Pages

Friday, August 27, 2010

ಮನವಿ

ಪ್ರಿಯ ವೇದಸುಧೆಯ ಅಭಿಮಾನಿಗಳೇ,
ವೇದಸುಧೆಯು ಹಲವು ಕಾರಣಗಳಿಂದ ಸಹಸ್ರಾರು ಜನರ ಮೆಚ್ಚಿಗೆ ಪಡೆದಿದೆ. ಓದುಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಥವಾ ಈಗಾಗಲೇ ವೇದಸುಧೆಯ ಹತ್ತಿರ ಬಂದಿರುವವರು ನಿತ್ಯವೂ ನೋಡುತ್ತಿದ್ದಾರೆ. ವೇದಸುಧೆಯ ಪ್ರಮುಖ ಉದ್ಧೇಶ ಈಗಾಗಲೇ ಹಲವಾರು ಭಾರಿ ತಿಳಿಸಿದೆ. "ಸಮಾಜಕ್ಕೆ ಹಿತವೆನಿಸಿದ್ದನ್ನು ಹಂಚುವುದು" ಈ ದಾಟಿಯಲ್ಲಿ ವಿಚಾರಮಾಡುವಾಗ ’ಪ್ರಪಂಚದ ಎಲ್ಲೆಡೆಯಿಂದ ಬರುವ ಸದ್ವಿಚಾರಗಳಿಗೆ ಇಲ್ಲಿ ಸ್ವಾಗತ ಇದ್ದೇ ಇದೆ. ಇಂತಹ ಹಾದಿಯಲ್ಲಿರುವಾಗ ಕೆಲವರಿಗೆ ಕೆಲವು ಆಪ್ಯಾಯಮಾನವಾಗಬಹುದು. ಕೆಲವು ಕಹಿಯಾಗಬಹುದು. ಕೆಲವು ಹಿಡಿಸದಿರಬಹುದು. ಅಂತೂ ಇಲ್ಲಿ ವೇದದ ಚಿಂತನೆ ನಡೆದಿದೆ, ವೇದಮಂತ್ರಗಳ ಆಡಿಯೋಗಳಿವೆ, ಡಾ|| ಗೋಪಾಲಕೃಷ್ಣರಂತಹ ವಿಜ್ಞಾನಿಗಳಿಂದ ನಮ್ಮ ಭಾರತೀಯ ಪರಂಪರೆಯ ಚಿಂತನೆಗಳಿವೆ. ಶ್ರೀ ರಾಮಕೃಷ್ಣಾಶ್ರಮದ ಯತಿಗಳ ಮಾತುಗಳಿವೆ. ವೇದಾಧ್ಯಾಯೀ ಸುಧಾಕರ ಶರ್ಮರ ಹಲವಾರು ಉಪನ್ಯಾಸಗಳ ಆಡಿಯೋ ಗಳಿವೆ. ಪಂಡಿತ ಸುಧಾಕರ ಚತುರ್ವೇದಿಗಳ ಚಿಂತನೆಗಳನ್ನು ಕವಿ ನಾಗರಾಜ್ ಹಂಚಿಕೊಳ್ಳುತ್ತಿದ್ದಾರೆ. ಶ್ರೀ ವಿ.ಆರ್.ಭಟ್, ಶ್ರೀ ರಾಘವೇಂದ್ರ ನಾವಡರು, ಕವಿ ಸುರೇಶ್ ಮುಂತಾದವರು ಚಿಂತನೆಗೆ ಯೋಗ್ಯವಾದ ಬರಹಗಳನ್ನು ನೀಡುತ್ತಿದ್ದಾರೆ. ವೇದಮಂತ್ರಗಳಿಗೆ, ಸುಧಾಕರ ಶರ್ಮರ ಉಪನ್ಯಾಸಗಳಿಗೆ, ವಿವೇಕಾನಂದರ ವಿಚಾರಗಳಿಗಾಗಿ, ಭಾವಗೀತೆಗಳಿಗೆ ಮತ್ತು ವಿಶೇಷ ಬರಹಗಳಿಗೆ ಪ್ರತ್ಯೇಕ ಪುಟಗಳಿವೆ. ಈ ಪುಟಗಳೆಲ್ಲಾ ಮತ್ತೆ ಮತ್ತೆ ಓದಬೇಕಾದ, ಆಡಿಯೋ ಕೇಳಬೇಕಾದ ಪುಟಗಳು. ವೇದಮಂತ್ರಗಳನ್ನು ಆಗಿಂದಾಗ್ಗೆ ಕೇಳಲು ಹಿತವಾಗಿರುತ್ತವೆ, ಅಲ್ಲವೇ? ಎಲ್ಲದರ ಉಪಯೋಗವಾಗಲೆಂಬ ಆಶಯದೊಡನೆ, ನಿಮ್ಮ ಅಮೂಲ್ಯ ಸಲಹೆಗಳನ್ನು ವೇದಸುಧೆಯು ಅಪೇಕ್ಷಿಸುತ್ತದೆ, ಎಂಬ ಮಾತನ್ನು ನೆನಪು ಮಾಡಬಯಸುವೆ. ಸರ್ಕಾರ ಉದ್ಧೇಶಿಸಿರುವ ಅತ್ಯಂತ ಹೇಯವಾದ ಪ್ರಾಣಿಹತ್ಯಾಗೃಹದ ಕೆಟ್ಟ ಯೋಜನೆಗೆ ನಿಮ್ಮ ವಿರೋಧ ವ್ಯಕ್ತಪಡಿಸಲು ಇಂದು ಪ್ರಕಟವಾಗಿರುವ ಲೇಖನದಲ್ಲಿರುವ ಅಂತರ್ಜಾಲ ಕೊಂಡಿಯ ಮೂಲಕ ಪಿಟಿಶನ್ ಗೆ ಸಹಿಮಾಡಲು ವಿನಂತಿಸುವೆ.
ನಿಮ್ಮವನೇ,
ಹರಿಹರಪುರಶ್ರೀಧರ್

2 comments:

  1. ನಾನು ಸಹಿ ಮಾಡಿರುವೆ.

    ReplyDelete
  2. ನಾನೂ ಕೂಡ. ಬಝ್ ನಲ್ಲಿ ಹಾಕಿರುವುದರಿಂದ ಬಹಳ ಮಂದಿ ಸಹಿ ಮಾಡಿರಬಹುದು.
    -ಶ್ರೀಧರ್

    ReplyDelete