Pages

Saturday, July 28, 2012

ನಮ್ಮೊಡನೆ ಶ್ರೀ ಸುಧಾಕರಶರ್ಮರು



ವೇದಾಧ್ಯಾಯೀ ಶ್ರೀ  ಶ್ರೀ ಸುಧಾಕರಶರ್ಮರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ತೀವ್ರ ಬಳಲಿದ್ದರು. ಅವರ ಸ್ಥಿತಿಯನ್ನು  ಕಳೆದ ಹತ್ತು ತಿಂಗಳ ಹಿಂದೆ  ಪ್ರತ್ಯಕ್ಷ ನೋಡಿದ ನನ್ನ ತಂಗಿ ಹೇಳುತ್ತಾಳೆ " ಅವರ ಅಂದಿನ ಸ್ಥಿತಿಯಲ್ಲಿ ಅವರು ಬದುಕುಳಿಯುತ್ತಾರೆಂಬ ನಂಬಿಕೆ ನನಗಿರಲಿಲ್ಲ! ಶರ್ಮರ ಸಂದರ್ಶನ ಮಾಡಲು ಹೋಗುವೆನೆನ್ನುತ್ತೀಯಲ್ಲಾ!! ಅವರು ಮಾತನಾಡಬಲ್ಲರೇ?
ಅಬ್ಭಾ! ನನ್ನಂತವನಾಗಿದ್ದರೆ ನನ್ನ ಬದುಕಿನ ಆಸೆ ಮರೆಯುತ್ತಿದ್ದೆ. ಅಷ್ಟು ತೀವ್ರ ಸ್ಥಿತಿಯಿಂದ ಚೇತರಿಸಿಕೊಂಡು ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರಷ್ಟೇ ಅಲ್ಲಾ, ಈ ಸ್ಥಿತಿಯಲ್ಲೂ  ಚಂದನದಲ್ಲಿ ನಡೆಯುವ "ಹೊಸ ಬೆಳಕು" ದಾರವಾಹಿಗಾಗಿ  ಮುಂದಿನ ಹಲವು  ಎಪಿಸೋಡ್ ಗಳಿಗಾಗಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ, ಅಷ್ಟೇ ಅಲ್ಲಾ, ಮುಂದಿನ       5-8-2012 ರಂದು ಒಂದು ವೇದೋಕ್ತ ವಿವಾವಹವನ್ನು ಸ್ವತ: ಶರ್ಮರು ನಡೆಸಿಕೊಡಲಿದ್ದಾರೆ. ಮೊನ್ನೆ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ವೀಡಿಯೋ ತೆಗೆದೆ. ಇನ್ನು ಒಂದೊಂದಾಗಿ ಶರ್ಮರ  ಆಡಿಯೋ /ವೀಡಿಯೋ ಕ್ಲಿಪ್ ಗಳನ್ನು ಪ್ರಕಟಿಸಲಾಗುವುದು.  ನಮ್ಮ  ನೆಮ್ಮದಿಯ     ಬದುಕಿಗೆ  ಅಗತ್ಯವಾದ ಹಲವು ಅಂಶಗಳನ್ನು ಶ್ರೀ ಶರ್ಮರು ವೇದಸುಧೆಯ  ಓದುಗರೊಡನೆ ಹಂಚಿಕೊಂಡಿದ್ದಾರೆ. ವೇದಸುಧೆಯ ಅಭಿಮಾನಿಗಳು ಎಂದಿನಂತೆ  ಈ ವಿಚಾರಗಳನ್ನು ಕೇಳಿ  ನಿಮಗೆ ಉಂಟಾಗಬಹುದಾದ ಅನುಮಾನಗಳನ್ನು/ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು  ವೇದಸುಧೆಯಲ್ಲಿ ಹಂಚಿಕೊಂಡರೆ ಶ್ರೀ ಶರ್ಮರು ಉತ್ತರಿಸುವರು

No comments:

Post a Comment