Pages

Saturday, August 7, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -12

ಸತ್ಯದಲ್ಲಿ ಶ್ರದ್ಧೆಯಿಡಬೇಕು. ಆದರೆ ಜ್ಞಾನವಿಲ್ಲದೆ ಸತ್ಯಾಸತ್ಯನಿರ್ಣಯ ಮಾಡುವುದಾದರೂ ಹೇಗೆ? ಅದೇ ಕಾರಣದಿಂದ ಪರಮಾತ್ಮನು ಪ್ರತಿಯೊಬ್ಬ ಜೀವನಿಗೂ ಭರವಸೆ ನೀಡಿದ್ದಾನೆ:

ಬ್ರಹ್ಮಣಾ ತೇ ಬ್ರಹ್ಮಯುಜಾ ಯುನಜ್ಮಿ ಹರೀ ಸಖಾಯಾ ಸಧಮಾದ ಆಶೂ|
ಸ್ಥಿರಂ ಕಥಂ ಸುಖಮಿಂದ್ರಾಧಿತಿಷ್ಠನ್ ಪ್ರಜಾನನ್
ವಿದ್ವಾನ್ ಉಪ ಯಾಹಿ ಸೋಮಮ್|| (ಋಕ್.3.35.4)

[ಇಂದ್ರ] ಓ ಇಂದ್ರಿಯವಾನ್ ಜೀವ! [ತೇ] ನಿನ್ನನ್ನು [ಬ್ರಹ್ಮಯುಜಾ ಬ್ರಹ್ಮಣಾ] ಪರಬ್ರಹ್ಮಯುಕ್ತವಾದ ನಿರ್ಮಲಜ್ಞಾನದೊಂದಿಗೆ [ಯುನಜ್ಮಿ] ಸಂಬದ್ಧನಾಗಿ ಮಾಡುತ್ತೇನೆ. [ಸಖಾಯಾ] ನಿನಗೆ ಮೈತ್ರಿ ತೋರುವ [ಆಶೂ] ವೇಗಯುಕ್ತವಾದ [ಹರೀ] ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು [ಸಧಮಾದೇ ಯುನಜ್ಮಿ] ಅಕ್ಕಪಕ್ಕದಲ್ಲಿ ನಿಯೋಜಿಸುತ್ತೇನೆ. [ಸ್ಥಿರಂ ಸುಖಂ ರಥಮ್] ಧೃಢವೂ, ಸುಖಕರವೂ ಆದ ದೇಹರಥವನ್ನು [ಅಧಿತಿಷ್ಟನ್] ಏರಿ [ವಿದ್ವಾನ್] ವಿದ್ವಾಂಸನಾಗಿ [ಪ್ರಜಾನನ್] ಪ್ರಜ್ಞಾನವನ್ನು ಗಳಿಸಿ [ಸೋಮಂ ಉಪಯಾಹಿ] ಶಾಂತಿಸಾಗರನಾದ ಪ್ರಭುವಿನ ಬಳಿ ಸಾರು.

3 comments: