Pages

Friday, October 7, 2011

"ಈಶಾವಾಸ್ಯಮ್ "




 ಸತ್ಸಂಗಕ್ಕಾಗಿ ನನ್ನ ಮನೆಯ ಮೇಲೊ೦ದು ಹಾಲ್ ನಿರ್ಮಾಣ ಮಾಡಬೇಕೆಂಬ  ಮಹದಾಸೆ. ಭಗವಂತನ ಕೃಪೆಯಿಂದ ಅದು ನೆರವೇರಿದೆ. ಬರುವ ನವಂಬರ್ ೨ ರಂದು "ಈಶಾವಾಸ್ಯಮ್"  ಪ್ರವೇಶೋತ್ಸವವು ನಿಶ್ಚಯ ವಾಗಿದೆ. ಅಷ್ಟರಲ್ಲಿ ಅನಾಯಾಸವಾಗಿ ಲಭ್ಯವಾದ ಅವಕಾಶವನ್ನು ಉಪಯೋಗಿಸಿಕೊಳ್ಳ ಬಾರದೇಕೆ?  ಎಂಬ ಆಲೋಚನೆಯ ಪರಿಣಾಮ , ನಿನ್ನೆ ವಿಜಯದಶಮಿಯ ಶುಭ ದಿನ ದಂದು ಒಂದು  ದಿಢೀರ್ ಸತ್ಸಂಗವು ಅದೇ ಹಾಲ್ ನಲ್ಲಿ ನಡೆಯಿತು.  ಹಾಸನದ  ಶಂಕರ ಮಠಕ್ಕೆ ಪ್ರವಚನಕ್ಕಾಗಿ ಆಗಮಿಸಿದ್ದ ಬೆಂಗಳೂರು ಜೆ.ಪಿ.ನಗರ ಚಿನ್ಮಯಾ ಮಿಷನ್ನಿನ ಪೂಜ್ಯ ಕೃತಾತ್ಮಾ ನಂದರನ್ನು ನಮ್ಮ ನಿರ್ಮಾಣ ಹಂತದ ಸತ್ಸಂಗದ ಹಾಲ್ ಗೆ ಆಹ್ವಾನಿಸಿದೆ. ಪೂಜ್ಯರು ಸಂತೋಷದಿಂದ ಆಗಮಿಸಿ ಸತ್ಸಂಗವನ್ನು ನಡೆಸಿ ಕೊಟ್ಟರು. ಅದರ ಕೆಲವು ದೃಶ್ಯಗಳು ಇಲ್ಲಿವೆ. 

2 comments: