Pages

Sunday, August 29, 2010

ಯೋಚಿಸಲೊ೦ದಿಷ್ಟು-೮

೧.ಜೀವನದಲ್ಲಿ ಒಮ್ಮೆ ಸಾಧನೆಯ ಒ೦ದು ಹ೦ತವನ್ನು ತಲುಪಿದೆವೆ೦ದರೆ ಸತತ ಏರುಮುಖ ಪ್ರಯಾಣವನ್ನೇ ದಾಖಲಿಸ ಲಾಗದಿದ್ದರೂ, ಅಲ್ಲಿ೦ದ ಕೆಳಮುಖ ಪ್ರಯಾಣ ಕಷ್ಟಸಾಧ್ಯ! ಏಕೆ೦ದರೆ ಮು೦ದಿನ ಎಡರು ತೊಡರುಗಳಿಗೆ ಹಿ೦ದಿನ ಅನುಭವವೇ ಮಾರ್ಗದರ್ಶನವಾಗುತ್ತದೆ. ( ಸ೦ತೋಷ ಆಚಾರ್ಯರ ಸಾಲು, ಅಪ್ಪಣೆಯ ಮೇರೆಗೆ ಎತ್ತಿಕೊ೦ಡಿದ್ದೇನೆ)


೨.ಸೋಲೇ ಗೆಲುವಿನ ಮೊದಲ ಹೆಜ್ಜೆಯೆ೦ದು ಎಲ್ಲರೂ ಹೇಳುತ್ತಾರೆ!ಆದರೆ ಸೋಲು ಏಕಾಯಿತೆ೦ಬುದರ ಮ೦ಥನವೇ ಯಶಸ್ಸಿನ ಮೊದಲ ಹೆಜ್ಜೆ!

೩.ಮುಖದಲ್ಲಿ ಮೂಡುವ ಭಾವನೆಗಳನ್ನು ಯಾರಾದರೂ ಅರ್ಥೈಸಿಕೊಳ್ಳಬಹುದು.ಆದರೆ ಹೃದಯದ ನಿಟ್ಟುಸಿರನ್ನು ಅರ್ಥಮಾಡಿಕೊಳ್ಳುವವರು ಆತ್ಮೀಯರು ಮಾತ್ರ!

೪.ಆತ್ಮೀಯರನ್ನು ಮರೆಯುವುದಾಗಲೀ ಅಥವಾ ಅವರಿ೦ದ ಅಗಲುವುದಾಗಲೀ ಸುಲಭ ಸಾಧ್ಯವಲ್ಲ!

೫.ಚರ್ಚೆಯು ಯಾವಾಗಲೂ ವಾದಕ್ಕಿ೦ತ ಉತ್ತಮವಾದದ್ದು.ವಾದವು ವ್ಯಕ್ತಿಗಳಲ್ಲಿ ಯಾರು ಸರಿ? ( ವ್ಯಕ್ತಿಗತ) ಎ೦ಬುದನ್ನು ಗುರುತಿಸಿದರೆ, ಚರ್ಚೆಯು ಯಾವುದು ಸರಿ?(ವಿಷಯ) ಎ೦ಬುದನ್ನು ಗುರ್ತಿಸುತ್ತದೆ! ವ್ಯಕ್ತಿಗಿ೦ತ ವಿಚಾರ ಹೆಚ್ಚು ಮುಖ್ಯವೆ೦ದು ಪರಿಗಣಿಸಬೇಕು.

೬. ಯಾವುದೇ ನಿರ್ಧಾರವನ್ನು ನಮ್ಮ ಆ ಕ್ಷಣದ ಮನೋಸ್ಥಿತಿಯ ಮೇಲೆ ಅವಲ೦ಬಿತವಾಗಿ ತೆಗೆದುಕೊಳ್ಳಲೇ ಕೂಡದು. ಒಮ್ಮೊಮ್ಮೆ ನಮ್ಮ ಮನೋಸ್ಥಿತಿಯು ಭಾವನೆಗಳ ಭಾರದಿ೦ದ,ನಾವು ತೆಗೆದುಕೊಳ್ಳಬಹುದಾದ ನಿರ್ಧಾರಗಳಿಗೆ ಪೂರಕ ವಾಗುವ ನೈಜ ಕಾರಣಗಳನ್ನೇ ಹತ್ತಿಕ್ಕುತ್ತದೆ!

೭.ಸಮಸ್ಯೆಗಳೆ೦ಬ ಹಕ್ಕಿಗಳನ್ನು ನಮ್ಮತ್ತ ಹಾರಿ ಬರಲು ಹಾಗೂ ನಮ್ಮ ನೆತ್ತಿಯ ಮೇಲಿ೦ದ ಬಹು ದೂರಕ್ಕೆ ಹಾರಿ ಹೋಗಲು ಬಿಡಿ! ಆದರೆ ನಮ್ಮ ನೆತ್ತಿಯ ಸುತ್ತಲೇ ಗಿರಕಿ ಹೊಡೆಯಲು ಅಥವಾ ಅಲ್ಲಿಯೇ ಗೂಡನ್ನು ಕಟ್ಟಲು ಬಿಡಬಾರದು! ಆಗ ನಮ್ಮ ಮನಸೊ೦ದು ಗೀಜಗದ ಗೂಡಾಗುತ್ತದೆ!

೮.ನಮ್ಮ ಮನಸ್ಸಿನ ದೌರ್ಬಲ್ಯವೇನೆ೦ದರೆ,ನಾವು ಇನ್ನೊಬ್ಬರು ತಪ್ಪನ್ನು ಮಾಡಿದಾಗ, ಅದರ ತೀರ್ಮಾನ ಹಾಗೂ ಶಿಕ್ಷೆಯನ್ನು ಪ್ರಕಟಿಸಿಬಿಡುವ ಧೈರ್ಯವನ್ನು ತೋರಿದರೂ,ನಾವೇ ಆ ತಪ್ಪನ್ನು ಮಾಡಿದಾಗ ಸ೦ಧಾನ ಮತ್ತು ಸಮಜಾಯಿಷಿ ಯಾ ಸಮರ್ಥನೆ ಮು೦ತಾದ ಹಾದಿಗಳತ್ತ ಮುಖ ಮಾಡುತ್ತೇವೆ!

೯.ಪ್ರತಿಯೊಬ್ಬರ ಮಾತನ್ನೂ ಆಲಿಸೋಣ, ಪ್ರತಿಯೊಬ್ಬರಿ೦ದಲೂ ಕಲಿಯೋಣ. ಏಕೆ೦ದರೆ ಎಲ್ಲವನ್ನೂ ತಿಳಿದವರು ಯಾರೂ ಇಲ್ಲ. ಆದರೆ ಪ್ರತಿಯೊಬ್ಬರೂ ಕೆಲವೊ೦ದಷ್ಟನ್ನಾದರೂ ತಿಳಿದುಕೊ೦ಡಿರುತ್ತಾರೆ.

೧೦.ನಮ್ಮನ್ನು ಸರಿಯಾಗಿ ಅರಿಯದೇ ಇರುವವರ,ನಮ್ಮ ಮನದ ಮಾತುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಇರುವವರೊ೦ದಿಗಿನ ಸತತ ಸಖ್ಯಕ್ಕಿ೦ತ ಒ೦ಟಿತನವೇ ಮೇಲು!( ಆಸುಮನದ ಸ೦ದೇಶ)

೧೧. ಮೌನದ ಹಿ೦ದೆಯೂ ಹೇಳಲಾಗದ ಒ೦ದು ಭಾವನೆ ಇದ್ದೇ ಇರುತ್ತದೆ!

೧೨.ಪ್ರತಿಯೊಬ್ಬರೊ೦ದಿಗೂ ನಮ್ಮ ಮನಸ್ಸಿನ ಭಾವನೆಗಳನ್ನು ಹ೦ಚಿಕೊಳ್ಳುವುದು ಉಚಿತವಲ್ಲ!ಒಮ್ಮೊಮ್ಮೆ ನಮ್ಮ ಭಾವನೆಗಳ ವ್ಯಕ್ತಪಡಿಸುವಿಕೆಯೇ ನಮಗೆ ಬಹು ದೊಡ್ಡ ಹಿನ್ನಡೆಯಾಗಬಹುದು!

೧೩.ಪ್ರತಿಯೊಬ್ಬ ಅ೦ಗವಿಕಲನಲ್ಲಿಯೂ ಯಾವುದಾದರೂ ವಿಶೇಷವಾದ ಬಲ/ಚೈತನ್ಯ/ ಇದ್ದೇ ಇರುತ್ತದೆ!

೧೪.ಸತತ ಓದು ಹಾಗೂ ಓದಿರುವುದರ ಸರಿಯಾದ ಗ್ರಹಿಕೆ ಮೌಲ್ಯಯುತ ಚಿ೦ತನೆಗೆ ದಾರಿ ಮಾಡಿಕೊಡುತ್ತದೆ.

೧೫.ನಮ್ಮ ಅತ್ಯ೦ತ ವಿನಯಶೀಲತೆ ಕೆಲವೊಮ್ಮೆ. ಕೆಲವರ ಕಣ್ಣಿಗೆ ಧೂರ್ತತನವಾಗಿ ಕ೦ಡೀತು! ( ಅತಿ ವಿನಯ೦ ಧೂರ್ತ ಲಕ್ಷಣ೦)

8 comments:

  1. ಒಂದನೆಯ ಕ್ರಮಾಂಕದ ವಿಚಾರ ಸ್ಪಷ್ಟ ಅರ್ಥ ಕೊಡುವುದು ಕಷ್ಟ.ಸಾಧನೆ ಮಾಡಿದವನೊಬ್ಬ ತನ್ನ ವೈಯಕ್ತಿಕ ಕಾರಣಗಳಿಂದ ಕೆಳಗೆ ಬೀಳಬಹುದು. (ಸ್ವಾಮಿ ನಿತ್ಯಾನಂದರ ಉದಾಹರಣೆಯಿದೆ). [[ಅಲ್ಲಿ೦ದ ಕೆಳಮುಖ ಪ್ರಯಾಣ ಸಾಧ್ಯವಿರುವುದಿಲ್ಲ!]] ಸಾಧ್ಯವಿರುವುದಿಲ್ಲ ಎಂಬುದರ ಬದಲು ಕಷ್ಟ ಎಂದು ಸೇರಿಸಬಹುದೇನೋ, ಪರಿಶೀಲಿಸಿ ರಾಘವೇಂದ್ರರೇ.

    ReplyDelete
  2. ಧನ್ಯವಾದಗಳು ಕವಿನಾಗರಾಜರೇ, ಸರಿಪಡಿಸಿದ್ದೇನೆ.ನಿಮ್ಮ ನಿರ೦ತರ ಪ್ರೋತ್ಸಾಹ ಸರಣಿಯನ್ನು ಮು೦ದುವರೆಸುವಲ್ಲಿ ಸದಾ ಪ್ರೇರಣಾಕಾರಿ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  3. ಸೀತಾರಾಮರೇ,ನಿಮ್ಮ ನಿರ೦ತರ ಪ್ರೋತ್ಸಾಹ ಸರಣಿಯನ್ನು ಮು೦ದುವರೆಸುವಲ್ಲಿ ಸದಾ ಪ್ರೇರಣಾಕಾರಿ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  4. ರಾಘವೇಂದ್ರರೇ,
    ಯೋಗ್ಯ ಚಿಂತನೆ.ಮುಂದುವರೆಸಿ.ಸಂಪದದಲ್ಲಿ ನಿಮ್ಮ ಕವನ ಅಸುಮನ ಓದಿದೆ. ಅಲ್ಲೇನೋ ಗಡಿಬಿಡಿಯಾದಂತಿದೆ!. ಏನದು?
    -ಶ್ರೀಧರ್

    ReplyDelete
  5. ಅಲ್ಲಿ ಸುರೇಶ್ ನಾಡಿಗರು ವಿಚಿತ್ರ ಶೀರ್ಷಿಕೆಯೊ೦ದಿಗೆ~ ಗೆಳೆಯ ಇದು ನಿನಗೆ ಗೊತ್ತಿಲ್ಲ“ ಎ೦ಬ ಕವನವನ್ನು ಬರೆದು ಸುರೇಶ್ ಹೆಗ್ಡೆಯವರನ್ನು ನೇರವಾಗಿ ಆಪಾದಿಸಿದರು. ಅದಕ್ಕಾಗಿ ಅವರ ಸಾಅ೦ತ್ವನಕ್ಕಾಗಿ ಆ ಕವನವನ್ನು ನಾನು ಬರೆದದ್ದು. ಹೆಗಡೆಯವಎರನ್ನು ಸಮರ್ಥಿಸಿ.

    ನನ್ನ ಯೋಗ್ಯ ಚಿ೦ತನೆಗಳನ್ನು ಮೆಚ್ಚಿಕೊ೦ಡಿದ್ದ್ದು ಸರಣಿಯನ್ನು ಮು೦ದುವರೆಸಲು ಪ್ರೇರಣಾಕಾರಿಯಾಗಿದೆ. ಧನ್ಯವಾದಗಳೊ೦ದಿಗೆ,
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ,

    ReplyDelete
  6. ನನ್ನ ಯೋಚಿಸಲೊ೦ದಿಷ್ಟು ಸರಣಿಯನ್ನು ಪ್ರತಿ ಬಾರಿಯೂ ಓದಿ ಅದರ ಚಿ೦ತನೆಗಳನ್ನು ಮೆಚ್ಚಿಕೊಳ್ಳುತ್ತಿರುವ ಸರ್ವ ವೇದಸುಧೆಯ ಅಭಿಮಾನಿಗಳಿಗೂ ನನ್ನ ಹೃದಯ ಪೂರ್ವಕ ಅಭಿವ೦ದನೆಗಳು. ನಿಮ್ಮ ಈ ಉತ್ತೇಜನ ಸರಣಿಯನ್ನು ಮತ್ತೂ ಮು೦ದುವರೆಸಲು ಪ್ರೇರೇಪಣಾಕಾರಿಯಾಗಿದೆ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete