Pages

Saturday, August 27, 2011

ಯಜ್ಞದ ಫಲ

ನಾನು ಮನೆ ವಿಸ್ತರಣೆ ಮಾಡುತ್ತಿರುವ ವಿಚಾರವನ್ನು  ವೇದಸುಧೆಯಲ್ಲಿಯೇ ಈ ಹಿಂದೆ  ಬರೆದಿದ್ದೆ. ವಾಸಮಾಡುತ್ತಾ ಮನೆಯನ್ನು ಕಟ್ಟುವುದೆಂದರೆ ಬಲು ತ್ರಾಸದ ಕೆಲಸ. ಜೊತೆಗೆ ನನ್ನ ಪತ್ನಿಗೆ ಕೈ ನೋವು ಬೇರೆ ಕಾಡುತ್ತಿದೆ.  ಹೇಗೂ ನಾನು ಸ್ವಯಂ ನಿವೃತ್ತಿ  ತೆಗೆದು ಕೊಂಡಿರುವುದರಿಂದ ಮನೆಯನ್ನು ನಿತ್ಯವೂ ಸ್ವಚ್ಛ ಮಾಡುವ ಕೆಲಸವನ್ನು ನಾನು ವಹಿಸಿ ಕೊಂಡಿರುವೆ. ಮನೆ ನಿರ್ಮಾಣದ ಕೆಲಸ ಆರಂಭವಾದ ಸಮಯದಲ್ಲಿ ಅಷ್ಟು ಗೊತ್ತಾಗಲಿಲ್ಲ. ಕೆಲಸ ಮುಂದುವರೆದಂತೆ ಕಟ್ಟಡವನ್ನು ಕ್ಯೂರ್ ಮಾಡುವಾಗ ಹಾಕುವ ನೀರು ವಾಸದ ಮನೆಯ ಆರ್.ಸಿ.ಸಿ ಮತ್ತು ಗೋಡೆಗಳಲ್ಲೆಲ್ಲಾ ಪಸರಿಸಿ ಮನೆಯೆಲ್ಲಾ ಸೀತ ವ್ಯಾಪಿಸಿ ಕೊಂಡು ಮನೆಯ ವಸ್ತುಗಳೆಲ್ಲಾ ದುರ್ಗಂಧ ವ್ಯಾಪಿಸಿ ಬದುಕು ದುಸ್ತರ ವಾಗುತ್ತದೆ. ಈ ನಡುವೆ ಹಾಸನದಲ್ಲಿ ಬಲು ಮಳೆ. ಸೂರ್ಯನ ದರ್ಶನವೇ ಕಷ್ಟ.   ವೇದಸುಧೆಯಲ್ಲಿ  ಇದೆಲ್ಲಾ ಯಾಕೆ ಅಂದ್ರಾ? ನೋಡಿ ಇಲ್ಲೇ ಇರೋದು ಕರ್ಮಯೋಗ.
ಇವತ್ತು  ಬೆಳಿಗ್ಗೆ ಆರು ಗಂಟೆಯಲ್ಲಿ ಆರಂಭಗೊಂಡ ಸ್ವಚ್ಚತೆಯ ಕೆಲಸ ಮುಗಿದು ಸ್ನಾನವಾಗುವಾಗ  ಸೂರ್ಯ ನೆತ್ತಿಗೇರಿದ್ದ. ಮನೆಯಾಕೆ ಏನ್ರೀ ಇನ್ನೂ ಎಷ್ಟು ಹೊತ್ತಿಗೆ ನಿಮ್ಮ  ಅಗ್ನಿಹೋತ್ರ ಮುಗಿದು ಉಪಹಾರ ಮಾಡೋದು? ಎಂದು ತನ್ನ ಆತಂಕ ವ್ಯಕ್ತ ಪಡಿಸಿದಳು. ನಾನು ಸುಮ್ಮನಿದ್ದು  ಅಗ್ನಿಹೊತ್ರಕ್ಕೆ ಸಿದ್ಧ ಗೊಳಿಸಿಕೊಂಡೆ. ಅಗ್ನಿಹೋತ್ರ ಆರಂಭ ವಾಯ್ತು. ಆಗ ಪತ್ನಿಗೆ ಹೇಳಿದೆ. " ಇಲ್ಲಿಯ ವರಗೆ ಮಾಡಿದೆನಲ್ಲಾ! ಅದೇ ಯಜ್ಞ." ಮನೆಯೆಲ್ಲಾ  ಚೊಕ್ಕಟ ವಾಗಿದೆ.. ಮನಸ್ಸಿಗೆ ಆನಂದವಾಗಿದೆ. ಹಿತವಾಗಿದೆ. ಈಗ ಅದರ ಫಲ ಅನುಭವಿಸುವ ಸಮಯ. ನೆಮ್ಮದಿಯಾಗಿ ಕುಳಿತುಕೋ ಎಂದೆ. ೨೦ ನಿಮಿಷದಲ್ಲಿ ಅಗ್ನಿಹೋತ್ರ ಮುಗಿಯಿತು. ಬೆಳಗಿನಿಂದ ಆಗಿದ್ದ ಆಯಾಸವೆಲ್ಲಾ ಪರಿಹಾರವಾಗಿತ್ತು. ಇದಲವ್ವಾ  ನಿಜವಾದ ಯಜ್ಞ? ಎಂದು ಮನೆಯಾಕೆಯನ್ನು ಕೇಳಿದೆ. ಕತ್ತು ಆಡಿಸಿದ್ದು ಕಂಡು ಸಮಾಧಾನವಾಯ್ತು. ಪೂಜೆಯನ್ನು ಮಾಡುವ ಮೊದಲು ಸ್ವಚ್ಚತೆಗೆ ೯೦%  ಸಮಯ ಮೀಸಲಿಟ್ಟು ಆನಂತರ ನಮಗೆ ತೋಚಿದಂತೆ ಪೂಜೆ ಮಾಡಿದರೆ ಮನಸ್ಸಿಗೆ ಆನಂದ ವಾಗುವಿದಿಲ್ಲವೇ? ಅದೇ ಅಲ್ಲವೇ? ಯಜ್ಞ ಮತ್ತು ಯಜ್ಞದ ಫಲ?

No comments:

Post a Comment