Pages

Saturday, June 29, 2013

ನಿಮ್ಮ ಮಾತನ್ನು ವೇದಸುಧೆಯು ಗೌರವಿಸುತ್ತದೆ

ವೇದಸುಧೆಯ ಆರಂಭದಿಂದಲೂ ಸತ್ಯಾನ್ವೇಶಣೆಯಲ್ಲಿ ತನ್ನ ಎಲ್ಲಾ ಪ್ರಯತ್ನವನ್ನೂ ಅದರ ಸಾಮರ್ಥ್ಯಕ್ಕಿಂತಲೂ ಹೆಚ್ಚು ಮಾಡುತ್ತಿದೆ..ನಮ್ಮ ಪ್ರಯತ್ನವಾದರೂ ನಾವು ಮೌಡ್ಯದಿಂದ ಆಚೆ ಬರುವ ಪ್ರಯತ್ನ. ಅದಕ್ಕೆ ವೇದದ ಆಶ್ರಯ. ಹಲವು ವೇಳೆ ನಾವು ಮಾಡುವ ಪ್ರಯತ್ನಗಳಿಂದ ಮೇಲ್ನೋಟಕ್ಕೆ ನಮ್ಮ ಆಚರಣೆಗಳ  ವಿರುದ್ಧವಾಗಿ ಕಂಡು ಇವರೇನು, ನಾಸ್ತಿಕರೇನೋ ಎನಿಸದೆ, ಇರದು. ಆದರೆ ನಿಜವಾಗಿ ಪರಿಶುದ್ಧ ಆಸ್ತಿಕ ಪ್ರಯತ್ನವಿದು. ನಮಗೆ ಹೆಚ್ಚು ಸಹಕಾರಿಯಾಗಿರುವವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರ ಒಂದೊಂದು ಮಾತನ್ನು ಬಹಳ ಆಳವಾಗಿ ನಾನು ಚಿಂತನೆ ಮಾಡುವುದುಂಟು. ಮೇಲ್ನೋಟಕ್ಕೆ ಅವರ ಮಾತುಗಳು ನಮ್ಮ ಆಚರಣೆಗಳ ವಿರುದ್ಧವಾಗಿ ಕಂಡು ಅವರೊಡನೆ ಸಾಕಷ್ಟು ವಾದ ಮಾಡಿದ್ದೇನೆ. ಆದರೆ ಕೊನೆಗೂ ಅವರಮುಂದೆ ನನ್ನದೇ ಸೋಲು.ಅವರ ಎಲ್ಲಾ  ಮಾತಿಗೂ ವೇದದ ಆಧಾರವಿದೆ. ಈ ಸಂಪಾದಕೀಯ ಬರೆಯಲು ಕಾರಣವಿದೆ. ವೇದಸುಧೆಯನ್ನು ನಿತ್ಯವೂ ಕನಿಷ್ಠ   ಮೂವತ್ತು ಜನರು  ಓದುತ್ತಾರೆ. ಸುಮಾರು 230 ಜನರಿಗೆ  ಮೇಲ್ ಮೂಲಕ ನಿತ್ಯವೂ ತಲುಪುತ್ತದೆ. ಓದುತ್ತಾರೆ. ಆದರೆ ಆ ಬಗ್ಗೆ ಮಾತನ್ನೇ ಆಡುವುದಿಲ್ಲವಲ್ಲಾ! ನಮ್ಮ ಸಂದೇಹಗಳನ್ನು ಹಂಚಿಕೊಳ್ಳಬೇಕು. ಒಂದು ವೇಳೆ ಶರ್ಮರ ಮಾತುಗಳು ನಿಮಗಿಷ್ಟವಾಗಿಲ್ಲದಿದ್ದರೆ ಅದರ ಕಾರಣ ತಿಳಿಸಿದರೆ ಸರಿಯಾದ ಉತ್ತರ ಪಡೆಯಬಹುದು. ಶರ್ಮರ ಹಲವು ಉಪನ್ಯಾಸಗಳ  ಸಂಗ್ರಹ "ಶರ್ಮರ ಪುಟದಲ್ಲಿದೆ" ಅಲ್ಲದೆ ಜನಶ್ರೀ ಟಿ.ವಿ.ಯಲ್ಲಿ ಪ್ರಸಾರವಾಗುವ ಅವರ ಮಾತುಗಳ ಆಡಿಯೋ ಕೂಡ   ಇಲ್ಲಿ ಪ್ರಕಟವಾಗುತ್ತಿದೆ.ನಾವು ನಮ್ಮೆಲ್ಲಾ ಪ್ರಯತ್ನವನ್ನೂ ಅತ್ಯಂತ ಶ್ರದ್ಧೆಯಿಂದ ಮಾಡುತ್ತೇವೆ.ನಮಗೆ ಅಗತ್ಯವಿರುವುದು ನಿಮ್ಮ ಅಭಿಪ್ರಾಯ. ಕಾರಣ   ನಮ್ಮ ಪ್ರಯತ್ನ ನಿಶ್ಪ್ರಯೋಜಕ ವಾಗಬಾರದು. ಅದರಿಂದ ನಾಲ್ಕು ಜನರ ನೆಮ್ಮದಿಯ ಜೀವನಕ್ಕೆ ಅನುಕೂಲವಾಗಬೇಕು. ನಮ್ಮೊಡನೆ ನಿಮ್ಮ ಭಿಪ್ರಾಯವನ್ನು  ಹಂಚಿಕೊಳ್ಳಲು vedasudhe@gmail.comಮೇಲ್ ಮಾಡುವಿರಾ?ಶ್ರೀ ಸುಧಾಕರ ಶರ್ಮರ  ಮಾತುಗಳನ್ನು ವೇದಸುಧೆ ಡಾಟ್ ಕಾಮ್ ನಲ್ಲಿ  ಕೇಳಿ.

No comments:

Post a Comment