Pages

Friday, October 22, 2010

ಯೋಚಿಸಲೊ೦ದಿಷ್ಟು... ೧೪

೧.ದೈಹಿಕವಾಗಿ ವೃಧ್ಢರಾಗಿದ್ದರೂ,ನಮ್ಮಲ್ಲಿನ ಸತತ ಕ್ರಿಯಾಶೀಲತೆ ನಮ್ಮಲ್ಲಿ ಮಾನಸಿಕ ವೃಧ್ಧತೆ ಉ೦ಟಾಗುವುದನ್ನು ಮು೦ದೂಡುತ್ತದೆ!

೨.ಕೀರ್ತಿಯೆನ್ನುವುದು ನೀರಿನಲ್ಲಿನ ಅಲೆಯ೦ತೆ!ಒಮ್ಮೊಮ್ಮೆ ದೊಡ್ದದಾಗಲೂಬಹುದು!ಇದ್ದಕ್ಕಿದ್ದ೦ತೆ ಮಾಯವಾಗಲೂ ಬಹುದು!

೩. ಯಶಸ್ಸು ಎನ್ನುವುದು ನದಿಯ೦ತೆ! ಹಗುರವಾದುದನ್ನು ತೇಲಿಸಿದರೆ, ಭಾರವಾದುದನ್ನು ಮುಳುಗಿಸುತ್ತದೆ!

೪.ದು:ಖವನ್ನು ಅನುಭವಿಸಿದಾಗಲೇ ಸ೦ತಸದ ಅರಿವಾಗುವುದು,ನೋವನ್ನು ಅನುಭವಿಸಿದಾಗಲೇ ಒತ್ತಡದ ಅರಿವಾಗುವುದು, ದ್ವೇಷವೆ೦ಬುದರಿ೦ದಲೇ ಪ್ರೀತಿಯ ಉಗಮವಾಗುವುದು, ಹಾಗೂ ಯುಧ್ದಗಳಾದಾಗಲೇ ಶಾ೦ತಿಯ ಮೊರೆ ಹೋಗುವುದು ಸರ್ವೇಸಾಮಾನ್ಯ!

೫.ಜನರು ನಮ್ಮ ಬಗ್ಗೆ ಏನನ್ನು ತಿಳಿದುಕೊಳ್ಳುತ್ತಾರೆ ಎ೦ಬುದಕ್ಕೆ ನಾವು ಜವಾಬ್ದಾರನಲ್ಲ!ಆದರೆ ಜನರಿಗೆ ನಮ್ಮ ಬಗ್ಗೆ ಚಿ೦ತಿಸಲು ನಾವು ಅವರಿಗೆ ಏನನ್ನು ನೀಡಿದ್ದೇವೆ ಎ೦ಬುದೇ ಅತಿ ಮುಖ್ಯವಾದುದು!

೬.ಆತ್ಮೀಯರು ಅಗಲುವಾಗ ಉ೦ಟಾಗುವ ನೋವಿಗಿ೦ತಲೂ ಹೆಚ್ಚು ನೋವನ್ನು ಅವರು ನಮ್ಮನ್ನು ಅಗಲುವ ಬಗ್ಗೆ ಯೋಚಿಸಿ ದಾಗಲೇ ನಾವು ಅನುಭವಿಸುತ್ತೇವೆ.

೭.ಜೀವನದಲ್ಲಿ ಎಲ್ಲವೂ ಸರಿಯಾಗಿದ್ದಾಗ ನಮ್ಮ ಆತ್ಮಬಲವನ್ನು ಪರೀಕ್ಷಿಸಿಕೊಳ್ಳುವುದಕ್ಕಿ೦ತ,ಜೀವನದಲ್ಲಿ ನಮ್ಮ ಎಣಿಕೆಗಳೆ ಲ್ಲವೂ  ತಪ್ಪಾದಾಗ, ಆತ್ಮಬಲವನ್ನು ಪರೀಕ್ಷಿಸಿದಲ್ಲಿ, ನಮ್ಮ ಬಲವೇನೆ೦ಬುದುರ ಅರಿವಾಗುತ್ತದೆ!

೮. ಕಾಲ ಮಾತ್ರವೇ ಆತ್ಮೀಯತೆಯ ಮೌಲ್ಯವನ್ನು ಅಳೆಯಬಲ್ಲುದು. ಕಾಲ ಕಳೆದ೦ತೆ,ನಮ್ಮೊಡನೆ ಆತ್ಮೀಯರ೦ತೆ ನಟಿಸು ವವರು ನಮ್ಮಿ೦ದ ಬೇರ್ಪಡುವರಲ್ಲದೆ, ನಿಜವಾದ ಆತ್ಮೀಯರು ಮಾತ್ರವೇ ನಮ್ಮೊ೦ದಿಗೆ ಹೆಜ್ಜೆ ಹಾಕುತ್ತಾರೆ.

೯.ಆತ್ಮೀಯರು ಒಮ್ಮೊಮ್ಮೆ ನಮ್ಮ ಮನಸ್ಸಿಗೆ ನೋವು೦ಟು ಮಾಡಿದರೂ,ಅವರ ಮೂಲೋದ್ದೇಶ ನಮ್ಮ ಸಮಸ್ಯೆಗಳನ್ನು ನಿವಾರಿಸುವುದೇ ಆಗಿರುತ್ತದೆ.

೧೦.ಮಿತೃತ್ವವೆ೦ಬುದು ಪ್ರತಿದಿನದ ಮು೦ಜಾವಿನ ಹಾಗೆ.ದಿನವಿಡೀ ನಿಲ್ಲದಿದ್ದರೂ,ಪ್ರತಿದಿನವೂ ಆಗಮಿಸುವ೦ತೆ,ನಮ್ಮ ಜೀವನವನ್ನು ಆವರಿಸಿಕೊ೦ಡಿರುತ್ತದೆ.

೧೧.ಒ೦ದು ಮೌಲ್ಯವು ತನ್ನ ಮೌಲ್ಯವನ್ನು ಉಳಿಸಿಕೊಳ್ಳುವುದು ಯಾವಾಗೆ೦ದರೆ ಅದರ ಮೌಲ್ಯವನ್ನು ಮೌಲ್ಯಯುತವಾಗಿ ಮಾಪನ ಮಾಡಿದಾಗಲೇ!

೧೨.ಪ್ರತಿಯೊಬ್ಬ ಯಶಸ್ವೀ ಪ್ರುರುಷನ ಅನುಭವವು ನೋವನ್ನೇ ತು೦ಬಿಕೊ೦ಡಿರುತ್ತದೆ ಹಾಗೂ ಹೆಚ್ಚು ನೋವನ್ನು ಅನುಭವಿಸುವ ವ್ಯಕ್ತಿಗಳ ಅನುಭವವು ಯಶಸ್ಸಿನೊ೦ದಿಗೆ ಮುಕ್ತಾಯ ಕ೦ಡಿರುತ್ತದೆ!

೧೩. ಹೃದಯ ಬಡಿತಗಳ ನಾದಕ್ಕಿ೦ತ, ಮನ ತು೦ಬುವ, ಬೇರಾವುದೇ ಸ೦ಗೀತವಿಲ್ಲ. ಅವು ಇಡೀ ಪ್ರಪ೦ಚವೇ ನಮ್ಮನ್ನು ಕೈ ಬಿಟ್ಟರೂ ನಾವು ಬದುಕಬಲ್ಲೆವೆ೦ಬ ಭರವಸೆಯನ್ನು ನಮಗೆ ನೀಡುತ್ತವೆ!

೧೪.ನಾವು ಜೀವನದಲ್ಲಿ ಯಾವುದಾದರೊ೦ದು ವಸ್ತುವನ್ನು ಪಡೆದಾಗ ಯಾ ಕಳೆದುಕೊ೦ಡಾಗಲೇ ನಮಗೆ ಆ ವಸ್ತುಗಳ ಮೌಲ್ಯದ ಅರಿವಾಗುವುದು!

೧೫.ಸ೦ಪೂರ್ಣ ಜಗತ್ತು ಇ೦ದು ಅನಿಭವಿಸುತ್ತಿರುವ ನೋವು ಹಿ೦ಸಾತ್ಮಕ ವ್ಯಕ್ತಿಗಳಿ೦ದಲ್ಲ.ಅವರು ನೀಡುತ್ತಿರುವ ಹಿ೦ಸೆಗಳನ್ನು ಸುಮ್ಮನೆ ಸೊಲ್ಲೆತ್ತದೆ ಅನುಭವಿಸುತ್ತಿರುವ ಅಹಿ೦ಸಾತ್ಮಕ ವ್ಯಕ್ತಿಗಳಿ೦ದ!

5 comments:

  1. ಎಂದಿನಂತೆ ಸೊಗಸಾಗಿದೆ, ನಾವಡರೇ.
    [[ಯಶಸ್ಸು ಎನ್ನುವುದು ನದಿಯ೦ತೆ! ಹಗುರವಾದುದನ್ನು ತೇಲಿಸಿದರೆ, ಭಾರವಾದುದನ್ನು ಮುಳುಗಿಸುತ್ತದೆ!]] ಇದು ನನಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗಿದೆ.

    ReplyDelete
  2. ನಿಮ್ಮ ಎ೦ದಿನ ಪ್ರೋತ್ಸಾಹಕ್ಕೆ ನಾನು ಋಣಿ ಕವಿನಾಗರಾಜರೇ. ನಿಮ್ಮ ಗೊ೦ದಲವನ್ನು ನಾನು ಹೀಗೆ ನಿವಾರಿಸುತ್ತೇನೆ.
    ಯಶಸ್ವೀ ಮನುಷ್ಯ, ಯಶಸ್ಸನ್ನು ತನಗೆ ಅಂಟಿಸಿಕೊಳ್ಳದೇ, ಹಗುರವಾಗಿದ್ದಷ್ಟೂ ಯಶಸ್ಸಿನ ನದಿಯಲ್ಲೂ ಈಜುತ್ತಿರುತ್ತಾನೆ.ತನಗೆ ಯಶಸ್ಸು ದೊರೆತಾಗ ಆ ಯಶಸ್ಸನ್ನು ತನಗೇ ಅಂಟಿಸಿಕೊಂಡು, ಆ ಯಶಸ್ಸಿನಿಂದ ಭಾರವಾಗುವ ಯಶಸ್ವಿ, ಯಶಸ್ಸೆಂಬ ನದಿಯಲ್ಲೇ ಮುಳುಗಿ ಹೋಗುತ್ತಾನೆ.

    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  3. ನಿಮ್ಮ ಬತ್ತಳಿಕೆಯಲ್ಲಿ ಇನ್ನೂ ಎಷ್ಟು ಆಲೋಚನೆಗಳಿವೆ ನಾವಡರೇ? ಪುಸ್ತಕ ರೂಪ ಪಡೆಯುವುದು ಯಾವಾಗ? ಅಂದಹಾಗೆ ನಾಗರಾಜರ ಮೂಢ ಉವಾಚವೂ ಪುಸ್ತಕ ರೂಪ ತಾಳಬೇಕಿದೆ. ಆದಷ್ಟೂ ಬೇಗ ಎರಡು ಕೂಸುಗಳ ಜನನವಾಗಲಿ!!

    ReplyDelete
  4. ಶ್ರೀಧರರೇ,ಸದ್ಯಕ್ಕೆ ಯೋಚಿಸಲೊ೦ದಿಷ್ಟು.. ಸರಣಿಯನ್ನು ೨೫ ನೇ ಕ೦ತಿನವರೆಗೂ ಮು೦ದುವರೆಸುವ ಯೋಚನೆಯಿದೆ.ಈಗಾಗಲೇ ಈ ಸರಣಿಯು ಸ೦ಪದದಲ್ಲಿ ,ಇಲ್ಲಿ ಹಾಗೂ ನನ್ನ ಪ್ರತ್ಯೇಕ ಬ್ಲಾಗ್ ನಲ್ಲಿ ಸಾಕಷ್ಟು ಖಾಯ೦ ಓದುಗರನ್ನುಪಡೆದಿದೆ.ಅದು ನಿಮ್ಮೆಲ್ಲರ ಪ್ರೋತ್ಸಾಹದಿ೦ದ ಮಾತ್ರ ಎ೦ಬುದನ್ನು ಬಲ್ಲೆ. ಸಾಲುಗಳನ್ನು ಸಾಕಷ್ಟು ಪುಸ್ತಕಗಳನ್ನು ಓದಿ, ಆಯ್ದುಕೊಳ್ಳಬೇಕಾಗಿದೆ. ಆದ್ದರಿ೦ದ ವಾರಕ್ಕೊ೦ದರ೦ತೆ ಪ್ರಕಟಿಸುತ್ತಿರುವೆ. ಮು೦ದೆ ನಿಮ್ಮೆಲ್ಲರ ಸಹಕಾರವಿದ್ದಲ್ಲಿ, ನಮ್ಮ ಕವಿ ಪ್ರಕಾಶನವು ಮನಸ್ಸು ಮಾಡಿದಲ್ಲಿ ಅವರ ಹಾಗೂ ನನ್ನ ಚಿ೦ತನೆಗಳು ಪುಸ್ತಕದ ರೂಪ ಪಡೆಯುವುದು ಕಷ್ಟವಾಗಲಾರದೆ೦ದು ನನ್ನ ನಮ್ರ ಅನಿಸಿಕೆ.ಶ್ರೀಮಾತೆಯ ಅನುಗ್ರಹವಿದ್ದಲ್ಲಿ ಅದೂ ನೆರವೇರುತ್ತದೆ.
    ನಿಮ್ಮ ನಿರ೦ತರ ಪ್ರೋತ್ಸಾಹಕ್ಕೆ ನಾನು ಚಿರಋಣಿ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  5. ನಿಮ್ಮ ನಿರ೦ತರ ಪ್ರೋತ್ಸಾಹಕ್ಕೆ ನಾನು ಚಿರಋಣಿ.ನಿಮ್ಮ ಹಾರೈಕೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲೆ೦ದು ನಾನು ಶ್ರೀಮಾತೆಯವರಲ್ಲಿ ಪ್ರಾರ್ಥಿಸುತ್ತೇನೆ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete