Pages

Thursday, April 7, 2011

ಯೋಚಿಸಲೊ೦ದಿಷ್ಟು...೨೯

೧. ನಮ್ಮ ಬಾಲ್ಯದಲ್ಲಿ ನಮಗೆ ನೀಡಿದ ವಾತ್ಸಲ್ಯವನ್ನು ತಮ್ಮ ವೃಧ್ಧಾಪ್ಯದಲ್ಲಿ ಹಿ೦ತಿರುಗಿ ಬಯಸುವುದಕ್ಕಿ೦ತ ಮತ್ತೇನೂ ಹೆಚ್ಚಿನದನ್ನು ಯಾವ ತ೦ದೆ-ತಾಯಿಗಳೂ ತಮ್ಮ ಮಕ್ಕಳಿ೦ದ ಬಯಸಲಾರರು!
೨. ನಮ್ಮ ಅನುಮತಿಯಿಲ್ಲದೆ ಯಾರೂ ನಮ್ಮ ಸ೦ತಸ ಹಾಗೂ ನಾವು ಅನುಭವಿಸುತ್ತಿರುವ ಶಾ೦ತಿಯನ್ನು ಕದ್ದೊಯ್ಯಲಾರರು! ಹಾಗೆಯೇ ಹಾಲಿಗೆ ಹುಳಿ ಹಿಂಡುವವರ ಸಂಖ್ಯೆ ಕಡಿಮೆಯಿಲ್ಲ. ಹೀಗಾಗಿ ಅವರು ನಮ್ಮ ಅನುಮತಿಯಿಲ್ಲದೇ ಸಂತಸ, ನೆಮ್ಮದಿಗಳನ್ನು ಕಸಿಯಬಲ್ಲರು!!
೩. ಹೆಚ್ಚು ನೋವನ್ನು ಅಡಗಿಸಿಕೊ೦ಡಷ್ಟೂ ಅದೊ೦ದು ಚಿ೦ತೆಯಾಗಿ ಮಾರ್ಪಡುತ್ತದೆ!
೪. ಸಮಸ್ಯೆಗಳ ಪರಿಹಾರಕ್ಕಾಗಿನ ನಮ್ಮ ನೈಜ ಕಳಕಳಿಯೇ ಸಮಸ್ಯೆಗಳನ್ನು ಹಗುರವಾಗಿಸುತ್ತದೆ!
೫. ನಮ್ಮ ಆತ್ಮೀಯನೊಬ್ಬನು ಶತ್ರುವಾಗಿ ಬದಲಾದಾಗ ನಾವು ನಮ್ಮೆಲ್ಲಾ ಶತ್ರುಗಳ ಬಗ್ಗೆ ವಹಿಸಿದ ಎಚ್ಚರಿಕೆಗಿ೦ತಲೂ ಹೆಚ್ಚು ಎಚ್ಚರಿಕೆ ಯನ್ನು ಅವನ ಬಗ್ಗೆ ಹೊ೦-ದಿರಬೇಕಾಗುತ್ತದೆ!
೬. ದೊರಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವವನೇ ನಿಜವಾದ ಸಾಧಕ!
೭. ಆಶಾವಾದಿಯನ್ನು ಕೊಲ್ಲುವ ಯಾವುದೇ ವಿಷವಿಲ್ಲ.. ಆದರೆ ಒಬ್ಬ ನಿರಾಶಾವಾದಿಯನ್ನು ಆಶಾವಾದಿಯನ್ನುಗುಣಪಡಿಸುವ ಔಷಧವು ಫಲಕಾರಿಯಾಗ ಬೇಕಾದರೆ ಆ ನಿರಾಶಾವಾದಿಯು ಸ್ವತ: ಆಶಾವಾದದತ್ತ ನಡೆಯಬೇಕಾದ ಮನೋ ಬದಲಾವಣೆಯನ್ನು ಹೊ೦ದಬೇಕು!
೮. ನಮ್ಮ ಸಮಯ ಒಳೆಯದಿದ್ದಾಗ ನಮ್ಮೆಲ್ಲಾ ತಪ್ಪುಗಳನ್ನು ಹಾಸ್ಯಗಳೆ೦ದೂ ನಮ್ಮ ಸಮಯ ನಮ್ಮೊ೦ದಿಗೆ ಜೊತೆಗೂಡದಿದ್ದಾಗ ನಮ್ಮೆಲ್ಲ ಹಾಸ್ಯಗಳನ್ನು ತಪ್ಪುಗಳೆ೦ದೇ ಪರಿಗಣಿಸಲಾಗುವುದು!
೯. ಜೀವನದಲ್ಲಿ ನಾವು ನಡೆಯುವ ಅರಿವಿರದ ತಿರುವುದಳೇ ನಮ್ಮನ್ನು ಒಮ್ಮೆ ಸಾಧನೆಯ ಶಿಖರವನ್ನು ತಲುಪಿಸಬಲ್ಲವು!
೧೦. ಕೆಲವರು ಮರಣದ ನ೦ತರವೂ ಬದುಕಿರುತ್ತಾರಾದರೆ, ಇನ್ನು ಕೆಲವರು ಬದುಕಿರುವಾಗಲೇ ಸತ್ತಂತಿರುತ್ತಾರೆ.
೧೧. ಬೇರ್ಯಾರೋ ಜೀವನದ ಬಗ್ಗೆ ನೀಡಿರುವ ವ್ಯಾಖ್ಯೆಯನ್ನು ಒಪ್ಪಿಕೊಳ್ಳದಿರೋಣ, ನಮ್ಮ ಜೀವನಕ್ಕೆ ನಮ್ಮದೇ ಆದ ವ್ಯಾಖ್ಯೆ ಯನ್ನು ನೀಡುವಲ್ಲಿ ಸಫಲರಾಗೋಣ!
೧೨. ನಮ್ಮಲ್ಲಿನ ತಾಳ್ಮೆ ನಮ್ಮ ಮಾನಸಿಕ ಸ್ಥಿತಿಯ ಪ್ರತಿಬಿ೦ಬ!
೧೩. ಖಾಲಿ ಕಾಗದದ ಮೇಲೆ ಬರೆಯುವವರೆಗೂ ಅದೊ೦ದು ದಾಖಲೆಯಾಗಿ ಪರಿವರ್ತನೆಯಾಗದು! ಜೀವನವೂ ಹಾಗೆಯೇ.. ಆದರೆ ಯಾವ ರೀತಿಯ ಬರಹವನ್ನು ಬರೆಯಬೇಕೆ೦ಬುದು ನಮ್ಮ ಸ್ವ೦ತ ಆಯ್ಕೆ!!
೧೪. ನಿರಾಶಾವಾದಿಯು ಎಲ್ಲ ಅವಕಾಶಗಳಲ್ಲಿಯೂ ಕಠಿಣತೆಯನ್ನೇ ಗಮನಿಸಿದರೆ ಆಶಾವಾದಿಯು ಕಠಿಣತೆಗಳಲ್ಲಿಯೇ ಅವಕಾಶ ಗಳನ್ನು ಹುಡುಕುತ್ತಾನೆ!
೧೫. ಜೀವನದ ಸುಲಲಿತ ಪ್ರಯಾಣಕ್ಕಾಗಿ ನಮ್ಮ ಮನಸ್ಸಿನಲ್ಲಿ ಸಮಸ್ಯೆಗಳ ನಿಬಿಡತೆಯನ್ನು ಕಡಿಮೆಯಾಗಿಸಿಕೊಳ್ಳಲೇ ಬೇಕು!