ಹಾಸನಜೆಲ್ಲೆಯಲ್ಲಿ ಮೂರ್ನಾಲ್ಕು ತಾಲ್ಲೂಕುಗಳಿಗೆ ಪ್ರವಾಸ ಮಾಡಿದ್ದರೂ ಈ ಬಾರಿ ಇಡೀ ಪರಿವಾರ ಪ್ರಮುಖರ ಪ್ರವಾಸ ಯೋಜಿಸಲಾಗಿತ್ತು. ಭಾರತ್ ಸ್ವಾಭಿಮಾಕ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪನವರು, ಯುವಭಾರತ್ ಜಿಲ್ಲಾ ಪ್ರಭಾರಿ ಶ್ರೀ ಸುರೇಶ್ ಮತ್ತು ಸಹಪ್ರಭಾರಿ ಶ್ರೀ ರಮೇಶ್, ಕಿಸಾಯನ್ ಸೇವಾಸಮಿತಿಯ ಜಿಲ್ಲಾ ಪ್ರಭಾರಿ ಶ್ರೀ ನಾಗಭೂಷಣ್, ಪತಂಜಲಿ ಪರವಾಗಿ ನಾನು ಮತ್ತು ವೇದಭಾರತಿಯ ಶ್ರೀಮತಿ ಪಾರ್ವತಮ್ಮ ಒಟ್ಟಾಗಿ ಪ್ರವಾಸ ಮಾಡಿದೆವು. ಅರಕಲಗೂಡಿನಲ್ಲಿ ಶ್ರೀ ಶಿವಣ್ಣ ಮತ್ತು ಶ್ರೀ ಪ್ರವೀಣ್ ಜೊತೆಗೂಡಿ ಮೂರು ಗ್ರಾಮಗಳ ಭೇಟಿ ಮತ್ತು ಗ್ರಾಮದ ಯೋಗಾಸಕ್ತರ ಭೈಠಕ್ ನಡೆಸಿದೆವು. ಬರಗೂರು, ಕಣಿಯಾರ್ ಮತ್ತು ಕೊಣನೂರುಗಳಲ್ಲಿ ನಡೆದ ಭೈಠಕ್ ಗಳಲ್ಲಿ ಎಲ್ಲಾ ಗ್ರಾಮಗಳಲ್ಲೂ ಯೋಗ ಕೇಂದ್ರಗಳನ್ನು ಹೆಚ್ಚು ಮಾಡುವುದಲ್ಲದೆ ಎಲ್ಲಾ ಗ್ರಾಮಸ್ತರ ಸಮಾವೇಶಗಳನ್ನು ಮತ್ತು ಯುವಕರ ವಿಶೇಷವಾಗಿ ಕಾಲೇಜಿ ವಿದ್ಯಾರ್ಥಿಗಳ ಸಮಾವೇಶವನ್ನು ಇನ್ನೆರಡು ಮೂರು ತಿಂಗಳುಗಳಲ್ಲೇ ಆಯಾ ಗ್ರಾಮದಲ್ಲೇ ಆಯೋಜಿಸಬೇಕೆಂದು ನಿರ್ಧರಿಸಲಾಯ್ತು. ಗ್ರಾಮಗಳಲ್ಲಿ ಪತಂಜಲಿ ಉತ್ಪನ್ನಗಳ ಬೇಡಿಕೆ ಬಹಳವಾಗಿದ್ದು ಆ ಬಗ್ಗೆ ಗ್ರಾಮಸ್ತರು ಬಹಳ ಆಸಕ್ತಿಯಿಂದ ಪತಂಜಲಿ ಉತ್ಪನ್ನಗಳನ್ನು ಹೆಚ್ಚು ಸರಬರಾಜು ಮಾಡಲು ಬೇಡಿಕೆ ಇಡುತ್ತಿದ್ದುದು ವಿಶೇಷವಾಗಿತ್ತು.



No comments:
Post a Comment