Pages

Sunday, September 9, 2012

ವೇದಪಾಠ-4


ಇಂದು ನಡೆದ ವೇದ ಪಾಠದಲ್ಲಿ ಇಲ್ಲಿರುವ ಮಂತ್ರದ ಪೂರ್ವಾರ್ಧ ಭಾಗವನ್ನು ಮಾತ್ರ ಹೇಳಿಕೊಡಲಾಗಿದೆ. ವೇದ ಪಾಠದ ಆರಂಭದಲ್ಲಿ ರೆಕಾರ್ಡ್ ಮಾಡಿಲ್ಲವಾದ್ದರಿಂದ ಸ್ವರ ಪರಿಚಯ, ಹಾಗೂ ಪಾಠದ ಆರಂಭದ ಭಾಗವನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಇದೇ ಪಾಠವನ್ನು ಪುನ: ಮಾಡ ಲಾಗುತ್ತದೆ. ಇಂದು ಗುರುಗಳಾದ ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ಮಂಗಳೂರಿನಲ್ಲಿ ನಡೆಯುತ್ತಿರುವ ಒಂದು ವೇದ ಸಂಬಂಧಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಿಂದ ಅವರ ಶಿಷ್ಯರಾದ ಚನ್ನರಾಯಪಟ್ಟಣದ ಶ್ರೀ ಪ್ರಸಾದ್ ಅವರು ವೇದ ಪಾಠವನ್ನು ಮಾಡಿರುತ್ತಾರೆ. ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ದಿನಾಂಕ 11.9.2012 ರಂದು ಮಂಗಳವಾರ ಬೆಳಿಗ್ಗೆ 10.30 ಕ್ಕೆ ವಿಶೇಷ ಪಾಠವನ್ನು ಮಾಡ ಲಿದ್ದಾರೆ. ಇಂದು ಹೇಳಿಕೊಟ್ಟಿರುವ ಮಂತ್ರದ ಅರ್ಥ-ವಿವರಣೆಯನ್ನು ಕೊಡಲಿದ್ದಾರೆ. ಅದರ ಆಡಿಯೋ ಕ್ಲಿಪ್ ಕೂಡ ಅಳವಡಿಸಲಾಗುವುದು. ಅಲ್ಲದೆ ಸ್ವರಬದ್ಧ ಉಚ್ಚಾರಣೆ ಬಗ್ಗೆಯೂ ತಿಳಿಸಲು ಕೋರಲಾಗುವುದು. ಈ ಮೇಲ್ ಮೂಲಕ ಪಾಠವನ್ನು ಪಡೆಯುತ್ತಿರುವ ಹಾಗೂ ಇದೇ ತಾಣದಮೂಲಕ ಅನುಸರಿಸುತ್ತಿರುವ ವಿದ್ಯಾರ್ಥಿಗಳಲ್ಲಿ ವಿನಂತಿ ಏನೆಂದರೆ ನೀವು ಇಲ್ಲಿ ಹೇಳಿಕೊಡುತ್ತಿರುವ ಮಂತ್ರಗಳನ್ನು ಸ್ವರ ತಪ್ಪದಂತೆ ಕಂಠಪಾಠ ಮಾಡುವುದು ಅವಶ್ಯಕ. ಸ್ವರಬದ್ಧ ಉಚ್ಚಾರಣೆಗೆ ನಿತ್ಯ ಅಭ್ಯಾಸ ಅನಿವಾರ್ಯ. ಮಂತ್ರಗಳು ಚಿಕ್ಕದಾದ್ದರಿಂದ "ಏನು ಮಹಾ?" ಎಂಬ ಉದಾಸೀನ ಬೇಡ. ಅಭ್ಯಾಸ ಮಾಡಿದಮೇಲೆ ನಿಮ್ಮ ಧ್ವನಿಯಲ್ಲಿ ರೆಕಾರ್ಡ್ ಮಾಡಿ ಕೇಳಿ ಅಲ್ಲದೆ ಗುರುಗಳ ಪಾಠಕ್ಕೆ ತಾಳೆ ಮಾಡಿಕೊಂಡು ನೋಡಿ. ಶುದ್ಧ ಸ್ವರ ಕ್ಕೆ ಗಮನ ಈಗಲೇ ಕೊಟ್ಟರೆ ಮುಂದೆ ಸುಲಭವಾಗುವುದು. ಹೀಗೂ ಮಾಡಬಹುದು...ನಿಮ್ಮ ಧ್ವನಿಯಲ್ಲಿ ವಿಶ್ವಾನಿ ದೇವ...ಮಂತ್ರವನ್ನು ರೆಕಾರ್ಡ್ ಮಾಡಿ ವೇದಸುಧೆಗೆ ಮೇಲ್ ಮಾಡಿದರೆ ಗುರುಗಳ ಗಮನಕ್ಕೆ ತರಲಾಗುವುದು.
ವೇದಪಾಠ-4 ರ ಆಡಿಯೋ ಗಾಗಿ ಇಲ್ಲಿ  ನೇರವಾಗಿ vedasudhe.com  ಪ್ರವೇಶಿಸಿ.