ಕೇರಳದ ಆಚಾರ್ಯ ರಾಜೇಶ್ ಅವರ ಎಲ್ಲಾ ಕಾರ್ಯಕ್ರಮಗಳೂ ನನ್ನನ್ನು ಆಕರ್ಶಿಸುತ್ತಿವೆ. ಅವರಂತೆ ವೇದವು ಹಳ್ಳಿ ಹಳ್ಳಿಗಷ್ಟೇ ಅಲ್ಲ, ಗೊಲ್ಲರ ಹಟ್ಟಿಗೂ ಮುಟ್ಟಬೇಕಾಗಿದೆ. ಸ್ನೇಹಿತರೇ, ಹಾಸನಕ್ಕೆ ನೂರು ಕಿಲೋಮೀಟರ್ ದೂರದೊಳಗೆ ಯಾವ ಹಳ್ಳಿಯಲ್ಲಿ ಕರೆದರೂ ನಾನು ನಮ್ಮ ವೇದ ಭಾರತಿಯ ಸದಸ್ಯರೊಡನೆ ಬರಲು ಸಿದ್ಧ. ಹಣ ಖರ್ಚುಮಾಡಬೇಕಾಗಿಲ್ಲ. ಅಗ್ನಿಹೋತ್ರ ಕಲಿಕೆ, ವೇದದ ಸರಳ ಪರಿಚಯ ಕಾರ್ಯಕ್ರಮವನ್ನು ಎಲ್ಲೇ ಯೋಜಿಸಿದರೂ ನಾವು ಬರಲು ಸಿದ್ಧ. ಸಾಮಾಜಿಕ ಸಾಮರಸ್ಯಕ್ಕೆ ವೇದವು ಅತ್ಯಂತ ಸಹಕಾರಿ.ಬನ್ನಿ, ವೇದದ ಅರಿವು ಮೂಡಿಸುವ ಆಂದೋಲನ ಆರಂಭಿಸೋಣ. ನಿಮ್ಮ ಯಾವುದೇ ಸಲಹೆಯನ್ನು vedasudhe@gmail.com ಗೆ ಮೇಲ್ ಮಾಡಿ.

![]() |
No comments:
Post a Comment