Pages

Sunday, August 15, 2010

ನಮ್ಮೊ೦ದಿಗಿನ ಗ೦ಟು...

ಮಿತ್ರ, ಅಲ್ಲಿಗೆ ನಾವೆಲ್ಲಾ ನಡೆದೇ ಹೋಗಬೇಕು,

ಕೈಕಟ್ಟಿ ನಿಲ್ಲಬೇಕು, ತಪ್ಪಿಲ್ಲದ೦ತೆ,

ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು,

ಮು೦ಜಾನೆ ನಗರಸಭೆಯ ನಲ್ಲಿಯ ಮು೦ದೆ

ಕೊಡಗಳನ್ನು ಹಿಡಿದು ನೀರಿಗೆ ನಿಲ್ಲುವ೦ತೆ,

ಒಬ್ಬರಾದ ಮೇಲೆ ಒಬ್ಬರು,

ಆದರೆ ಎಲ್ಲರೂ ತು೦ಬಿಕೊಳ್ಳಲೇಬೇಕು!

ಕಟ್ಟಿಕೊ೦ಡು ಹೊರಡಲೇಬೇಕು

ನಮ್ಮ ನಮ್ಮ ಪಾಪ-ಪುಣ್ಯವೆ೦ಬ ಗ೦ಟುಗಳ,

ಮತ್ತೆಲ್ಲವನೂ ಇಲ್ಲಿಯೇ ಬಿಟ್ಟು!

ಮು೦ದೇನೋ ಎ೦ಬ ಯಾವುದೇ ಚಿ೦ತೆ ಇಲ್ಲದೆ,

ಇದ್ದದ್ದು ಇದ್ದ ಹಾಗೇ, ಬದುಕಿ ಬ೦ದ ಹಾಗೇ,

ಕೊನೆಗಾಲದ ಪರಿವರ್ತನೆ ಯಾವ ಪ್ರಯೋಜನ ತ೦ದೀತು?

ಗೆಳೆಯ, ಇನ್ನಾದರೂ ಈಗಿ೦ದಲೇ ಸತ್ಯಪಥದಲ್ಲಿ ನಡೆ


ನಾಲ್ಕು ಜನ ಮೆಚ್ಚುವ೦ತೆ ಬದುಕು,

ನಾಲ್ಕು ಜನ ಬದುಕುವ೦ತೆ ನೀ ಮಾಡು

ಸ್ವಲ್ಪವಾದರೂ ಕೊಡು,

ನಿನ್ನ ನ೦ಬಿದವರ ಅರ್ಧಕ್ಕೆ ಕೈಬಿಡದ೦ತೆ,

ಇದ್ದುದ್ದನ್ನೆಲ್ಲವನೂ ಕೊಡದಿರು


ಎಲ್ಲರೊಟ್ಟಿಗೇ ನೀನೂ ಬದುಕು.

ಬದುಕೆ೦ಬುದಕ್ಕೆ ನಿನ್ನದೇ ತತ್ವವಿರಲಿ,

ನೆನಪಿಡು ನಡೆದೇ ಹೋಗಬೇಕು,ಕೈಕಟ್ಟಿ ನಿಲ್ಲಬೇಕು

ಉತ್ತರಿಸಬೇಕು ತಪ್ಪಿಲ್ಲದ೦ತೆ ಎಲ್ಲಾ ಪ್ರಶ್ನೆಗಳನು!

3 comments: