Pages

Saturday, November 10, 2012

ನಾನು ನನ್ನದು ಎಂಬ ಅಭಿಮಾನ


ಅಹಂಮಮಾಭಿಮಾನೋತ್ಥೈಃ ಕಾಮ ಲೋಭಾದಿಭಿರ್ಮಲೈಃ ।
ವೀತಂ ಯದಾ ಮನಃ ಶುದ್ಢಮದುಃಖಮಸುಖಂ ಸಮಮ್ ॥

ನಾನು ನನ್ನದು ಎಂಬ ಅಭಿಮಾನದಿಂದ ಉಂಟಾದ, ಕಾಮ, ದುರಾಸೆ, ಮೊದಲಾದ ಕೊಳೆಗಳಿಂದ ಮನಸ್ಸು ಯಾವಾಗ ಬಿಡಲ್ಪಟ್ಟು ಶುದ್ಧವಾಗುತ್ತದೋ ಆಗ ಸುಖವಾಗಲೀ ದುಃಖವಾಗಲೀ, ಸಮಾನವೆನಿಸುತ್ತದೆ

-ಸದ್ಯೋಜಾತ ಭಟ್ಟ

ಭಾರತ ಪರಿಕ್ರಮ ಯಾತ್ರೆ

ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ನಮಸ್ತೆ, ಶ್ರೀ ಸೀತಾರಾಮ ಕೆದಿಯಾಯರು  ಆರಂಭಿಸಿರುವ ಭಾರತ ಪರಿಕ್ರಮ ಯಾತ್ರೆಯು ಯಶಸ್ವೀ 94 ನೇ ದಿನಕ್ಕೆ ಕಾಲಿಟ್ಟಿದೆ. ನಿತ್ಯವೂ ಭಾರತ ಪರಿಕ್ರಮದ ಸುದ್ಧಿಯನ್ನು ಅಪೇಕ್ಷಿಸುತ್ತಿದ್ದ ಅಭಿಮಾನಿಗಳಿಗಾಗಿ ವೇದಸುಧೆಯು ಸಚಿತ್ರ ವರದಿಯನ್ನು ಪ್ರಕಟಿಸುತ್ತಿದೆ. ಆದರೆ ಯಾತ್ರೆಯು ಇನ್ನೂ ಐದು ವರ್ಷಗಳು ಸತತವಾಗಿ ನಡೆಯುವುದರಿಂದ ಭಾರತಪರಿಕ್ರಮ ಯಾತ್ರೆಗಾಗಿಯೇ ಒಂದು ಬ್ಲಾಗ್ ಆರಂಭಿಸಿ ಅದರ ಕೊಂಡಿಯನ್ನು  ವೇದಸುಧೆಯ ಬಲತುದಿಯಲ್ಲಿರುವ ಬ್ಲಾಗ್ ಪಟ್ಟಿಯಲ್ಲಿ ಕೊಟ್ಟಿದೆ. ಅಭಿಮಾನಿಗಳು ಅದರ  ಉಪಯೋಗ ಪಡೆಯಬಹುದು.