Pages

Friday, March 6, 2015

ಹಿಂದೂ ಚಟುವಟಿಕೆಗಳ ಏಳಿಗೆ ಸಹಿಸದವರು ಅದನ್ನು ಖಂಡಿಸುವಾಗ ವೇದವನ್ನು ತೆಗಳುವುದು ಸಾಮಾನ್ಯವಾಗಿ ಬಿಟ್ಟಿದೆ.ಇದಕ್ಕೆ ಎರಡು ಕಾರಣ. ವೈದಿಕಧರ್ಮದ ಹೆಸರಿನಲ್ಲಿಯೇ ವೇದವನ್ನು ತಪ್ಪಾಗಿ ಅರ್ಥೈಸಿ ಮೌಢ್ಯಗಳನ್ನು ಬಿಂಬಿಸುತ್ತಿರುವ ಒಂದು ಗುಂಪು.   ಹಾಗೂ ಈ ಬಲಿಷ್ಠ  ಗುಂಪು ಹರಡುತ್ತಿರುವ   ಮೌಢ್ಯಗಳನ್ನು ವಿರೋಧಿಸಲು ವೇದವನ್ನು ಅಧ್ಯಯನ ಮಾಡದೇ ವೇದವನ್ನು ವಿರೋಧಿಸುವ  ಮತ್ತೊಂದು ಸಣ್ಣ  ಗುಂಪು. ದೊಡ್ದಗುಂಪು ಮೌಢ್ಯಗಳನ್ನು ಎಗ್ಗಿಲ್ಲದೇ ಮುಂದುವರೆಸಿಕೊಂಡು ಹೋದರೆ . ಸಣ್ಣ ಗುಂಪು ಅದನ್ನು ಬಂಡವಾಳ ಮಾಡಿಕೊಂಡು ಮಾನವೀಯತೆಯನ್ನು ರಕ್ಷಿಸಲು ಸಂವಿಧಾನದಂತಿರುವ ವೇದವನ್ನು ವಿರೋಧಿಸಿ ಪ್ರಚಾರ ಗಿಟ್ಟಿಸುವುದು. ಎರಡೂ ಗುಂಪುಗಳು ಮಾಡುತ್ತಿರುವುದು ವೇದವಿರೋಧೀ ಹಾಗೂ ಮಾನವತೆಯ ವಿರೋಧೀ ಕೆಲಸಗಳೇ!! ಇವರಿಗೆ ಬುದ್ಧಿ ಹೇಳುವವರೇ ಇಲ್ಲ. ವೇದವನ್ನು ಸರಿಯಾಗಿ ಬಲ್ಲವರೂ ಸಹ ಸಮಾಜದಲ್ಲಿ ಮರೆಯಾಗಿದ್ದಾರೆ. ಒಟ್ಟಿನಲ್ಲಿ ಯಾವುದು ವಿಶ್ವದ ಅಭ್ಯುದಯಕ್ಕೆ ,ಮಾನವೀಯತೆಯ ಉಳಿವಿಗೆ,ವಿಶ್ವದ ಜನರ ನೆಮ್ಮದಿಯ ಬದುಕಿಗೆ ನಿಜವಾದ ಮಾರ್ಗದರ್ಶನ ವಾಗಬಲ್ಲದೋ ಅಂತಹ ವೇದವನ್ನು ಸರಿಯಾಗಿ ಅಧ್ಯಯನ ಮಾಡಿ ಸಮಾಜಕ್ಕೆ ಅದರ ಸಾರವನ್ನು ತಿಳಿಸುವ ಕೆಲಸ ಮಾಡುವವರ ಸಂಖ್ಯೆ ಹೆಚ್ಚಬೇಕಾಗಿದೆ. ಇದು ಯಾವ ಗುಂಪನ್ನು ಬಲಪಡಿಸಲು ಅಲ್ಲ, ಬದಲಿಗೆ ವಿಶ್ವದ ಜನರ ನೆಮ್ಮದಿಯ ಬದುಕಿಗೆ ಅತ್ಯಂತ ತುರ್ತಾಗಿ ಆಗಬೇಕಾದ ಕೆಲಸ. ಹಿಂದೂ ಹೆಸರಿನಲ್ಲಿ ಜನರು ಹೆಚ್ಚು ಸಂಘಟಿತರಾಗುತ್ತಿರುವುದು ಕಣ್ಣಿಗೆ ಕಾಣುತ್ತಿರುವ ದೃಶ್ಯ. ಹಿಂದುನಾಯಕರುಗಳು "ವೇದದ ಆಧಾರದಲ್ಲಿ ಜನರಿಗೆ ಮಾರ್ಗದರ್ಶನ ಮಾಡಿ ಇರಬಹುದಾದ   ಮೌಢ್ಯಗಳನ್ನು ದೂರಗೊಳಿಸಿ "ಹಿಂದುಶಕ್ತಿ" ಗೆ ವೇದದ ವಿಚಾರವನ್ನು ತಲುಪಿಸಿವ ಕೆಲಸಕ್ಕೆ ಆಧ್ಯತೆಕೊಡಬೇಕಾದುದು ಇಂದಿನ  ಅನಿವಾರ್ಯತೆ.

No comments:

Post a Comment