Pages

Saturday, January 15, 2011

ವೇದಸುಧೆ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಬೆಂಗಳೂರಿನ ಅಭಿಮಾನಿಗಳ ಗಮನಕ್ಕಾಗಿ

ವೇದಸುಧೆವಾರ್ಷಿಕೋತ್ಸವವು ನಡೆಯುವ ದಿನ 30.01.2011 ರಂದು ಭಾನುವಾರ ಬೆಳಗ್ಗೆ 5.30 ರ ಸುಮಾರಿಗೆ ಬೆಂಗಳೂರಿನಿಂದ ಹೊರಟು ಹಾಸನವನ್ನು 9.00 ಗಂಟೆಗೆ ತಲುಪನುಕೂಲವಾಗುವಂತೆ ಒಂದು ವಾಹನದ ವ್ಯವಸ್ಥೆ ಮಾಡಬೇಕೆಂಬ ಯೋಜನೆ ಇದೆ. ವಾಹನವು ಯಾವುದಾಗಿರಬೇಕೆಂಬುದು ಹೊರಡುವ ಸಂಖ್ಯೆಯನ್ನು ಅವಲಂಭಿಸಿದೆ. ಹಾಗೊಂದು ವೇಳೆ ಬೆಂಗಳೂರಿನಿಂದ ವಾಹನವು ಹೊರಟರೆ  ಬಸವನಗುಡಿ, ವಿಜಯನಗರ ಮತ್ತು ಇನ್ನೊಂದೆರಡು ಪಿಕ್ ಅಪ್ ಪಾಯಿಂಟ್ ಗಳನ್ನು ಗುರುತಿಸಿ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗುವುದು. ಸಮಾರಂಭವು ಮುಗಿದ ಮೇಲೆ ಹೊರಟು ಬೆಳಿಗ್ಗೆ ಬೆಂಗಳೂರಿನಲ್ಲಿಪಿಕ್ ಅಪ್ ಮಾಡಿದ ಸ್ಥಳಗಳಿಗೆ ರಾತ್ರಿ  ಡ್ರಾಪ್ ಮಾಡುವ ಉದ್ಧೇಶವಿದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ಅಯ್ಯಪ್ಪಸ್ವಾಮಿ ಯಾತ್ರೆಗಾಗಿ  ವಾಹನಗಳು ಬಾಡಿಗೆಗೆ ಹೋಗುವುದರಿಂದ ಆದಷ್ಟು ಬೇಗ ನಮ್ಮ ಈ  ಪ್ರವಾಸಯೋಜನೆ ಫಿಕ್ಸ್ ಆಗಬೇಕು.ಇಲ್ಲವಾದರೆ ಸ್ವಂತ ವಾಹನದಲ್ಲೋ ಸರ್ಕಾರಿ ಬಸ್ ನಲ್ಲೋ ಹೊರಡಬೇಕಾಗುತ್ತದೆ. ಸಾಮೂಹಿಕವಾಗಿ ಒಂದು ಮಿನಿ ಬಸ್ ನಲ್ಲೋ ಅಥವಾ ಸಂಖ್ಯೆ ಹೆಚ್ಚಾದರೆ ದೊಡ್ದ ಬಸ್ ನಲ್ಲೋ ಹೊರಟರೆ ಎಲ್ಲರ ಪರಿಚಯ, ಮಾತುಕತೆ, ಹರಟೆ, ವಿಚಾರ ವಿನಿಮಯಕ್ಕೆ ಅವಕಾಶಗಳಿರುತ್ತದೆ. ಆದ್ದರಿಂದ ಬೆಂಗಳೂರಿನಿಂದ ಹೊರಡುವ  ಅಭಿಮಾನಿಗಳು  ಇಲ್ಲಿ ಪ್ರತಿಕ್ರಿಯೆ ಬರೆಯುವುದರ ಮೂಲಕ ಅಥವಾ ಕೆಳಗಿನ ಫೋನ್ ನಂಬರುಗಳಿಗೆ ದಿನಾಂಕ 20.01.2011 ರೊಳಗಾಗಿ ಕರೆಮಾಡಿ ತಿಳಿಸಬೇಕಾಗಿ ಕೋರುವೆ.
ಈಗಾಗಲೇ ವೇದಸುಧೆಯ ಗಮನಕ್ಕೆ ಬಂದಿರುವಂತೆ ಹಾಸನಕ್ಕೆ ಕುಟುಂಬ ಸಹಿತರಾಗಿ  ಹೊರಟಿರುವ ಅಭಿಮಾನಿಗಳ ಪಟ್ಟಿ
೧] ವೇದಾಧ್ಯಾಯೀ ಸುಧಾಕರ ಶರ್ಮ
೨] ಶ್ರೀ ವಿಷ್ಣುಭಟ್ 
೩] ಶ್ರೀ ವಿಶಾಲ್ 
೪] ಜಗದೀಶ್
೫] ಎಂ.ಡಿ.ಎನ್ ಪ್ರಭಾಕರ್ 
೬] ಶ್ರೀ ಹರೀಶ್ ಆತ್ರೇಯ
೭] ಶ್ರೀಮತಿ ಚಿತ್ರ ಮತ್ತು ಶ್ರೀ ಪ್ರಸನ್ನ
೮] ಶ್ರೀ ಕೃಷ್ಣಮೂರ್ತಿ
೯] ಡಾ|| ವಿವೇಕ್
೧೦] ಶ್ರೀ ದಕ್ಷಿಣಾಮೂರ್ತಿ

ಸಂಪರ್ಕಿಸಲು ದೂರವಾಣಿ:
ಶ್ರೀಸುಧಾಕರಶರ್ಮ: 9448842474 / 08022421950
ಶ್ರೀ ವಿಶಾಲ್:   9880455251
ಶ್ರೀ ಹರಿಹರಪುರಶ್ರೀಧರ್:  9663572406/ 08172250566
ಮೇಲ್ ಮೂಲಕ ಕೂಡ ನಿಮ್ಮೊಡನೆ  ಹಾಸನಕ್ಕೆ ಬರುವವರ ವಿವರವನ್ನು ದಿನಾಂಕ 20.01.2011 ರೊಳಗೆ ನೀಡಬಹುದಾಗಿದೆ.
ನಮ್ಮ ಮೇಲ್ ವಿಳಾಸ:  vedasudhe@gmail.com

5 comments:

  1. ಹಾಸನದಲ್ಲಿ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಆತ್ಮೀಯರಾದ ಶ್ರೀಮತಿ ರೂಪ,ಇವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಿಂದ ಅವರ ಅತ್ತೆಯವರೊಡನೆ ಹೊರಟಿದ್ದಾರೆ. ಅವರಿಗೆ ಮಡಿವಾಳ ಹತ್ತಿರ ವಾಗಬಹುದು. ಅಲ್ಲಿಂದ ಪಿಕ್ ಅಪ್ ಮಾಡಲು ಸಾಧ್ಯವೇ? ಅಂತೆಯೇ ಈಗಾಗಲೇ ಹೊರಟಿರುವವರು ಆದಷ್ಟು ಬೇಗ ಸಮಾಲೋಚಿಸಿ ನಿರ್ಧರಿಸುವುದು ಉತ್ತಮ.

    ReplyDelete
  2. ಬೆಂಗಳೂರಿನಿಂದ ಹೊರಡಲಿರುವವರ ಪೈಕಿ ಒಬ್ಬರು/ಇಬ್ಬರು ಈ ವಿಚಾರದಲ್ಲಿ ನೇತೃತ್ವ ವಹಿಸಿಕೊಂಡರೆ ಒಳ್ಳೆಯದೆಂದು ಅನ್ನಿಸುವುದು. ಸ್ವಪ್ರೇರಣೆಯಿಂದ ಯಾರಾದರೂ ಮುಂದೆ ಬರುವರೇ? ಅನುಕೂಲದ ದೃಷ್ಟಿಯಿಂದ ಮತ್ತು ವಾಪಸು ಸ್ವಂತ ನೆಲೆಗಳಿಗೆ ತಲುಪುವ ದೃಷ್ಟಿಯಿಂದ ಶ್ರೀಧರರ ಸಲಹೆ ಸಮಯೋಚಿತವಾಗಿದೆ. ಸ್ವಂತ ವಾಹನಗಳಲ್ಲಿ ಬರುವವರು ಅವರ ವಾಹನಗಳಲ್ಲಿ ಸ್ಥಳವಿದ್ದರೆ ಇತರ ಆಸಕ್ತರನ್ನು ಕರೆತರುವ ಕುರಿತೂ ಯೋಚಿಸಬಹುದು.

    ReplyDelete
  3. ಕಾರಣಾಂತರಗಳಿಂದ ನನ್ನ ನೇತೃತ್ವ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನ್ಯಥಾ ಭಾವಿಸದೇ ಕ್ಷಮಿಸಿ, ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸುವೆ.

    ReplyDelete
  4. ನೀವು ಕೃಪೆಮಾಡಿ ಬರಬೇಕು, ಬಹಳ ದಿನಗಳಿಂದ ಕಾಣುತ್ತಿರಲಿಲ್ಲ.ಬಹಳ ಜನ ಬ್ಲಾಗಿಗರು ಬರುವವರಿದ್ದಾರೆ. ನೀವು ಬಂದರೆ ತುಂಬಾ ಸಂತೋಷವಾಗುತ್ತೆ.

    ReplyDelete