Pages

Saturday, September 10, 2016

ಸಂಪಾದಕೀಯ

             ವೇದಸುಧೆಯ ಅಭಿಮಾನೀ ಮಿತ್ರರೇ, ಕಳೆದ ಆರೇಳು ವರ್ಷಗಳ ಹಿಂದೆ  ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ  ಆರಂಭವಾದ " ವೇದಸುಧೆ"  ಆರಂಭದ ದಿನಗಳಲ್ಲಿ  ಶ್ರೀ ಸುಧಾಕರ ಶರ್ಮರ ಆಡಿಯೋ /ವೀಡಿಯೋ ಗಳನ್ನು ಸಾಕಷ್ಟು ಪ್ರಕಟಿಸಿ ಜನರಲ್ಲಿ ವೇದದ ಅರಿವು ಮೂಡಿಸುವಂತಹ ಕೆಲಸಗಳನ್ನು ಸುಮಾರು ನಾಲ್ಕೈದು ವರ್ಷ ಮಾಡಿತು. ಆನಂತರದಲ್ಲಿ ಶರ್ಮರ ಆರೋಗ್ಯವೂ ಸ್ವಲ್ಪ ಕಮ್ಮಿಯಾಯ್ತು. ಅವರ ಪ್ರವಾಸ ಕಮ್ಮಿಯಾಯ್ತು. ಸಂಪರ್ಕ ಮುಂಚಿನಂತೆ ಹೆಚ್ಚು ಮಾಡುವುದು ಕಷ್ಟವಾಯ್ತು. ನಂತರದ ದಿನಗಳಲ್ಲಿ ವೇದಭಾರತಿಯ ಚಟುವಟಿಕೆಗಳನ್ನು ಹೆಚ್ಚು ಪ್ರಕಟಿಸುತ್ತಾ ವೇದಸುಧೆ ಮುಂದುವರೆಯಿತು.
Facebook  ನಲ್ಲಿ ಬರೆಯುವುದು ಆರಂಭವಾದಮೇಲೆ ಬ್ಲಾಗ್ ನಲ್ಲಿ ಬರೆಯುವುದೂ ಕಷ್ಟವಾಯ್ತು. ಕಳೆದ ಒಂದು ವರ್ಷದಿಂದ Face book ನಲ್ಲೇ ಎಲ್ಲಾ ಚಟುವಟಿಕೆಗಳನ್ನೂ ಪೋಸ್ಟ್ ಮಾಡುತ್ತಾ ಬ್ಲಾಗ್ ನಲ್ಲಿ ಹೆಚ್ಚು ಬರೆಯಲಾಗಲಿಲ್ಲ. ಆದರೆ "ವೇದಸುಧೆ" ಯು ತನ್ನದೇ ಆದ ಮಹತ್ವ ಪಡೆದಿದೆ.

ಇನ್ನುಮುಂದೆ ವೇದಭಾರತಿಯ ಮತ್ತು ಪತಂಜಲಿ ಯೋಗ ಪರಿವಾರದ ಚಟುವಟಿಕೆಗಳನ್ನು ವೇದಸುಧೆಯು ನಿರಂತರ ಪ್ರಕಟಿಸುವುದು. ಹೊಸದಾಗಿ ಲೇಖಕರಾಗಲು ಒಪ್ಪಿರುವ ಶ್ರೀ ಗುರುದತ್ತ ವಿದ್ಯಾರ್ಥಿಯವರು   "ಪತಂಜಲಿ ಪರಿವಾರ  ಕರ್ನಾಟಕ " ಚಟುವಟಿಕೆ ಗಳನ್ನು ಪ್ರಕಟಿಸುವರು. ಅವರಿಗೆ ವೇದಸುಧೆಯ ಸ್ವಾಗತ.

1 comment: