Pages

Saturday, January 22, 2011

ಸತ್ಯದ ಹುಡುಕಾಟದಲ್ಲಿ

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ವೇದೋಕ್ತ ಜೀವನ ಪಥ ಕುರಿತು ಮೂರು ದಿನಗಳ ಕಾರ್ಯಾಗಾರ ಆರಂಭವಾಗಿದೆ. ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ವೇದಸುಧೆಯ ಸಂಪಾದಕ ಹರಿಹರಪುರ ಶ್ರೀಧರ್ ಸೇರಿದಂತೆ ೧೫ ಆಸಕ್ತರು ಪಾಲ್ಗೊಂಡಿದ್ದಾರೆ. ಶಿಬಿರಾರ್ಥಿಗಳು ಊಟ, ಉಪಹಾರ, ಕೆಲಸ ಕಾರ್ಯಗಳನ್ನು ಸ್ವತಃ ತಾವೇ ನಿರ್ವಹಿಸಿಕೊಂಡು ಅಧ್ಯಯನ, ಚರ್ಚೆಗಳಲ್ಲಿ ತೊಡಗಿರುವುದು ಅಪೂರ್ವ ಅನುಭವವೇ ಸರಿ. ಪರಮಾತ್ಮ, ಜೀವಾತ್ಮ, ಜಡವಸ್ತುಗಳ ಕುರಿತು ವೇದ ಏನು ಹೇಳುತ್ತದೆ ಎಂಬ ಬಗ್ಗೆ, ಪ್ರಚಲಿತ ಸಂಪ್ರದಾಯಗಳು, ನಂಬಿಕೆಗಳು, ಇತ್ಯಾದಿಗಳ ವಿಚಾರಗಳಲ್ಲಿ ಮುಕ್ತ ಮತ್ತು ಪೂರ್ವಾಗ್ರಹವಿಲ್ಲದ ಚರ್ಚೆ ಸಾಗುತ್ತಿದೆ. ದಿನಾಂಕ ೨೨-೦೧-೧೧ರಂದು ನಡೆದ ಶಿಬಿರದ ಕೆಲವು ದೃಷ್ಯಗಳು ವೇದಸುಧೆ ವೀಕ್ಷಕರಿಗಾಗಿ:


ಮುಕ್ತ ಸಂವಾದ

                                                          ಅಗ್ನಿ ಹೋತ್ರ








ಶಿಭಿರಾರ್ಥಿಗಳ ಸಂದೇಹಗಳ ಸಮಾಧಾನ ಶ್ರೀ ಸುಧಾಕರ ಶರ್ಮರಿಂದ
    

1 comment:

  1. ಮಹಿಳೆಯರು ಯಜ್ಞ-ಯಾಗ ಮಾಡುವುದು ನೋಡಿ ಖುಷಿಯಾಯಿತು.

    ReplyDelete