸ್ಸಿಗೆ ನೋವಾಗದಂತೆ ಮಾತುಕತೆ ಮುಕ್ತಾಯ. ಅದರ ಫಲಶೃತಿಯೇ ಈ ಧ್ವನಿ ಸುರುಳಿ. ಧ್ವನಿಯನ್ನೇ ನೀವು ನೇರವಾಗಿ ಕೇಳುವಾಗ ಅದರ ವಿವರ ಅನಗತ್ಯ. ಆದರೆ ಮುಕ್ತ ಮಾತುಕತೆ ಕೇಳಿದ ನಿಮ್ಮಿಂದ ಫೀಡ್ ಬ್ಯಾಕ್ ಬೇಕು. ಆಗ ಮಾತ್ರ ಈ ಪ್ರಯತ್ನ ಸಾರ್ಥಕವಾದೀತು.



---------------------------------------------------------------
ಡಾ||ಜ್ಞಾನದೇವ್ ಅಭಿಪ್ರಾಯ ಕೇಳಿ

---------------------------------------------------------------
ಸು೦ದರ ಅಪರೂಪದ
ಆಕರ್ಶಕ ಅಸಕ್ತಿಕರ ಮಾತುಕತೆಯನ್ನು ಬಹು ಕುತೂಹಲದಿ೦ದ ಆಲಿಸಿದೆ. ನಿಜಕ್ಕೂಮನಸ್ಸನ್ನು ವಿಸ್ತಾರಗೊಳಿಸುವ ವಿವಸ್ತ್ರಗೊಳಿಸುವ ಮಾತುಕತೆಯೂ ಹೌದು. ಶರ್ಮಾರವರ ಉತ್ತರಗಳು ಉತ್ತಮವಾಗಿದ್ದರೂಎಲ್ಲೋ ಒ೦ದು ಕಡೆ ತುಸು ಉದ್ಧಟನದ ಛಾಯೆ ಕ೦ಡುಬರುತ್ತದೆಯೇನೋ ಎ೦ದು ನನಗೆ ಭಾಸವಗುತ್ತದೆ. ನಿಮ್ಮ ಪ್ರಶ್ನೆಗಳು, ನಿಮ್ಮ ಮಾತಿನ ಶೈಲಿ ಶಬ್ದಗಳ ಗಾ೦ಭೀರ್ಯ ನಿಮ್ಮ ಪ್ರಾಮಾಣಿಕತೆ, ನಿಮ್ಮ ಆಳವಾದ ಧ್ವನಿ ಎಲ್ಲವೂ ನನಗೆ ಬಹು ಮೆಚ್ಚುಗೆಯಾದಅ೦ಶಗಳು. ಕೆಲವೆಡೆ ಶರ್ಮಾರವರ ಉತ್ತರಗಳು ಸಮ೦ಜಸವಾಗಿದ್ದರೂ ಇನ್ನು ಕೆಲವೆಡೆ ಹಾರಿಕೆ ಉತ್ತರಗಳೇನೋ ಎನಿಸುತ್ತವೆ. ಒಟ್ಟಾರೆ ಒ೦ದು ಎನ್ಲೈಟನಿ೦ಗ್ ಹರಟೆ ಅದು. ಸತ್ಯವನ್ನು ಅ೦ತಿಮವಾಗಿ ಮನುಷ್ಯನೇ ಕ೦ಡುಕೊಳ್ಳಬೇಕಾದರೂ ಆ ನಿಟ್ಟಿನಲ್ಲಿಅವನಿಗೆ ಬೆಳಕಿನ ಅಗತ್ಯವಿದೆ ಎ೦ಬುದನ್ನು ಯಾರೂ ಅಲ್ಲಗಳೆಯಲಾರು. ಅ ಬೆಳಕು ವೇದದಿ೦ದಲಾಗಲೀ ಇತರಧರ್ಮಗ್ರ೦ಥಗಳಿ೦ದಾಗಲೀ ಅಥವಾ ಬದುಕಿನ ಅನನ್ಯ ಅನುಭವಗಳಿ೦ದಲೂ ವ್ಯಕ್ತಿಗಳ ವೈಯುಕ್ತಿಕ ಪ್ರಭಾವಗಳಿ೦ದಲೂಬರಬಹುದು. ಏನೇ ಆಗಲೀ ಒಬ್ಬ ಹೇಳಿದ ಮಾತ್ರಕ್ಕೇ ಅದು ನಮ್ಮ ಪಾಲಿಗೆ ಸತ್ಯವಾಗಲಾರದು. ಅದು ನಮ್ಮ ಬದುಕಿನ ಅನುಭವದಮೂಸೆಯಲ್ಲಿ ಬೆ೦ದು ಹೊರಬ೦ದಾಗ ಮಾತ್ರ ಅ೦ಥ ಸತ್ಯಕ್ಕೆ ಬೆಲೆ ಅರ್ಥ. ಇದು ನನ್ನ ಭಾವನೆ. ನಿಮ್ಮ ನ೦ಬಿಕೆಗಳಿಗೆ ಶ್ರದ್ಧೆಗಳಿಗೆನನ್ನ ಅಪಾರ ಗೌರವವಿದೆ
ನಿಮ್ಮ ಈ ಸಚ್ಚಿ೦ತನ ಸತ್ ಪ್ರಯತ್ನಗಳು ನಿಜಕ್ಕೂ ಅನುಕರಣೀಯ ಶ್ಲಾಘನೀಯ ಶ್ರೀಧರ್.
ವ೦ದನೆಗಳೊ೦ದಿಗೆ
ನಿಮ್ಮ ಆತ್ಮೀಯ
ಡಾ||ಜ್ಞಾನದೇವ್

----------------------------------------------------
ಶ್ರೀ ವಿಶಾಲ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಅವರ ಮಾತನ್ನು ನೋಡಿ. ನಿಮ್ಮ ಅಭಿಪ್ರಾಯವನ್ನೂ ತಿಳಿಸಿ--------------------------------------------------
Sir,
Pardon me for writing this comment in English.
First of all the conversation was really interesting,it brought out so many questions and answers we all are searching for.

But at the same time I feel that we aren't going deep enough to understand what all sharmaji says.Our previous belief, faith & fear are the biggest roadblocks to understand the ultimate truth.So we were misguided by people who are greedy and dumb,all in the name of God.

As sharmaji rightly says(ofcourse from vedas), a person can
be misguided easily if
1.He is Ignorant
2.He has got fear
3.He has lots of desires.
We all have certain amount of these things which is acting againstus to accept the ultimate truth.

Its really sad that people think a lot about what other people think about them rather than understanding self.The fear what we have is always temporary if its seen in broader sense.

Life is all about the options we get and the choices we make.We have the option now,choosing the right thing is upto the individual.


Regards,

Vishal
June 4, 2010 6:45 PM

Wednesday, June 2, 2010

ಏನಂತೀರಾ?

ಇಲ್ಲೊಂದು ಧ್ವನಿಸುರುಳಿ ಕೇಳಿ. ನಮ್ಮ-ನಿಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ನಡೆಯುವ ಹೋಮ,ಪೂಜೆ ಇತ್ಯಾದಿ ಸಂದರ್ಭಗಳಲ್ಲಿಮಾತು- ಮಂತ್ರಗಳು ನಮ್ಮ ಕಿವಿಗೆ ಹೀಗೇ ಕೇಳುತ್ತವಲ್ಲವೇ? ಹೀಗೆ ಮಂತ್ರಗಳೇ ಕಿವಿಗೆ ಬೀಳದಂತೆಮಾತು,ಮಾತು,ಮಾತು......ಏನ್ಪ್ರಯೋಜನ ಅಲ್ವಾ?




ವಟುವಿಗೆ ಏನು ಹೇಳಿಕೊಡಬೇಕಿತ್ತು? ಏನು ಹೇಳಿಕೊಟ್ಟೆವು?
ದ್ವಿತೀಯ ಪರಾರ್ಧೇ? ದ್ವಿತೀಯ ಪ್ರಹಾರಾರ್ಧೇ?

Tuesday, June 1, 2010

ಜೀವನ ಬುನಾದಿ -1

ಮಾನವನು ಮಾನವೇತರ ಜೀವರಿಗಿಂತ ಒಂದು ವಿಷಯದಲ್ಲಿ ಭಿನ್ನನಾಗಿದ್ದಾನೆ. ಮಾನವೇತರ ಜೀವರಾದ ಪಶು-ಪಕ್ಷಿ-ಕ್ರಿಮಿ-ಕೀಟಗಳಲ್ಲಿಯೂ ಚೇತನನಾದ ಆತ್ಮವಿರುವುದರಿಂದ ಅವುಗಳಲ್ಲಿಯೂ ಜ್ಞಾನವಿದೆ. ಅದರೆ, ಅದು ಸ್ವಾಭಾವಿಕ ಜ್ಞಾನ. ಶರೀರಧಾರಿಗಳಾದ ಚೇತನಮಾತ್ರರಿಗೆ ಹಸಿವಾದಾಗ ತಿನ್ನಬೇಕು, ಬಾಯಾರಿದಾಗ ಕುಡಿಯಬೇಕು, ತನಗೆ ಸಂಭವಿಸಬಹುದಾದ ಅಪಾಯಕ್ಕೆ ಹೆದರಬೇಕು,ಆತ್ಮರಕ್ಷಣೆಗಾಗಿ ಹೆಣಗಬೇಕು; ವಂಶ ಪರಂಪರೆಯ ರಕ್ಷಣೆಗಾಗಿ ತನ್ನ ಜಾತಿಯ ಭಿನ್ನ ಲಿಂಗದ ಪ್ರಾಣಿಯೊಂದಿಗೆ ದೈಹಿಕ ಸಂಬಂಧ ಹೊಂದಬೇಕು - ಈ ಮೊದಲಾದ ಅರಿವು ಸ್ವಾಭಾವಿಕವಾಗಿಯೇ ಇರುತ್ತವೆ. ಚೇತನಮಾತ್ರರಲ್ಲಿ ಮಾನವನ ಗಣನೆಯೂ ಆಗುವುದರಿಂದ, ಮಾನವನಲ್ಲಿಯೂ ಈ ಸ್ವಾಭಾವಿಕ ಜ್ಞಾನವಿದ್ದೇ ಇರುತ್ತದೆ. ಆದರೆ ಈ ಸ್ವಾಭಾವಿಕ ಜ್ಞಾನದಿಂದಲೇ ಮಾನವನು ತೃಪ್ತನಾಗಲಾರನು. ಏಕೆಂದರೆ "ಏಕೆ? ಹೇಗೆ?" ಎಂಬ ಪ್ರಶ್ನೆಗಳನ್ನು ಕೇಳಬಲ್ಲ ವಿಕಾಸದ ಸ್ಥಿತಿಯನ್ನು ಮುಟ್ಟಿರುತ್ತದೆ ಮಾನವನ ಮನಸ್ಸು. ಪ್ರಶ್ನೆ ಕೇಳುವ ಭಾಗ್ಯ ಮತ್ತು ಅದಕ್ಕೆ ಉತ್ತರ ಹುಡುಕುವ ಅಭಿಲಾಷೆ ಕೇವಲ ಮನುಷ್ಯನಿಗೆ ಸಿಕ್ಕಿರುವ ಸಂಪತ್ತು. ಈ ಜಿಜ್ಞಾಸೆಯಿಂದಾಗಿ ಮಾನವನು ಅನ್ಯ ಜೀವರಿಗಿಂತ ಉನ್ನತ ಸ್ತರದಲ್ಲಿದ್ದಾನೆ.ಈ ಜಿಜ್ಞಾಸೆಯ ಪರಿಣಾಮವಾಗಿ, ಮಾನವನು ನೈಮಿತ್ತಿಕಜ್ಞಾನವನ್ನು ಪಡೆದುಕೊಳ್ಳಲು ಸಮರ್ಥನಾಗಿದ್ದಾನೆ. ನೈಮಿತ್ತಿಕ ಜ್ಞಾನಕ್ಕೆ ಆಶಿಸದೆ, ಕೇವಲ ಸ್ವಾಭಾವಿಕಜ್ಞಾನವೇ ಸಾಕೆಂಬ ತೃಪ್ತ ಮನೋಭಾವವನ್ನು ಸೂಚಿಸುವ ಮಾನವನ ಬೆಳವಣಿಗೆ ಅಲ್ಲಿಗೇ ನಿಂತು ಹೋಗಿ, ಅವನು ಶರೀರದ ಆಕಾರದಿಂದ ಮಾನವನಂತೆಯೇ ಕಂಡುಬಂದರೂ, ಆಂತರಿಕ ವಿಕಾಸದ ದೃಷ್ಟಿಯಿಂದ ಪಶುಪಕ್ಷಿ-ಕ್ರಿಮಿಕೀಟಗಳ ಮಟ್ಟದಲ್ಲಿಯೇ ಉಳಿದು ಹೋಗುತ್ತಾನೆ.ಮಾನವನ ನಿಜವಾದ ಸರ್ವಾಂಗೀಣ ವಿಕಾಸಕ್ಕೆ ಅನಿವಾರ್ಯವಾದ ಸಾಧನ ನೈಮಿತ್ತಿಕಜ್ಞಾನವೇ. ಬೇರೆ ನಿಮಿತ್ತಗಳಿಂದ, ಕಾರಣಗಳಿಂದ ಲಭಿಸುವ ಜ್ಞಾನವೇ ನೈಮಿತ್ತಿಕ ಜ್ಞಾನ.ಸ್ವಾಭಾವಿಕ ಜ್ಞಾನ, "ಹುಟ್ಟಿದ; ಇದ್ದ;ಸತ್ತ"- ಎಂದು ಮಾನವನ ಜೀವನವನ್ನು ಚಿತ್ರಿಸಬೇಕಾದರೆ ಸಾಕು."ಮಾನವ ಕೇವಲ ಹುಟ್ಟಿ, ಇದ್ದು ಸಾಯಲಿಲ್ಲ. ಏನೋ ಆಗಿ, ತಾನೂ ಬೆಳಗಿ, ಬೇರೆಯವರನ್ನೂ ಬೆಳಗಿಸಿ,ಶರೀರತ್ಯಾಗ ಮಾಡಿ ಅಮರನಾಗಿ ಹೋದ"- ಎಂದು ಮಾನವಚರಿತ್ರೆಯನ್ನು ಬರೆಯಬೇಕಾದರೆ, ನೈಮಿತ್ತಕ ಜ್ಞಾನ ಅವನ ಬಾಳಿಗೆ ಹೊಸೆದುಕೊಂಡು ಬರಲೇಬೇಕು; "ಹೇಗೆ? ಏಕೆ?" ಗಳಿಗೆ ಉತ್ತರ ಹುಡುಕಲು ಅವನು ನೈಮಿತ್ತಿಕ ಜ್ಞಾನಕ್ಕೆ ಶರಣಾಗಲೇಬೇಕು.
-ಕವಿ ನಾಗರಾಜ್

ಅಪರಾಧ ಮಾಡಿದ್ದೇನೆ! ಕ್ಷಮಿಸು!- ಜಿಜ್ಞಾಸೆ-೨

ಶ್ರೀ ಶರ್ಮಾಜಿ,
ನಮಸ್ತೆ,

ಅಪರಾಧ ಮಾಡಿದ್ದೇನೆ! ಕ್ಷಮಿಸು!- ಒಂದು ಜಿಜ್ಞಾಸೆ ಬರಹಕ್ಕೆ ನೀವು ಬರೆದಿರುವ ಅಭಿಪ್ರಾಯಗಳನ್ನಾದರಿಸಿ ನಿಮಗೆ ಕೆಲವುಪ್ರಶ್ನೆಗಳನ್ನು ಅದೇ ಬರಹದಲ್ಲಿ ಹಾಕಲಾಗಿದೆ. ದಯಮಾಡಿ ಅದಕ್ಕೆ ಉತ್ತರಿಸಿ. ನಿಮ್ಮ ಸಮಯದ ಅಭಾವದ ಅರಿವು ನನಗಿದೆ. ಆದರೂಸಮಯಮಾಡಿಕೊಂಡು ನೀವು ಉತ್ತರಿಸುವುದು ನಮಗೆ ಅನಿವಾರ್ಯವಾಗಿದೆ.