Pages

Monday, April 4, 2011

ಮನೆಯೊಡತಿಗೆ ಯೂಟ್ರಸ್ ಶಸ್ತ್ರ ಚಿಕಿತ್ಸೆ ಗ್ಯಾರಂಟಿ!!

ಅವರೆಲ್ಲಾ ೨೫ ರಿಂದ ೩೦ ರ ವಯೋಮಾನದ ಕಟ್ಟುಮಸ್ತಾದ ತರುಣರು. ಉಗಾದಿ ಸಂಬ್ರಮವನ್ನು ಅವರು ಆಚರಿಸಿದ್ದು ಹೇಗೆ ಗೊತ್ತೆ? ಟಿ.ವಿ.ಮುಂದೆ ಕುಳಿತಿದ್ದಾರೆ. ಪ್ರಖ್ಯಾತ ಜ್ಯೋತಿಷಿಯೊಬ್ಬರು ಒಂದಿಷ್ಟು ಬುರುಡೆ ಬಿಡುತ್ತಿದ್ದಾರೆ. ಇವರೆಲ್ಲಾ ತದೇಕಚಿತ್ತದಿಂದ ಬೆರಗಾಗಿ ಆಲಿಸುತ್ತಿದ್ದಾರೆ. ಆಗ ವಾಸ್ತು ವಿಚಾರ ಹೇಳುತ್ತಿದ್ದರೆಂದು ಕಾಣುತ್ತದೆ. ಜ್ಯೋತಿಷಿಯು ಬಡಬಡಾಯಿಸುತ್ತಾರೆ" ವಾಯುವ್ಯ ಮೂಲೆಯಲ್ಲಿ ಮನೆಯ ಮಹಾದ್ವಾರವಿದ್ದರೆ ಮುಂದಿನ ಯುಗಾದಿಯೊಳಗಾಗಿ ಆಮನೆಯೊಡತಿಗೆ ಯೂಟ್ರಸ್ ಶಸ್ತ್ರ ಚಿಕಿತ್ಸೆ ಗ್ಯಾರಂಟಿ"
ಈ ತರುಣರು ಬೆರಗಾಗಿ ಕೇಳುತ್ತಿದ್ದಾರೆ.ಅದೇ ಸಮಯಕ್ಕೆ ಆ ಮನೆಗೆ ನಾನು ಪ್ರವೇಶಿಸಿದ್ದೆ. ಆ ತರುಣರನ್ನು ಕಂಡು ನನಗೆ ಮರುಕವಾಯ್ತು.ಅವರಲ್ಲಿ ಬಹುಪಾಲು ತರುಣರು ನಿರುದ್ಯೋಗಿಗಳು. ಅವರ ಬಗ್ಗೆ ನನಗೆ ಸಲುಗೆ ಇದೆ. ನಾನೆಂದೆ" ನಿಮಗೆ ಬೇರೆ ಕೆಲಸ ಇಲ್ಲವೇನ್ರಪ್ಪಾ?  ನಿಮಗೆ ಟಿ.ವಿ.ನೋಡ್ಲೇ ಬೇಕೂಂದ್ರೆ ಬೇರೆ ಯಾವ ಕಾರ್ಯಕ್ರಮವೂ ಸಿಗಲಿಲ್ಲವಾ? ನೀವು ಬೇಕಾದ್ರೆ ಸಿನೆಮಾ ನೋಡಿ, ಕ್ರಿಕೆಟ್ ಬೇಕಾದ್ರೂ ನೋಡಿ. ಆದರೆ ಇಂತಾ ಕಾರ್ಯಕ್ರಮ ನೋಡ್ತೀರಲ್ಲಾ! ಒಂದು ವೇಳೆ ನಿಮ್ಮ ಮನೆಯ ಮಹಾದ್ವಾರವು ವಾಯುವ್ಯಕ್ಕೆ ಇದೆ ಎಂದು ಭಾವಿಸಿ. ಈಗ ಹೋಗಿ ಬಾಗಿಲು ಬದಲಿಸುತ್ತೀರಾ?  ಇರೋದೇ 20X30 ಅಡಿ ವಿಸ್ತೀರ್ಣದ ಮನೆ. ಅನಿವಾರ್ಯವಾಗಿ ವಾಯುವ್ಯದಿಂದಲೇ ಪ್ರವೇಶಿಸುವ ಸಂದರ್ಭಬಂದರೆ ಏನು ಮಾಡುವಿರಿ?
ಇಂತಹ ವೈಜ್ಞಾನಿಕ ಕಾಲದಲ್ಲೂ ಇಂತಹ ಬುರುಡೆಗಳ ಮಾತು ಕೇಳುತ್ತಾ ಕಾಲಹರಣ ಮಾಡ್ತೀರಲ್ಲಾ!" ಅಂದಾಗ ನಿರುತ್ತರರಾದರು. ವಿಚಾರವಾದಿಗಳೆಂದು ಬಡಬಡಿಸುವವರು ಇಂತಹಾ ಕಾರ್ಯಕ್ರಮಗಳನ್ನು  ವಿರೋಧಿಸಬೇಡವೇ?
ಅಲ್ಲಾ ಜ್ಯೋತಿಷಿ ಏನಾದ್ರೂ ಹೇಳಲಿ ಪರವಾಗಿಲ್ಲ, ಆದರೆ  "ಆ ಮನೆಯಲ್ಲಿ  ಮನೆಯೊಡತಿಗೆ ಶಸ್ತ್ರಚಿಕಿತ್ಸೆ ಗ್ಯಾರಂಟಿ! ಸಾವು ಶತಸಿದ್ಧ! ಆಕ್ಸಿಡೆಂಟ್ ಆಗುತ್ತೆ! " ಇದೆಲ್ಲಾ ಏನ್ರೀ? ಅವನೇನು ಬ್ರಹ್ಮನೇ? ಇಂತೋರ್ ಮಾತೆಲ್ಲಾ ಕೇಳ್ತಾ ಕೂರ್ತೀವಲ್ಲಾ! ನಮ್ಮ ಬುದ್ಧಿಗೆ ಏನ್ ಹೇಳ್ಬೇಕು?