Pages

Tuesday, October 28, 2014

ಸಾಮೂಹಿಕ ಅಗ್ನಿಹೋತ್ರ

ಓಂ
ವೇದಭಾರತೀ, ಹಾಸನ

ಹುಬ್ಬಳ್ಳಿಯ ಆರ್ಶವಿದ್ಯಾಲಯದ 
ಪೂಜ್ಯ ಶ್ರೀ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ
 ದಿವ್ಯ ಸಾನ್ನಿಧ್ಯದಲ್ಲಿ

ಲೋಕ ಕಲ್ಯಾಣಾರ್ಥ
ಸಾಮೂಹಿಕ ಅಗ್ನಿಹೋತ್ರ
ಮತ್ತು
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು
ಸಂಗ್ರಹಿಸಿರುವ, ವೇದ ಮಂತ್ರಾಧಾರಿತ

ನೂರು ಹಿತನುಡಿಗಳು, ಭಾಗ-೨
 ಪುಸ್ತಕ ಬಿಡುಗಡೆ ಕಾರ್ಯಕ್ರಮ

ಸ್ಥಳ:  ಶ್ರೀ ಕೇಶವ ದೇವಾಲಯ, ಹಾಸನ

ದಿನಾಂಕ: ೧೦.೧೧.೨೦೧೪ ಸೋಮವಾರ ಸಂಜೆ ೬.೦೦ ಕ್ಕೆ

ನೂರು ದಂಪತಿಗಳಿಗೆ ಪಾಲ್ಗೊಳ್ಳಲು ಅವಕಾಶ

ಈ ವಿಶೇಷ ಕಾರ್ಯಕ್ರಮದಲ್ಲಿ 
ನಮ್ಮೊಡನೆ
ಶ್ರೀ ಸು.ರಾಮಣ್ಣ
ಅಖಿಲಭಾರತ ಪ್ರಮುಖರು,ಕುಟುಂಬ ಪ್ರಭೋದನ್
ಇವರು ಉಪಸ್ಥಿತರಿದ್ದು 
ಹಿಂದೂ ಜೀವನ ಮೌಲ್ಯಗಳ ಬಗ್ಗೆ ಮಾರ್ಗದರ್ಶನ ಮಾಡುವರು

1.ದಂಪತಿ ಸಹಿತವಾಗಿ  ಪಾಲ್ಗೊಳ್ಳಬೇಕೆಂಬುದು ಅಪೇಕ್ಷೆ. ಅನಿವಾರ್ಯ ಸಂದರ್ಭದಲ್ಲಿ 
   ಪತಿ-ಪತ್ನಿಯರಲ್ಲಿ ಒಬ್ಬರು ಸಹ  ಪಾಲ್ಗೊಳ್ಳಬಹುದು
2.ಬ್ರಹ್ಮಚಾರಿಗಳೂ ಸಹ ಪಾಲ್ಗೊಳ್ಳಬಹುದು
3. ಅಗ್ನಿಹೋತ್ರಕ್ಕೆ ಅಗತ್ಯವಾದ ಎಲ್ಲಾ ವ್ಯವಸ್ಥೆಯನ್ನು ವೇದಭಾರತಿಯು ಮಾಡುವುದು. ಆದರೆ ಅಗ್ನಿಹೋತ್ರದಲ್ಲಿ ಪಾಲ್ಗೊಳ್ಳುವವರು ಒಂದು ಪಂಚಪಾತ್ರೆ-ಉದ್ಧರಣೆ [ಅಥವಾ ಒಂದು ಲೋಟ ಮತ್ತು ಚಮಚ] ಮತ್ತು ತುಪ್ಪ ಹಾಕಲು ಒಂದು ಬಟ್ಟಲು ಮತ್ತು ಚಮಚ  ತಂದಿರಬೇಕು.
4.ಅಗ್ನಿಹೋತ್ರವು ೬.೦೦ ಗಂಟೆಗೆ ಸರಿಯಾಗಿ ಓಂಕಾರದಿಂದ ಆರಂಭವಾಗುವುದರಿಂದ ಅರ್ಧ ಗಂಟೆ ಮುಂಚೆ ಕಾರ್ಯಕ್ರಮದ ಸ್ಥಳದಲ್ಲಿರಬೇಕು.
5.ಉಡುಪು: ಸ್ತ್ರೀಯರಿಗೆ ಸಾಂಪ್ರಾದಾಯಿಕ ಉಡುಗೆ. ಪುರುಷರಿಗೆ ಬಿಳಿ ಪಂಚೆ ಮತ್ತು ಶಲ್ಯ 
ಹತ್ತಿ ಬಟ್ಟೆ ಅಪೇಕ್ಷಣೀಯ.
6.ಇಡೀ ಕಾರ್ಯಕ್ರಮದಲ್ಲಿ ಮೊಬೈಲ್ ಸ್ವಿಚ್‌ಆಫ್ ಆಗಿರಬೇಕು.
7.ತುಂಬಾ ಪುಟ್ಟಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳಲು ದೊಡ್ದವರನ್ನು ಜೊತೆಗೆ ಕರೆ ತನ್ನಿ
8.ಅಗ್ನಿಹೋತ್ರದ ನಂತರ ಸಾಮೂಹಿಕ  ವೇದಭಜನೆ , ಉಪನ್ಯಾಸ ನಡೆಯಲಿದ್ದು ಉಪಹಾರವನ್ನು ಮುಗಿಸಿಕೊಂಡು ಮನೆಗೆ ತೆರಳಬಹುದು
9. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಂದಲೇ ಅಗ್ನಿಹೋತ್ರವನ್ನು ಮಾಡಿಸಲಾಗುವುದು.ಜೊತೆಯಲ್ಲಿ ವೇದಭಾರತಿಯ ಕಾರ್ಯಕರ್ತರಿದ್ದು ವಿದಿವಿಧಾನವನ್ನು ಸುಗಮಗೊಳಿಸಲು ಪೂರ್ಣ ನೆರವಾಗುವರು. 
10. ಇದೊಂದು ಅತ್ಯಂತ ರಳವಾದ ನಿತ್ಯವೂ ಎಲ್ಲರೂ ತಮ್ಮ ಮನೆಗಳಲ್ಲಿ ೨೦ ನಿಮಿಷಗಳಲ್ಲಿ  ಮಾಡಬಹುದಾದ  ಯಜ್ಞವಾಗಿದ್ದು, ಕಾರ್ಯಕ್ರಮದ ನಂತರವೂ ಹೊಯ್ಸಳನಗರದ ಈಶಾವಾಸ್ಯಮ್ ನಲ್ಲಿ  ಅಗ್ನಿಹೋತ್ರವನ್ನು ಕಲಿಸುವ ವ್ಯವಸ್ಥೆ ಇರುತ್ತದೆ. 
11. ಕಾರ್ಯಕ್ರಮ ಸ್ಥಳದಲ್ಲಿ ನೂರು ಹಿತನುಡಿಗಳು ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುವುದು.

    ನಿಮಗೆ ಗೊತ್ತಿರಲಿ
1. ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳ ನಗರ,ಹಾಸನ- ಈ ವಿಳಾಸದಲ್ಲಿ ಪ್ರತಿದಿನ ಸಂಜೆ 6.00 ರಿಂದ  7.00  ರವರಗೆ ನಡೆಯುವ ಸತ್ಸಂಗದಲ್ಲಿ, ಅಗ್ನಿಹೋತ್ರ, ವೇದಾಭ್ಯಾಸ, ವೇದಪರಿಚಯ ಉಪನ್ಯಾಸ, ವೇದಭಜನ್ -ಮುಂತಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಪ್ರವೇಶವು ಉಚಿತವಾಗಿದ್ದು  ಎಲ್ಲರಿಗೂ ಮುಕ್ತವಾಗಿ ಪಾಲ್ಗೊಳ್ಳುವ ಅವಕಾಶವಿದೆ.
2. ಹಾಸನದ ಸ್ಥಳೀಯ ಪತ್ರಿಕೆಗಳಾದ ಜನಮಿತ್ರ ಮತ್ತು ಜನಹಿತ ಪತ್ರಿಕೆ ಮತ್ತು ವಿಕ್ರಮ ವಾರ ಪತ್ರಿಕೆಯಲ್ಲಿ ಪ್ರತೀ ವಾರವೂ ಪ್ರಕಟವಾಗುತ್ತಿರುವ  ವೇದಾಧಾರಿತ ಲೇಖನಗಳನ್ನು ಓದಿ.
3. ನಮ್ಮ ಮೇಲ್ ವಿಳಾಸ : vedasudhe@gmail.com