Pages

Tuesday, August 10, 2010

ಮೂಢ ಉವಾಚ -2

ಲೋಭ
ಸ್ನೇಹ ಪ್ರೀತಿಯಲು ಲಾಭವನೆ ಅರಸುವರು |
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು ||
ವಿಶ್ವಾಸದಮೃತಕೆ ವಿಷವ ಬೆರೆಸುವರಿಹರು |
ಇಂಥವರ ಸಂಗದಿಂ ದೂರವಿರು ಮೂಢ||

ನಾನತ್ವ
ತಾವೆ ಮೇಲೆಂಬರು ಇತರರನು ಹಳಿಯುವರು |
ಪರರೇಳಿಗೆಯ ಸಹಿಸರು ಕಟುಕಿ ಮಾತಾಡುವರು ||
ಅರಿಯರವರು ಇತರರಿಗೆ ಬಯಸುವ ಕೇಡದು |
ಎರಡಾಗಿ ಬಂದೆರಗುವುದೆಂಬುದನು ಎಲೆ ಮೂಢ ||

ಬಯಕೆ
ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ |
ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ ||
ಬಯಕೆ ಜೀವನವು ಬಯಸುವುದು ತಪ್ಪಲ್ಲ |
ಸ್ವಬಲವೇ ಹಂಬಲಕೆ ಬೆಂಬಲವು ಮೂಢ ||

4 comments:

  1. ಲೋಭ, ನಾನತ್ವ ಮತ್ತು ಬಯಕೆಯನ್ನ ಸರಿಯಾಗಿ ವಿವರಿಸಿದ್ದೀರಿ.

    ReplyDelete
  2. [ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು]
    ನಿಜಕ್ಕೂ ಚಿಂತಿಸಲು ಯೋಗ್ಯವಾದ ವಿಚಾರ.

    ReplyDelete
  3. ಶ್ರೀಯುತ ಸೀತಾರಾಮ ಮತ್ತು ಶ್ರೀಧರರಿಗೆ ವಂದನೆಗಳು.

    ReplyDelete
  4. ವಂದನೆಗಳು, ಶ್ರೀ ಭಟ್ಟರೇ.

    ReplyDelete