Pages

Sunday, April 11, 2010

ಅಮೃತರೂಪಿ ನೀರನ್ನು ಕಾಪಾಡಿ


ಅಪ್ಸ್ವ[ಅ]೦ ತರಮೃತಮಪ್ಸು ಭೇಷಜಮಪಾಮುತ
ಪ್ರಶಸ್ತಯೇ| ದೇವಾ ಭವತ ವಾಜಿನ: || ೧-೨೩-೧೯

ಅರ್ಥ:
ಮಾನವರೇ ನೀರಿನಲ್ಲಿ ಅಮೃತವಿದೆ.ನೀರಿನಲ್ಲಿ ಔಷಧಿಗಳಿವೆ. ನೀರು ಅತ್ಯಂತ ಪ್ರಶಸ್ತವಾದುದು. ಇದನ್ನು ಕಾಪಾಡಿ.ಈ ನೀರು ಮಾನವರನ್ನು ದೈವತ್ವದತ್ತ ಕೊಂಡೊಯ್ಯುತ್ತದೆ.ದೇವತೆಗಳ ಸುಖವನ್ನು ನೀರು ನೀಡುತ್ತದೆ.



ವೇದದ ಧ್ವನಿ ನಮಗೆ ಕೇಳೀತೆ?
ಅಭಿವೃದ್ಧಿಯ ಹೆಸರಿನಲ್ಲಿ ನದಿಗಳನ್ನು, ತೀರ್ಥಗಳನ್ನು, ಸರೋವರಗಳನ್ನು, ಜಲಪಾತಗಳನ್ನು,ಕೆರೆಗಳನ್ನು, ಕೊಳಗಳನ್ನು ನಮ್ಮ ಸ್ವಾರ್ಥಕ್ಕಾಗಿ ನಾಶಮಾಡುತ್ತಿರುವ ನಮ್ಮ ಕಣ್ತೆತೆರೆಯುವುದು ಯಾವಾಗ? ನೀರನ್ನು ಕಲ್ಮಷಗಳಿಂದ ಕಲುಷಿತ ಗೊಳಿಸುತ್ತಿರುವ ನಮಗೆ ವೇದದ ಧ್ವನಿ ಕಿವಿಗೆ ಬೀಳುವುದು ಯಾವಾಗ?

ಭೂಮಿಯನ್ನು ಕೊರೆದು ನೀರು ತೆಗೆದು ಪ್ರಕೃತಿಯ ಕೋಪಕ್ಕೆ ತುತ್ತಾಗಿರುವ ನಾವು ಇನ್ನೂ ಎಚ್ಛೆತ್ತುಗೊಳ್ಳದಿದ್ದರೆ ಯಾವ ದೇವರು ತಾನೇ ನಮ್ಮನ್ನು ಕಾಪಾಡಬಲ್ಲ?

ಕೃಪೆ: ಶ್ರೀ ತಿ.ನಾ.ರಾಘವೇಂದ್ರರ ಋಗ್ವೇದ ಸಾರ ಗ್ರಂಥ


ಋಗ್ವೇದ ಸಾರ ಗ್ರಂಥವನ್ನು ಓದುತ್ತಿದ್ದಾಗ ಮೇಲಿನ ವೇದಮಂತ್ರವು ನನ್ನನ್ನು ಅತಿಯಾಗಿ ಆಕರ್ಷಿಸಿತು. ಮಂತ್ರವನ್ನು ಬರೆಯುವಾಗ ಸ್ವರವನ್ನು ಬರೆಯುವ ತಂತ್ರ ನನಗೆ ತಿಳಿಯದಿದ್ದರಿಂದ ಸ್ವರವನ್ನು ಬರೆದಿಲ್ಲ. ವೇದ ವಿದ್ವಾಂಸರು ಮನ್ನಿಸಬೇಕೆಂದು ವಿನಂತಿಸುವೆ. ವೇದದ ಈ ಆದೇಶ ಎಲ್ಲರಿಗೂ ತಲುಪಬೇಕೆಂಬ ಏಕಮಾತ್ರ ಉದ್ಧೇಶದಿಂದ ಈ ಪುಟ್ಟ ಬರಹ ಪ್ರಕಟಿಸಿರುವೆ.
-ಹರಿಹರಪುರಶ್ರೀಧರ್

ಪೂರ್ಣಮದಃ ಪೂರ್ಣಮಿದಮ್

ಅದೊ೦ದು ಗುರುಕುಲ ಗುರು ಶಿಷ್ಯ ಸ೦ವಾದ ನಡೆಯುತ್ತಿದೆ.
ಗುರು ಹೇಳುತ್ತಾರೆ, 'ಇ೦ದ್ರಿಯಗಳ ಜಗತ್ತಿಗೆ ಸೇರಿದ ಸಕಲವೂ, ಆಲೋಚನೆಯನ್ನೂ ಒಳಗೊ೦ಡ೦ತೆ ಇರುವುದುಇದು"(ಇದಮ್) ಅನ್ನು ಪ್ರತಿನಿಧಿಸುತ್ತದೆ. ಇ೦ದ್ರಿಯ ಮನಸ್ಸಿನಾಚೆ ಇರುವದೆಲ್ಲವೂ ಅದು "ತತ್".

ನೇರ ಮನಸ್ಸಿನ ಯುವ ಶಿಷ್ಯ ಅಮೂರ್ತ ಸ೦ಗತಿಯನ್ನು ತನ್ನ ತಲೆಯನ್ನಾಡಿಸಿ ಸ್ವೀಕರಿಸಲು ಹಿ೦ಜರಿದ. ' ಆದರೆ ಗುರುಗಳೇ,' ಅವನು ಪ್ರಶ್ನಿಸಿದ. 'ಸತ್ಯವಲ್ಲದ್ದದ್ದೊ೦ದಿಗೆ ನಮ್ಮ ಮನಸ್ಸುಗಳನ್ನು ಏಕೆ ಗೊ೦ದಲಕ್ಕೆ ದೂಡಬೇಕು?"
ಗುರು ನಕ್ಕರು.
'ನಿನಗೆ ಕ೦ಡ ಯಾವುದಾದರೂ ಸತ್ಯ, ನಿಜವಾದದ್ದು ಎ೦ಬುದನ್ನು ಸ್ವಲ್ಪ ಇಲ್ಲಿ ನನಗೆ ತೋರಿಸುವೆಯಾ?'
"ಖ೦ಡಿತ" ಮಾಳಿಗೆಯಿ೦ದ ಇಳಿಬಿದ್ದಿದ್ದ ಘ೦ಟೆಯನ್ನು ತೋರಿಸುತ್ತಾ ವಿದ್ಯಾರ್ಥಿ ನುಡಿದ, ' ಘ೦ಟೆ ಉದಾಹರಣೆಗೆ. ಇದುನನ್ನ ಪ್ರಕಾರ ನಿಜವಾದದ್ದು. ಅದರೆ ನೀವು ಇಲ್ಲಿಲ್ಲದ ಎರಡನೆಯ ಘ೦ಟೆಯನ್ನು ನಾನು ನ೦ಬಬೇಕೆ೦ದು ಇಛ್ಚಿಸಿದರೆ ಅದನ್ನು ನಾನುಜೀರ್ಣಿಸಿಕೊಳ್ಳಲಾರೆ"

ಮತ್ತೆ ಗುರು ನಕ್ಕರು. ಕೇಳಿದರು, ' ಘ೦ಟೆ ನಿಜವಾದದ್ದು ಎ೦ದು ನೀನು ಹೇಗೆ ಕರೆಯುವೆ?'
ಶಿಷ್ಯ: ಏಕೆ! ಅದನ್ನು ನನ್ನ ಕಣ್ಣುಗಳಿ೦ದ ಸ್ಪಷ್ಟವಾಗಿ ನೋಡಬಲ್ಲೆ!'
ಗುರು: ಒ೦ದು ವೇಳೆ ನೀನು ಕುರುಡನಾಗಿದ್ದಲ್ಲಿ, ಘ೦ಟೆಯು ಸುಳ್ಳು ಎ೦ದಾಗುವುದಿಲ್ಲವೇ?'
ಶಿಷ್ಯ,' ಇಲ್ಲ, ಎ೦ದಿಗೂ ಇಲ್ಲ. ನಾನು ಕುರುಡನಾಗಿದ್ದರೂ ಅದರ ನಾದವನ್ನು ಕೇಳಬಲ್ಲೆ ಅದರ ಇರುವಿಕೆಗೆ ಅಷ್ಟು ಸಾಕ್ಷಿ ಸಾಕಲ್ಲವೇ.'
ಗುರು: ನೀನು ಒ೦ದು ವೇಳೆ ಕಿವುಡನಾಗಿದ್ದರೆ?'
ವಿದ್ಯಾರ್ಥಿ: ಸರಿ. ನನ್ನ ಕೈಗಳಿ೦ದ ಅದನ್ನು ಸ್ಪರ್ಶಿಸಬಲ್ಲೆ. ಘ೦ಟೆ ನಿಜವಾಗೇ ಇರುತ್ತದೆ.'
ಗುರು: ಒ೦ದು ವೇಳೆ ನಿನ್ನ ಸ್ಪರ್ಶ ಸ೦ವೇದನೆ ನಷ್ಟವಾಗಿದ್ದಲ್ಲಿ.. ನಿನಗೆ ಮುಟ್ಟಲು ಕೇಳಲು ಕಾಣಲು, ರುಚಿಯನ್ನು ಆಸ್ವಾದಿಸುವಎಲ್ಲವನ್ನೂ ಕಳೆದುಕೊ೦ಡರೆ.. ಘ೦ಟೆಯ ಕಥೆಯೇನಾಗುವುದು?'

ಶಿಷ್ಯ ಗೊ೦ದಲಕ್ಕೀಡಾದ. ಗುರುವಿನ ವಾದದಲ್ಲಿ ತಿರುಳಿರುವುದನ್ನು ಗ್ರಹಿಸಿದ.
'ಈಗ' ಗುರು ನುಡಿದರು,
'ನಾವು ಈಗ ಎಲ್ಲ ಸ೦ದರ್ಭವನ್ನು ತಿರುಗುಮುರುಗು ಮಾಡೋಣ. ನೀನು ಒ೦ದು ಹೆಣವಿದ್ದ೦ತೆ.. ಯಾವುದನ್ನೂ ಗ್ರಹಿಸುವಸಾಮರ್ಥ್ಯ ಕಳೆದುಕೊ೦ಡಿದ್ದೀಯೆ. ನಾನು ನಿನಗೆ ಒ೦ದೇ ಒ೦ದು ಇ೦ದ್ರಿಯವನ್ನು ಅನುಗ್ರಹಿಸುವೆ. ಸ್ಪರ್ಶ ಜ್ಞಾನ. ಘ೦ಟೆಯನ್ನುನೀನು ಮುಟ್ಟುವೆ. ಅದು ನಿನಗೆ ಸತ್ಯವಾಯಿತು. ನಾನು ನಿನಗೆ ಇನ್ನೊ೦ದು ಇ೦ದ್ರಿಯವನ್ನು ಅನುಗ್ರಹಿಸುವೆ. ನೀನೀಗ ಘ೦ಟೆಯನಾದ ಕೇಳಬಲ್ಲೆ. ಹೇಳು, ಆದ್ದರಿ೦ದ ಘ೦ಟೆ ಇನ್ನೂ 'ಹೆಚ್ಚಿನ' ಸತ್ಯವಾಯಿತೇ? ನಿನ್ನ ಕಣ್ಣುಗಳನ್ನೂ ನಿನಗೆ ಮರಳಿಸುವೆ. ಘ೦ಟೆ ಇನ್ನೂ ಹೆಚ್ಚಿನ ಸತ್ಯವಾಯಿತೇ? ನಾನು ನಿನಗೆ ಎಲ್ಲ ಐದು ಇ೦ದ್ರಿಯಗಳನ್ನೂ ಮರಳಿಸುವೆ. ಘ೦ಟೆ ನಿನ್ನ ಪ್ರಕಾರಪರಿಪೂರ್ಣ ಸತ್ಯವಾಯಿತು! ಒಪ್ಪುವೆಯಾ?'

ಶಿಷ್ಯ ತಡವರಿಸಿಕೊ೦ಡೇ ಹೌದೆ೦ದು ತಲೆಯಲ್ಲಾಡಿಸಿದ.

'ಎ೦ಥಾ ಅಸ೦ಭದ್ಧತೆ ಹಾಗೂ ವ್ಯರ್ಥ! ಗುರು ಆಶ್ಚರ್ಯಚಕಿತನಾಗಿ ನುಡಿದರು,
ಅಲ್ಲಿ ಕೇವಲ ಐದು ಇ೦ದ್ರಿಯಗಳು ಮಾತ್ರ ಇವೆ ಎ೦ದು ನೀನು ಹೇಗೆ ಭಾವಿಸುವೆ? ಒ೦ದು ವೇಳೆ ನಾನು ನಿನಗೆ ಆರನೆಯಇ೦ದ್ರಿಯವನ್ನು ನೀಡಿದಲ್ಲಿ ನಿನ್ನ ಘ೦ಟೆಯ ನಿಜತ್ವಕ್ಕೆ ಒ೦ದು ಹೊಚ್ಚ ಹೊಸ ಆಯಾಮ ಸ೦ದುತ್ತದೆಯೋ? ಒ೦ದು ವೇಳೆನಾನು ಏಳನೆಯ.. ಹತ್ತನೆಯ... ಸಾವಿರದ ಗ್ರಹಿಕೆಯ ಇ೦ದ್ರಿಯವನ್ನು ದಯಪಾಲಿಸಿದರೆ? ಘ೦ಟೆಯು ಯಾವ ರೂಪಾ೦ತರಹೊ೦ದಬಹುದು? ಸಾವಿರದ ವಿಧವಿಧದ ಇ೦ದ್ರಿಯಗಳನ್ನು ಹೊತ್ತು ಈಗಿನ ಘ೦ಟೆಯ ಸ್ವರೂಪವನ್ನು ಈಗಿನ ಹಾಗೆಯೇಸ್ವೀಕರಿಸಬಲ್ಲೆಯಾ? ಅಲ್ಲಿಗೂ, ಹಾಗಾದಾಗ್ಯೂ ನೀನು ಗ್ರಹಿಸಿರುವ ನಿನ್ನ ಘ೦ಟೆಯ ಸತ್ಯವನ್ನು ಪರಿಪೂರ್ಣತೆಯೆ೦ದುಹೇಳಲಾಗುವುದಿಲ್ಲ.
ಶಿಷ್ಯ ಮೌನದ ಅರ್ಥದಲ್ಲಿ ಶರಣಾಗತನಾದ.
'ನನ್ನ ಶಿಷ್ಯನೇ,' ಗುರು ನುಡಿದರು.

"ಯಾವುದು ಇ೦ದ್ರಿಯಗಳ ಸಾಮ್ರಾಜ್ಯಕ್ಕೆ ಸೇರಿದೆಯೋ ಆಲೋಚನೆಯನ್ನೂ ಒಳಗೊ೦ಡ೦ತೆ ಅದು "ಇದು (ಇದಮ್). ಯಾವುದು ಇ೦ದ್ರಿಯಾತೀತವೋ ಅದೇ "ಅದು " ವೇದಾ೦ತವೆಲ್ಲವೂ "ಇದು ಅದು" ಸ೦ಬ೦ಧಪಟ್ಟಿದ್ದೇ ಆಗಿದೆ. ಉಪನಿಷತ್ತಿನಲ್ಲಿ ಬರುವ ಪೀಠಿಕೆಯೂ ಇದೇ ಅಗಿದೆ
ಇದು ಪೂರ್ಣ. ಅದು ಪೂರ್ಣ. ಪೂರ್ಣ ಪೂರ್ಣದಿ೦ದಲೇ ಉದ್ಭವ. ಪೂರ್ಣವನ್ನು ಪೂರ್ಣದಿ೦ದ ಕಳೆದಾಗ ಅಲ್ಲಿ ಉಳಿಯುವುದೂಪೂರ್ಣವೇ."
ಗುರು ಮು೦ದುವರೆದು ಹೇಳಿದರು.

ನಿನ್ನ ಸೀಮಿತ ಇ೦ದ್ರಿಯಗಳಿ೦ದ ಗ್ರಹಿಸಲಾರನೆ೦ದು ದೇವರಿಲ್ಲವೆ೦ದು ತಿರಸ್ಕರಿಸಬೇಡ. ದೇವರು 'ಅದು ತತ್'. ಅವನು 'ಇದೂ' ಸಹ. ನಿನ್ನ ಅರಿವಿನ ಮಿತಿಗಳನ್ನು ಅರಿತುಕೊ೦ಡಾಗ ಬೌದ್ಧಿಕ ನಮ್ರತೆ ಹುಟ್ಟುವುದು. ವಿನಯದಿ೦ದ ಜನಿಸಿದ ವಿವೇಕದ ಅಡಿಗಲ್ಲಮೇಲೆ ನ೦ಬಿಕೆಯನ್ನು ಪ್ರತಿಷ್ಠಾಪಿಸಲಾಗುವುದು. ನಮ್ಮ ಸೀಮಿತ ಗ್ರಹಿಕೆಯ ಉಪಕರಣದಿ೦ದ ಗ್ರಹಿಸಿದ್ದು ಸತ್ಯದ ಒ೦ದುಅಣುವಿನಷ್ಟು. "ಅದು" ನಿನ್ನ ಕಲ್ಪನೆಗೂ ಅತೀತವಾದದ್ದು. ಏಕೆ೦ದರೆ ನಿನ್ನ ಕಲ್ಪನೆ ನೀನು ಗ್ರಹಿಸಿದ್ದರಲ್ಲೇ ಬೇರೂರಿರುವುದು.

ಅದಮ್ ತತ್ ಕ್ಷೇತ್ರದಲ್ಲಿ ಕಲ್ಪನೆ ಹೇಗೆ ವಿಫಲವಾಗುತ್ತದೆ ಎ೦ಬುದನ್ನು ಕಲ್ಪಿಸಿಕೊಳ್ಳಲು ದೇವರನ್ನು ವರ್ಣಿಸಲಾಗದು ಕಾರಣ ಎಲ್ಲವರ್ಣನೆಗಳೂ ಇದಮ್ ಇದು ಕ್ಷೇತ್ಯ್ರಕ್ಕೆ ಸ೦ಬ೦ಧಿಸಿದ್ದೇ ಆಗಿದೆ. ಅದಕ್ಕೇ ಅಲ್ಲಿ ಯಾವ ಅಚ್ಚರಿಯೂ ಇಲ್ಲ. ನಮ್ಮ ಋಷಿವರ್ಯರುದೇವರನ್ನು(ಬ್ರಹ್ಮನನ್ನು) ನಕಾರತ್ಮಕಾವಾಗಿ ನೇತಿ ನೇತಿ ಇದಲ್ಲ ಇದಲ್ಲ ಎ೦ದೇ ಹೇಳುತ್ತಾ ಹೋದರು. ಪ್ರತಿಯೊಬ್ಬ ಭಕ್ತನೂದೇವರನ್ನು ಅನುಭವಿಸಬಹುದು. ಆದರೆ ಅರ್ಹನಿಗೆ ಮಾತ್ರ ಭಗವ೦ತ ಸ೦ಪೂರ್ಣ ಸಾಕ್ಷಾತ್ಕಾರವಾಗುತ್ತಾನೆ.

ಮೂಲ: ಕೆ ಎಸ್ ರಾಮ್
ಅನುವಾದ: ಡಾ|| ಜ್ಞಾನದೇವ್ "

ಋಣಕರ್ತಾ ಪಿತಾ: ಶತ್ರು:

ಋಣಕರ್ತಾ ಪಿತಾ: ಶತ್ರು:|
ಮಾತಾ ಚ ವ್ಯಭಿಚಾರಿಣೀ|
ಭಾರ್ಯಾ ರೂಪವತೀ ಶತ್ರು:|
ಪುತ್ರ: ಶತ್ರುರಪಂಡಿತ:
||

ಸಾಲಗಾರನಾದ ತಂದೆ, ವ್ಯಭಿಚಾರಿಣಿಯಾದ ತಾಯಿ, ರೂಪವತಿಯಾದ ಪತ್ನಿ, ದಡ್ದ ಮಗ, ಈನಾಲ್ವರೂ ಶತ್ರುಗಳೇ.

ಸಂಪಾದನೆಗೆ ತಕ್ಕನಾದ ಜೀವನ ಮಾಡದೆ ಸಾಲಮಾಡಿ ಭೋಗಜೀವನ ನಡೆಸಿದ ತಂದೆ ಸಾಲ ತೀರಿಸದೆ ಸತ್ತರೆ ಆತ ಮಕ್ಕಳಿಗೆ ಶತ್ರುವಲ್ಲವೇ? ತಾಯಿಯ ಸ್ಥಾನ ಅತ್ಯಂತ ಹಿರಿದಾದುದು, ಆಕೆಯು ತನ್ನ ಮಕ್ಕಳೆದುರೇ ತಪ್ಪುದಾರಿ ಹಿಡಿದರೆ ಕೋಮಲ ಮನಸ್ಸಿನ ಮಕ್ಕಳ ಮನಸ್ಸಿನ ಮೇಲೆ ಎಂತಾ ಆಘಾತವಾಗುತ್ತದಲ್ಲವೇ? ಪತ್ನಿಗೆ ರೂಪ ಕೆಟ್ಟದಲ್ಲ, ಆದರೆ ರೂಪವತಿ ಹೆಣ್ಣಿನಮೇಲೆ ಪರಪುರುಷರ ಕಣ್ಣುಗಳು ಹೊಂಚುಹಾಕಿಯಾವು, ಅಂತಹ ಕಣ್ಣುಗಳಿಂದ ಹೆಣ್ಣಿನ ಮಾನ ಕಾಪಾಡುವುದು ಅತ್ಯಂತ ಜವಾಬ್ದಾರಿಯ ಕೆಲಸ. ಆದ್ದರಿಂದಲೇ ಪತಿ-ಪತ್ನಿಯರನ್ನು ಎಚ್ಛರಿಸಲು ಒಂದೇ ಮಾತಿನಲ್ಲಿ ಪೂರ್ವಜರು ಹೇಳಿದರು ಪತ್ನಿಗೆ ಅವಳ ರೂಪವೇ ಶತ್ರು. ಒಬ್ಬ ತಂದೆಗೆ ತನ್ನ ಮಗ ವಿದ್ಯಾವಂತನಾಗಿದ್ದರೆ ಅವನೇ ಆಸ್ತಿ, ಆದರೆ ದಡ್ದನಾದರೆ ಅವನೇ ಶತ್ರುವಲ್ಲವೇ?