Pages

Wednesday, November 21, 2012

ಆದರ್ಶದ ಬೆನ್ನ ಹತ್ತಿ..




-“ಇವರನ್ನು ಯಾಕೆ ಅರೆಸ್ಟ್ ಮಾಡಿದ್ದೀರಿ?”
- “ಇವರು ಕೇಂದ್ರ ಸರ್ಕಾರದ ವಿರುದ್ಧವಾಗಿ ದೇಶದ್ರೋಹದ ಕೆಲಸಮಾಡ್ತಾ ಇದಾರೆ ಸ್ವಾಮಿ”
-“ಇವರು ದೇಶದ್ರೋಹದ ಕೆಲಸ ಮಾಡ್ತಾ ಇದಾರೆ ಅನ್ನೋದಕ್ಕೆ ಸಾಕ್ಷಿ ಇದೆಯಾ?”
-“ಸಾಕ್ಷಿ ಇದೆ ಸ್ವಾಮಿ”
-“ಏನು ಸಾಕ್ಷಿ?”
-“ಇವರ ಮನೆಯಲ್ಲಿ ಮಹಾತ್ಮಗಾಂಧಿಜಿಯ ಫೋಟೋ   ಇರುವ ಕರಪತ್ರಗಳು ಸಿಕ್ಕಿವೆ.
-“ಹಾಸನದಲ್ಲಿ ಎಷ್ಟು ಮನೆಗಳಿವೆ?”
-ಗೊತ್ತಿಲ್ಲ.
-  ಅಂದಾಜಾಗಿ ಹೇಳಿ ಪರವಾಗಿಲ್ಲ.ಇಪ್ಪತ್ತು ಸಾವಿರ ಮನೆಗಳು ಇರಬಹುದಾ? ಅದರಲ್ಲಿ ಎಷ್ಟು ಮನೆಗಳಲ್ಲಿ ಮಹಾತ್ಮಗಾಂಧಿಜಿಯ ಫೋಟೋ ಇರಬಹುದು? ಒಂದು ಐದು ನೂರು ಮನೆಗಳಲ್ಲಿ? ಹೋಗಲೀ ಒಂದು ಇನ್ನೂರು ಮನೆಗಳಲ್ಲಿ?”
“ಇರಬಹುದು.”
“ಹಾಗಾದರೆ ಅವರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಲಿಲ್ಲ? ಇವರನ್ನೇಯಾಕೆ ಮಾಡಿದ್ರೀ?”
“ಫೋಟೋ ಮಾತ್ರಾ ಆಗಿದ್ರೆ ಅವರನ್ನು ಅರೆಸ್ಟ್ ಮಾಡ್ತಿರಲಿಲ್ಲ. ಫೋಟೋದ ಮೆಲೆ  ರಾಷ್ಟ್ರದ್ರೋಹದ ಬರಹ ಇತ್ತು!”
£ÀÄ ಬರಹ ಇತ್ತು?”
-“ಅಸತ್ಯ,ಅಧರ್ಮ,ದಬ್ಬಾಳಿಕೆಗೆ ತಲೆಬಾಗುವುದು ಹೇಡಿತನ ಅಂತಾ ಬರೆದಿತ್ತು.”
“ಅದು ಗಾಂಧೀಜಿ ನೇ ಹೇಳಿದ್ದಲ್ವಾ?
-ಇರಬಹುದು
-ಆ ಮಾತು ರಾಷ್ಟ್ರದ್ರೋಹ ಅನ್ನೋದಾದ್ರೆ , ಇದು ಗಾಂಧೀಜಿ ಹೇಳಿದ ಮಾತು ಅನ್ನೋದು ನಿಮ್ಮ ನೆನಪಿನಲ್ಲಿರಲಿ. ಹೋಗಲೀ ಅದು ಹೇಗೆ    ರಾಷ್ಟ್ರದ್ರೋಹ ಆಗುತ್ತೆ? ಅನ್ನೋದನ್ನು ವಿವರಿಸುತ್ತೀರಾ?.........

    ಇದು ಯಾವುದೋ    ಸಿನೆಮಾ   ಡೈಲಾಗ್ ಅಲ್ಲ. 1975 ನೇ ಇಸವಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಾಸನದಲ್ಲೂ ಕೂಡ ತುರ್ತು ಪರಿಸ್ಥಿತಿ ವಿರುದ್ಧ ನಡೆದ ಹೋರಾಟ ಸಂದರ್ಭದಲ್ಲಿ ಅಂದು ಭಾರತ ರಕ್ಷಣಾ ನಿಯಮ [DIR] ಮತ್ತು ಆಂತರಿಕ ಭದ್ರತಾ ಕಾಯದೆಯನ್ವಯ [MISA] ನೂರಾರು ಜನ ದೇಶ ಭಕ್ತರನ್ನು ಜೈಲಿಗೆ  ಕಳಿಸಲಾಗಿತ್ತು. ಅದರಲ್ಲಿ DUÀ ಫುಡ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಕೆ.ವಿ.ನಾಗರಾಜ್ ರನ್ನು ಅರೆಸ್ಟ್  ಮಾಡಲಾಗಿತ್ತು. ನಾಗರಾಜರ ಕೇಸ್ ನಡೆಸುತ್ತಿದ್ದ  ಶ್ರೀ ಬಿ.ಎಸ್.ವೆಂಕಟೇಶ ಮೂರ್ತಿಯವರು  ನ್ಯಾಯಾಲಯದಲ್ಲಿ  ಪಾಟೀಸವಾಲು ಮಾಡುವಾಗ   ಪೋಲೀಸರಿಗೆ ಹಾಕಿದ ಪ್ರಶ್ನೆಗಳಿವು.
      ಶ್ರೀ ಕೆ.ವಿ.ನಾಗರಾಜರು  ತುರ್ತುಪರಿಸ್ಥಿಯ ತಮ್ಮ ಹೋರಾಟದ ಘಟನೆಗಳನ್ನು  ಮುಂದಿನ ಪೀಳಿಗೆಗೆ ಮರೆಯ ಬಾರದೆಂಬ ಕಾರಣಕ್ಕಾಗಿ ದಾಖಲಿಸಿ ರುವ” ಆದರ್ಶದ ಬೆನ್ನು ಹತ್ತಿ…..” ಪುಸ್ತಕವು  ಇದೇ 29.11.2012 ಗುರುವಾರ ಲೋಕಾರ್ಪಣೆಯಾಗಲಿದೆ. ತುರ್ತುಪರಿಸ್ಥಿತಿಯ ಹೋರಾಟಗಳ ನೆನಪು ಒಂದು ಭಾಗವಾದರೆ ರಾಜ್ಯ ಸರ್ಕಾರೀ ಅಧಿಕಾರಿ/ನೌಕರನಾಗಿ ಸೇವೆ ಮಾಡುವಾಗಿನ ತಮ್ಮ ಅನುಭವಗಳನ್ನು ಇನ್ನೊಂದು ಭಾಗದಲ್ಲಿ ಹಂಚಿಕೊಂಡಿದ್ದಾರೆ. ಬ್ರಷ್ಟಾಚಾರ ಎಂಬುದು ಚರ್ಚಾರ್ಹ ವಿಷಯವೇ ಅಲ್ಲ,ಅದೊಂದು ಸರ್ವೇ ಸಾಮಾನ್ಯ ಎಂಬ ಮಾನಸಿಕತೆಗೆ ಬಂದು ನಿಂತಿರುವ ಈ ದಿನಗಳಲ್ಲಿ  ಶ್ರೀ ನಾಗರಾಜರು ತಮ್ಮ ಸೇವಾ ಅವಧಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸುವಾಗ ಎದುರಾದ ಸಮಸ್ಯೆಗಳು, ಅದನ್ನೆಲ್ಲಾ ದಿಟ್ಟವಾಗಿ ಎದುರಿಸಿದ ರೀತಿ, ಎಲ್ಲವನ್ನೂ ಮನಮುಟ್ಟುವಂತೆ ದಾಖಲಿಸಿದ್ದಾರೆ. ಕೃತಿಯನ್ನು ಓದಲು ಆರಂಭಿಸಿದರೆ ಎಲ್ಲವನ್ನೂ ಮರೆತು ತನ್ನೆಡೆಗೆ ಹಿಡಿದಿಟ್ಟುಕೊಳ್ಳುವ ಅವರ ಬರವಣಿಗೆ ಶೈಲಿ ಓದುಗರನ್ನು ಬೆರಗುಗೊಳಿಸದೆ ಇರದು.
     1970 ರ ನಂತರ ಜನ್ಮ ತಾಳಿರುವ ಇಂದಿನ ಪೀಳಿಗೆಗೆ “ತುರ್ತು ಪರಿಸ್ಥಿತಿಯ ಹೋರಾಟ ಎಂದರೇನೆಂಬುದು UÉÆvÉÛà E®è. ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದ ಹಲವಾರು ಜನರು ಇಂದು ನಮ್ಮೊಂದಿಗಿಲ್ಲ. ಅಂದು ಎಲ್ಲಾ ಪತ್ರಿಕೆಗಳ ಬಾಯಿ ಮುಚ್ಚಿಸಲಾಗಿತ್ತು.  ಯಾವ ನಾಗರೀಕನೂ ಸರ್ಕಾರದ ವಿರುದ್ಧವಾಗಿ ಮಾತನಾಡು ವಂತಿರಲಿಲ್ಲ. ಅಂತಹ ವಿಷಮ ಸಂದರ್ಭದಲ್ಲೂ  ತುರ್ತುಪರಿಸ್ಥಿತಿಯ ವಿರುದ್ಧವಾಗಿ ಪೋಲೀಸರ ಹದ್ದುಗಣ್ಣನ್ನು ಮರೆಮಾಚಿಸಿ ಪ್ರಕಟವಾಗುತ್ತಿದ್ದ “ಕಹಳೆ” ಪತ್ರಿಕೆಯು ಎಲ್ಲಿ ಮುದ್ರಣವಾಗುತ್ತೆ? ಯಾರು ಪ್ರಸಾರ ಮಾಡುತ್ತಾರೆಂಬುದು ಪೋಲೀಸರಿಗೆ ದೊಡ್ದ ಪ್ರಶ್ನೆಯಾಗಿತ್ತು. ಅನುಮಾನ ಬಂದವರನ್ನು ಸ್ಟೇಶನ್ ಗೆ ಎಳೆದೊಯ್ದು “ಏರೋಪ್ಲೇನ್” ಎತ್ತುತ್ತಿದ್ದ ಕಾಲ. ಇಂದು ಏರೋಪ್ಲೇನ್ ಶಿಕ್ಷೆ ಎಂದರೇನೆಂಬುದು ನಮ್ಮ ಯುಕರಿಗೆ ಗೊತ್ತಿಲ್ಲ. ಆದರೆ ಅಂದು ಹಲವಾರು ದೇಶಭಕ್ತರೂ ಕೂಡ ಪೋಲೀಸರ ಅಮಾನುಷ ಶಿಕ್ಷೆಗೆ ಒಳಗಾಗಿದ್ದ ಕೆಟ್ಟದಿನಗಳು.  ಆರೆಸ್ಸೆಸ್ ಸೇರಿದಂತೆ ೫೦-೬೦ ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಗಿತ್ತು. ಆರೆಸ್ಸೆಸ್ ಮುಂಚೂಣಿಯಲ್ಲಿ ನಿಂತು ಜಯಪ್ರಕಾಶ ನಾರಾಯಣರ ನಾಯಕತ್ವದಲ್ಲಿ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ನಡೆದ ಅಭೂತಪೂರ್ವ ಆಂದೋಲನ ದೇಶದಲ್ಲಿ ಪ್ರಜಾಸತ್ತೆ ಉಳಿಯಲು ಕಾರಣವಾಯಿತು. ಲಕ್ಷಾಂತರ ತರುಣರು ಇದರಲ್ಲಿ ಭಾಗವಹಿಸಿ ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿದರು. ನೂರಾರು ಜನರು ತಮ್ಮ ಜೀವವನ್ನೇ ತೆತ್ತರು. ಕರ್ನಾಟಕದಲ್ಲೂ ಸಹ ಆಂದೋಲನ ಜನ ಜಾಗೃತಿಗೊಳಿಸುವಲ್ಲಿ, ಸರ್ವಾಧಿಕಾರಿಗಳನ್ನು ಬೆಚ್ಚಿ ಬೀಳಿಸುವಲ್ಲಿ ಯಶಸ್ವಿಯಾಯಿತು. ಹಾಸನ ಜಿಲ್ಲೆಯಲ್ಲೂ ಸಾವಿರಾರು ತರುಣರು ಪ್ರತಿಭಟನೆಯಲ್ಲಿ ಪಾಲುಗೊಂಡದ್ದು ಇತಿಹಾಸ. ೧೩ ಜನರನ್ನು ಯಾವುದೇ ವಿಚಾರಣೆಗೊಳಪಡದೆ 2 ವರ್ಷಗಳ ಕಾಲ ಬಂಧಿಸಿಡಬಹುದಾದ ಮೀಸಾ ಕಾಯದೆಯನ್ವಯ ಬಂಧಿಸಲಾಗಿತ್ತು. ಸುಮಾರು 300 ಜನರನ್ನು ಭಾರತ ರಕ್ಷಣಾ ಕಾಯದೆಯನ್ವಯ ಬಂಧಿಸಿದ್ದರು. ಸಾವಿರಾರು ತರುಣರ ಮೇಲೆ ದಂಡ ಪ್ರಕ್ರಿಯಾ ಸಂಹಿತೆಯ ವಿವಿಧ ಕಲಮುಗಳ ಪ್ರಕಾರ ಮೊಕದ್ದಮೆಗಳನ್ನು ಹೂಡಲಾಗಿತ್ತು. ಕೊನೆಕೊನೆಗೆ ಜೈಲಿನಲ್ಲಿ ಸ್ಥಳವಿರದ ಕಾರಣ ಬಂಧಿಸಿ, ಮುಚ್ಚಳಿಕೆ ಬರೆಯಿಸಿಕೊಂಡು, ಹೊಡೆದು ಬಡಿದು ಬಿಟ್ಟದ್ದೂ ಉಂಟು. ಆ ಸಂದರ್ಭದಲ್ಲಿ ಅನುಭವಿಸಿದ ಕಿರುಕುಳ, ಹಿಂಸೆಗಳಿಂದಾಗಿ ಆಗ ಹಾಸನ ಜಿಲ್ಲೆಯ ಆರೆಸ್ಸೆಸ್ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರೆಕೈಯವರು ತಮ್ಮ 30-32  ಕಿರಿಯ ವಯಸ್ಸಿನಲ್ಲೇ ಮತಿವಿಕಲ್ಪತೆಗೆ ಒಳಗಾಗಿ ಕೊನೆಯುಸಿರೆಳೆದದ್ದು ದುರಂತ.
     ಶ್ರೀ ನಾಗರಾಜರು ಬರೆದಿರುವುದು    ಹೋರಾಟಕಾಲದ ಸಮಗ್ರ ಚಿತ್ರಣವಲ್ಲ. ಒಬ್ಬ ಹೋರಾಟಗಾರನಾಗಿ ಅವರ ಅನುಭವಗಳನ್ನು ದಾಖಲಿಸಿದ್ದಾರೆ. ತುರ್ತು ಪರಿಸ್ಥಿಯ ದಿನಗಳನ್ನು ನೆನೆದುಕೊಂಡರೆ ಕಣ್ಣುಗಳು  ತೇವ ವಾಗುತ್ತವೆ. ಹೀಗೂ ಇತ್ತಾ! ಎಂದು ಅಂದಿನ ದಿನಗಳನ್ನು ಕಣ್ಣಾರೆ ಕಂಡ,ಹೋರಾಟದಲ್ಲಿ ನೇರವಾಗಿ ಅಥವಾ ಗುಪ್ತವಾಗಿ ಹೋರಾಡಿದ ನಮ್ಮಂತವರಿಗೇ ಅಚ್ಚರಿಯಾಗುತ್ತದೆ. ಸ್ವಾತಂತ್ರ್ಯ ಆಂಧೋಳನದಲ್ಲಿದ್ದ 99% ಜನರು ಇಂದು ನಮ್ಮೆದಿರು ಇಲ್ಲ. ಎರಡನೆಯ ಸ್ವಾತಂತ್ರ್ಯಹೋರಾಟವೆಂದೇ ಹೇಳಬಹುದಾದ 1975-77 ರ ಹೋರಾಟದಲ್ಲಿ ಪಾಲ್ಗೊಂಡವರಲ್ಲಿ ಕೆಲವರನ್ನಾದರೂ ನೋಡಬೇಕೆ?
ಹಾಗಾದರೆ ಬನ್ನಿ…..
ಸ್ಥಳ: ಶ್ರೀ  ರಾಮಕೃಷ್ಣ ವಿದ್ಯಾಲಯ ಸಭಾಂಗಣ
ದಿನಾಂಕ: 29.11.2012 ಗುರುವಾರ ಸಂಜೆ 6.00 ಕ್ಕೆ.

 ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದ ಕಥನ ಕೇಳ  ಬನ್ನಿ...


Monday, November 19, 2012

ದಿನಾಂಕ 18.11.2012 ರಂದು ನಡೆದ ವೇದಪಾಠ







ದಿನಾಂಕ 18.11.2012 ರಂದು ನಡೆದ ವೇದಪಾಠವನ್ನು ಇಲ್ಲಿ ಪ್ರಕಟಿಸಲಾಗಿದೆ. ಮೇಲ್ ಮೂಲಕ ವಿಳಾಸ ನೀಡಿರುವ    ಎಲ್ಲರಿಗೂ ಪಾಠವನ್ನು ಕಳಿಸಲಾಗಿದೆ. ತಲುಪದಿದ್ದವರು ತಿಳಿಸಿದರೆ ಪುನ: ಕಳಿಸಿಕೊಡಲಾಗುವುದು. ಹೊಸದಾಗಿ  ಸಾಪ್ತಾಹಿಕ ವೇದ ಪಾಠವನ್ನು ವೆಬ್ ಸೈಟ್ ಮೂಲಕ ಕಲಿಯಬಯಸುವವರು " ವೇದಪಾಠ" ಲೇಬಲ್ ಮೇಲೆ ಕ್ಲಿಕ್ ಮಾಡಿ ಮೊದಲ ಪಾಠದಿಂದ ಅನುಸರಿಸಬಹುದು. ಆರಂಭದಲ್ಲಿರುವ ಪರಿಚಯ ಉಪನ್ಯಾಸವನ್ನು ಕೇಳಿ ವೇದಪಾಠವನ್ನು ಆರಂಭಿಸುವುದು ಸೂಕ್ತ. ಹಾಸನದಲ್ಲಿ ನಡೆಯುತ್ತಿರುವ "ಎಲ್ಲರಿಗಾಗಿ ವೇದ ಪಾಠವು" ಪೂರ್ಣ ಉಚಿತವಾಗಿದ್ದು ಹಾಸನಕ್ಕೆ ಸಮೀಪ ಇರುವ ನಿಮ್ಮ ಮಿತ್ರರನ್ನು  ಪ್ರತ್ಯಕ್ಷ ವೇದಪಾಠದಲ್ಲಿ ಪಾಲ್ಗೊಳ್ಳುವಂತೆ ಮಾಡಿ. ನಮ್ಮ ವಿಳಾಸ:

ಈಶಾವಾಸ್ಯಮ್
ಶಕ್ತಿ ಗಣಪತಿ ದೇವಾಲಯ ರಸ್ತೆ
ಹೊಯ್ಸಳನಗರ ಪೋಲೀಸ್ ಕಾಲೊನಿ, ಹಾಸನ
ಸಂಪರ್ಕ ದೂರವಾಣಿ: 08172-250566/9663572406


ಅಪತ್ಯಂ ಮೇ ಕಳತ್ರಂ ಮೇ ಧನಂ ಮೇ ಬಾಂಧವಾಷ್ಚ ಮೇ |
ಜಲ್ಪಂತಮ್ ಇತಿ ಮರ್ತ್ಯಾಜಂ ಹಂತಿ ಕಾಲವೃಕೋ ಬಲಾತ್ ||

ನನ್ನ ಮಕ್ಕಳು, ನನ್ನ ಹೆಂಡತಿ, ನನ್ನ ಹಣ, ನನ್ನ ನೆಂಟರು, ಎಂದು ಒದರುತ್ತಾ ಇರುವ ಮನುಷ್ಯ ಎನ್ನುವ ಆಡನ್ನು ಕಾಲ ಎನ್ನುವ ತೋಳವು ಬಲಾತ್ಕಾರವಾಗಿ ಕೊಲ್ಲುತ್ತದೆ.

-ಸದ್ಯೋಜಾತಭಟ್ಟ

Friday, November 16, 2012

ಯೋಚಿಸಲೊ೦ದಿಷ್ಟು... ೬೨

೧. ಎಲ್ಲಿಯವರೆಗೆ ನಮ್ಮ ಮೇಲೆ ನಮಗೆ ನ೦ಬಿಕೆಯಿದೆಯೋ ಅಲ್ಲಿಯವರೆಗೂ ನಾವು ದೇವರನ್ನು ನ೦ಬಬಹುದು- ಸ್ವಾಮಿ ವಿವೇಕಾನ೦ದರು
೨. ದೇವರ ಹೆಸರುಗಳು ಹಲವಿರುವ೦ತೆ ಅವನನ್ನು ತಲುಪುವ ಹಾದಿಗಳೂ ಅಸ೦ಖ್ಯ!- ಪರಮಹ೦ಸರು
೩. ಪ್ರಾಣಿಗಳೇ ಮಾನವನ ಅತ್ಯುತ್ತಮ ಸ೦ಗಾತಿಗಳು. ಅವು ಪ್ರಶ್ನೆಯನ್ನೂ ಕೇಳುವುದಿಲ್ಲ.. ಟೀಕೆಗಳನ್ನೂ ಮಾಡುವುದಿಲ್ಲ!- ಜಾನ್ ಏಲಿಯೇಟ್
೪. ಜೀವನವೂ ಒ೦ದು ತರಗತಿ ಇದ್ದ೦ತೆ! ಆದರೂ ಇದರಲ್ಲಿ ಯಾವ ಪರೀಕ್ಷೆ? ಯಾವ ರೀತಿಯ ಪ್ರಶ್ನೆಗಳೆ೦ಬುದನ್ನು ಅರಿಯಲಾಗದು! ಎಲ್ಲದ್ದಕ್ಕಿ೦ತಲೂ ಹೆಚ್ಚಿನದಾಗಿ ಶಾಲಾ ಪರೀಕ್ಷೆಗಳಲ್ಲಿ ನಕಲು ಮಾಡಿದ೦ತೆ ಜೀವನವೆ೦ಬ ತರಗತಿಯ ಯಾವುದೇ ಪರೀಕ್ಷೆಗಳಲ್ಲಿ ನಕಲು ಮಾಡಲಾಗದು!
೫. ನಾಳೆ ಎ೦ಬುದಿದೆ!   ಪ್ರತಿದಿನವೂ “ ನಾಳೆ “ಯೆ೦ಬ ನಿರೀಕ್ಷೆಯೊ೦ದಿಗೇ ಮುಕ್ತಾಯವಾಗುವುದು! ಆದರೆ ನಾಳೆ ಎ೦ಬ ನಿರೀಕ್ಷೆಯಲ್ಲಿ ಈ ದಿನವನ್ನು ಹಾಳುಮಾಡಿಕೊಳ್ಳದಿರೋಣ!
೬. “ ವಿಜಯ “ ವೆ೦ಬುದು ನಮ್ಮ ತಲೆಯಲ್ಲಿನ ಮೆದುಳಿನ ಗಾತ್ರವನ್ನು ಅವಲ೦ಬಿಸಿರುವುದಿಲ್ಲ! ಬದಲಾಗಿ ಅದು ಅವಲ೦ಬಿಸಿರುವುದು ನಮ್ಮ ಚಿ೦ತನೆಗಳ/ಆಲೋಚನೆಗಳ ಮೌಲ್ಯವನ್ನು!
೭. ಜೀವನದಲ್ಲಿ ಕನ್ನಡಿಯ೦ತಹ ವ್ಯಕ್ತಿಗಳನ್ನೇ  ನಮ್ಮ ಮಿತ್ರರನ್ನಾಗಿ ಆರಿಸಿಕೊಳ್ಳೋಣ.. ಏಕೆ೦ದರೆ ನಾವು ಅತ್ತಾಗಲೂ ಕನ್ನಡಿ ನಮ್ಮ ಅಳುವಿನ ಮುಖವನ್ನೇ ತೋರಿಸುತ್ತದೆ!
೮. ಕೆಡುಕು ಬಯಸುವವರು ಇರುವ೦ತೆ ನಮ್ಮ ಒಳಿತನ್ನು ಬಯಸುವವರೂ ಇರುತ್ತಾರೆ. ನಾವು ಸ್ವಲ್ಪ ಶ್ರಮವಹಿಸಿ ಹುಡುಕಬೇಕಷ್ಟೇ!
೯. ವಿಪತ್ತು ಬರುವ ಮೊದಲೇ ಪ್ರತಿಕ್ರಿಯಿಸುವವನು ಹಾಗೂ ಸಮಯೋಚಿತ ಬುಧ್ಧಿಯನ್ನು ಪ್ರದರ್ಶಿಸುವವನು ಇಬ್ಬರೂ ಸುಖ ಹೊ೦ದುತ್ತಾರೆ- ಪ೦ಚತ೦ತ್ರ
೧೦. ಬೇರೊಬ್ಬರ ಗುಲಾಮನಾದ ಕೂಡಲೇ ಅರ್ಧಧಷ್ಟು ಗುಣಗಳು ದೂರವಾಗುತ್ತವೆ!
೧೧. ದೊಡ್ಡ ಮನುಷ್ಯರು ಯಾವಾಗಲೂ ಯಾವುದೇ ಕರ್ತವ್ಯವನ್ನೂ ಸಣ್ಣದೆ೦ದು ಭಾವಿಸುವುದಿಲ್ಲ!
೧೨. ನಿಜವಾದ ಗೆಳೆಯನೆ೦ದರೆ ಒ೦ದು ದರ್ಪಣವಿದ್ದ೦ತೆ! ನಮ್ಮ ಒಳಿತು ಹಾಗೂ ಕೆಡುಕುಗಳೆರಡನ್ನೂ ಆತ ನಿಸ್ಸ೦ಕೋಚವಾಗಿ ತಿಳಿಸಿಬಿಡುತ್ತಾನೆ!
೧೩. ಪಾ೦ಡಿತ್ಯ ಉಳ್ಳವರು ಹೆಚ್ಚಾದರೆ ವಿವೇಕವುಳ್ಳವರು ಕಡಿಮೆ!
೧೪. ವ್ಯರ್ಥ ಕಾಲಹರಣ ಮಾಡುವವರು ಅಪಾಯಕಾರಿಗಳು! ಅವರ ಬಗ್ಗೆ ಸಾಕಷ್ಟು ಎಚ್ಚರದಿ೦ದಿರಬೇಕು!
೧೫. ಖಾಲಿ ಮನಸ್ಸು ಭೂತದ ಬ೦ಗಲೆಯ೦ತೆ!

Monday, November 12, 2012

ನಮಸ್ಕಾರ


ನಾಸ್ತಿ ಸತ್ಯಾತ್ ಪರೋ ಧರ್ಮಃ ಸಂತುಷ್ಟಿರ್ ನಾತ್ಮಜಾತ್ ಪರಾ ।
ನಾನ್ನದಾನಾತ್ ಪರಂ ದಾನಂ ವಂದನಾನ್ನೋಪಚಾರಕಮ್ ॥

ಸತ್ಯಕ್ಕಿಂತಲೂ ಮಿಗಿಲಾದ ಧರ್ಮ ಇಲ್ಲ, ಪುತ್ರ ಜನನಕ್ಕಿಂತ ಹೆಚ್ಚಿನ ಆನಂದ ಬೇರೊಂದಿಲ್ಲ, ಅನ್ನದಾನಕ್ಕಿಂತ ಉತ್ತಮವಾದ ದಾನವಿಲ್ಲ, ನಮಸ್ಕಾರಕ್ಕಿಂತಲೂ ಉತ್ತಮವಾದ ಉಪಚಾರ ಇನ್ನೊಂದಿಲ್ಲ.

-ಸದ್ಯೋಜಾತ ಭಟ್ಟ

ವ್ಯಾಪ್ತಿ:

* ಪುತ್ರ ನೆಂದರೆ ಗಂಡುಮಗು ಅಂತಾ ತಿಳಿಯ ಬಾರದು ಪುತ್ರಿ ಜನನ ವಾದರೂ ಅಷ್ಟೇ ಸಂತೋಷವಾಗುತ್ತದೆ.
* ನಮಸ್ಕಾರ ಎಂದರೆ....ಕೇವಲ ನಮಸ್ಕರಿಸುವುದೇ? ನಮ್ಮ ಉತ್ತಮ ನಡವಳಿಕೆ, ಮಧುರವಾದ ಮಾತು. ಒಳ್ಳೆಯ ಮಾತಿಲ್ಲದೆ ನಮಸ್ಕರಿಸಿದರೂ ಅದಕ್ಕೆ ಬೆಲೆಇಲ್ಲ. ಕೋಪ ಮಾಡಿಕೊಂಡು "ನಮಸ್ಕಾರ" ಎಂದರೆ.....ಅಥವಾ ಮಧುರವಾದ ಮಾತಿಲ್ಲದೆ  ಮನೆಗೆ ಬಂದ ಅತಿಥಿ ಗಳಿಗೆ ಏನು ಸತ್ಕರಿಸಿದರೇನು ಪ್ರಯೋಜನ? ಅಲ್ಲವೇ?

Saturday, November 10, 2012

ನಾನು ನನ್ನದು ಎಂಬ ಅಭಿಮಾನ


ಅಹಂಮಮಾಭಿಮಾನೋತ್ಥೈಃ ಕಾಮ ಲೋಭಾದಿಭಿರ್ಮಲೈಃ ।
ವೀತಂ ಯದಾ ಮನಃ ಶುದ್ಢಮದುಃಖಮಸುಖಂ ಸಮಮ್ ॥

ನಾನು ನನ್ನದು ಎಂಬ ಅಭಿಮಾನದಿಂದ ಉಂಟಾದ, ಕಾಮ, ದುರಾಸೆ, ಮೊದಲಾದ ಕೊಳೆಗಳಿಂದ ಮನಸ್ಸು ಯಾವಾಗ ಬಿಡಲ್ಪಟ್ಟು ಶುದ್ಧವಾಗುತ್ತದೋ ಆಗ ಸುಖವಾಗಲೀ ದುಃಖವಾಗಲೀ, ಸಮಾನವೆನಿಸುತ್ತದೆ

-ಸದ್ಯೋಜಾತ ಭಟ್ಟ

ಭಾರತ ಪರಿಕ್ರಮ ಯಾತ್ರೆ

ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ನಮಸ್ತೆ, ಶ್ರೀ ಸೀತಾರಾಮ ಕೆದಿಯಾಯರು  ಆರಂಭಿಸಿರುವ ಭಾರತ ಪರಿಕ್ರಮ ಯಾತ್ರೆಯು ಯಶಸ್ವೀ 94 ನೇ ದಿನಕ್ಕೆ ಕಾಲಿಟ್ಟಿದೆ. ನಿತ್ಯವೂ ಭಾರತ ಪರಿಕ್ರಮದ ಸುದ್ಧಿಯನ್ನು ಅಪೇಕ್ಷಿಸುತ್ತಿದ್ದ ಅಭಿಮಾನಿಗಳಿಗಾಗಿ ವೇದಸುಧೆಯು ಸಚಿತ್ರ ವರದಿಯನ್ನು ಪ್ರಕಟಿಸುತ್ತಿದೆ. ಆದರೆ ಯಾತ್ರೆಯು ಇನ್ನೂ ಐದು ವರ್ಷಗಳು ಸತತವಾಗಿ ನಡೆಯುವುದರಿಂದ ಭಾರತಪರಿಕ್ರಮ ಯಾತ್ರೆಗಾಗಿಯೇ ಒಂದು ಬ್ಲಾಗ್ ಆರಂಭಿಸಿ ಅದರ ಕೊಂಡಿಯನ್ನು  ವೇದಸುಧೆಯ ಬಲತುದಿಯಲ್ಲಿರುವ ಬ್ಲಾಗ್ ಪಟ್ಟಿಯಲ್ಲಿ ಕೊಟ್ಟಿದೆ. ಅಭಿಮಾನಿಗಳು ಅದರ  ಉಪಯೋಗ ಪಡೆಯಬಹುದು.

Thursday, November 8, 2012

ನಾವೇ ನಿರ್ಮಿಸಿಕೊಂಡಿರುವ ವಿಷ ವರ್ತುಲ!!!

ಲಾಲಯೇತ್ ಪಂಚ ವರ್ಷಾಣಿ ದಶ ವರ್ಷಾಣಿ ತಾಡಯೇತ್ ।
ಪ್ರಾಪ್ತೇಷು ಷೋಡಶೇ ವರ್ಷೇ ಪುತ್ರಂ ಮಿತ್ರ ವದಾಚ್ಜರೇತ್ ॥


ಮಗು ಹುಟ್ಟಿದ ಐದು ವರ್ಷಗಳ    ತನಕ ಮುದ್ದಾಡಬೆಕು, ಹಾಗೆಯೇ ಮುಂದಿನ ಹತ್ತು  ವರ್ಷಗಳು ಹೊಡೆದು ಬುದ್ಧಿ      ಹೇಳಬೇಕು. ಆಮೇಲೆ ಹದಿನಾರನೆಯ ವರ್ಷದಿಂದ ಮಗನನ್ನು ಗೆಳೆಯನಂತೆ ಕಾಣಬೇಕು
.

ಈಗ ಇಂದಿನ ಸಮಾಜಸ್ಥಿತಿಯನ್ನು ಸ್ವಲ್ಪ ವಿಮರ್ಷೆ ಮಾಡೋಣ. ಐದು ವರ್ಷಗಳ ತನಕ ಮಗುವನ್ನು ಮುದ್ದಾಡುತ್ತೇವೆಯೇ? ಇಲ್ಲಾ. ಆ ಮಗುವನ್ನು ಬೇಬಿ ಸಿಟ್ಟಿಂಗ್,ಎಲ್.ಕೆ.ಜಿ,  .ಉ.ಕೆ.ಜಿ ಅಂತಾ  ಮೂರುತರಗತಿಗಳನ್ನು ಆ ಮಗು ತನ್ನ ಐದು ವರ್ಷದೊಳಗೆ ಪೂರೈಸಿರಬೇಕು. ಮಗು ಅತ್ತರೂ ಬಿಡುವುದಿಲ್ಲ!! ಮಕ್ಕಳನ್ನು ಮುದ್ದಾಡುವುದಕ್ಕೆ ನಮಗೆ ಸಮಯವಿಲ್ಲ. ಟಿ.ವಿ. ನೋಡಬೇಕಲ್ಲಾ!!

ಇನ್ನು ಹತ್ತು ವರ್ಷಗಳ    ತನಕ  ಯೂನಿ ಫಾರ್ಮ್ ಹಾಕಿಕೊಂಡು ಬೆನ್ನಮೇಲೆ ಐವತ್ತು ಕೆ.ಜಿ ಭಾರವನ್ನು ಹೊತ್ತು  ಮಕ್ಕಳನ್ನು  ಸ್ಕೂಲಿಗೆ ಕಳಿಸುವ ನಾವು ಆ ಮಗು ಮನೆಗೆ ಬರುವ ಹೊತ್ತಿಗೆ ಸುಸ್ತಾಗಿ  ಟೀಚರ್ ಕೊಟ್ಟಿರುವ ಹೋಮ್ ವರ್ಕ್ ಮಾಡಲಾರದೆ  ಒದ್ದಾಡುವುದನ್ನು ನೋಡಲಾರದೆ  ನಾವೇ ಮಕ್ಕಳ ಹೋಮ್ ವರ್ಕ್ ಬರೆದು  ಮಕ್ಕಳಿಗೆ ಕಾಡಿ ಬೇಡಿ ಊಟ ಮಾಡಿಸುತ್ತೇವೆ. ಇನ್ನು  ಹೊಡೆದು ಬುದ್ಧಿಯನ್ನು ಯಾರಿಗೆ ಕಲಿಸಬೇಕು. ಅದಕ್ಕಿಂತ ಘೋರಶಿಕ್ಷೆಯನ್ನು ಶಾಲೆಯಲ್ಲೇ  ಕೊಡಲು ವ್ಯವಸ್ಥೆ ಆಗಿದೆಯಲ್ಲಾ!

ಮಕ್ಕಳು ಹದಿನಾರು ಸಮೀಪಿಸುತ್ತಿರುವಾಗ ಎಸ್.ಎಸ್.ಎಲ್.ಸಿ ಮುಗಿಸಿ  ಪಿ.ಯು.ಸಿ ಮೆಟ್ಟಿಲು ಹತ್ತುತ್ತಿರುವಾಗ  ಹಗಲು ರಾತ್ರಿ ಟ್ಯೂಶನ್ ಕಾಟ. ಮಗನಂತೂ ಫುಲ್ ಬಿಜಿ*. ಈ ಅವಸ್ಥೆಯಲ್ಲಿ   ಮಾತನಾಡಿಸಲು   ಮಕ್ಕಳಿಗೆ     ಪುರಸೊತ್ತಿಲ್ಲ. ಅವನೊಡನೆ ಹೇಗೆ ನಡೆದುಕೊಳ್ಳಬೇಕೆಂದು ಅಪ್ಪ-ಅಮ್ಮನಿಗೆ ಗೊತ್ತಾಗುವುದೇ ಇಲ್ಲ. ಕಾರಣ  ಅವನು ಇವರ ಕೈಗೆ ಸಿಕ್ಕುವುದೇ ಇಲ್ಲ.

ನಾವೇ ಕಟ್ಟಿಕೊಂಡಿರುವ ಈ ವಿಷ ವರ್ತುಲದಿಂದ ಹೊರಬಾರದೆ ನಾವು ನಮ್ಮ ಮಕ್ಕಳಿಂದ ಏನು ನಿರೀಕ್ಷಿಸಲು ಸಾಧ್ಯ? ಜೊತೆಗೆ  ಟಿವಿ,ಇಂಟರ್ ನೆಟ್, ಮೊಬೈಲ್....ಎಲ್ಲವೂ  ನಮ್ಮ ಸಂಬಂಧಗಳನ್ನು ಹಾಳುಮಾಡಲು ನಾವೇ ನಿರ್ಮಿಸಿಕೊಂಡಿರುವ ವಿಷ ವರ್ತುಲ!!!


ಸೂಕ್ತ: ಶ್ರೀ ಸದ್ಯೋಜಾತರಿಂದ ಪ್ರಕಟಿತ
ಚಿಂತನೆ: ಹರಿಹರಪುರಶ್ರೀಧರ್

Saturday, November 3, 2012

ಇಂದ್ರಿಯನಿಗ್ರಹ


ಭೇತವ್ಯಂ ನ ತಥಾ ಶತ್ರೋರ್ನಾಗ್ನೇರ್ನಾಹೇರ್ನ ಚಾಶನೇಃ ।
ಇಂದ್ರಿಯೇಭ್ಯೋ ಯಥಾ ಸ್ವೇಭ್ಯಸ್ತೈರಜಸ್ರಂ ಹಿ ಹನ್ಯತೇ ॥


ಶತ್ರುವಿಗಾಗಲಿ, ಬೆಂಕಿಗಾಗಲಿ, ಸರ್ಪಕ್ಕಾಗಲಿ, ಸಿಡಿಲಿನ ಹೊಡೆತಕ್ಕಾಗಲಿ ನಾವು ಅಷ್ಟು ಹೆದರಬೇಕಾಗಿಲ್ಲ. ತನ್ನ ಇಂದ್ರಿಯಗಳಿಗೆ ಹೆಚ್ಚು ಹೆದರಬೇಕಾಗಿದೆ. ಏಕೆಂದರೆ ಅವುಗಳು ಸದಾ ಪೀಡಕವು . ಅವುಗಳು ಪೀಡಿಸಿದಷ್ಟು ಬೇರಾವುದೂ ಪೀಡಿಸುವುದಿಲ್ಲ.

ಅಬ್ಭಾ! ಎಂತಹ ಮಾತು!! ನಮ್ಮ ಇಂದ್ರಿಯದಾಟವನ್ನು ನಾವು ಗೆದ್ದರೆ ಬೇರೇನನ್ನೂ  ಗೆಲ್ಲುವುದು ಕಷ್ಟವೇನಿಲ್ಲ. ಇಂದ್ರಿಯನಿಗ್ರಹ ಇದೆಯಲ್ಲಾ, ಅದೇ ಬಲು  ಕಷ್ಟ. ಸಾಧನೆ ಅಂದರೆ ಬೇರೇನು? ಅದನ್ನು ಸಾಧಿಸಬೇಕು.ಕಷ್ಟಪಟ್ಟು   ಸಾಧಿಸುವುದರಲ್ಲಿ ಸಂತಸ ಕಾಣಬೇಕು.

Friday, November 2, 2012

ನಮ್ಮ ವ್ಯಕ್ತಿತ್ವವನ್ನು ಅಳೆಯುವುದೇ ನಮ್ಮ ನಡತೆ



ವಿದೇಶೇಷು ಧನಂ ವಿದ್ಯಾ ವ್ಯಸನೇಷು ಧನಂ ಮತಿಃ ।
ಪರಲೋಕೇ ಧನಂ ಧರ್ಮಃ ಶೀಲಂ ತು ನಿಖಿಲಂ ಧನಮ್ ॥


ಬೇರೆ ದೇಶಗಳಲ್ಲಿ ನಮ್ಮಲ್ಲಿರುವ ವಿದ್ಯೆಯೆ ಸಂಪತ್ತು, ಆಪತ್ಕಾಲ ಬಂದಾಗ ನಮ್ಮ ಬುದ್ಧಿಯೇ ಸಂಪತ್ತು, ಬೆರೊಂದು ಲೋಕದಲ್ಲಿರುವಾಗ ಅನುಸರಣೆಯ ಧರ್ಮವೇ ಸಂಪತ್ತು, ನಮ್ಮ ಗುಣ ನಡತೆಯು ಎಲ್ಲಾಕಡೆಯಲ್ಲಿಯೂ ನಮಗೊದಗುವ ಸಂಪತ್ತು. ನಮ್ಮ ವ್ಯಕ್ತಿತ್ವವನ್ನು ಅಳೆಯುವುದೇ ನಮ್ಮ ನಡತೆ.





-Sadyojata Bhatta

Thursday, November 1, 2012

ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ




ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.  ಇದೇ ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಸರ್ಕಾರವು ಪಂಡಿತರನ್ನು ಸನ್ಮಾನಿಸಲಿದೆ. 116 ವರ್ಷ ವಯೋವೃದ್ಧರಾದ        ಚತುರ್ವೇದಿಗಳು ಒಂದು ನೂರುವರ್ಷಗಳಿಂದ ನಾಲ್ಕೂ ವೇದಗಳನ್ನು ಅಭ್ಯಾಸಮಾಡುತ್ತಿದ್ದಾರೆಂಬುದು ಅತ್ಯಂತ ಸಂತಸದ ಮತ್ತು ಆಶ್ಚರ್ಯದ ಸಂಗತಿಯೂ ಹೌದು. ವೇದಸುಧೆಯು ಪಂಡಿತರಿಗೆ ಸಾಸ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತದೆ.
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ