Pages

Tuesday, September 29, 2015

ಅಗ್ನಿಹೋತ್ರ ಕಲಿಸಿ- ಮುಸ್ಲಿಮ್ ಸೋದರಿಯ ಕೋರಿಕೆ

ಒಬ್ಬ ಮುಸ್ಲಿಮ್ ಸೋದರಿ ನನಗೆ ಬರೆದಿರುವ ಪತ್ರ ನೋಡಿ. ಪತ್ರದಲ್ಲಿನ ಅಕ್ಷರಗಳ ತಪ್ಪನ್ನು ನೋಡಬೇಡಿ. ಭಾವನೆಯನ್ನು ನೋಡಿ.
---------------------------
ಧನ್ಯವಾದಗಳು ಸರ್, ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನಲ್ಲಿ ನಿಮ್ಮಿಂದ ಅಗ್ನಿಹೋತ್ರ ಹೋಮವನ್ನು ಅಪೇಕ್ಷಿಸುತ್ತೇನೆ. ಅಗ್ನಿಹೋತ್ರದಿಂದ ಆಗುವ ಉಪಯೋಗವನ್ನು ಜನಸಾಮ್ಯರಿಗೂ ಅರಿವಾಗಬೇಕಾಗಿದೆ.
- Reehana Firdose 
     --------------------------------------------
ನಮಸ್ತೆ,
ಹಾಸನ ವೇದಭಾರತೀ ಟೀಮ್ ಸಾಗರಕ್ಕೂ ಬಂದು ಅಗ್ನಿಹೋತ್ರಮಾಡಿಸಿ ಅದರ ಪರಿಚಯ ಮಾಡಿಸಲು ತೊಂದರೆಯೇನಿಲ್ಲ. ಅಲ್ಲಿ ಆರ್ಗನೈಸ್ ಮಾಡುವ ವ್ಯಕ್ತಿಗಳು ಬೇಕು. ನಿಮ್ಮಿಂದ ಸಾಧ್ಯವೇ ತಿಳಿಸಿ. ಅದಕ್ಕೆ ನೀವು ವೇದಭಾರತಿ ಕಾರ್ಯಕರ್ತರಿಗೆ ಯಾವ ಶುಲ್ಕ ಕೊಡಬೇಕಾಗಿಲ್ಲ. ಅಗ್ನಿಹೋತ್ರದ ಪೂರ್ಣ ವ್ಯವಸ್ಥೆ ನಾವೇ ಉಚಿತಮಾಡುತ್ತೇವೆ. ಜನರನ್ನು ಸೇರಿಸುವ ಜವಾಬ್ದಾರಿ ಸ್ಥಳೀಯರದ್ದು
-ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ​
------------------------------------------------
ನಮಸ್ತೆ ಸರ್,
ನಾನು ಒಬ್ಬ ಮುಸ್ಲಿಂ ಹುಡಗಿಯಾಗಿದ್ದು, ಪ್ರಸ್ತುತವಾಗಿ ಸಾಗರದಲ್ಲಿ ಕಂಪ್ಯೂಟರ್ ಆಫ್ ರೇಟರ್ ಆಗಿ ಕೆಲಸ ಮಾಡುತ್ತಿದ್ದೆನೇ ಬಿ.ಎ. ಡಿಗ್ರಿ ಆಗಿದೆ. ನನ್ನಗೆ ಹಿಂದೂ ಧರ್ಮದ ಮೇಲೆ ಅಪಾರವಾದ ಪ್ರೀತಿ ಹಾಗೂ ಅಭಿಮಾನವಿದೆ. ಹಾಗಾಗಿ ಅನೇಹ ಪುಸ್ತಕಗಳನ್ನು ಓದುತ್ತಿರುತ್ತೇನೆ. ಹಿಂದಿನ ಸಂಪ್ರಧಾಯಗಳು ನಮಗೆ ಎಷ್ಟು ಆರೋಗ್ಯ ಹಾಗೂ ಒಳೆಯ ಜೀವನವನ್ನು ನೀಡುತ್ತವೆ ಎಂಬ ಬಗ್ಗೆ ಸ್ವಲ್ಪಮಟ್ಟಿಗೆ ಅರಿತಿರುತ್ತೇನೆ. ಇಗಿನ ಕಾಲದಲ್ಲಿ ಆನೇಕರು ಆನರೋಗ್ಯದಿಂದ ಬಳಲುತ್ತಿರುತ್ತಾರೆ. ವಿವಿಧ ವಿವಿಧವಾದ ಕಾಯಿಲೆಗಳು, ಮಾನಸಿಕ ನೆಮ್ಮದಿ ಇಲ್ಲದೇ ಮನ್ಸ್ ಶಾಂತಿಯಿಲ್ಲದೆ ಸುಂದರವಾದ ಜೀವನವನ್ನು ಅನುಭವಿಸುವುದು ಜೀವನವನ್ನು ಕಳೆಯುವುದು ಕಷ್ಟಸಾಧ್ಯವಾಗಿದೆ. ನಾನು ಒಬ್ಬ ಸಾಮನ್ಯ ಹೆಣ್ಣಾಗಿರುವ ಕಾರಣ ನನ್ನಿಂದ ನಮ್ಮ ಜನರಿಗೆ ಏನು ಸಹಾಯ ಮಾಡಲು ಆಗದೆ ಇರುವುದರಿಂದ ನಿಮ್ಮಿಂದ ಏನಾದರು ನಮ್ಮ ಊರಿನ ಜನರಿಗೂ ಉಪಯೋಗವಗಬಹುದೇನೋ? ಎಂಬ ವಿಶ್ವಾಸದಿಂದ ನಿಮ್ಮಲ್ಲಿ ಮನವಿ ಮಾಡಿರುತ್ತೇನೆ. 

ಇಂತಿ ನಿಮ್ಮ ವಿಶ್ವಾಸಿ,

ರಿಹಾನ ಫೀರ್ಧೋಸ್,
ಸಾಗರ ತಾಲ್ಲೂಕು,ಶಿವಮೊಗ್ಗ ಜಿಲ್ಲೆ.
------------------------------------------------------
 ನಮಸ್ತೆ,
ಸಾಗರದಲ್ಲಿನ ಯಾರಾದರೂ ಮಿತ್ರರ ಸಹಕಾರ ಪಡೆದು ಅಗ್ನಿಹೋತ್ರ ಶಿಬಿರ ಒಂದನ್ನು ನಡೆಸೋಣ ಭಗಿನೀ. ನಿಮ್ಮ ಆಪೇಕ್ಷೆಗೆ ಬಹಳ ಸಂತೋಷವಾಗಿದೆ. ನಿಜವಾಗಿ ಅಗ್ನಿಹೋತ್ರವು ಮಾನವೆಲ್ಲರೂ   ಮಾಡಬೇಕಾದ ದೈನಂದಿನ ವಿಧಿ
-ಹರಿಹರಪುರಶ್ರೀಧರ್

2 comments:

  1. ಧನ್ಯವಾದಗಳು ಸರ್.
    ಎಲ್ಲರು ಆರೋಗ್ಯವಾಗಿ ಬಾಳಬೇಕು ಇದೆ ಮುಖ್ಯ ಉದ್ದೇಶವಾಗಿದೆ. ಹಾಗೂ ಎಲ್ಲರಲ್ಲೂ ಏಕಥೆ ಭಾವನೆಯಿಂದ ಇರಬೇಕು ಹಿರಿಯರು ಈ ಮಾತುಗಳನ್ನು ಹೇಳಿದರೆ ಕೆಲವರು ಅರಿತು ಕೊಳ್ಳುತ್ತಾರೆ. ಆದ್ದರಿಂದ ನಿಮ್ಮಿಂದ ಈ ಒಳ್ಳೆಯ ಕಾರ್ಯ ಕೈಗೊಳ್ಳಲ್ಲಿ. ನಿಮ್ಮ ಸಹಕಾರ ಹಾಗೂ ಸ್ಪಧನೆಗೆ ನನ್ನ ಧನ್ಯವಾದಗಳು. ಸರ್ ನನ್ನ ಕನ್ನಡ ಪದಗಳಲ್ಲಿ ಯೇನಾದರು ತಪ್ಪಿದ್ದರೆ ಕ್ಷಮೀಸಿ ನನ್ನಗೆ ಕನ್ನಡ ಸರಿಯಾಗಿ ಬರಲ್ಲ. ಪದಗಳು ತಪ್ಪಿದ್ದಲ್ಲಿ ಮತ್ತೊಮ್ಮೆ ಕ್ಷಮೇ ಯಾಚಿಸುತ್ತೇನೆ.
    Reehana Firdose
    ನಮಸ್ತೆ ಸೋದರಿ,
    ಅಕ್ಷರ ತಪ್ಪಾದರೇನಂತೆ ನಿಮ್ಮ ಭಾವನೆಗೆ ಬೆಲೆ ಕಟ್ಟಲಾದೀತೇ?
    ನಿಮ್ಮ ಆಸಕ್ತಿಗೆ ನಾನು ಸ್ಪಂಧಿಸಲೇ ಬೇಕು. ಬರುವುದಂತೂ ನಿಶ್ಚಿತ. ನವಂಬರ್ ನಲ್ಲಿ ಆಗಬಹುದು. ನಮಸ್ಕಾರ.
    -ಹರಿಹರಪುರಶ್ರೀಧರ್

    ReplyDelete
  2. ಸರಿ ಸರ್ ನಿಮ್ಮ ಮಾತಿನಿಂದ ಮಾನಸಿಕ ನೆಮ್ಮದಿ ಸಿಕ್ಕಿದೆ. ನಿಮ್ಮಿಂದ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಹಾಗೂ ಪ್ರೀತಿ ವಿಶ್ವಾಸದಿಂದ ಬಾಳುವಹಗಾಗಲಿ.
    Reehana Firdose

    ReplyDelete