Pages

Thursday, April 15, 2010

ಸಂಪದದಲ್ಲಿ ಕಾಣಿಸಿಕೊಂಡ ವೇದಸುಧೆ

[ಶ್ರೀ ಶ್ರೀಕಾಂತಮಿಶ್ರಕೋಟಿಯವರು ಸಂಪದದಲ್ಲಿ ವೇದಸುಧೆಯ ಪರಿಚಯ ಮಾಡಿದ್ದಾರೆ.ವೇದದ ಬಗ್ಗೆ ಇನ್ನೂ ಹೆಚ್ಚಿನ ಮಹತ್ವದ ಬರಹಗಳು ಮುಂದೆ ಬರಬಹುದೆಂಬುದು ಅವರ ಅಭಿಲಾಶೆಯಾಗಿದೆ. ಅವರ ಮಾತುಗಳನ್ನೇ ಇಲ್ಲಿ ಪ್ರಕಟಿಸಲಾಗಿದೆ]

ದೇಶದ ಅಧ್ಯಾತ್ಮಿಕ ಪರಂಪರೆ , ಸನಾತನ ಮೌಲ್ಯಗಳು , ವೇದಗಳು ಅಭಿರುಚಿ , ಅಭಿಮಾನ ಇರುವ ಸಂಪದಿಗ ಹರಿಹರಪುರ ಶ್ರೀಧರ್ ಅವರ ಬ್ಲಾಗ್ , ಅಶ್ವಮೇಧ ಯಾಗ ಶಬ್ದದಲ್ಲಿನ ಅಶ್ವ ಕುದುರೆ ಅಲ್ಲವಂತೆ , ಇಂದ್ರಿಯಗಳಂತೆ ಅವುಗಳನ್ನ ಹತೋಟಿಯಲ್ಲಿಡುವುದು ಅಂತ ಲೂ ಇನ್ನೊಂದೆಡೆ ಅಶ್ವ ಎಂದರೆ ರಾಷ್ಟ್ರ ಅಂತಲೂ ಅಶ್ವಮೇಧ ಅಂದರೆ ರಾಷ್ಟ್ರಗಳನ್ನು ಒಗ್ಗೂಡಿಸುವುದು ಅಂತಲೂ ಹೇಳಿದ್ದಾರೆ. ಆದರೆ ಅಶ್ವಮೇಧಯಾಗದಲ್ಲಿ ಕುದುರೆಯ ಪಾತ್ರ ಇದ್ದೇ ಇದೆಯಲ್ಲ ? ರಾಜರುಗಳ ಕತೆಗಳಲ್ಲಿ , ಅಶ್ವಮೇಧ ಯಾಗದ ವಿಧಿವಿಧಾನಗಳಲ್ಲಿ ? ಇದು ನನ್ನ ಪ್ರಶ್ನೆ .
"ಮಾಡುವ ಕೆಲಸ ಯಾವುದೇ ಇರಬಹುದು ಅದನ್ನು ಶ್ರೇಷ್ಠತಮವನ್ನಾಗಿ ಮಾಡಿಗಾಗ ಅದೂ ಯಜ್ಞವೇ ಆಗುತ್ತದ" ಎಂದು ಇಲ್ಲಿನ ಬರಹವೊಂದರಲ್ಲಿ ಲೇಖಕರು ಹೇಳಿದ್ದಾರೆ .

ಈ ಬ್ಲಾಗಿನಲ್ಲಿ ಈವರೆಗೆ ವೇದಗಳ ಬಗೆಗೆ ಅಭಿಮಾನ ವ್ಯಕ್ತವಾಗಿದೆ , ವೇದಗಳ ಬಗೆಗೆ ಏನೂ ಮಹತ್ವದ ಮಾಹಿತಿ ಬಂದಿಲ್ಲ . ಮುಂದೆ ಬರಬಹುದು ಎಂದು ಆಶಿಸೋಣ .

[ಬರಹದ ಈ ಕೆಳಗಿನ ಕೊಂಡಿಯನ್ನು ಕಾಪಿ ಮಾಡಿ ಅಡ್ರೆಸ್ ಬಾರ್ ನಲ್ಲಿ ಪೇಸ್ಟ್ ಮಾಡಿ ಬರಹವನ್ನು ಓದಬಹುದು.]
http://sampada.net/blog/shreekantmishrikoti/12/04/2010/24804

1 comment: