Pages

Sunday, December 5, 2010

ಜೀವನ ಮತ್ತು ಬದುಕು ಎರಡೂ ಒಂದೇ ಅಲ್ಲ!

ಬದುಕಿಗೂ ಮತ್ತು ಜೀವನಕ್ಕೂ ಇರುವ ವ್ಯತ್ಯಾಸವನ್ನು, ಮುಕ್ತಿಗೂ ಮತ್ತು ಅಮರತ್ವಕ್ಕೂ ಇರುವ ಅಂತರವನ್ನು ಗ್ರಹಿಸದೇ ಹೋದಾಗ ಎಲ್ಲಗೊಂದಲಗಳು, ಮನುಷ್ಯನ ಮನಸ್ಸಿನಲ್ಲಿ, ಹಾಗೂ ಮೌಢ್ಯಗಳು. ಅವುಗಳನ್ನೇ ಮಕ್ಕಳಿಗೆ ಪಾಠ ಒಪ್ಪಿಸುವುದಾಗುತ್ತದೆ. ಇಂದಿಗೂ ಬಹಳಷ್ಟು ಮಂದಿಗೆ ಬದುಕು ಮತ್ತು ಜೀವನ ಎರಡೂ ಒಂದೇ ಎಂದು ಭಾವಿಸಿದ್ದಾರೆ. ಜೀವನ ನಶ್ವರ ಎಂದು ಯಾರು ಹೇಳಿದರೋ ಅದು ಸರಿಯಲ್ಲ. ಬದುಕು ನಶ್ವರ. ಜೀವಿಸುವುದಕ್ಕಾಗಿ ನಾವು ಬದುಕುವುದಲ್ಲವೇ? ಅದ್ಯಾವಾಗ ಜೀವ ಹೋಗುತ್ತದೋ ಯಾರಿಗೂ ಗೊತ್ತಿಲ್ಲ. ಆಗ ಬದುಕು ಇರುವುದಿಲ್ಲ
.
ಜೀವ ಈ ಶರೀರವನ್ನು ತ್ಯಜಿಸಿ ಹೋಗುತ್ತದೆ. ಅದು ಪುನರ್ಜನ್ಮ ಪಡೆಯ ಬಹುದಾಗಿದೆ; ಅದೆಂದಿಗೂ ಶಾಶ್ವತ ಅಥವಾ ಅಮರ.
ಜೀವವು ಸತ್ಯ ಸುಂದರ, ಹಾಗೆಯೇ ಈ ಜೀವನವೂ ಕೂಡ. ಇಂಥ ಅಮೂಲ್ಯ ಜೀವನವನ್ನು ಅನುಭವಿಸುವುದಕ್ಕಾಗಿಯೆ ನಾವು ಧೀರ್ಘಾಯುಷಿಗಳಾಗಿ ಬದುಕಲು ಪ್ರಯತ್ನಿಸಬೇಕು.

ಶಾಶ್ವತ ಮುಕ್ತಿಗಾಗಿ ಎಂದು ಯಾರು ಹೇಳಿದರೂ ಅದು ಸರಿಯಲ್ಲ. ಮುಕ್ತಿ ಎಂಬುದು ಈ ಶರೀರದಿಂದ ಬಿಡುಗಡೆಯಷ್ಟೇ. ಅದೇ ಶಾಶ್ವತ ಹೇಗಾದೀತು!
ನಾವು ಸತ್ಯಸುಂದರವಾದ ಈ ಪ್ರಪಂಚದಲ್ಲಿ ಜೀವಿಸುತ್ತೇವೆ.( We are living in this finite world) .
ನಮ್ಮಈ ಬದುಕು ನಮಗೆ ಬಂಧುರವಾಗಲು, ಅಷ್ಟೇ ಸುಧೀರ್ಘವಾಗಲು ನಿತ್ಯವೂ ಪ್ರಯತ್ನಿಸಬೇಕು.
ಇಲ್ಲಿಂದ ಮುಕ್ತರಾಗಿ ಅಮರತ್ವವನ್ನು ಹೊಂದಬೇಕು .( from this finite to infinite). ಅಂಥ ಮಹತ್ತರವಾದ ಸದಾಶಯ ನಮ್ಮದಾಗಬೇಕಲ್ಲವೇ..

2 comments:

  1. ಖಂಡಿತವಾಗಿಯೂ ಗೊಂದಲ ಹುಟ್ಟಿಸುತ್ತಿದೆ. ಯಾವುದು ಅಮರ, ಯಾವುದು ಮುಕ್ತಿ, ಯಾವುದು ನಶ್ವರ.. ನೀವು ಎನನ್ನು ಹೇಳಲು ಬಯಸಿದ್ದೀರಿ? ಸಂಪೂರ್ಣ ಗೊಂದಲಮಯವಾಗಿದೆ.

    ReplyDelete
  2. ಈ ಜೀವನದಲ್ಲಿ ನಾವು ಜೀವಿಸಿರುವುದಷ್ಟೇ. ಇಲ್ಲಿ ನಾವು ಬದುಕಿರುವವರೆಗೆ ಇದು ನಮ್ಮ ಜೀವನವಷ್ಟೇ. ಅಂದಮೇಲೆ ಇನ್ನೇನು?
    ಬದುಕು ನಶ್ವರವೇ..
    ಹಾಗಾದರೆ ನಾವು ಯಾಕಾಗಿ ಬದುಕುವುದು? ಇಲ್ಲಿ ಹುಟ್ಟಿದ್ದೇವೆ; ಜೀವಿಸಲಿಕ್ಕಾಗಿ, ಜೀವದಿಂದ ಇರಲಿಕ್ಕಾಗಿ.
    ಅದಕ್ಕೇ ಹಿರಿಯರು ಹೇಳಿದ್ದು "ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ."
    ಹೀಗೂ ಹೇಳುತ್ತಾರೆ, ಹೇಗಾದರೂ ಬದುಕು ಒಳ್ಳೆಯ ರೀತಿಯಲ್ಲಿ ಬದುಕು. ಇಲ್ಲಿ ನಾವು ನಮ್ಮ ನೆನಪನ್ನು ಉಳಿಸಿ ಹೋಗುವುದಷ್ಟೇ..
    ಸಾಧಕರು ಮಹತ್ವವಾದದ್ದನ್ನು ಉಳಿಸಿ ಅದರೊಂದಿಗೇ ಅವರೂ ಅಮರರಾಗುತ್ತಾರೆ.
    ಇಲ್ಲಿ ಜೀವಿಸುವುದಕ್ಕಾಗಿ ನಾವು ಬದುಕುವುದಷ್ಟೇ. ಆದ್ದರಿಂದ, ಬದುಕು ಶಾಶ್ವತವಲ್ಲ.
    ನಾವು ಸತ್ತ ಮೇಲೂ ಅಂದರೆ ಇಲ್ಲಿಂದ ಮುಕ್ತರಾದಮೇಲೂ ಈ ಜೀವನ ಇರುತ್ತದೆ.
    "ಮುಕ್ತಿ" ಎಂದರೆ, ಜೀವನ್ಮುಕ್ತಿಯಷ್ಟೇ.
    ಆನಂತರ, ಮರುಜನ್ಮ ಪಡೆಯದಿದ್ದರೆ ಮಾತ್ರ ಅದು ಅಮರತ್ವ ಅಲ್ಲವೇ...?

    ReplyDelete