Pages

Friday, April 3, 2015

ಹಾಸನ ವೇದಭಾರತಿಯಿಂದ ಬೆಂಗಳೂರಿನಲ್ಲೊಂದು ಕಾರ್ಯಕ್ರಮ

ಹಾಸನದ ವೇದಭಾರತಿಯ ಸಹಕಾರದಿಂದ  ಬೆಂಗಳೂರಿನಲ್ಲಿ ಒಂದು "ಅಗ್ನಿಹೋತ್ರ" ಮತ್ತು  "ಎಲ್ಲರಿಗಾಗಿವೇದ" ಪರಿಚಯ ಕಾರ್ಯಕ್ರಮವನ್ನು ನಡೆಸಿ  -   ಹೀಗೊಂದು ಸಲಹೆ ಬಂದಿದೆ. ಮಾಡೋಣ ಎಂದಿದ್ದೇನೆ. ಈಗ ಅದಕ್ಕಾಗಿ ಪೂರ್ವಭಾವಿ ಕೆಲಸ ಶುರುವಾಗಬೇಕಲ್ಲಾ! ಹಾಗೊಂದು ವೇಳೆ ಯಾವುದಾದರೂ ರಜೆಯ ದಿನ ಬೆಂಗಳೂರಿನಲ್ಲಿ ಯಾವುದಾದರೂ ಪರಿಚಿತ ಸ್ಥಳದಲ್ಲಿ ಇಂತಾ ಒಂದು ಕಾರ್ಯಕ್ರಮವನ್ನು ಜೂನ್ ತಿಂಗಳಲ್ಲಿ ಒಂದು ಭಾನುವಾರ ಹಮ್ಮಿಕೊಂಡರೆ ಅದರಲ್ಲಿ ಮಿತ್ರರೊಡನೆ  ನೀವು ಪಾಲ್ಗೊಳ್ಳುವಿರಾ?  ಸಮ್ಮತಿ ಇದ್ದವರು ತಮ್ಮ ಫೋನ್ ನಂಬರ್ ನ್ನು vedasudhe@gmail.com ಗೆ ಮೇಲ್ ಮಾಡುವಿರಾ?

ವೇದಭಾರತಿಯು ಹಾಸನದಲ್ಲಿ ಪ್ರತಿದಿನ ಸಂಜೆ 6.00 ರಿಂದ 7.00 ರವರಗೆ  ನಡೆಸುವ  ನಿತ್ಯ ಸತ್ಸಂಗದ ಮತ್ತು  ಹಾವೇರಿ ಸಮೀಪ ಮಲಗುಂದದ ಪೂಜ್ಯ ಚಿದ್ರೂಪಾನಂದ ಸ್ವಾಮೀಜಿಯವರ ಆಶ್ರಮದಲ್ಲಿ ಹಾಸನ ವೇದಭಾರತಿಯ ಸಹಕಾರದೊಂದಿಗೆ ನಡೆದ ಸಾಮೂಹಿಕ ಅಗ್ನಿಹೋತ್ರದ ಚಿತ್ರ ಜೊತೆಗಿದೆ. ಹಾಸನದ ಕೆ.ಇ.ಬಿಯಲ್ಲಿ ನಡೆಸಿದ ಸಾಮೂಹಿಕ ಅಗ್ನಿಹೋತ್ರದ  ವೀಡಿಯೋ ಕ್ಲಿಪ್ ಕೂಡ ಜೊತೆಗಿದೆ.
-ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ






No comments:

Post a Comment