Pages

Tuesday, July 12, 2011

ಸಾಧನಾ ಪಂಚಕಮ್-ಭಾಗ -4

ತಿಪಟೂರಿನ ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಐದು ದಿನಗಳ ಒಂದು ಉಪನ್ಯಾಸಮಾಲೆಯನ್ನು ಹಾಸನದಲ್ಲಿ ನಡೆಸಿಕೊಟ್ಟರು. ವಿಷಯ: ಶ್ರೀ ಶಂಕರಾಚಾರ್ಯ ವಿರಚಿತ ಸಾಧನಾ ಪಂಚಕಮ್. ಇದರಲ್ಲಿ ಐದು ಶ್ಲೋಕಗಳು. ಒಂದೊಂದರಲ್ಲೂ ಎಂಟೆಂಟು ಸೂತ್ರಗಳು.ಸಾಧನೆಯ ಪಥದಲ್ಲಿರುವವನಿಗೆ ಬಲು ಇಷ್ಟವಾಗುತ್ತದೆ.ಒಂದೊಂದೂ ಸೂತ್ರವೂ ಸಾಧಕನಿಗೆ ಒಂದೊಂದು ಮೆಟ್ಟಿಲು. ಒಂದೊಂದು ಮೆಟ್ಟಿಲನ್ನೂ ಮನಮುಟ್ಟುವಂತೆ ವಿವರಿಸಿದ ರೀತಿಯು ಅದ್ಭುತ. ಉಪನ್ಯಾಸವನ್ನು ನಾನು ಕೇಳಿದ ಮೇಲೆ ವೇದಸುಧೆಯ ಅಭಿಮಾನಿಗಳಿಗೂ ಕೇಳಿಸಬೇಡವೇ! ಅದಕ್ಕಾಗಿ ಈ ಪ್ರಯತ್ನ.ಒಂದೊಂದು ಸೂತ್ರವನ್ನೂ ಇಲ್ಲಿ ಪ್ರಕಟಿಸಲಾಗಿದೆ. ಅದರ ವಿವರಣೆಯನ್ನು ಶ್ರೀ ಸುಧರ್ಮ ಚೈತನ್ಯರ ಕಂಠದಿಂದಲೇ ಕೇಳಿ. ನಿತ್ಯವೂ ಒಂದೆರಡರಂತೆ ನಲವತ್ತು ಸೂತ್ರಗಳನ್ನೂ ಪ್ರಕಟಿಸಲಾಗುವುದು.
ಸಾಧನಾ ಪಂಚಕಂ -ಮೆಟ್ಟಲು- 14+ 15 + 16
14. ಪ್ರತಿದಿನಂ ತತ್ಪಾದುಕಾ ಸೇವ್ಯತಾಮ್
ಭಾವಾರ್ಥ: ನಿತ್ಯವೂ ಸದ್ಗುರುಗಳ ಪಾದುಕೆಗಳನ್ನು ಆರಾಧಿಸು
15. ಬ್ರಹ್ಮೈಕಾಕ್ಷರಮರ್ಥ್ಯತಾಮ್
ಭಾವಾರ್ಥ: ಬ್ರಹ್ಮವನ್ನು ಸೂಚಿಸುವ ಏಕಾಕ್ಷರವಾದ ಓಂ ಕಾರವನ್ನು ಧ್ಯಾನಿಸು
16. ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್
ಭಾವಾರ್ಥ: ಉಪನಿಷತ್ತಿನ ಮಹಾವಾಕ್ಯಗಳನ್ನು ಕುರಿತು ಗಂಭೀರವಾಗಿ ಮನನ ಮಾಡು

No comments:

Post a Comment