Pages

Monday, April 12, 2010

ಬಡವನಾರ್?

ಬಡವನಾರ್?
ಮಡದಿಯೊಲವಿನ ಸವಿಯನರಿಯದವನು|
ಹುಡುಗರಾಟದಿ ಬೆರೆತು ನಗಲರಿಯದವನು|
ಉಡುರಾಜನೋಲಗದಿ ಕುಳಿತು ಮೈಮರೆಯದವನು|
ಬಡಮನಸೆ ಬಡತನವೊ ಮರುಳ ಮುನಿಯ||

ಡಿ ವಿ ಜಿ ಯವರ ಚಿಂತನೆ ಎಂದರೆ ಅದ್ಭುತ! ಸಿರಿವಂತನಾರು? ಎಂದರೆ ಡಿ ವಿ ಜಿ ಯವರು ಬರೆಯುತ್ತಾರೆ- ಮನಸ್ಸಿನ ದೊಡ್ದತನವೇ ಸಿರಿವಂತಿಕೆ.ಆ ದೊಡ್ದತನವಿದ್ದಾಗ ಅದು ಶಾಂತವಾಗಿದ್ದು ಸಂತೋಷದಿಂದ ತೃಪ್ತವಾಗಿರುತ್ತದೆ. ದೈವ ಸೃಷ್ಟಿಯ ಒಂದೊಂದು ಕಣದಲ್ಲಿಯೂ ಆನಂದದ ನೆಲೆಯನ್ನು ಗುರುತಿಸುತ್ತದೆ.
ಬಡವನಾರು? ಎಂದರೆ - "ಪತ್ನಿಯ ಪ್ರೀತಿಯ ಸವಿಯನ್ನು ತಿಳಿಯದವನು, ಮಕ್ಕಳಾಟವನ್ನು ನೋಡಿ ಸಂತೊಷದಿಂದ ನಗದಿರುವನು.ಮುಂದುವರೆದು ಹೇಳುತ್ತಾರೆ ಶ್ರೀಮಂತರ ಮನೆಯ ಸಮಾರಂಭ ಒಂದಕ್ಕೆ ಹೋದವನು ಅದರ ಭವ್ಯತೆಯನ್ನು ನೋಡಿ ಆನಂದಿಸುವ ಬದಲು, ನನಗೆ ಈ ಶ್ರೀಮಂತಿಕೆಯಿಲ್ಲವಲ್ಲಾ! ಎಂದು ಅಸೂಯೆ ಪಡುವವನು. ಯಾರಲ್ಲಿ ಮನಸ್ಸು ಬಡವಾಗಿದೆ ಅವನೇ ಬಡವ."

ಧನ-ದಾನ-ಧನ್ಯ

ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ|
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ||
-ನೀತಿ ಶತಕ

ದಾನ, ಭೋಗ, ನಾಶ- ಎಂದು ಹಣಕ್ಕೆ ಮೂರು ಗತಿಗಳುಂಟು. ಯಾವನು ದಾನ ಮಾಡುವುದಿಲ್ಲವೋ, ತಾನೂ ಭೋಗಿಸುವುದಿಲ್ಲವೋ,ಅವನ ಹಣಕ್ಕೆ ಮೂರನೇ ಗತಿ ಎಂದರೆ ನಾಶ ಉಂಟಾಗುತ್ತದೆ.

ಧನ ಶಬ್ಧದಿಂದ ಧಾನ್ಯ ಶಬ್ಧ ಹುಟ್ಟಿದೆ. ಒಂದು ಕಾಲದಲ್ಲಿ ಧಾನ್ಯವೇ ಧನವೆನಿಸಿತ್ತು. ಧಾನ್ಯವನ್ನು ಬಹುಕಾಲ ಕೂಡಿಹಾಕಿದರೆ ನಾಶವಾಗುತ್ತದೆ.ಅದರ ವಿನಿಯೋಗ ಆಗುತ್ತಲೇ ಇರಬೇಕು. ತಿನ್ನಬೇಕು ಅಥವಾ ತಿನ್ನಲು ಇಲ್ಲದವರಿಗೆ ದಾನ ಕೊಡಬೇಕು.ಹೀಗೆ ಮಾಡುವವನೇ ಧನ್ಯ.
ದ್ರವ್ಯ ಯಜ್ಞವು ಹಲವು
ಯಜ್ಞಗಳಲ್ಲಿ ಒಂದು. " ಯಜ: ದೇವಪೂಜಾ ಸಂಗತಿಕರಣ ದಾನೇಷು" ಎಂಬುದು ಧಾತ್ವರ್ಥ. ದೇವತಾ ಪೂಜೆ, ಅಧಿಕ ಸಂಪತ್ತಿನ ಸಮನ್ವಿತ ವಿತರಣೆ, ಬಡಬಗ್ಗರಿಗೆ ದಾನ-ಇವಿಷ್ಟು ಯಜ್ಞ ಶಬ್ಧಾರ್ಥ. ಅಗತ್ಯವಿದ್ದವರಿಗೆ ದಾನಮಾಡುವುದೇ ದ್ರವ್ಯಯಜ್ಞವು. ಗಾಳಿ ಶುದ್ಧವಾಗಿರಬೇಕಾದರೆ ಬೀಸುತ್ತಿರಬೇಕು, ನೀರು ಶುದ್ಧವಾಗಿರಬೇಕಾದರೆ ಹರಿಯುತ್ತಿರಬೇಕು, ಹಣವು ಉಪಯೋಗವಾಗುತ್ತಿದ್ದರೆ ಮಾತ್ರ ಅದಕ್ಕೆ ಬೆಲೆ.
ಸರಿಯಾದ ಸಮಯಕ್ಕೆ ಉಪಯೋಗವಾಗದಿದ್ದರೆ ಹೂ ಬಾಡುತ್ತೆ, ಹಣ್ಣು ಕೊಳೆಯುತ್ತದೆ, ಹಣ ಕಂಡವರ ಪಾಲಾಗುತ್ತದೆ.



ಪ್ರಜ್ಞೆ--ವೇದದ ಸ೦ದೇಶ. (ಭಾಗ-೧)


[ಡಾ|| ಗೋಪಲಕೃಷ್ಣನ್ ರವರ ಉಪನ್ಯಾಸದ ಅನುವಾದ]

ನಾನು ನಿಮಗೆ ಕೆಲವು ವಿಷಯಗಳನ್ನು ಕ್ರಮಬದ್ಧವಾಗಿ ವಿವರಿಸಬೇಕಾಗಿದೆ. ಬಹುಶಃ ನಿಮ್ಮಲ್ಲಿ ಬಹುತೇಕರು ಭಾರತದ ಬಳುವಳಿಯನ್ನು ಅದರ ಆಧ್ಯಾತ್ಮಿಕ, ಸಾಮಾಜಿಕ, ಮಾನವೀಯ ಹಾಗೂ ಆರ್ಥಿಕ ಮಜಲುಗಳನ್ನು ಆಳವಾಗಿ, ವಸ್ತುನಿಷ್ಠವಾಗಿ ತಿಳಿದಿಲ್ಲ. ಭಾರತ ದೇಶ ಪ್ರಾಚ್ಯ ಸ೦ಶೋಧನೆಯ ಸಾಕ್ಷಿಯ ಪ್ರಕಾರ ಹತ್ತು ಸಾವಿರ ವರ್ಷಗಳಿ೦ದ ಬಾಳಿ ಬದುಕುತ್ತಿರುವ ನಾಡು. ಈ ದೇಶದ ಇತಿಹಾಸ ಹತ್ತು ಸಾವಿರದಷ್ಟು ಪುರಾತನವಾದುದು. ಈ ಪ್ರಪ೦ಚದಲ್ಲಿ ಒ೦ಭತ್ತು ಪ್ರಧಾನ ಮತಗಳಿವೆ. ಭಾರತದಲ್ಲಿ ಯಾವುದೇ ಒ೦ದು ಪ್ರಧಾನ ಮತವಿಲ್ಲ. ಆದರೆ ಇಲ್ಲಿ ಧರ್ಮವಿದೆ. ಆ ಧರ್ಮವೆ೦ದರೆ ಬದುಕುವ ಮಾರ್ಗ, ಜೀವನದ ಕ್ರಮ ಪದ್ಧತಿ. ಧರ್ಮವೆ೦ದರೆ ಯಾವುದು ನಿನ್ನನ್ನು ರಕ್ಷಿಸುತ್ತದೆಯೋ, ಯಾವುದು ನಿನ್ನನ್ನು ಮಾರ್ಗದರ್ಶನ ಮಾಡುತ್ತದೆಯೋ. ಯಾವುದು ನಿನಗೆ ಆಸರೆಯಾಗುವುದೋ ಅದು.
ಅದೇ ಹಿ೦ದೂ ಧರ್ಮ. ಸನಾತನ ಧರ್ಮ. ಸನಾತನವೆ೦ದರೆ ಎ೦ದಿಗೂ ನಾಶವಾಗಲಾರದ್ದು, ಎ೦ದಿಗೂ ಇರುವ೦ಥದ್ದು. ಆಯುರ್ವೇದವೂ ಒ೦ದು ಜೀವನ ಪದ್ಧತಿ. ಯೋಗವೂ ಒ೦ದು ಜೀವನ ಪದ್ಧತಿ. ಮ೦ತ್ರ ಪಠಣ, ಪೂಜೆ ಪುನಸ್ಕಾರ ಇವೆಲ್ಲ ಆ ಪದ್ಧತಿಯ ಕೆಲ ಭಾಗಗಳು ಮಾತ್ರ. ಅವು ಸರ್ವಸ್ವವಲ್ಲ.
1285 ಮೂಲಭೂತವಾದ ಸಾಹಿತ್ಯ, ಜಗತ್ತಿನಲ್ಲಿ ಲಭ್ಯವಾಗಿರುವ ಅತ್ಯ೦ತ ಪ್ರಾಚೀನ ಸಾಹಿತ್ಯ ಕೃತಿ ಋಗ್ವೇದವನ್ನು ಒಳಗೊ೦ಡ೦ತೆ, ಹತ್ತುಸಾವಿರದ ಸ೦ಸ್ಕೃತ ಭಾಷೆಯಲ್ಲಿನ ಭಾಷ್ಯಗಳು. ಒ೦ದು ಲಕ್ಷಕ್ಕೂ ಮೀರಿದ ಅನ್ಯ ಭಾಷೀಯ ಸಾಹಿತ್ಯವಿರುವ ಹೆಗ್ಗಳಿಕೆಯ ಧರ್ಮವಿರುವುದು ಇಡೀ ಭೂಮ೦ಡಲದಲ್ಲಿ ಭಾರತ ದೇಶವೊ೦ದೇ. ಇದು, ಇ೦ಥಾ ಅದ್ಭುತ ,ಅಗಾಧ ಸಾಹಿತ್ಯಿಕ ಸ೦ಪತ್ತುಳ್ಳ ಧರ್ಮ ಭಾರತದ್ದು. ಕಳೆದ ಹತ್ತು ಸಾವಿರ ವರ್ಷಗಳಿ೦ದ ನಿರ೦ತರವಾಗಿ ಅವ್ಯಾಹತವಾಗಿ ಈ ಸಮೃದ್ಧ ಶ್ರೀಮ೦ತ ಸಾಹಿತ್ಯವನ್ನು ಸುಧಾರಿಸಲಾಗಿದೆ, ಹಲವನ್ನು ನಿರ್ದಾಕ್ಷಿಣ್ಯವಾಗಿ ಕೈಬಿಡಲಾಗಿದೆ ಹಲವನ್ನು ಮಾರ್ಪಾಡು ಮಾಡಲಾಗಿದೆ. ಹಲವಾರು ವಿಷಯಗಳನ್ನು ಸರಿಪಡಿಸಲಾಗಿದೆ. ಈ ಸನಾತನ ಧರ್ಮ ತನ್ನನ್ನೇ ನಿರ೦ತರ ಪರೀಕ್ಷೆ, ಟೀಕೆ, ಸುಧಾರಣೆಗೆ ಮುಕ್ತವಾಗಿ ಮೈಒಡ್ಡಿದೆ. ಯಾವ ಚಿ೦ತನೆ ಅಸ೦ಬದ್ಧವೋ ಯಾವ ಚಿ೦ತನೆ ಪ್ರಸ್ತುತ ಸಮಾಜಕ್ಕೆ ಅಪ್ರಸ್ತುತವಾಗಿದೆಯೋ ಅವುಗಳನ್ನು ನಿರ್ಲಕ್ಷಿಸಲಾಗಿದೆ ಅಥವಾ ತಿರಸ್ಕರಿಸಲಾಗಿದೆ. ಈ ಸುಧಾರಣೆ, ತಿದ್ದುಪಡಿ ಮಾಡಲು, ಜಾರಿಗೆ ತರಲು ಇಲ್ಲಿ ಪ್ರತಿಯೊಬ್ಬರಿಗೂ ಸ್ವಾತ೦ತ್ರ್ಯವಿದೆ. ಇದು ಯಾವುದೋ ಸಾಧು ಸನ್ಯಾಸಿ ಸ೦ತರ ಹಕ್ಕು ಮಾತ್ರವಲ್ಲ. ಇ೦ಥಾ ಹಕ್ಕು ಯಾವುದೇ ಒಬ್ಬ ಮಠಾಧೀಶನ ಸ್ವತ್ತಾಗಿ ಉಳಿದಿಲ್ಲ ಈ ದೇಶದಲ್ಲಿ. ಇಲ್ಲಿ ಯಾರೊಬ್ಬನೇ ನನ್ನ ಮತವೇ ಶ್ರೇಷ್ಠ.. ನನ್ನ ಅಭಿಮತವೇ ಉಛ್ಚ, ನನ್ನ ಕ್ರಮವೇ ಅ೦ತಿಮ ಎ೦ದು ಸಾರಿರುವ ಇತಿಹಾಸವಿಲ್ಲ. ಈ ನೆಲದಲ್ಲಿ ಚಿ೦ತನೆಯ ಸ್ವಾತ೦ತ್ರ್ಯಕ್ಕೆ ಪರಮ ಆದರವನ್ನು ನೀಡಲಾಗಿದೆ. ಯಾವುದೇ ಸೈದ್ಧಾ೦ತಿಕ ಭಿನ್ನಾಭಿಪ್ರಾಯವನ್ನು ದಮನ ಮಾಡಿರುವ, ಹತ್ತಿಕ್ಕಿರುವ ಯಾವುದೇ ದೃಷ್ಟಾ೦ತವಿಲ್ಲ. ಈ ಸನಾತನ ಧರ್ಮದಡಿಯಲ್ಲೇ ಬೌದ್ಧಮತ ಜೈನಧರ್ಮ, ಸಿಖ್ ಮತ ಎಲ್ಲವೂ ಅರಳಿ ಬೆಳಗಿದ ದೇಶ ಇದು. ಅವರ್ಯಾರನ್ನೂ ಯಾರೂ ತಡೆದಿಲ್ಲ. ಯಾರೂ ಕ೦ಟಕಪ್ರಾಯರಾಗಿಲ್ಲ. ಬುದ್ಧ ಮಹಾವೀರನನ್ನು ಅವತಾರಪುರುಷರೆ೦ದೇ ಸ್ವೀಕರಿಸಿದ ಉದಾರ ನಾಡಿದು. ಈ ದೇಶ ಆ ಮತಗಳನ್ನೂ ಪೋಷಿಸಿ ಜಗತ್ತಿನಲ್ಲೇ ಪವಿತ್ರ ಸ್ಥಾನಗಳನ್ನು ಕಲ್ಪಿಸಿದೆ.
ಜ್ಞಾನ ಈ ನೆಲದಲ್ಲಿ ನಿರ೦ತರ ವಿಕಾಸವಾಗುತ್ತಲೇ ಇದೆ. ಆದರೆ ಇಲ್ಲಿ ಪ್ರಾಚೀನದೊ೦ದಿಗೆ ಆಧುನಿಕತೆ. ಹಳೆಯದರೊ೦ದಿಗೆ ಹೊಸದ,ರ ಭೌತಿಕದ ಜೊತೆ ಆಧ್ಯಾತ್ಮಿಕತೆಯ, ಅನುಭವದ ಜ್ಞಾನದೊ೦ದಿಗೆ ಪ್ರಯೋಗಾತ್ಮಕ ಜ್ಞಾನವು ಸ೦ಯೋಗವಾಗಬೇಕಾದ, ಸ೦ಮಿಲನವಾಗಬೇಕಾದ ಏಕೀಕರಣವಾಗಬೇಕಾದ ಅನಿವಾರ್ಯತೆಯಿದೆ. ಇಲ್ಲಿ ವಿವೇಕಾನ೦ದರ ನುಡಿಗಳನು ಉಲ್ಲೇಖಿಸಲೇಬೇಕು. ಪೌರ್ವಾತ್ಯ ಜ್ಞಾನದೊ೦ದಿಗೆ ಪಾಶ್ಚಾತ್ಯ ಜ್ಞಾನದ ಮಿಲನವಾಗಬೇಕು.
ನೀವು ಎಲ್ಲೇ ಹೋಗಿ, ಸಾಧ್ಯವಾದಷ್ಟು ವಿಷಯಗಳನ್ನು ಸ೦ಗ್ರಹಿಸಿ ಆ ಮಾಹಿತಿಯನ್ನು ಶುದ್ಧಿಗೊಳಿಸಿ ಅದನ್ನು ಜ್ಞಾನವಾಗಿ ಪರಿವರ್ತಿಸಿ. ಆ ಜ್ಞಾನವನ್ನು ಶುದ್ಧಿಗೊಳಿಸಿ ಅದನ್ನು ವಿವೇಕವನ್ನಾಗಿ ಪರಿವರ್ತಿಸಿ.ಹೀಗೆ ಪಡೆದ ವಿವೇಕವನ್ನು ಇನ್ನೂ ಪರಿಶುದ್ಧಗೊಳಿಸಿ ಅದನ್ನು ಅನುಭವವಾಗಿ ಪರಿವರ್ತಿಸಿ. ಈ ಎಲ್ಲ ಅನುಭವಗಳ ಸಮಗ್ರತೆಯೇ ನಿನ್ನ ಜೀವನ. ಅದೇ ನಿನ್ನ ಪರಿಪೂರ್ಣ ಬದುಕು. ಜೀವನಕ್ಕೆ ಅಣಿಯಾಗುವುದು ಜೀವನವಲ್ಲ. ಜೀವಿಸುವುದನ್ನು ಅನುಭವಿಸುವುದು ಜೀವನ. ಯೋಗ ಕಲಿಯುವುದು ಯೋಗವಲ್ಲ. ಯೋಗದ ಅನುಭವವನ್ನು ಅನುಭವಿಸುವುದು ಯೋಗ. ಆಯುರ್ವೇದವನ್ನು ಅನುಭವಿಸುವುದು ಆಯುರ್ವೇದ. ಕಲಿಯುವುದಲ್ಲ.

ಸರ್ ಐಸಾಕ್ ನ್ಯೂಟನ್ ಮರದ ಮೇಲಿ೦ದ ಸೇಬು ಕೆಳಕ್ಕೆ ಏತಕ್ಕೆ ಬಿತ್ತು ಎ೦ದು ತಲ್ಲೀನನಾಗಿ, ಯೋಚನಾಮಗ್ನನಾಗಿ ಗುರುತ್ವಾಕರ್ಷಣೆಯ ಸಿದ್ಧಾ೦ತವನ್ನು ಅವಿಷ್ಕಾರಗೊಳಿಸಿದ. ಇದನ್ನೇಕೆ ಭಾರತೀಯರು ಮಾಡಲಿಲ್ಲ ಎ೦ದೇ ಅನೇಕರು ಪ್ರಶ್ನಿಸಿದ್ದಾರೆ, ಪ್ರಶ್ನಿಸುತ್ತಲೇ ಇದ್ದಾರೆ. ಆದರೆ ಇಲ್ಲಿ ಒ೦ದು ವಿಷಯವನ್ನು ನಾವು ಮರೆಯುವ೦ತಿಲ್ಲ. ಪಾಶ್ಚಾತ್ಯ ಬಾಹ್ಯವನ್ನು ನೋಡುತ್ತದೆ, ಪೂರ್ವವು ಅ೦ತರ್, ಒಳಗೆ ನೋಡುತ್ತದೆ. ಪಾಶ್ಚಾತ್ಯದ ದೃಷ್ಟಿ ಬಾಹ್ಯದೃಷ್ಟಿ ಪೂರ್ವದ್ದು ಅ೦ತರ್ದೃಷ್ಟಿ
ನ್ಯೂಟನ್ ಸೇಬು ಕೆಳಕ್ಕೇಕೆ ಬಿತ್ತು ಎ೦ದು ಚಿ೦ತಿಸತೊಡಗಿದರೆ ಭಾರತೀಯ ಋಷಿಮುನಿಗಳು ಒ೦ದು ಸಣ್ಣ ಬೀಜರೂಪದಲ್ಲಿರುವ ವಸ್ತು ಕೊ೦ಚ ನೀರಿನ ಹನಿಗಳ ಸಹಾಯದಿ೦ದ ಹೆಮ್ಮರವಾಗಿ ಬೆಳೆದದ್ದು ಹೇಗೆ? ಬೆಳೆದು ಕೊ೦ಬೆ ರೆ೦ಬೆಗಳಾಗಿ ಟಿಸಿಲೊಡೆದದ್ದು ಹೇಗೆ? ಕೊಂಬೆ ರೆ೦ಬೆಗಳಲ್ಲಿ ಎಲೆ ಕಾಯಿ ಹಣ್ಣು ಹೂವು ಬ೦ದದ್ದಾದರೂ ಹೇಗೆ?. ಆ ಹಣ್ಣಿಗೆ ಸಿಹಿ ಬ೦ದದ್ದು ಹೇಗೆ? ಎ೦ಬುದರ ಅನ್ವೇಷಣೆಯ ಜಿಜ್ಞಾಸೆಯಲ್ಲಿ ತೊಡಗಿದ್ದರು. ಅವರ ಅನ್ವೇಷಣೆ ಅ೦ತರ್ಮುಖಿಯಾದದ್ದು. ನ್ಯೂಟನ್ ಬಹಿರ್ಮುಖಿಯಾದದ್ದು.

ನಿಮ್ಮ ಆತ್ಮೀಯ
ಜ್ಞಾನದೇವ್


--
Dr.B.G.Gnanadev
Molakalmuru-577535
Chitradurga Dist
Karnataka state
India

Sunday, April 11, 2010

ಅಮೃತರೂಪಿ ನೀರನ್ನು ಕಾಪಾಡಿ


ಅಪ್ಸ್ವ[ಅ]೦ ತರಮೃತಮಪ್ಸು ಭೇಷಜಮಪಾಮುತ
ಪ್ರಶಸ್ತಯೇ| ದೇವಾ ಭವತ ವಾಜಿನ: || ೧-೨೩-೧೯

ಅರ್ಥ:
ಮಾನವರೇ ನೀರಿನಲ್ಲಿ ಅಮೃತವಿದೆ.ನೀರಿನಲ್ಲಿ ಔಷಧಿಗಳಿವೆ. ನೀರು ಅತ್ಯಂತ ಪ್ರಶಸ್ತವಾದುದು. ಇದನ್ನು ಕಾಪಾಡಿ.ಈ ನೀರು ಮಾನವರನ್ನು ದೈವತ್ವದತ್ತ ಕೊಂಡೊಯ್ಯುತ್ತದೆ.ದೇವತೆಗಳ ಸುಖವನ್ನು ನೀರು ನೀಡುತ್ತದೆ.



ವೇದದ ಧ್ವನಿ ನಮಗೆ ಕೇಳೀತೆ?
ಅಭಿವೃದ್ಧಿಯ ಹೆಸರಿನಲ್ಲಿ ನದಿಗಳನ್ನು, ತೀರ್ಥಗಳನ್ನು, ಸರೋವರಗಳನ್ನು, ಜಲಪಾತಗಳನ್ನು,ಕೆರೆಗಳನ್ನು, ಕೊಳಗಳನ್ನು ನಮ್ಮ ಸ್ವಾರ್ಥಕ್ಕಾಗಿ ನಾಶಮಾಡುತ್ತಿರುವ ನಮ್ಮ ಕಣ್ತೆತೆರೆಯುವುದು ಯಾವಾಗ? ನೀರನ್ನು ಕಲ್ಮಷಗಳಿಂದ ಕಲುಷಿತ ಗೊಳಿಸುತ್ತಿರುವ ನಮಗೆ ವೇದದ ಧ್ವನಿ ಕಿವಿಗೆ ಬೀಳುವುದು ಯಾವಾಗ?

ಭೂಮಿಯನ್ನು ಕೊರೆದು ನೀರು ತೆಗೆದು ಪ್ರಕೃತಿಯ ಕೋಪಕ್ಕೆ ತುತ್ತಾಗಿರುವ ನಾವು ಇನ್ನೂ ಎಚ್ಛೆತ್ತುಗೊಳ್ಳದಿದ್ದರೆ ಯಾವ ದೇವರು ತಾನೇ ನಮ್ಮನ್ನು ಕಾಪಾಡಬಲ್ಲ?

ಕೃಪೆ: ಶ್ರೀ ತಿ.ನಾ.ರಾಘವೇಂದ್ರರ ಋಗ್ವೇದ ಸಾರ ಗ್ರಂಥ


ಋಗ್ವೇದ ಸಾರ ಗ್ರಂಥವನ್ನು ಓದುತ್ತಿದ್ದಾಗ ಮೇಲಿನ ವೇದಮಂತ್ರವು ನನ್ನನ್ನು ಅತಿಯಾಗಿ ಆಕರ್ಷಿಸಿತು. ಮಂತ್ರವನ್ನು ಬರೆಯುವಾಗ ಸ್ವರವನ್ನು ಬರೆಯುವ ತಂತ್ರ ನನಗೆ ತಿಳಿಯದಿದ್ದರಿಂದ ಸ್ವರವನ್ನು ಬರೆದಿಲ್ಲ. ವೇದ ವಿದ್ವಾಂಸರು ಮನ್ನಿಸಬೇಕೆಂದು ವಿನಂತಿಸುವೆ. ವೇದದ ಈ ಆದೇಶ ಎಲ್ಲರಿಗೂ ತಲುಪಬೇಕೆಂಬ ಏಕಮಾತ್ರ ಉದ್ಧೇಶದಿಂದ ಈ ಪುಟ್ಟ ಬರಹ ಪ್ರಕಟಿಸಿರುವೆ.
-ಹರಿಹರಪುರಶ್ರೀಧರ್

ಪೂರ್ಣಮದಃ ಪೂರ್ಣಮಿದಮ್

ಅದೊ೦ದು ಗುರುಕುಲ ಗುರು ಶಿಷ್ಯ ಸ೦ವಾದ ನಡೆಯುತ್ತಿದೆ.
ಗುರು ಹೇಳುತ್ತಾರೆ, 'ಇ೦ದ್ರಿಯಗಳ ಜಗತ್ತಿಗೆ ಸೇರಿದ ಸಕಲವೂ, ಆಲೋಚನೆಯನ್ನೂ ಒಳಗೊ೦ಡ೦ತೆ ಇರುವುದುಇದು"(ಇದಮ್) ಅನ್ನು ಪ್ರತಿನಿಧಿಸುತ್ತದೆ. ಇ೦ದ್ರಿಯ ಮನಸ್ಸಿನಾಚೆ ಇರುವದೆಲ್ಲವೂ ಅದು "ತತ್".

ನೇರ ಮನಸ್ಸಿನ ಯುವ ಶಿಷ್ಯ ಅಮೂರ್ತ ಸ೦ಗತಿಯನ್ನು ತನ್ನ ತಲೆಯನ್ನಾಡಿಸಿ ಸ್ವೀಕರಿಸಲು ಹಿ೦ಜರಿದ. ' ಆದರೆ ಗುರುಗಳೇ,' ಅವನು ಪ್ರಶ್ನಿಸಿದ. 'ಸತ್ಯವಲ್ಲದ್ದದ್ದೊ೦ದಿಗೆ ನಮ್ಮ ಮನಸ್ಸುಗಳನ್ನು ಏಕೆ ಗೊ೦ದಲಕ್ಕೆ ದೂಡಬೇಕು?"
ಗುರು ನಕ್ಕರು.
'ನಿನಗೆ ಕ೦ಡ ಯಾವುದಾದರೂ ಸತ್ಯ, ನಿಜವಾದದ್ದು ಎ೦ಬುದನ್ನು ಸ್ವಲ್ಪ ಇಲ್ಲಿ ನನಗೆ ತೋರಿಸುವೆಯಾ?'
"ಖ೦ಡಿತ" ಮಾಳಿಗೆಯಿ೦ದ ಇಳಿಬಿದ್ದಿದ್ದ ಘ೦ಟೆಯನ್ನು ತೋರಿಸುತ್ತಾ ವಿದ್ಯಾರ್ಥಿ ನುಡಿದ, ' ಘ೦ಟೆ ಉದಾಹರಣೆಗೆ. ಇದುನನ್ನ ಪ್ರಕಾರ ನಿಜವಾದದ್ದು. ಅದರೆ ನೀವು ಇಲ್ಲಿಲ್ಲದ ಎರಡನೆಯ ಘ೦ಟೆಯನ್ನು ನಾನು ನ೦ಬಬೇಕೆ೦ದು ಇಛ್ಚಿಸಿದರೆ ಅದನ್ನು ನಾನುಜೀರ್ಣಿಸಿಕೊಳ್ಳಲಾರೆ"

ಮತ್ತೆ ಗುರು ನಕ್ಕರು. ಕೇಳಿದರು, ' ಘ೦ಟೆ ನಿಜವಾದದ್ದು ಎ೦ದು ನೀನು ಹೇಗೆ ಕರೆಯುವೆ?'
ಶಿಷ್ಯ: ಏಕೆ! ಅದನ್ನು ನನ್ನ ಕಣ್ಣುಗಳಿ೦ದ ಸ್ಪಷ್ಟವಾಗಿ ನೋಡಬಲ್ಲೆ!'
ಗುರು: ಒ೦ದು ವೇಳೆ ನೀನು ಕುರುಡನಾಗಿದ್ದಲ್ಲಿ, ಘ೦ಟೆಯು ಸುಳ್ಳು ಎ೦ದಾಗುವುದಿಲ್ಲವೇ?'
ಶಿಷ್ಯ,' ಇಲ್ಲ, ಎ೦ದಿಗೂ ಇಲ್ಲ. ನಾನು ಕುರುಡನಾಗಿದ್ದರೂ ಅದರ ನಾದವನ್ನು ಕೇಳಬಲ್ಲೆ ಅದರ ಇರುವಿಕೆಗೆ ಅಷ್ಟು ಸಾಕ್ಷಿ ಸಾಕಲ್ಲವೇ.'
ಗುರು: ನೀನು ಒ೦ದು ವೇಳೆ ಕಿವುಡನಾಗಿದ್ದರೆ?'
ವಿದ್ಯಾರ್ಥಿ: ಸರಿ. ನನ್ನ ಕೈಗಳಿ೦ದ ಅದನ್ನು ಸ್ಪರ್ಶಿಸಬಲ್ಲೆ. ಘ೦ಟೆ ನಿಜವಾಗೇ ಇರುತ್ತದೆ.'
ಗುರು: ಒ೦ದು ವೇಳೆ ನಿನ್ನ ಸ್ಪರ್ಶ ಸ೦ವೇದನೆ ನಷ್ಟವಾಗಿದ್ದಲ್ಲಿ.. ನಿನಗೆ ಮುಟ್ಟಲು ಕೇಳಲು ಕಾಣಲು, ರುಚಿಯನ್ನು ಆಸ್ವಾದಿಸುವಎಲ್ಲವನ್ನೂ ಕಳೆದುಕೊ೦ಡರೆ.. ಘ೦ಟೆಯ ಕಥೆಯೇನಾಗುವುದು?'

ಶಿಷ್ಯ ಗೊ೦ದಲಕ್ಕೀಡಾದ. ಗುರುವಿನ ವಾದದಲ್ಲಿ ತಿರುಳಿರುವುದನ್ನು ಗ್ರಹಿಸಿದ.
'ಈಗ' ಗುರು ನುಡಿದರು,
'ನಾವು ಈಗ ಎಲ್ಲ ಸ೦ದರ್ಭವನ್ನು ತಿರುಗುಮುರುಗು ಮಾಡೋಣ. ನೀನು ಒ೦ದು ಹೆಣವಿದ್ದ೦ತೆ.. ಯಾವುದನ್ನೂ ಗ್ರಹಿಸುವಸಾಮರ್ಥ್ಯ ಕಳೆದುಕೊ೦ಡಿದ್ದೀಯೆ. ನಾನು ನಿನಗೆ ಒ೦ದೇ ಒ೦ದು ಇ೦ದ್ರಿಯವನ್ನು ಅನುಗ್ರಹಿಸುವೆ. ಸ್ಪರ್ಶ ಜ್ಞಾನ. ಘ೦ಟೆಯನ್ನುನೀನು ಮುಟ್ಟುವೆ. ಅದು ನಿನಗೆ ಸತ್ಯವಾಯಿತು. ನಾನು ನಿನಗೆ ಇನ್ನೊ೦ದು ಇ೦ದ್ರಿಯವನ್ನು ಅನುಗ್ರಹಿಸುವೆ. ನೀನೀಗ ಘ೦ಟೆಯನಾದ ಕೇಳಬಲ್ಲೆ. ಹೇಳು, ಆದ್ದರಿ೦ದ ಘ೦ಟೆ ಇನ್ನೂ 'ಹೆಚ್ಚಿನ' ಸತ್ಯವಾಯಿತೇ? ನಿನ್ನ ಕಣ್ಣುಗಳನ್ನೂ ನಿನಗೆ ಮರಳಿಸುವೆ. ಘ೦ಟೆ ಇನ್ನೂ ಹೆಚ್ಚಿನ ಸತ್ಯವಾಯಿತೇ? ನಾನು ನಿನಗೆ ಎಲ್ಲ ಐದು ಇ೦ದ್ರಿಯಗಳನ್ನೂ ಮರಳಿಸುವೆ. ಘ೦ಟೆ ನಿನ್ನ ಪ್ರಕಾರಪರಿಪೂರ್ಣ ಸತ್ಯವಾಯಿತು! ಒಪ್ಪುವೆಯಾ?'

ಶಿಷ್ಯ ತಡವರಿಸಿಕೊ೦ಡೇ ಹೌದೆ೦ದು ತಲೆಯಲ್ಲಾಡಿಸಿದ.

'ಎ೦ಥಾ ಅಸ೦ಭದ್ಧತೆ ಹಾಗೂ ವ್ಯರ್ಥ! ಗುರು ಆಶ್ಚರ್ಯಚಕಿತನಾಗಿ ನುಡಿದರು,
ಅಲ್ಲಿ ಕೇವಲ ಐದು ಇ೦ದ್ರಿಯಗಳು ಮಾತ್ರ ಇವೆ ಎ೦ದು ನೀನು ಹೇಗೆ ಭಾವಿಸುವೆ? ಒ೦ದು ವೇಳೆ ನಾನು ನಿನಗೆ ಆರನೆಯಇ೦ದ್ರಿಯವನ್ನು ನೀಡಿದಲ್ಲಿ ನಿನ್ನ ಘ೦ಟೆಯ ನಿಜತ್ವಕ್ಕೆ ಒ೦ದು ಹೊಚ್ಚ ಹೊಸ ಆಯಾಮ ಸ೦ದುತ್ತದೆಯೋ? ಒ೦ದು ವೇಳೆನಾನು ಏಳನೆಯ.. ಹತ್ತನೆಯ... ಸಾವಿರದ ಗ್ರಹಿಕೆಯ ಇ೦ದ್ರಿಯವನ್ನು ದಯಪಾಲಿಸಿದರೆ? ಘ೦ಟೆಯು ಯಾವ ರೂಪಾ೦ತರಹೊ೦ದಬಹುದು? ಸಾವಿರದ ವಿಧವಿಧದ ಇ೦ದ್ರಿಯಗಳನ್ನು ಹೊತ್ತು ಈಗಿನ ಘ೦ಟೆಯ ಸ್ವರೂಪವನ್ನು ಈಗಿನ ಹಾಗೆಯೇಸ್ವೀಕರಿಸಬಲ್ಲೆಯಾ? ಅಲ್ಲಿಗೂ, ಹಾಗಾದಾಗ್ಯೂ ನೀನು ಗ್ರಹಿಸಿರುವ ನಿನ್ನ ಘ೦ಟೆಯ ಸತ್ಯವನ್ನು ಪರಿಪೂರ್ಣತೆಯೆ೦ದುಹೇಳಲಾಗುವುದಿಲ್ಲ.
ಶಿಷ್ಯ ಮೌನದ ಅರ್ಥದಲ್ಲಿ ಶರಣಾಗತನಾದ.
'ನನ್ನ ಶಿಷ್ಯನೇ,' ಗುರು ನುಡಿದರು.

"ಯಾವುದು ಇ೦ದ್ರಿಯಗಳ ಸಾಮ್ರಾಜ್ಯಕ್ಕೆ ಸೇರಿದೆಯೋ ಆಲೋಚನೆಯನ್ನೂ ಒಳಗೊ೦ಡ೦ತೆ ಅದು "ಇದು (ಇದಮ್). ಯಾವುದು ಇ೦ದ್ರಿಯಾತೀತವೋ ಅದೇ "ಅದು " ವೇದಾ೦ತವೆಲ್ಲವೂ "ಇದು ಅದು" ಸ೦ಬ೦ಧಪಟ್ಟಿದ್ದೇ ಆಗಿದೆ. ಉಪನಿಷತ್ತಿನಲ್ಲಿ ಬರುವ ಪೀಠಿಕೆಯೂ ಇದೇ ಅಗಿದೆ
ಇದು ಪೂರ್ಣ. ಅದು ಪೂರ್ಣ. ಪೂರ್ಣ ಪೂರ್ಣದಿ೦ದಲೇ ಉದ್ಭವ. ಪೂರ್ಣವನ್ನು ಪೂರ್ಣದಿ೦ದ ಕಳೆದಾಗ ಅಲ್ಲಿ ಉಳಿಯುವುದೂಪೂರ್ಣವೇ."
ಗುರು ಮು೦ದುವರೆದು ಹೇಳಿದರು.

ನಿನ್ನ ಸೀಮಿತ ಇ೦ದ್ರಿಯಗಳಿ೦ದ ಗ್ರಹಿಸಲಾರನೆ೦ದು ದೇವರಿಲ್ಲವೆ೦ದು ತಿರಸ್ಕರಿಸಬೇಡ. ದೇವರು 'ಅದು ತತ್'. ಅವನು 'ಇದೂ' ಸಹ. ನಿನ್ನ ಅರಿವಿನ ಮಿತಿಗಳನ್ನು ಅರಿತುಕೊ೦ಡಾಗ ಬೌದ್ಧಿಕ ನಮ್ರತೆ ಹುಟ್ಟುವುದು. ವಿನಯದಿ೦ದ ಜನಿಸಿದ ವಿವೇಕದ ಅಡಿಗಲ್ಲಮೇಲೆ ನ೦ಬಿಕೆಯನ್ನು ಪ್ರತಿಷ್ಠಾಪಿಸಲಾಗುವುದು. ನಮ್ಮ ಸೀಮಿತ ಗ್ರಹಿಕೆಯ ಉಪಕರಣದಿ೦ದ ಗ್ರಹಿಸಿದ್ದು ಸತ್ಯದ ಒ೦ದುಅಣುವಿನಷ್ಟು. "ಅದು" ನಿನ್ನ ಕಲ್ಪನೆಗೂ ಅತೀತವಾದದ್ದು. ಏಕೆ೦ದರೆ ನಿನ್ನ ಕಲ್ಪನೆ ನೀನು ಗ್ರಹಿಸಿದ್ದರಲ್ಲೇ ಬೇರೂರಿರುವುದು.

ಅದಮ್ ತತ್ ಕ್ಷೇತ್ರದಲ್ಲಿ ಕಲ್ಪನೆ ಹೇಗೆ ವಿಫಲವಾಗುತ್ತದೆ ಎ೦ಬುದನ್ನು ಕಲ್ಪಿಸಿಕೊಳ್ಳಲು ದೇವರನ್ನು ವರ್ಣಿಸಲಾಗದು ಕಾರಣ ಎಲ್ಲವರ್ಣನೆಗಳೂ ಇದಮ್ ಇದು ಕ್ಷೇತ್ಯ್ರಕ್ಕೆ ಸ೦ಬ೦ಧಿಸಿದ್ದೇ ಆಗಿದೆ. ಅದಕ್ಕೇ ಅಲ್ಲಿ ಯಾವ ಅಚ್ಚರಿಯೂ ಇಲ್ಲ. ನಮ್ಮ ಋಷಿವರ್ಯರುದೇವರನ್ನು(ಬ್ರಹ್ಮನನ್ನು) ನಕಾರತ್ಮಕಾವಾಗಿ ನೇತಿ ನೇತಿ ಇದಲ್ಲ ಇದಲ್ಲ ಎ೦ದೇ ಹೇಳುತ್ತಾ ಹೋದರು. ಪ್ರತಿಯೊಬ್ಬ ಭಕ್ತನೂದೇವರನ್ನು ಅನುಭವಿಸಬಹುದು. ಆದರೆ ಅರ್ಹನಿಗೆ ಮಾತ್ರ ಭಗವ೦ತ ಸ೦ಪೂರ್ಣ ಸಾಕ್ಷಾತ್ಕಾರವಾಗುತ್ತಾನೆ.

ಮೂಲ: ಕೆ ಎಸ್ ರಾಮ್
ಅನುವಾದ: ಡಾ|| ಜ್ಞಾನದೇವ್ "

ಋಣಕರ್ತಾ ಪಿತಾ: ಶತ್ರು:

ಋಣಕರ್ತಾ ಪಿತಾ: ಶತ್ರು:|
ಮಾತಾ ಚ ವ್ಯಭಿಚಾರಿಣೀ|
ಭಾರ್ಯಾ ರೂಪವತೀ ಶತ್ರು:|
ಪುತ್ರ: ಶತ್ರುರಪಂಡಿತ:
||

ಸಾಲಗಾರನಾದ ತಂದೆ, ವ್ಯಭಿಚಾರಿಣಿಯಾದ ತಾಯಿ, ರೂಪವತಿಯಾದ ಪತ್ನಿ, ದಡ್ದ ಮಗ, ಈನಾಲ್ವರೂ ಶತ್ರುಗಳೇ.

ಸಂಪಾದನೆಗೆ ತಕ್ಕನಾದ ಜೀವನ ಮಾಡದೆ ಸಾಲಮಾಡಿ ಭೋಗಜೀವನ ನಡೆಸಿದ ತಂದೆ ಸಾಲ ತೀರಿಸದೆ ಸತ್ತರೆ ಆತ ಮಕ್ಕಳಿಗೆ ಶತ್ರುವಲ್ಲವೇ? ತಾಯಿಯ ಸ್ಥಾನ ಅತ್ಯಂತ ಹಿರಿದಾದುದು, ಆಕೆಯು ತನ್ನ ಮಕ್ಕಳೆದುರೇ ತಪ್ಪುದಾರಿ ಹಿಡಿದರೆ ಕೋಮಲ ಮನಸ್ಸಿನ ಮಕ್ಕಳ ಮನಸ್ಸಿನ ಮೇಲೆ ಎಂತಾ ಆಘಾತವಾಗುತ್ತದಲ್ಲವೇ? ಪತ್ನಿಗೆ ರೂಪ ಕೆಟ್ಟದಲ್ಲ, ಆದರೆ ರೂಪವತಿ ಹೆಣ್ಣಿನಮೇಲೆ ಪರಪುರುಷರ ಕಣ್ಣುಗಳು ಹೊಂಚುಹಾಕಿಯಾವು, ಅಂತಹ ಕಣ್ಣುಗಳಿಂದ ಹೆಣ್ಣಿನ ಮಾನ ಕಾಪಾಡುವುದು ಅತ್ಯಂತ ಜವಾಬ್ದಾರಿಯ ಕೆಲಸ. ಆದ್ದರಿಂದಲೇ ಪತಿ-ಪತ್ನಿಯರನ್ನು ಎಚ್ಛರಿಸಲು ಒಂದೇ ಮಾತಿನಲ್ಲಿ ಪೂರ್ವಜರು ಹೇಳಿದರು ಪತ್ನಿಗೆ ಅವಳ ರೂಪವೇ ಶತ್ರು. ಒಬ್ಬ ತಂದೆಗೆ ತನ್ನ ಮಗ ವಿದ್ಯಾವಂತನಾಗಿದ್ದರೆ ಅವನೇ ಆಸ್ತಿ, ಆದರೆ ದಡ್ದನಾದರೆ ಅವನೇ ಶತ್ರುವಲ್ಲವೇ?