Pages

Wednesday, August 10, 2011

ಜಿಜ್ಞಾಸೆ

ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ಕಥೆ ಕಾದಂಬರಿಗಳನ್ನಾದರೆ ಸಲೀಸಾಗಿ ಓದಿಕೊಂಡು ಹೋಗಿಬಿಡಬಹುದು ,ಆದರೆ ಆತ್ಮಜ್ಞಾನದ ವಿಚಾರ ಹಾಗಲ್ಲ. ಅರ್ಥಮಾಡಿಕೊಂಡು ಓದಲು ಸ್ವಲ್ಪ ತಾಳ್ಮೆಯೂ ಬೇಕು. ಆದರೆ ತಾಳ್ಮೆಯಿಂದ ಅರ್ಥಮಾಡಿಕೊಂಡು ಓದಿದರೆ ಅದರಲ್ಲಿ ಸಿಗುವ ಸಂತೋಷಕ್ಕೆ ಪಾರವಿರುವುದಿಲ್ಲ. ಶ್ರೀ ಸುಧಾಕರ ಶರ್ಮರು ವೇದದ ಹಲವಾರು ಮಂತ್ರಗಳನ್ನು ನಮ್ಮ ನೆಮ್ಮದಿಯಬದುಕಿಗಾಗಿ ನಮ್ಮ ಮನಮುಟ್ಟುವಂತೆ ಮಾಡಿರುವ ಪ್ರವಚನಗಳ ಆಡಿಯೋ ಶರ್ಮರ ಪುಟದಲ್ಲಿದೆ. ಕಳೆದ ಕೆಲವು ದಿನಗಳಿಂದ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕ ಚೂಡಾಮಣಿಬಗ್ಗೆ ಬರೆಯುತ್ತಿದ್ದಾರೆ. ಶಂಕರರ ಕೃತಿಗಳಲ್ಲಿ ಆತ್ಮತತ್ವದ ಬಗ್ಗೆ ಸರಳವಾದ ನಿರೂಪಣೆಯನ್ನು ಕಾಣಬಹುದು. ನಮ್ಮ ಸಮಚಿತ್ತದ ಜೀವನಕ್ಕೆ ಸಹಕಾರಿಯಾಗಬಲ್ಲ ಶಂಕರರ ಕೃತಿಗಳನ್ನು ಓದುವುದು ಮತ್ತು ಅದರ ಬಗ್ಗೆ ಜಿಜ್ಞಾಸೆ ನಡೆಸುವುದು ನಮ್ಮ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಬಲ್ಲದು. ಬನ್ನಿ ಬಗ್ಗೆ ಜಿಜ್ಞಾಸೆ ನಡೆಸೋಣ. ಶ್ರೀ ಸುಧಾಕರ ಶರ್ಮರ ಆರೋಗ್ಯ ಇನ್ನೂ ಉತ್ತಮ ಗೊಳ್ಳಬೇಕಿದೆ. ಶರ್ಮರ ಆರೋಗ್ಯವು ಸುಧಾರಣೆ ಯಾದಮೇಲೆ ಶರ್ಮರು ನಮ್ಮೊಡನೆ ಚರ್ಚೆಗೆ ಸೇರುತ್ತಾರೆ. ಅವರಿಂದ ಉತ್ತಮ ಮಾರ್ಗದರ್ಶನ ದೊರೆಯಬಲ್ಲದು. ಈಗ ನಿಮ್ಮ ಸರದಿ.....

No comments:

Post a Comment