Pages

Sunday, January 18, 2015

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಆನ್ ಲೈನ್ ಪ್ರವಚನ

ಹಾಸನ  ವೇದಭಾರತಿಯು ನಡೆಸುವ ಸತ್ಸಂಗದಲ್ಲಿ ಇಂದು[18.1.2015] ಸಂಜೆ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರು "ಸತ್ಸಂಗ ಮತ್ತು ಆತ್ಮೋನ್ನತಿ" ಎಂಬ ವಿಚಾರದಲ್ಲಿ ಆನ್ ಲೈನ್ ನಲ್ಲಿ  ಪ್ರವಚನ ಮಾಡುವರು. skype ಮೂಲಕ ಸತ್ಸಂಗದಲ್ಲಿ ಆನ್ ಲೈನ್ ಭಾಗವಹಿಸಲು ಆಸಕ್ತರು ಇಂದು ಸಂಜೆ 5.40 ರೊಳಗೆ  ನಮ್ಮ ಸ್ಕೈಪ್ ವಿಳಾಸ ವಾದ   vedasudhe ಗೆ ಕಾಲ್ ಮಾಡಿದರೆ ಅಕ್ಸೆಪ್ಟ್ ಮಾಡಿಕೊಂಡು ಗುಂಪಿನಲ್ಲಿ ಸಂಪರ್ಕ ಒದಗಿಸುವ ಪ್ರಯತ್ನ ಮಾಡಲಾಗುವುದು.ಒಂದು ಶಾಶ್ವತ ವ್ಯವಸ್ಥೆ ಆಗುವವರಗೆ ಇದು ಪ್ರಯೋಗವೇ ಆಗಿರುತ್ತದಾದ್ದರಿಂದ ಸಂಪರ್ಕ ಕಡಿತಗೊಂಡರೆ ದಯಮಾಡಿ ಬೇಸರಿಸಬಾರದು. 5.55 ರ ನಂತರ ಸಿಸ್ಟೆಮ್ ಮುಂದೆ ನಿಯಂತ್ರಣ ಮಾಡಲು ಯಾರೂ ಇರುವುದಿಲ್ಲ. ಎಲ್ಲರೂ ಸತ್ಸಂಗದಲ್ಲಿ ಇರುತ್ತೇವಾದ್ದರಿಂದ 5.50 ರೊಳಗೆ ಆನ್ ಲೈನ್ ಗೆ ಬರುವವರೆಲ್ಲಾ ಬಂದರೆ ಉತ್ತಮ. ಒಮ್ಮೆ ಗುಂಪಿಗೆ ಸೇರ್ಪಡೆಯಾದರೆ ಮುಂದೆ ತೊಂದರೆಯಾಗಲಾರದೆಂದು ಭಾವಿಸುವೆ.