Pages

Tuesday, July 20, 2010

ಸುಧಾಕರಶರ್ಮರು ಬರೆಯಲಿರುವರು

ವೇದಸುಧೆಯ ಅಭಿಮಾನಿಗಳೇ, ನಮಸ್ಕಾರ.
ವೇದಾಧ್ಯಾಯೀ ಸುಧಾಕರಶರ್ಮರು ಸತ್ಯಾನ್ವೇಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕ್ರಿಯಾಶೀಲ ವ್ಯಕ್ತಿ. ಅವರಿಂದ ರಾಜ್ಯದಾದ್ಯಂತ ಉಪನ್ಯಾಸಗಳು, ಗುಂಪುಚರ್ಚೆಗಳು, ಸತ್ಸಂಗಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಅವರಿಗೆ ಸಮಯದ ಅಭಾವವು ತುಂಬಾ. ವೇದಸುಧೆಯ ಮೂಲಕ ಅವರಿಗೆ ನಿಷ್ಟುರ ಪ್ರಶ್ನೆಗಳನ್ನು ಕೇಳಲಾಗಿತ್ತು. ಅವರಿಂದ ಉತ್ತರವು ತಡವಾದ್ದರಿಂದ ಶರ್ಮರಿಗೆ ಬೇಸರವಾಗಿರಬಹುದೆಂಬ ಅನುಮಾನಕ್ಕೆ ಕಾರಣವಾಗಿ ಅವರಿಗೆ ವೈಯಕ್ತಿಕವಾಗಿ ಮೇಲ್ ಮಾಡಿದ್ದೆ. ಆದರೆ ಸಮಯದ ಕೊರತೆಯೇ ವೇದಸುಧೆಯಲ್ಲಿ ಬರೆಯದಿರಲು ಕಾರಣವೆಂಬ ಸ್ಪಷ್ಟೀಕರಣ ನೀಡಿ ನನಗೆ ಸುಧೀರ್ಘ ಪತ್ರವನ್ನು ಬರೆದಿದ್ದಾರೆ. ಆದ್ದರಿಂದ ಮುಂದೆ ಅವರ ವಿಚಾರಗಳನ್ನು ಅವರಿಗಾಗಿಯೇ ಇರುವ ಪ್ರತ್ಯೇಕ ಪುಟದಲ್ಲಿ ನಿರೀಕ್ಷಿಸಬಹುದು.
-ಹರಿಹರಪುರಶ್ರೀಧರ್

No comments:

Post a Comment