Pages

Friday, April 3, 2015

ಬೆಂಗಳೂರಿನಲ್ಲಿ ಅಗ್ನಿಹೋತ್ರ ಮತ್ತು "ಎಲ್ಲರಿಗಾಗಿ ವೇದ" ಪರಿಚಯ ಕಾರ್ಯಕ್ರಮ

  ಹಾಸನದ ವೇದಭಾರತಿಯ ಸಹಕಾರದಲ್ಲಿ  ಬೆಂಗಳೂರಿನಲ್ಲಿ ಒಂದು ಅಗ್ನಿಹೋತ್ರ ಮತ್ತು "ಎಲ್ಲರಿಗಾಗಿ ವೇದ" ಪರಿಚಯ ಕಾರ್ಯಕ್ರಮ ನಡೆಸಬೇಕೆಂಬ ವಿಷಯವನ್ನು  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ ಪ್ರಸ್ತಾಪಿಸಿದಾಗ      ಆದಷ್ಟೂ ಬೇಗ ಏರ್ಪಾಡು ಮಾಡಿ ನಾನು ವಿಚಾರ ತಿಳಿಸುತ್ತೇನೆಂದು ಹೇಳಿದ್ದಾರೆ. ಅವರ ಅನಾರೋಗ್ಯದ ಸ್ಥಿತಿಯಲ್ಲಿ ಅವರಿಗೆ ಅನುಕೂಲವಾಗುವ ಸ್ಥಳದ ಸಲಹೆ ಕೂಡ  ಕೊಟ್ಟಿದ್ದಾರೆ. ರಾಜಾಜಿನಗರದಲ್ಲಿ ಇಸ್ಕಾನ್ ಸಮೀಪ ಇರುವ "ವಂದೇಮಾತರಮ್ " ಹೋಟೆಲಿನ ಕಾನ್ಫೆರೆನ್ಸ್ ಹಾಲ್ ಆದರೆ ಸೂಕ್ತ ಎಂಬುದು ಅವರ ಅಭಿಪ್ರಾಯ[ ಅಲ್ಲಿ ಅವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಕಲ್ಪಿಸುತ್ತಾರೆ]. ಅಲ್ಲಿ ಧ್ವನಿ ವರ್ಧಕ ಸಹಿತ ಎಲ್ಲಾ ವ್ಯವಸ್ಥೆ ಇದೆ. ಸಂಖ್ಯೆ ಐವತ್ತಾದರೆ ಉತ್ತಮ.[ ಅಲ್ಲಿ ನೂರಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ಅವಕಾಶವಿದೆ] ಅಗ್ನಿಹೋತ್ರವನ್ನೂ ಮಾಡಲು ಅವಕಾಶವಿದೆ. ಅಲ್ಲಿ ನಾವು ತೆಗೆದುಕೊಳ್ಳುವ ಆಹಾರಕ್ಕೆ ಮಾತ್ರ ಛಾರ್ಜ್ ಮಾಡುತ್ತಾರೆ. ಕಾನ್ಫರೆನ್ಸ್ ಹಾಲ್ ಉಚಿತ-ಎಂದು ತಿಳಿಸಿದ್ದಾರೆ. ಎಲ್ಲರಿಗೂ ಅನುಕೂಲವಾಗುವ ಒಂದು ಭಾನುವಾರವನ್ನು ನಿಶ್ಚಯಿಸಿದರಾಯ್ತು. ಆಸಕ್ತರು vedasudhe@gmail.com ಗೆ ನಿಮ್ಮ ಫೋನ್ ನಂಬರ್ ಸಹಿತ ಮೇಲ್ ಮಾಡಿ. ಬೆಂಗಳೂರಿನ ಅಭಿಮಾನಿಗಳಷ್ಟೇ  ಅಲ್ಲ. ಹೊರಗಿನವರೂ ಪಾಲ್ಗೊಳ್ಳಬಹುದು.

No comments:

Post a Comment