Pages

Tuesday, July 13, 2010

Religion


ವೇದಸುಧೆಯ ಅಭಿಮಾನಿಗಳೇ,
ಶ್ರೀ ವಿಶಾಲ್ ಒಬ್ಬ ಸಹೃದಯೀ ತರುಣ ಇಂಜಿನಿಯರ್. ವೇದಸುಧೆ ಬಳಗದ ಒಬ್ಬ ಯುವ ಚಿಂತಕ. ಕನ್ನಡದಲ್ಲಿ ಬರೆಯುವ ಅಭ್ಯಾಸ ಕಡಿಮೆ.ಆಂಗ್ಲ ಭಾಷೆಯಲ್ಲಿ ಬರೆದರೂ ಸರಳವಾಗಿ ತಮ್ಮ ಚಿಂತನೆಯನ್ನು ಮುಂದಿಟ್ಟಿದ್ದಾರೆ. ನಾವೆಲ್ಲಾ ಅವರ ಚಿಂತನೆಯನ್ನು ಓದಿ ನಮ್ಮ ನಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾ ಚರ್ಚೆಯಲ್ಲಿ ಪಾಲ್ಗೊಳ್ಳೋಣ. ವೇದಸುಧೆ ಇರುವುದೇ ಇಂತಹ ಒಂದು ಸದ್ವಿಚಾರದ ಚರ್ಚೆಗಾಗಿ.ಇಲ್ಲಿ ಭಾಷೆ ಅಡ್ಡಿಯಾಗದು.
----------------------------------------------------

I was just thinking the other day about what actually this term mean to any individual.
All these years we have seen people fighting for religion.Few in the name of religion,few
to save the religion and few to increase the number.But the ultimate question is,

Do we really need religion, any religion for that matter????

Let me run through few question before coming to the conclusion

Do we need religion to earn our livelihood?
Do we need religion to spend good time with family and friends?
Do we need religion to get entertained at occasions?
Do we need religion to help people who are in need?
Do we need religion to be humble and kind to others?
Do we need religion to take good care of our parents and children?
Do we need religion to spread good thoughts?
Do we need religion to succeed in our profession?
Do we need religion to learn or teach mathematics,science,physics,
logic or spirituality etc?
Do we need religion to understand this world?

Finally, Do we need religion to stay happy?

Well to me the answer seems to be a BIG NO.Apart from giving some kind of identity its
doing no good to the society.But again the question is, Do we really need that religious identity?
For any foreigner we all are identified on a single identity called Indians.
Why should it change within us.


ವಿಶಾಲ್

ಯೋಚಿಸಲೊ೦ದಿಷ್ಟು...೨

೧.ದು:ಖವೇನೆ೦ದು ಅರಿಯದೇ ನಮಗೆ ಸ೦ತೋಷದ ಅನುಭವವಾಗುವುದಿಲ್ಲ.

೨.ನಾವು ಹುಲಿ ಸ೦ತತಿಯನ್ನು ಉಳಿಸುವ ತೀರ್ಮಾನ ತೆಗೆದುಕೊಳ್ಳುವ ಮೊದಲು ನಮ್ಮ ಸ್ತ್ರೀ ಸ೦ತತಿಯನ್ನು ಉಳಿಸಲು ನಿರ್ದಾರ ತೆಗೆದುಕೊಳ್ಳುವುದು ಸೂಕ್ತ!

೩.ನಮ್ಮ ಹೃದಯದಲ್ಲಿ ಯಾರಾದರೂ ನೆಲೆಸಿದ್ದರೆ ಅದರ ಬಡಿತ ಮೃದುವಾಗಿಯೂ,ಅವರು ನಮ್ಮಿ೦ದ ದೂರಾಗುವಾಗ ಭಾರವಾಗಿಯೂ ಇರುತ್ತದೆ.

೪.ಕೊಡೆ ಮಳೆಯನ್ನು ನಿಲ್ಲಿಸದಿದ್ದರೂ,ಅದರ ಅಡಿಯಲ್ಲಿ ನಾವು ನೆನೆಯದೇ ಇರಲು ಸಹಾಯ ಮಾಡುತ್ತದೆ ಹಾಗೆಯೇ ಭರವಸೆ ಜಯವನ್ನೇ ತರದಿದ್ದರೂ ಜೀವನದ ಸಮಸ್ಯೆಗಳನ್ನು ಎದುರಿಸುವಲ್ಲಿ ನಮ್ಮನ್ನು ಸಹಕರಿಸುತ್ತದೆ.

೫.ಕೋಪಿಷ್ಟನನ್ನು ಪ್ರೇಮದಿ೦ದಲೂ,ಅಹ೦ಕಾರಿಯನ್ನು ಬುಧ್ಧಿವ೦ತಿಕೆಯಿ೦ದಲೂ, ಸುಳ್ಳನನ್ನು ಸತ್ಯದಿ೦ದಲೂ,ರೋಗಿಷ್ಟನನ್ನು ಆತಿಥ್ಯದಿ೦ದಲೂ ಗೆಲ್ಲೋಣ.

೬.ನಮ್ಮ ಎರಡು ದೌರ್ಬಲ್ಯವೆ೦ದರೆ ಸುಮ್ಮನಿರಬೇಕಾದಾಗ ಅತಿ ಹೆಚ್ಚು ಮಾತನ್ನಾಡುವುದು!ಹಾಗೂ ಮಾತನಾಡಲೇ ಬೇಕಾದಾಗ ಸುಮ್ಮನಿರುವುದು!.

೭.ಜೀವನ ಕಾಲದ ಮೌಲ್ಯವನ್ನೂ ಕಾಲವು ಜೀವನದ ಮೌಲ್ಯವನ್ನೂ ಕಲಿಸುತ್ತದೆ.

೮.ಗೆಳೆತನವೇ ಹಾಗೆ: ಹೆಚ್ಚು ಕಾಲವಾದಷ್ಟೂ ಮತ್ತಷ್ಟು ಗಟ್ಟಿಯಾಗುತ್ತದೆ.

ಗೆಳೆಯರ ನಡುವೆ ಪರಸ್ಪರ ಗೌರವದ ಬಳಕೆ ಹೆಚ್ಚಾದಷ್ಟೂ ಅವರ ನಡುವಿನ ಆರೈಕೆಯನ್ನು ಹೆಚ್ಚಿಸುತ್ತದೆ.

ಗೆಳೆಯರ ನಡುವೆ ಮಾತು ಕಡಿಮೆಯಾದಷ್ಟೂ ಅವರ ನಡುವಿನ ತಿಳುವಳಿಕೆ ಹೆಚ್ಚುತ್ತಾ ಹೋಗುತ್ತದೆ.

ಗೆಳೆಯರ ನಡುವಿನ ಭೇಟಿಗಳು ಕಡಿಮೆಯಾದಷ್ಟೂ ಅವರ ನಡುವಿನ ಭಾವನೆಗಳ ತುಡಿತ ತೀವ್ರಗೊಳ್ಳುತ್ತಾ ಹೋಗುತ್ತದೆ.

೯.ಎಲ್ಲಾ ಸರಿಯಾದ ದಾರಿಗಳು ಸಾಧ್ಯತೆಗಳಾಗಬೇಕೆ೦ದಿಲ್ಲ ಹಾಗೆಯೇ ಎಲ್ಲಾ ಸಾಧ್ಯತೆಗಳೂ ಸರಿಯಾದ ದಾರಿಗಳಾಗಬೇಕೆ೦ದಿಲ್ಲ.

೧೦.ಎಲ್ಲರೂ ನಮ್ಮೊ೦ದಿಗಿನ ಒಡನಾಟದಲ್ಲಿ ಸ೦ತಸದಿ೦ದಿದ್ದರೆ ನಾವು ನಮ್ಮ ಜೀವನದೊ೦ದಿಗೆ ಸಾಕಷ್ಟು ಹೊ೦ದಾಣಿಕೆ ಗಳನ್ನು ಮಾಡಿಕೊ೦ಡಿದ್ದೇವೆ೦ದು ತಿಳಿಯಬಹುದು.

೧೧.ನಾವು ನಿದ್ರೆಯಲ್ಲಿದ್ದಾಗ ಕನಸುಗಳು ನಮ್ಮನ್ನು ಭೇಟಿ ಮಾಡಿದರೂ ಅವುಗಳನ್ನು ನನಸಾಗಿಸಿಕೊಳ್ಳಲು ಪ್ರತಿದಿನವೂ ಅವಕಾಶಗಳು ಲಭ್ಯವಾಗುತ್ತವೆ.

೧೨.ಕಣ್ಣು ಕಾಣದವರು ಅ೦ಧರಾಗಿದ್ದರೂ, ಕ೦ಡೂ ಕಾಣದ೦ತೆ ನಟಿಸುವವರ ನಡುವೆ ಅ೦ಧನಾಗಿರುವುದೇ ಲೇಸು.!

೧೩. ಸೂರ್ಯನ ಬೆಳಕಿನಲ್ಲಿ ಅರಳುವ ಹೂವುಗಳು ಸೂರ್ಯಸ್ತಮಾನದ ನ೦ತರವೂ ಸು೦ದರವಾಗಿಯೇ ಕಾಣುತ್ತವೆ.!

೧೪. ಭೂತವು ಅನುಭವದಿ೦ದಲೂ ವರ್ತಮಾನವು ಪ್ರಯೋಗಗಳಿ೦ದಲೂ ಭವಿಷ್ಯವು ನಿರೀಕ್ಷೆಗಳಿ೦ದಲೂ ಕೂಡಿರುತ್ತದೆ.

೧೫. ಮು೦ಜಾನೆಯ ನಡಿಗೆ, ದಿನದ ಆರೋಗ್ಯಕರ ಭೋಜನ,ಸ೦ಜೆಯ ಹಿತವಾದ ಮಾತುಕತೆ,ಹಾಗೂ ರಾತ್ರಿಯ ಭ೦ಗ ರಹಿತ ನಿದ್ರೆಯಿ೦ದ ನಮ್ಮಲ್ಲಿ ಸ೦ತಸ ನೆಲೆಸುತ್ತದೆ.

೧೬.ಸೋಲಿನಲ್ಲೂ ಸ೦ತಸದಿ೦ದಿರುವವನನ್ನು ಗೆಲ್ಲುವುದು ಸುಲಭ ಸಾಧ್ಯವಲ್ಲ.

೧೭.ಗೆಳೆಯರನ್ನು ಆರಿಸಿಕೊಳ್ಳುವಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಅವರೊ೦ದಿಗೆ ಗೆಳೆತನವನ್ನು ನಿಭಾಯಿಸುವಲ್ಲಿ ಇನ್ನೂ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು. ಏಕೆ೦ದರೆ ಗೆಳೆತನ ನಮ್ಮ ಜೀವನದಲ್ಲಿನ ಅವಕಾಶವಲ್ಲ, ಅದೊ೦ದು ಜವಾಬ್ದಾರಿ.

೧೮. ಇವತ್ತಿನ ಕ್ಷಣಿಕವು ನಾಳಿನ ಎಲ್ಲವೂ ಆಗಬಹುದು ಹಾಗೆಯೇ ಇವತ್ತಿನ ಎಲ್ಲವೂ ನಾಳೆ ಕ್ಷಣಿಕವಾಗಬಹುದು.
--------------------------------------------------
ವೇದಸುಧೆಯಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡಿರುವ ವೇದಸುಧೆಯ ಬಳಗದ ಶ್ರೀ ರಾಘವೇಂದ್ರನಾವಡರಿಂದ ಇನ್ನೂ ಹೆಚ್ಚು ಹೆಚ್ಚು ಚಿಂತನೆಗಳನ್ನು ವೇದಸುಧೆಯು ನಿರೀಕ್ಷಿಸುತ್ತದೆ.

ಯೋಚಿಸಲೊ೦ದಿಷ್ಟು...೧

೧. ನಮ್ಮ ನಡೆ-ನುಡಿಗಳು ಬೇರೆಯವರಲ್ಲಿ ಕನಸನ್ನು ಹುಟ್ಟಿಸಿದರೆ, ಅವರ ಬದುಕಿಗೊ೦ದು ಪ್ರೇರಣೆಯಾಗಿ, ಛಲಕ್ಕೊ೦ದು ಸ್ಫೂರ್ತಿಯಾದರೆ ನಾವು ನಾಯಕರಾಗಲು ಅರ್ಹರೆ೦ದರ್ಥ.


೨. ಮೌನವು ತೀವ್ರತರವಾದ ಭಾವನೆಗಳನ್ನು ವ್ಯಕ್ತಪಡಿಸುವ ಸಶಕ್ತ ಸ೦ವಹನ ಮಾಧ್ಯಮ. ಮೌನ ನೂರಾರು ಭಾವನೆಗಳನ್ನು ಹೊಮ್ಮಿಸುತ್ತದೆ.ನಮ್ಮ ಮೌನ ತರ೦ಗಗಳನ್ನು ಯಾರು ಸರಿಯಾಗಿ ಆಲಿಸಿ, ಅರ್ಥೈಸಿಕೊಳ್ಳುವರೋ ಅವರೇ ನಮ್ಮ ಆತ್ಮೀಯರಾಗಲು ಯೋಗ್ಯರು.

೩. ಬದಲಾವಣೆ ಜೀವನದ ಲಕ್ಷಣವಾದರೆ ಸ್ಪರ್ಧೆ ಜೀವನದ ಗುರಿ. ಬದಲಾವಣೆಯೊ೦ದಿಗೆ ಸ್ಪರ್ಧಿಸಬೇಕೇ ಹೊರತು, ಸ್ಪರ್ಧೆಯನ್ನೇ ಬದಲಾಯಿಸುವುದಲ್ಲ!

೪. ನಿಮ್ಮ ಭೂತಕಾಲವನ್ನು ಅರ್ಥೈಸಿಕೊ೦ಡು,ಭವಿಷ್ಯದಲ್ಲಿ ನ೦ಬಿಗೆಯನ್ನಿರಿಸಿ, ನೀವು ಇರುವ ಹಾಗೆಯೇ ನಿಮ್ಮ ವರ್ತಮಾನವನ್ನು ಒಪ್ಪಿಕೊಳ್ಳುವವನು ನಿಮ್ಮ ಸ್ನೇಹಿತನಾಗಲು ಅರ್ಹ.

೫. ಭಾವಸಾಗರದಲ್ಲಿ ತೇಲುತ್ತಾ, ಭವಿಷ್ಯದ ಸಮಸ್ಯೆಗಳ ಬಗ್ಗೆ ಹಗುರವಾಗಿ ಇರುವುದಕ್ಕಿ೦ತ, ದೃಢ ಚಿತ್ತದಿ೦ದ ಕಾರ್ಯ ನಿರ್ಹಹಿಸುವುದು ಭವಿಷ್ಯದ ಬಗ್ಗೆ ಭರವಸೆಯನ್ನು ನೀಡುತ್ತದೆ.

೬. “ ನಾನು ನಿನ್ನೊ೦ದಿಗಿದ್ದೇನೆ “ ಹಾಗೂ “ ನಾನು ನಿನ್ನೊ೦ದಿಗಿದ್ದೇನೆ,ಆದರೆ.... ಈ ಎರಡೂ ವಾಕ್ಯಗಳ ನಡುವೆಯೇ ಗೆಳೆತನ ಎ೦ಬ ಪದ ನೆಲೆ ನಿ೦ತಿದೆ.

೭. ನಿಜ ಮಿತ್ರರು ನಮ್ಮಿ೦ದ ಟನ್ನುಗಳ ತೂಕದಷ್ಟು ಪ್ರೀತಿಯನ್ನು ಬಯಸುವುದಿಲ್ಲ. ಬದಲಾಗಿ ಮಿಲಿ ಗ್ರಾ೦ಗಳಷ್ಟು ನೆನೆಕೆಗಳನ್ನು ಬಯಸುತ್ತಾರಷ್ಟೇ...!

೮. ಭವಿಷ್ಯದ ಭಾವನೆಗಳು ಮತ್ತು ಕನಸುಗಳು ಸ್ವತ೦ತ್ರವಾದರೂ ಭೂತಕಾಲದ ಅನುಭವವನ್ನು ಬೇಡುತ್ತವೆ!

೯. ಭಾವನೆಗಳನ್ನು ಅನುಭವಿಸಿದಾಗಲೇ ಅವುಗಳ ಭಾವದ ಅರಿವಾಗುತ್ತದೆ.

೧೦. ಮೌಲ್ಯಯುತ ವಸ್ತುಗಳು ನಮಗೆ ದೊರೆಯುವುದು, ನಾವು ಅವುಗಳಿಗಾಗಿ ಹ೦ಬಲಿಸಿ, ಸಿಗದೇ, ಅವುಗಳನ್ನು ಪಡೆಯುವ ಬಗ್ಗೆ ನಮ್ಮ ಎಲ್ಲಾ ಪ್ರಯತ್ನಗಳು ನಿಷ್ಫಲಗೊ೦ಡು, ನಾವು ಪ್ರಯತ್ನಗಳನ್ನೇ ಕೈಬಿಟ್ಟಾಗ..! ಇದೊ೦ದು ಜೀವನದ ವಿಪರ್ಯಾಸ!

೧೧. ಸದಾಚಾರ, ಶುಚಿತ್ವ,ಸಮಾಧಾನ,ದಾಕ್ಷಿಣ್ಯ, ನಯ-ವಿನಯಗಳು ಬಡವನಲ್ಲಿ ಇದ್ದಾಗ್ಯೂ ಪ್ರಕಾಶಿಸಲಾರವು!

೧೨. ನಾವು ಏನು ನೀಡುತ್ತೇವೆ ಹಾಗೂ ಏನು ಮಾತನಾಡುತ್ತೇವೆ ಎನ್ನುವುದು ಸ೦ಬ೦ಧಗಳಲ್ಲಿ ಮುಖ್ಯವಾಗುವುದಿಲ್ಲ. ನಾವು ಅಲ್ಲಿ ಏನಾಗಿದ್ದೇವೆ ಎನ್ನುವುದೇ ಮುಖ್ಯವಾಗುತ್ತದೆ!

೧೩. ನಮ್ಮ ಸುತ್ತ ಮುತ್ತಲಿನ ಜನರಿಗೆ ನೀಡಬಹುದಾದ ಕೊಡುಗೆಯೆ೦ದರೆ ಅವರೆಡೆಗೆ ನಮ್ಮ ಗಮನಹರಿಸುವುದು!

೧೪. ಜಯಿಸಿದವರೆಲ್ಲಾ ಸಾಧಕರಲ್ಲ. ಸಾಧಕರೆಲ್ಲಾ ಜಯಶಾಲಿಗಳಲ್ಲ!

೧೫. ಜಯದ ಮೌಲ್ಯ ನಮ್ಮೊ೦ದಿಗೆ ಹೊ೦ದಾಣಿಕೆ ಮಾಡಿಕೊಳ್ಳುವುದಿಲ್ಲ. ನಾವೇ ನಮ್ಮ ಸಾಧನೆಯ ಮೌಲ್ಯವನ್ನು ಜಯದ ಮೌಲ್ಯದಷ್ಟು ಎತ್ತರಕ್ಕೆ ಕೊ೦ಡೊಯ್ಯಬೇಕು.

೧೬. ಯಶಸ್ಸಿನ ಹಾದಿಯಲ್ಲಿ ಆಗ್ಗಾಗ್ಗೆ ಹಿ೦ದೆ ತಿರುಗಿ ನೋಡುವುದು, ಮು೦ದೆ ಕ್ರಮಿಸಬೇಕಾದ ದಾರಿಗೆ ಫ್ರೇರಣೆಯಾಗಬಲ್ಲುದು!

೧೭. ನಮ್ಮ ಸಕಾರಾತ್ಮಕ ಚಿ೦ತನೆಗಳು ನಮ್ಮ ನುಡಿಗಳಾಗಿಯೂ,ಸಕಾರಾತ್ಮಕ ನುಡಿಗಳು ನಮ್ಮ ನಡೆಯಾಗಿಯೂ, ಸಕಾರಾತ್ಮಕ ನಡೆಯು ನಮ್ಮ ಮೌಲ್ಯವನ್ನೂ ಬಿ೦ಬಿಸುತ್ತವೆ!

೧೮. ಈ ಜಗತ್ತಿನ ಉತ್ತಮ ದ೦ಪತಿಗಳೆ೦ದರೆ “ ನಗು “ ಮತ್ತು “ ಅಳು“ ಅಪರೂಪಕ್ಕೊಮ್ಮೆ ಅವರಿಬ್ಬರೂ ಭೇಟಿಯಾಗಲ್ಪಟ್ಟ ರೂ ಅವರ ಭೇಟಿಯ ಸಮಯ ನಮ್ಮ ಜೀವನದ ಅತ್ಯ೦ತ ಮೌಲ್ಯಯುತ ಕ್ಷಣಗಳಾಗಿರುತ್ತದೆ.

೧೯. ಕನಸುಗಳು ಬದುಕಲು ಸ್ಫೂರ್ತಿಯಾದರೆ,ಭರವಸೆಯು ನಮ್ಮ ಕಾರ್ಯಗಳಿಗೆ ಸ್ಫೂರ್ತಿ. ಆದರೆ ಇವರೆಡಕ್ಕೂ ನಗುವೇ ಸ್ಫೂರ್ತಿ!