Pages

Showing posts with label ವೇದಪಾಠ. Show all posts
Showing posts with label ವೇದಪಾಠ. Show all posts

Friday, March 14, 2014

ವೇದಮಂತ್ರ ಪಾಠ-1




ಋಗ್ವೇದ 10 ನೇ ಮಂಡಲ 8ನೇ ಅಷ್ಟಕ
3ನೇ ಅಧ್ಯಾಯ 6ನೇ ಅನುವಾಕ
81 ನೇ ಸೂಕ್ತ 16ನೇ ವರ್ಗ 7ನೇ ಮಂತ್ರ
ಋಷಿ: = ವಿಶ್ವಕರ್ಮ ಭೌವನ: 
ದೇವತಾ = ವಿಶ್ವಕರ್ಮ 
ಛಂದ: = ನಿಚೃಪ್ ತ್ರಿಷ್ಟಪ್ 
ಸ್ವರ: = ಧೈವತ: 


   ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಹಾಸನದ ವೇದಭಾರತಿಯ ಆಶ್ರಯದಲ್ಲಿ ನಡೆಯುವ ವೇದತರಗತಿಯಲ್ಲಿ ಪುನ: ಪಾಠವನ್ನು ಆರಂಭಿಸಿದ್ದಾರೆ. ನಮಗೆ ಮಾಡಿದ ಪಾಠದ ಆಡಿಯೋ ಕ್ಲಿಪ್ಪನ್ನು "ವೇದಸುಧೆ ಡಾಟ್ಕಾಮ್ " ನಲ್ಲಿ ಪ್ರಕಟಿಸಲಾಗಿದೆ.ಅದರ ಕೊಂಡಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಹಲವರು ಆನ್ ಲೈನ್ ವೇದಪಾಠದ ಬಗ್ಗೆ ಕೇಳುತ್ತಿದ್ದರು. ಸಧ್ಯಕ್ಕೆ ಈ ಪಾಠವನ್ನು ಅನುಸರಿಸಲು ಸಾಧ್ಯವಾದರೆ ಅನುಸರಿಸಿ ನಿಮ್ಮ ಸಂದೇಹಗಳನ್ನು vedasudhe@gmail.com ಗೆ ಮೇಲ್ ಮಾಡಿ ಪರಿಹರಿಸಿಕೊಳ್ಳಬಹುದು. ಅಥವಾ ಇಲ್ಲೂ ಕಾಮೆಂಟ್ ಮಾಡಬಹುದು.
ವಿ.ಸೂ: ಈ ಕೆಳಗಿರುವ ಮಂತ್ರದ ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ ಸೇವ್ ಮಾಡಿಕೊಂಡು ಪ್ರಿಂಟೌಟ್ ತೆಗೆದುಕೊಂಡು ಆಡಿಯೋ ಕೇಳುತ್ತಾ ಸಾಹಿತ್ಯ ನೋಡಿಕೊಂಡು ಕಂಠಪಾಠ ಮಾಡಿಕೊಳ್ಳುವುದು ಸೂಕ್ತ. ಅಥವಾ ಬರೆದುಕೊಳ್ಳಲೂ ಬಹುದು.



Monday, October 29, 2012

ವೇದ ಪಾಠ-8









ಈ ಮೇಲ್ ಮೂಲಕ ಪಾಠವನ್ನು ತರಿಸಿಕೊಳ್ಳುವವರಿಗೆಲ್ಲರಿಗೂ ಇಂದು  ಮೇಲ್ ಮಾಡಲಾಗಿದೆ. ತಲುಪದಿದ್ದವರು  ತಿಳಿಸಿದರೆ ಕೂಡಲೇ ಮೇಲ್ ಮಾಡುವೆ.
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ

Tuesday, October 16, 2012

ವೇದಪಾಠ-7

 

Saturday, September 22, 2012

ಅಂತರ್ಜಾಲದಲ್ಲಿ ವೇದಪಾಠದ ಬಗ್ಗೆ ಅಭಿಮಾನಿಗಳ ಅನಿಸಿಕೆಗಳು

Rudresh
August 27, 2012 at 10:23 pm 
ನಮಸ್ತೆ
ನಿಜವಾಗಿಯು ನಾವೆಲ್ಲರೂ ಅರಿಯುವ, ಅರಿತುಕೊಳ್ಳಬೇಕಾದ ವೇದಗಳ ಬಗೆಗಿನ ಕುರಿತ ಪಾಠದ ಅಗತ್ಯತೆ ಇದೆ ಎಂದು ನನಗೆ ಅನ್ನಿಸಿದೆ, ನನಗೆ ಪಾಠದ ಆಡಿಯೋ ಕ್ಲಿಪ್ ಗಳ ಅವಶ್ಯಕತೆ ಇದೆ. ದಯವಿಟ್ಟು ನನ್ನ ಇ-ಮೇಲ್ ವಿಳಾಸಕ್ಕೆ ಸನ್ಮಾನ್ಯರು ಕಳುಹಿಸಿಕೊಂಡುವಿರೆಂದು ನಂಬಿರುತ್ತೇನೆ
ನಮಸ್ಕಾರಗಳೊಂದಿಗೆ
-------------------------------------------------------
Suresh N Ranganath
Great idea… please send it to ennarsuresh@gmail.com Thank you.
------------------------------------------------------------
ಪ್ರೀತಿಯ ಶ್ರೀಧರ್,
ನಮನಗಳು, ಕಳೆದ ಸುಮಾರು ಒಂದು ವರ್ಷಕ್ಕೂ ಮೀರಿ ನಿಮ್ಮನ್ನು ಸಂಪರ್ಕಿಸಲಾಗಲಿಲ್ಲ,
ಕ್ಷಮಿಸಿ. ಜೀವನದ ಅನೇಕ ಸಂಗತಿಗಳು,ಸಂಭಂದಗಳು, ನನ್ನನ್ನು ಅನೇಕ ಒಳ್ಳೆಯ ಸಂಗತಿ ಗಳಿಂದಲೂ ವಿಮುಖ ಗೊಳಿಸಿತು, ಹಾಗಾಗಿ ನನಗೆ ನಾನೇ ಒಂಟಿ ಆದೆ. ನನಗೆ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ನೀಡುತ್ತಿರುವ ವೇದಪಾಠವನ್ನು ( ಆಡಿಯೋ -ಧ್ವನಿ ಶ್ರಾವ್ಯ) ವನ್ನು ದಯವಿಟ್ಟು ಕಳುಹಿಸಿ, ಖಂಡಿತಾ ವೇದಪಾಠದ ಎಲ್ಲಾ ಆಡಿಯೋ ಗಳನ್ನೂ, ಮುಂದೂ ಕಳುಹಿಸುತ್ತಿರಿ.
ವಂದನೆಗಳೊಂದಿಗೆ,
ಬಿ. ಎಸ್ಸ್. ಲಕ್ಷ್ಮೀ ನಾರಾಯಣ ರಾವ್.
ಮೈಸೂರು
--------------------------------------------------------------------
Dayananda
August 21, 2012 at 8:46 pm 
ವೇದ ಪಾಠ ಕೇಳಿ ಜನ್ಮ ಸಾರ್ಥಕ ಮಾಡಿಕೊಳ್ಳುವುದಕ್ಕೆ ಸದಾವಾಕಾಶ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು
----------------------------------------------------------
– ಹೌದು, ಶರ್ಮರು ಹೇಳಿಕೊಡುತ್ತಿರುವ ಪಾಠವನ್ನು ಪ್ರತೀ ವಾರ ಇಲ್ಲಿ ಪ್ರಕಟಿಸಿದರೆ ಒಳ್ಳೇದು.
-Santhosh Sharma
------------------------------------------------------------------------
manjunath g s
August 20, 2012 at 11:35 pm
ಒಳ್ಳೆಯ ಶ್ಲಾಘನೀಯ ಪ್ರಯತ್ನ. ಮುಂದುವರೆಯಲಿ. ಪ್ರಖರ ಪ್ರಸರಣವೇ ಆಗಬೇಕಿದೆ. ಅಪ್ಲೋಡ್ ಮಾಡುತ್ತಿರಿ. ಶರ್ಮರ ಧ್ವನಿ, ವಿಚಾರ ಎರಡೂ ಸ್ಪಷ್ಟವಿದೆ. ಮತ್ತಷ್ಟು ಜನರಿಗೆ ಈ ಮೂಲಕವೇ ಹಂಚೋಣ.
------------------------------------------------------------------------
I am thrilled to see vedasudhe.I would like to subscribe and receive all lessons please.
Please enroll me as a member
RAMESH RAO
Bangalore
------------------------------------------------------------------------------
sudha
August 24, 2012 at 4:11 pm 
ನನಗೆ ಒಳ್ಳೆಯದಾಗಲಿ ಎಂದು ಮಹಾತ್ಮ ರೊಬ್ಬರು ಇದನ್ನು ಹೇಳಿಕೊಟ್ಟರು .ನಾನು ದಿನವೂ ಹೇಳಿಕೊಳ್ಳುತ್ತೇನೆ .ಇದರ ಅರ್ಥ ಏನು ಎಂದು ಕೇಳಲು ಹೋಗಲಿಲ್ಲ ಅವರನ್ನು . ಇಲ್ಲಿ ಹೇಗೆ ಹೇಳುವುದು ,ಏನು ಅರ್ಥ ಎಂದು ತಿಳಿದು ಸಂತೋಷವಾಯ್ತು .
ಧನ್ಯವಾದಗಳು .
------------------------------------------------------------------------
ನಿಮ್ಮ ಪ್ರಯತ್ನ ಶ್ಲಾಘನೀಯವಾದದ್ದು. ನಾನು ಬೆಂಗಳೂರಿನಲ್ಲಿರುವುದರಿಂದ ವೇದಪಾಠಕ್ಕೆ ಹಾಜರಾಗಲು ಆಗುತ್ತಿಲ್ಲ. ದಯಮಾಡಿ ನನಗೆ ಇ-ಮೆಯಿಲ್ ಮೂಲಕ ಪಾಠ ಗಳನ್ನು ಕಳಿಸಬೇಕೆಂದು ಕೇಳಿಕೊಳ್ಳುತ್ತೇನೆ.
ತಮ್ಮ ವಿಶ್ವಾಸಿ,

ರಮೇಶ್ ಮಾವಿನಕುರ್ವೆ
----------------------------------------------------------
Sir ,
I am interested in learning the Vedas . I request you to kindly mail
me the Veda pathas from the beginning .

I thank you in advance

Milan Mahale
------------------------------------------------------------
ನಮಸ್ಕಾರಗಳು,

ನಾನು ಬೆಂಗಳೂರಿನಲ್ಲಿರುವುದರಿಂದ ಈ ವೇದ ಪಾಠದಲ್ಲಿ ಭಾಗವಹಿಸಲಾಗುವುದಿಲ್ಲ. ದಯವಿಟ್ಟು ನನಗೂ ಸಹಾ ಈ ಮೈಲ್ ಮೂಲಕ ಪಾಠವನ್ನು ಕಳುಹಿಸಿ.

ಧನ್ಯವಾದಗಳು,
ಗಿರೀಶ್ ನಾಗಭೂಷಣ
(gireeshdn@live.com)
-----------------------------------------------------------------
ಶ್ರೀಯುತ ಶ್ರೀಧರ್ ಅವರಿಗೆ ನನ್ನ ನಮಸ್ಕಾರಗಳು. ವೇದ ಪಾಠವನ್ನು ಕಲಿಸಲು ನವ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಇಂದೇ ನಾನು ಈ ವೆಬ್ ಸೈಟ್ ನೋಡಿದ್ದು. ನನಗೆ ಇದನ್ನು ಅತ್ಯಂತ ಖುಷಿ ಆಗುತ್ತಿದ್ದೆ. ವೇದವನ್ನು ನಿಜವಾದ ಅರ್ಥದಲ್ಲಿ ತಿಳಿಯಲು ನಾನು ಉತ್ಸುಕನಾಗಿದ್ದೇನೆ. ದಯವಿಟ್ಟು ವೇದ ಪಾಠದ ಮೊದಲ ಕಂತಿನಿಂದ ಇಲ್ಲಿಯವರೆಗಿನ ಎಲ್ಲ ಪಾಠಗಳನ್ನು ದಯವಿಟ್ಟು ಕಳುಹಿಸಿಕೊಡಿ ಎಂದು ತಮ್ಮಲ್ಲಿ ಕೋರುತ್ತಿದ್ದೇನೆ.
ಅನಂತ ಧನ್ಯವಾದಗಳೊಂದಿಗೆ
ಮನೋಜ್ ಬಿ ಎ
-------------------------------------------------------------
ಶ್ರೀಯುತ ಶ್ರೀಧರ್ ರವರಿಗೆ ಮಾಡುವ ವ೦ದನೆಗಳು.

ನೀವು  ಹಿ೦ದೂ ಧರ್ಮದ ಬಗ್ಗೆ ವಹಿಸುವ ಕಾಳಜಿ ನನಗೆ ಅತ್ಯಾನ೦ದ ಹಾಗೂ ಆಶ್ಯರ್ಯವನ್ನು ಉ೦ಟು ಮಾಡುತ್ತದೆ.

ಕಾರಣ ನಾನು ರಿಟೈರ್ ಆಗಿದ್ದರೂ ಸಮಯ ಹೊ೦ದಿಸಿಕೊಳ್ಳಲು ಚಡಪಡಿಸಿಕೊಳ್ಳೂತ್ತಾ ಇದ್ದೇನೆ. ಹಾಗೂ ನಿಮ್ಮ


ವೇದ ಸುಧೆಯ ನ್ನು ತೀರ್ಥ, ಪ್ರಸಾದದ ಹಾಗೆ ಸವಿಯುತ್ತಿದ್ದು ಅದನ್ನು ಊಟ(ಭೋಜನ)ದ ಹಾಗೆ ಸವಿಯಲು

ಸಮಯವಿಲ್ಲವೆ೦ದು ನ೦ತರ ವೆ-೦ದು ಪೋಸ್ಟ್ ಪೋನ್ ಮಾಡುತ್ತಿದ್ದಾ ಇದ್ದೇನೆ. ಕಾರಣ ಗಳು ಹಲವಾರು.

ಒಮ್ಮೆ ನಿಮ್ಮನ್ನು ಮುಖತಾ ಭೇಟಿಯಾಗುವೆ.

ಧನ್ಯವಾದಗಳು.

ಮಾಳ ಮುಕು೦ದ ಚಿಪಳೂಣಕರ್.
--------------------------------------------------------------------
 i am one of your recipient of your vedaptha & i following your blog , web site since one year. good going.

 My name : k venugopal bellary.
----------------------------------------------------------------
Gurugale!
Nimma ee prayatna safalavaagali endu devaralli prarthane.EE deshadalle idu prathama endu nanna bhavaane

Vandanegalu
SHivaprasad
----------------------------------------------------------------
ಹರೇ ರಾಮ್,

ಆತ್ಮಿಯ ಶ್ರೀಧರ್ ಅವರೇ,

ನಿಮ್ಮ ಅಂತರ್ಜಾಲದ ವೇದ ಉಪನ್ಯಾಸ ವ್ಯೆವಸ್ಥೆಯಿಂದ ದೂರದಲ್ಲಿ ಇರುವ ನಮ್ಮಂತಹ ಕನ್ನಡಿಗರಿಗೆ ತುಂಬಾ ಅನುಕೂಲವಾಗಿದೆ. ಇದಕ್ಕಾಗಿ ನಾವು ನಿಮಗೆ ಚಿರಋಣಿ.
ಇ-ಮೇಲ್ ಮುಖಾಂತರ ವೇದ ಪಾಠ ಸಿಗುತ್ತಿರುವುದು ನಮಗೆ ಬಹಳ ಸಂತೋಷವಾಗಿದೆ. ನಾವು ವೇದಗಳ ಬಗ್ಗೆ ತಿಳಿಯಲು ಉತ್ಸುಕರಾಗಿದ್ದೇವೆ.
ದಯವಿಟ್ಟು ವೇದಪಾಠವನ್ನು ಈ ನಮ್ಮ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿ.

alavandimath@gmail.com
pradeep.hedge@gmail.com

ಧನ್ಯವಾದಗಳೊಂದಿಗೆ,
ಶಿವರಾಜ್ ಆಳವಂಡಿಮಠ
ಪ್ರದೀಪ್ ಹೆಗಡೆ

London, UK
-------------------------------------------------------------------------
ನಮಸ್ತೆ ಶ್ರೀ ಶ್ರೀಧರ್ ರವರಿಗೆ. ಈಗಷ್ಟೇ ವೇದಸುಧೆಯ ತಾಣವನ್ನು ನೋಡಿ ನಿಮಗೆ ಕೋರಿಕೆ ಕಳುಹಿಸುತ್ತಿದ್ದೇನೆ. ವೇದಪಾಠವನ್ನು ಹೀಗೂ ತಿಳಿಯಬಹುದೆ೦ಬ ಕಲ್ಪನೆಯೂ ಇರಲಿಲ್ಲ. ವೇದವೆ೦ದರೆ ಸ೦ಸ್ಕೃತ ಬಲ್ಲವರಿಗೆ ಮಾತ್ರ ಎ೦ದು ತಿಳಿದಿದ್ದೆ. "ಶ್ರೀ ಸುಧಾಕರ ಶರ್ಮರ " ವೇದವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎ೦ಬ ನಿಮ್ಮ ಲೇಖನವನ್ನು ಓದಿ , ಎಲ್ಲರೂ ವೇದಗಳನ್ನು ತಿಳಿಯಬಹುದು ಎ೦ಬ ಆಶಯ ಮೂಡಿದೆ. ಬಹಳ ಉತ್ತಮವಾದ ಕಾರ್ಯ ಸರ್. ಶುಭವಾಗಲಿ.

ದಯವಿಟ್ಟು ನನಗೆ ವೇದಪಾಠದ ಮೊದಲ ಕ೦ತುಗಳಿ೦ದ ಇಲ್ಲಿಯವರೆಗೆ ನಡೆದ ಕ೦ತುಗಳನ್ನು ಮೈಲ್ ಮಾಡಿ ಎ೦ದು ಕೋರಿಕೊಳ್ಳುತ್ತಿದ್ದೇನೆ. ಹಾಗೂ ವೇದಪಾಠಕ್ಕೆ ಈ-ಚ೦ದಾದಾರನಾಗಲು ಬಯಸಿದ್ದೇನೆ.

ಪ್ರಣಾಮಗಳೊ೦ದಿಗೆ,
ರವಿಶಂಕರ್
--------------------------------------------------------------------
ಶ್ರೀಯುತ ಹರಿಹರಪುರಶ್ರೀಧರ್ ಅವರಿಗೆ ನಮಸ್ಕಾರಗಳು,

ವೆಧಸುಧೆ ತಾಣವನ್ನು ನಾನು ಬಹಳ ಗಂಭಿರವಾಗಿ ಮತ್ತು ಸಂತೋಷದಿಂದ ಹಿಂಬಾಲಿಸುತಿದ್ದೇನೆ. ಈಗಷ್ಟೇ ಶುರುವಾಗಿರುವ ವೇದ ಪಾಠ (ವೇದ ಪಾಠ - ೩) ಕೇಳಿದೆ. ಆದರೆ ಕೊಟ್ಟಿರುವ ೩ ಕೊಂಡಿಗಳು ಪೂರ್ಣ ಆವೃತ್ತಿಯನ್ನು ಒಳಗೊಂಡಿಲ್ಲ. ದಯವಿಟ್ಟು ಎಲ್ಲ ಪಾಟಗಳನ್ನು ಅಂತರ್ಜಾಲದ ಮೂಲಕ ನಾವು ಪೂರ್ತಿಯಾಗಿ ಕೇಳುವ / ಕಲಿಯುವ ಅವಕಾಶ ಮಾಡಿಕೊಡಿ.

ಅನಂತ ಪ್ರನಾಮಗಳೊಂದಿಗೆ,
ಭಾರತ್
ಬೆಂಗಳೂರು

Tuesday, September 11, 2012

ವೇದ ಪಾಠ-5


ಕಳೆದ ಭಾನುವಾರ ಶ್ರೀ ವಿಶ್ವನಾಥ ಶರ್ಮರು ಅನ್ಯ ಕಾರ್ಯಕ್ರಮದಲ್ಲಿದ್ದುದರಿಂದ ಶ್ರೀ ಪ್ರಸಾದ್ ಅವರು ಪಾಠವನ್ನು ನಡೆಸಿದ್ದು ಸರಿಯಷ್ಟೆ. ಇಂದು ಶ್ರೀ ವಿಶ್ವನಾಥ ಶರ್ಮರು ವಿಶೇಷ ತರಗತಿಯನ್ನು ನಡೆಸಿ ದರು.

ಇಂದಿನ ವೇದ ಪಾಠದಲ್ಲಿ ಬಂದ ವಿಷಯಗಳು

1.ಮಾತೃ ಭ್ಯೋನಮ:|ಪಿತೃಭ್ಯೋನಮ:|ಆಚಾರ್ಯೇಭ್ಯೋನಮ:|ಶ್ರೀ ಗುರುಭ್ಯೋನಮ:|

ಈ ಮಂತ್ರವನ್ನು ನಾವೆಲ್ಲಾ ಕೇಳಿದ್ದೇವೆ. ನಮಗೆ  ಈ ಮಂತ್ರಗಳು ಎಷ್ಟು ಅರ್ಥವಾಗಿವೆ?  ಅವುಗಳ ವಿವರಣೆ ಇಲ್ಲಿ ಕೇಳಿ

2. ಮಾತೃ ಭ್ಯೋನಮ:........ಇತ್ಯಾದಿ ಹೇಳುವಾಗ ನನ್ನ ಜವಾಬ್ದಾರಿ ಏನು?

3. ಜನಿವಾರ ಏನು ಸೂಚಿಸುತ್ತದೆ?

4. ಭಕ್ತ ಅಂದರೆ ಯಾರು?

5. ಪ್ರಣವ ಅಂದರೇನು?

6. ಓಂಕಾರ ಏಕೇ?

7. ಪೂಜೆ ಅಂದರೇನು?

ಈ ವಿವರಣೆಯ ಜೊತೆಗೆ  ಮಂತ್ರಪಾಠವಾಯ್ತು. ಹಿಂದಿನ ಪಾಠವನ್ನು ಪುನ: ಹೇಳಿಕೊಟ್ಟರು.  ಇಂದು ಹೇಳಿಕೊಟ್ಟಿರುವ ಗಣಾನಾಂ ತ್ವಾ...ಮಂತ್ರವನ್ನು  ಅನುಸರಿಸಲು ಕೋರುವೆ.
ವೇದಪಾಠಕ್ಕಾಗಿ ವೇದಸುಧೆಡಾಟ್ ಕಾಮ್ ಭೇಟಿಮಾಡಿ

Sunday, September 9, 2012

ವೇದಪಾಠ-4


ಇಂದು ನಡೆದ ವೇದ ಪಾಠದಲ್ಲಿ ಇಲ್ಲಿರುವ ಮಂತ್ರದ ಪೂರ್ವಾರ್ಧ ಭಾಗವನ್ನು ಮಾತ್ರ ಹೇಳಿಕೊಡಲಾಗಿದೆ. ವೇದ ಪಾಠದ ಆರಂಭದಲ್ಲಿ ರೆಕಾರ್ಡ್ ಮಾಡಿಲ್ಲವಾದ್ದರಿಂದ ಸ್ವರ ಪರಿಚಯ, ಹಾಗೂ ಪಾಠದ ಆರಂಭದ ಭಾಗವನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಇದೇ ಪಾಠವನ್ನು ಪುನ: ಮಾಡ ಲಾಗುತ್ತದೆ. ಇಂದು ಗುರುಗಳಾದ ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ಮಂಗಳೂರಿನಲ್ಲಿ ನಡೆಯುತ್ತಿರುವ ಒಂದು ವೇದ ಸಂಬಂಧಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಿಂದ ಅವರ ಶಿಷ್ಯರಾದ ಚನ್ನರಾಯಪಟ್ಟಣದ ಶ್ರೀ ಪ್ರಸಾದ್ ಅವರು ವೇದ ಪಾಠವನ್ನು ಮಾಡಿರುತ್ತಾರೆ. ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ದಿನಾಂಕ 11.9.2012 ರಂದು ಮಂಗಳವಾರ ಬೆಳಿಗ್ಗೆ 10.30 ಕ್ಕೆ ವಿಶೇಷ ಪಾಠವನ್ನು ಮಾಡ ಲಿದ್ದಾರೆ. ಇಂದು ಹೇಳಿಕೊಟ್ಟಿರುವ ಮಂತ್ರದ ಅರ್ಥ-ವಿವರಣೆಯನ್ನು ಕೊಡಲಿದ್ದಾರೆ. ಅದರ ಆಡಿಯೋ ಕ್ಲಿಪ್ ಕೂಡ ಅಳವಡಿಸಲಾಗುವುದು. ಅಲ್ಲದೆ ಸ್ವರಬದ್ಧ ಉಚ್ಚಾರಣೆ ಬಗ್ಗೆಯೂ ತಿಳಿಸಲು ಕೋರಲಾಗುವುದು. ಈ ಮೇಲ್ ಮೂಲಕ ಪಾಠವನ್ನು ಪಡೆಯುತ್ತಿರುವ ಹಾಗೂ ಇದೇ ತಾಣದಮೂಲಕ ಅನುಸರಿಸುತ್ತಿರುವ ವಿದ್ಯಾರ್ಥಿಗಳಲ್ಲಿ ವಿನಂತಿ ಏನೆಂದರೆ ನೀವು ಇಲ್ಲಿ ಹೇಳಿಕೊಡುತ್ತಿರುವ ಮಂತ್ರಗಳನ್ನು ಸ್ವರ ತಪ್ಪದಂತೆ ಕಂಠಪಾಠ ಮಾಡುವುದು ಅವಶ್ಯಕ. ಸ್ವರಬದ್ಧ ಉಚ್ಚಾರಣೆಗೆ ನಿತ್ಯ ಅಭ್ಯಾಸ ಅನಿವಾರ್ಯ. ಮಂತ್ರಗಳು ಚಿಕ್ಕದಾದ್ದರಿಂದ "ಏನು ಮಹಾ?" ಎಂಬ ಉದಾಸೀನ ಬೇಡ. ಅಭ್ಯಾಸ ಮಾಡಿದಮೇಲೆ ನಿಮ್ಮ ಧ್ವನಿಯಲ್ಲಿ ರೆಕಾರ್ಡ್ ಮಾಡಿ ಕೇಳಿ ಅಲ್ಲದೆ ಗುರುಗಳ ಪಾಠಕ್ಕೆ ತಾಳೆ ಮಾಡಿಕೊಂಡು ನೋಡಿ. ಶುದ್ಧ ಸ್ವರ ಕ್ಕೆ ಗಮನ ಈಗಲೇ ಕೊಟ್ಟರೆ ಮುಂದೆ ಸುಲಭವಾಗುವುದು. ಹೀಗೂ ಮಾಡಬಹುದು...ನಿಮ್ಮ ಧ್ವನಿಯಲ್ಲಿ ವಿಶ್ವಾನಿ ದೇವ...ಮಂತ್ರವನ್ನು ರೆಕಾರ್ಡ್ ಮಾಡಿ ವೇದಸುಧೆಗೆ ಮೇಲ್ ಮಾಡಿದರೆ ಗುರುಗಳ ಗಮನಕ್ಕೆ ತರಲಾಗುವುದು.
ವೇದಪಾಠ-4 ರ ಆಡಿಯೋ ಗಾಗಿ ಇಲ್ಲಿ  ನೇರವಾಗಿ vedasudhe.com  ಪ್ರವೇಶಿಸಿ.

Monday, September 3, 2012

ವೇದ ಪಾಠ-3


ಅಂತರ್ಜಾಲದ ಮೂಲಕ ಅನುಸರಿಸುತ್ತಿರುವ ವೇದಸುಧೆಯ ಅಭಿಮಾನಿಗಳು ನಿಮ್ಮ ಹೆಸರು ಇತ್ಯಾದಿ ವಿವರಗಳನ್ನು ದಯಮಾಡಿ mail@vedasudhe.com ಗೆ ಮೇಲ್ ಮಾಡಲು ಕೋರುವೆ

ವೇದಪಾಠದ ಆಡಿಯೋ ಗಾಗಿ ಕೊಂಡಿ ಇಲ್ಲಿದೆ.

ಈ-ಅಂಚೆಯ ಮೂಲಕ ವೇದಪಾಠವನ್ನು ತರಿಸಿಕೊಳ್ಳುತ್ತಿರುವವರ ವಿವರ

1. Prakash MV,  
2. K.Chittaranjan ,
3.. Milan.mahale 
4. Girish Nagabhushan  
5. Venugopal  
6. Lakshmi narayana Rao
7. N.R.Suresh  
8. Sudha
9. Santhoshsharma
10.Prasanna, Shankarapura
11. S.N.kelkar
12.D.M.Marathe  
13. Swarna N.P
14.H.S.Krishna Murthy 
15. H.N.Praksh ,
16.Srinivaasa Bhaskar
17.Dr.Dayananda
18. Rudresh  
19.M.D.Hally Kalachar
20. Umesh
21Raghava S.
22. R.Ramesh Rao
23.Badarinath palavalli  
24.jairambharath
25.Dhanaraj-Bhagalkot



ಈಗಾಗಲೇ ತರಗತಿಗೆ ಉಚಿತವಾಗಿ 60 ವಿದ್ಯಾರ್ಥಿಗಳ ನೊಂದಣಿ ಯಾಗಿದ್ದು ಹೊಸದಾಗಿ ಹಲವರು ಈ ವಾರದ ತರಗತಿಗೂ ಬಂದಿರುವುದರಿಂದ ಪಾಠವು ಪುನರಾವೃತ್ತಿಯಾಗಿದ್ದು ಇನ್ನು ಒಂದೆರಡು ತರಗತಿಗಳ ನಂತರ ಖಚಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮುಂದಿನ ಪಾಠಗಳು ಮುಂದುವರೆಯುತ್ತವೆ.

-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ

Friday, August 24, 2012


ವೇದಸುಧೆಯ ಅಭಿಮಾನಿಗಳೇ ,


ಕಳೆದ 19.8.2012 ಭಾನುವಾರ ಉದ್ಘಾಟನೆಗೊಂಡ "ಎಲ್ಲರಿಗಾಗಿ ವೇದ ಪಾಠ" ಸಾಪ್ತಾಹಿಕ ತರಗತಿಯಲ್ಲಿ ದಿನಾಂಕ 20.8.2012 ರಂದು ಪ್ರಥಮ ಪಾಠ ನಡೆದು ಅದರಲ್ಲಿ ಮೂವತ್ತು ಜನ ಆಸಕ್ತರು ಉತ್ಸಾಹದಿಂದ ಪಾಲ್ಗೊಂಡರು. ಮುಂದಿನ ತರಗತಿಯು ದಿನಾಂಕ 26.8.2012 ರಂದು ನಡೆಯಬೇಕಿದ್ದು ಅಂದು ವೇದಾಧ್ಯಾಯೀ  ಶ್ರೀ ವಿಶ್ವನಾಥ ಶರ್ಮರು ವೇದಕ್ಕೆ ಸಂಬಂಧಿಸಿದ ಒಂದು ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಬೇಕಾದ್ದರಿಂದ  ಅಂದಿನ ಬದಲು ಮುಂಚಿತವಾಗಿಯೇ ದಿನಾಂಕ 23.8.2012 ರಂದು ಗುರುವಾರ ಎರಡನೇ ಪಾಠವು ನಡೆಯಿತು.  ನೇರವಾಗಿ ಪಾಲ್ಗೊಂಡವರ ಜೊತೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು ಅಂತರ್ ಜಾಲದಲ್ಲಿ ಪಾಠವನ್ನು ಅನುಸರಿಸುತ್ತಿರುವುದು ತಿಳಿದುಬಂದಿದೆ. ಅಲ್ಲದೆ ಹತ್ತು ಜನರು ಪಾಠವನ್ನು ಮೇಲ್ ಮೂಲಕ ಪಡೆದು ಅಭ್ಯಾಸವನ್ನು ಆರಂಭಿಸಿರುತ್ತಾರೆ. ಇನ್ನು ಮುಂದೆ    mail@vedasudhe.com  ಗೆ ಮೇಲ್ ಮಾಡಿ ತಮ್ಮ ಅಭಿಪ್ರಾಯ/ಸಲಹೆಯನ್ನು ನೀಡಲು ಕೋರುವೆ.

ಹರಿಹರಪುರ ಶ್ರೀಧರ್
-ಸಂಪಾದಕ

Tuesday, August 21, 2012

ವೇದ ಪಾಠದಲ್ಲಿ ಕೇಳಿದ್ದು


ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಹಾಸನದಲ್ಲಿ ದಿನಾಂಕ 19.8.2012 ಭಾನುವಾರ ಸಾಪ್ತಾಹಿಕ ವೇದಪಾಠವನ್ನು ಆರಂಭ ಮಾಡಿದ್ದಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ಸುದ್ಧಿಮಾಡಿದಾಗ ಹಲವರು ದೂರವಾಣಿ ಕರೆಮಾಡಿ ನಮಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಅವುಗಳಲ್ಲಿ ಕೆಲವು ಇಲ್ಲಿವೆ

1.ಎಲ್ಲಾ ಜಾತಿಯವರೂ ಬರಬಹುದೇ?

2.ಹೆಂಗಸರೂ ಬರಬಹುದೇ?

3.ಯಾವ ಯಾವ ಮಂತ್ರಗಳನ್ನು ಹೇಳಿಕೊಡುತ್ತಾರೆ?

4.ಪೂಜಾ ಮಂತ್ರವನ್ನೂ ಹೇಳಿಕೊಡುತ್ತಾರಲ್ಲವೇ?

5.ಶುಲ್ಕ?

6.ಇನ್ನೂ ಹಲವು ಪ್ರಶ್ನೆಗಳು.ನನ್ನ ಮಗನಿಗೆ ಈ ವರ್ಷ ಮುಂಜಿ ಮಾಡಿದ್ದೇನೆ. ಅವನನ್ನು ಕಳಿಸುತ್ತೇನೆ...ಇತ್ಯಾದಿ...ಇತ್ಯಾದಿ....

ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರ." ಬನ್ನಿ ಎಲ್ಲಾ ತಿಳಿಯುತ್ತೆ"

ಹೌದು, ಆಸಕ್ತರು ಬಂದರು. ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ಅವರ ಉಪನ್ಯಾಸದಲ್ಲಿ ಎಲ್ಲರ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದರು. ಉಪನ್ಯಾಸ ಕೇಳಿದ ಮೇಲೆ ಹಲವರು ಹೇಳಿದ್ದು..

1.ಮಂತ್ರ ಕಲಿಯೋಣ ಅಂತಾ ಬಂದೆ, ಜೀವನದ ಪಾಠ ಆರಂಭಿಸಿದ್ದಾರೆ. ನನಗಂತೂ ಆಶ್ಚರ್ಯವಾಗಿದೆ.

2.ವೇದಾಧ್ಯಯನ ಮಾಡುವವರು ಸತ್ಯವನ್ನೇ ಹೇಳಬೇಕು, ಅಹಿಂಸಾವಾದಿಗಳಾಗಿರಬೇಕು,.......ಯಾರೂ ವೇದಪಾಠದಲ್ಲಿ ಹೀಗೆ ಹೇಳಿಯೇ ಇರಲಿಲ್ಲ.

3. ಮನುಷ್ಯರೆಲ್ಲಾ ಒಂದೇ ಜಾತಿ! ಊಹಿಸಲೂ ಸಾಧ್ಯವಿಲ್ಲವಲ್ಲಾ!

4.ದೇವರ ಕಲ್ಪನೆಯೇ ವಿಭಿನ್ನ! ಪೂಜೆಯ ಕಲ್ಪನೆಯೇ ವಿಭಿನ್ನ! 33 ಕೋಟಿ ದೇವರು?

ವಿಶ್ವನಾಥಶರ್ಮರ ಉಪನ್ಯಾಸದ 5-10 ನಿಮಿಷಗಳ 5 ತುಣುಕುಗಳನ್ನು ಇಲ್ಲಿ ಕೇಳಿ.

ವೇದ ಪಾಠದ ಆಡಿಯೋ ಇಲ್ಲಿ ಕೇಳಿ



Monday, August 20, 2012

ವೇದಪಾಠ-1



ವೇದಸುಧೆಗೆ ನಿನ್ನೆ ಒಂದು ವಿಶೇಷ ದಿನವೇ ಹೌದು.ಹಲವಾರು ದಿನಗಳಿಂದ ಬಯಸುತ್ತಿದ್ದ ವೇದಪಾಠ ಸಾಪ್ತಾಹಿಕ ತರಗತಿಯು   ನಿನ್ನೆ ಉದ್ಘಾಟನೆಯಾಗಿ ಇಂದು ಮೊದಲಪಾಠ ಶುರುವಾಯ್ತು. ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಬಹಳ ವಿಶಿಷ್ಟವಾಗಿ ಆರಂಭಿಸಿದ ವೇದಪಾಠವು ಹಲವರಿಗೆ ಅಚ್ಚರಿಯುಂಟುಮಾಡಿತು. ವೇದ ಪಾಠ ಎಂದರೆ ಹೀಗೂ ನಡೆಯುತ್ತದೆಯೇ! ಎಂಬ ಆಶ್ಚರ್ಯ ಕೆಲವರಿಗೆ. ಕೆಲವರು ಕೇಳಿದರು" ಪೂಜೆಯ ಮಂತ್ರಗಳನ್ನು ಯಾವಾಗ ಹೇಳಿಕೊಡ್ತೀರಿ? ಬಹುಪಾಲು ಜನರಿಗೆ ವಿಶ್ವನಾಥಶರ್ಮರು ಪೀಠಿಕೆಯ ರೂಪದಲ್ಲಿ ಮಾಡಿದ ಉಪನ್ಯಾಸದಿಂದ "ಇಲ್ಲಿ ನಡೆಯುವ ವೇದ ಪಾಠವೆಂದರೆ ಕೇವಲ ಮಂತ್ರ ಕಲಿಯುವುದಲ್ಲ" ಎಂಬ ಅರಿವುಂಟಾಗಿದೆ.ವೇದಸುಧೆಯ ಅಭಿಮಾನಿಗಳು ಬಯಸುವುದಾದರೆ ಶರ್ಮರು ಹೇಳಿಕೊಡುತ್ತಿರುವ ಪಾಠವನ್ನು  ಪ್ರತೀ ವಾರ ಇಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ಫೀಡ್ ಬ್ಯಾಕ್ ಇದ್ದರೆ ಉತ್ತಮ

ಕೊಂಡಿಯಲ್ಲಿರುವ ಆಡಿಯೋ ಕ್ಲಿಪ್ ನಿಮಗೆ ಮೇಲ್ ಮಾಡಬೇಕೇ? ನನಗೊಂದು  ಮನವಿ ಮೇಲ್ ಕಳಿಸಿ.ಕೂಡಲೇ  ಮೇಲ್ ಮಾಡುವೆ.
.

ಪಾಠ-1  ಆಡಿಯೋ ಕ್ಲಿಪ್  ಇಲ್ಲಿ ಕೇಳಿ



ಹಾಸನದಲ್ಲಿ ಎಲ್ಲರಿಗಾಗಿ ವೇದಪಾಠದ ಆರಂಭ










ಹಾಸನ ಹೊಯ್ಸಳ ನಗರದ ಶ್ರೀ ಶಕ್ತಿ ಗಣಪತಿ ದೇವಾಲಯ ರಸ್ತೆಯಲ್ಲಿನ ‘ಈಶಾವಾಸ್ಯಂ’ ಕಾರ್ಯಾಲಯದಲ್ಲಿ ‘ವೇದ ಭಾರತೀ ಸಂಪ್ರತಿಷ್ಠಾನಂ’ ಹಾಸನ ಶಾಖೆ ವತಿಯಿಂದ ಭಾನುವಾರದಿಂದ ಆರಂಭವಾದ ‘ಎಲ್ಲರಿಗಾಗಿ ವೇದ’ ಎಂಬ ಸಾಪ್ತಾಹಿಕ ವೇದ ಪಾಠ ತರಗತಿಗಳನ್ನು ಶ್ರೀ ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ಎಸ್. ಕೃಷ್ಣಸ್ವಾಮಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಗಿನ್ನೀಸ್ ದಾಖಲೆಯ ಕು. ಸ್ವಾತಿ ಭಾರದ್ವಾಜ್ ಅವರಿಂದ ಆಕರ್ಷಕ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.

‘ಮನುಜ ಮತಕ್ಕಾಗಿಯೇ ವೇದ ಪಥವಿದೆ’: ಶರ್ಮಾಜಿ
ಹಾಸನ, ಆ. ೧೯: ವೇದಗಳು ಯಾವುದೇ ಜಾತಿ, ಮತ, ಲಿಂಗ ಇತ್ಯಾದಿಗಳಿಗೆ ಸೀಮಿತವಾದುವಲ್ಲ; ವೇದಗಳು ಈ ಜಗತ್ತಿನ ಎಲ್ಲರಿಗಾಗಿಯೂ ಇವೆ; ಮನುಜ ಮತಕ್ಕಾಗಿಯೇ ವೇದ ಪಥವಿದೆ; ಸರ್ವರೂ ಇವುಗಳನ್ನು ಅರ್ಥ ಸಹಿತ ಅಧ್ಯಯನ ಮಾಡಿ ಆಚರಣೆಗೆ ತಂದಲ್ಲಿ ನಿಜಕ್ಕೂ ಮನುಕುಲ ಉದ್ಧಾರವಾಗುತ್ತದೆ ಎಂದು ಬೇಲೂರಿನ ಸಂಸ್ಕೃತ ಪಾಠಶಾಲೆ ಆಚಾರ್ಯರಾದ ವೇದಾಧ್ಯಾಯಿ ಶ್ರೀ ವಿಶ್ವನಾಥ ಶರ್ಮ ತಿಳಿಹೇಳಿದರು.
ನಗರದ ಹೊಯ್ಸಳ ನಗರದ ಶ್ರೀ ಶಕ್ತಿ ಗಣಪತಿ ದೇವಾಲಯ ರಸ್ತೆಯಲ್ಲಿನ ‘ಈಶಾವಾಸ್ಯಂ’ ಕಾರ್ಯಾಲಯದಲ್ಲಿ ‘ವೇದ ಭಾರತೀ ಸಂಪ್ರತಿಷ್ಠಾನಂ’ ಹಾಸನ ಶಾಖೆ ವತಿಯಿಂದ ಭಾನುವಾರದಿಂದ ಆರಂಭವಾದ ‘ಎಲ್ಲರಿಗಾಗಿ ವೇದ’ ಎಂಬ ಸಾಪ್ತಾಹಿಕ ವೇದ ಪಾಠ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ವೇದಗಳನ್ನು ಅರಿಯದವರು, ಮತ್ತು ಅವುಗಳ ಕುರಿತು ಪ್ರಾಥಮಿಕ ಜ್ಞಾನ ಸಹ ಇಲ್ಲದವರು ಪೂರ್ವಾಗ್ರಹ ಪೀಡಿತರಾಗಿ ವಿನಾಕಾರಣ ಅವುಗಳನ್ನು ಟೀಕಿಸುವುದು, ಜರೆಯುವುದು, ಅವುಗಳ ವಿರುದ್ಧ ದ್ವೇಷ ಸಾಧಿಸುವುದು ಮಾಡುತ್ತಾರೆ. ಇಂತಹವರ ವರ್ತನೆಗಳಿಂದೇನೂ ವೇದದ ಹಿರಿಮೆ ಅಥವಾ ಘನತೆ ಖಂಡಿತಾ ಕುಗ್ಗುವುದಿಲ್ಲ. ಆದ್ದರಿಂದ ಇಲ್ಲಸಲ್ಲದ ಪೂರ್ವಾಗ್ರಹ ಪೀಡಿತ ಭಾವನೆ ಇರುವವರು ಮೊದಲು ವೇದಗಳು ಎಂದರೇನು? ಅವುಗಳಲ್ಲಿ ಏನಿದೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಬೇಕು; ವೇದ ಎಂದರೆ ಜ್ಞಾನ ಎಂದು ಅರ್ಥ. ಮನುಷ್ಯನಾದವನು ಹೇಗೆ ತನ್ನ ಬದುಕು ಸಾಗಿಸಬೇಕು ಎಂಬುದನ್ನು ವೇದ ತಿಳಿಸಿಕೊಡುತ್ತದೆ. ಹೀಗಾಗಿ ವೇದ ಮಂತ್ರಗಳನ್ನು ಯಥಾವತ್ತು ಕಲಿಯಲೇಬೇಕು; ಪಠಿಸಲೇಬೇಕು ಎಂದೇನೂ ಇಲ್ಲ; ವೇದಗಳಲ್ಲಿನ ಜ್ಞಾನವನ್ನು ನಮ್ಮದಾಗಿಸಿಕೊಂಡರೂ ಸಾಕು; ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಶರ್ಮಾಜಿ ಕಿವಿಮಾತು ಹೇಳಿದರು.
ವೇದಗಳು ಅವುಗಳದೇ ಆದ ವೇದ ಭಾಷೆಯಲ್ಲಿವೆಯೇ ಹೊರತು ಸಂಸ್ಕೃತದಲ್ಲಿಲ್ಲ. ವೇದ ಭಾಷೆಯಿಂದ ಸಂಸ್ಕೃತ ಹುಟ್ಟಿಕೊಂಡಿದೆ. ಹೀಗಾಗಿ ವೇದದ ಶಬ್ದಗಳಿಗೆ ಅದರದೇ ಆದ ವೈಜ್ಞಾನಿಕ ಅರ್ಥಗಳಿವೆ. ಈ ಅರ್ಥಗಳನ್ನು ವಿವರಿಸಲಿಕ್ಕಾಗಿಯೇ ನಿರುಕ್ತ ಎಂಬ ವೇದಾಂಗವಿದೆ. ಜಾತಿ, ವರ್ಣ ಇತ್ಯಾದಿ ಶಬ್ದಗಳಿಗೆ ವೇದಗಳು ನೀಡುವ ಅರ್ಥಗಳೇ ಬೇರೆಯಾಗಿವೆ. ಜೀವವೊಂದು ಹುಟ್ಟುವ ವಿಧಾನವೇ ‘ಜಾತಿ’ ಎನಿಸಿಕೊಳ್ಳುತ್ತದೆ. ಮನುಷ್ಯನಾಗಿ ಹುಟ್ಟಿದರೆ ಮನುಷ್ಯ ಜಾತಿ; ಕುರಿ; ಕೋಳಿಯಾಗಿ ಹುಟ್ಟಿದರೆ ಅವುಗಳದ್ದೇ ಜಾತಿ ಅಷ್ಟೇ ಹೊರತು ಈಗ ನಾವು ವಿಂಗಡಿಸಿರುವ ಬ್ರಾಹ್ಮಣ, ಲಿಂಗಾಯಿತ, ಕುರುಬ ಇತ್ಯಾದಿಗಳಿಗೆ ಅರ್ಥವಿಲ್ಲ. ಅದೇ ರೀತಿ ವರ್ಣ ಎಂದರೆ ‘ಆರಿಸಿಕೊಳ್ಳುವುದು’ ಎಂಬ ಅರ್ಥವಿದೆಯೇ ಹೊರತು; ಈಗ ನಾವು ಹೇಳುವ ಜಾತಿ ಆಧಾರಿತ ವರ್ಣಾಶ್ರಮ ವ್ಯಾಖ್ಯಾನಕ್ಕೆ ಅರ್ಥವಿಲ್ಲ ಎಂದು ಅವರು ವಿವರಿಸಿದರು. ನಮ್ಮ ವೇದಗಳಲ್ಲಿನ ಪ್ರತಿಯೊಂದು ಜ್ಞಾನವನ್ನು ಆಚರಣೆಗೆ ತರಲೂ ಸಹ ನಾವು ವಿದೇಶಿಯರನ್ನೇ ಒರೆಗಲ್ಲಾಗಿ ಇಟ್ಟುಕೊಂಡಿರುವುದು ಹಾಗೂ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ತಂದುಕೊಂಡಿರುವುದ ದೊಡ್ಡ ದುರಂತ ಹಾಗೂ ವಿಪರ‍್ಯಾಸ ಎಂದು ಶರ್ಮಾಜಿ ನಿದರ್ಶನಗಳ ಸಹಿತ ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ಎಸ್. ಕೃಷ್ಣಸ್ವಾಮಿ ಮಾತನಾಡಿ, ಅರೆಬರೆ ಜ್ಞಾನ ಹೊಂದಿದ ಅಜ್ಞಾನಿಗಳು ಹೇಳುವಂತೆ ವೇದಗಳು ಯಾರ ಸ್ವತ್ತೂ ಅಲ್ಲ; ಅಥವಾ ಅವು ಒಂದು ಪಂಗಡಕ್ಕೆ ಮಾತ್ರ ಸೀಮಿತವೂ ಅಲ್ಲ; ಅದನ್ನು ಯಾರು ಬೇಕಾದರೂ ಕಲಿಯಬಹುದು. ಇವುಗಳನ್ನು ಬರೆದವರು ಯಾರು ಮತ್ತು ಯಾವ ಕಾಲದಲ್ಲಿ ಹುಟ್ಟಿಕೊಂಡವು ಎಂಬ ನಿಖರ ಮಾಹಿತಿ ಇಲ್ಲವಾದ್ದರಿಂದ ವೇದಗಳನ್ನು ‘ಅಪೌರುಷೇಯ’ ಎಂದಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಗಿನ್ನೀಸ್ ದಾಖಲೆಯ ಕು. ಸ್ವಾತಿ ಭಾರದ್ವಾಜ್ ಅವರಿಂದ ಆಕರ್ಷಕ ಭರತ ನಾಟ್ಯ ಕಾರ್ಯಕ್ರಮ ನಡೆಯಿತು. ‘ವೇದ ಸುಧೆ’ ಬ್ಲಾಗ್ ಗೌರವ ಸಂಪಾದಕ ಕವಿ ನಾಗರಾಜ್ ಅವರು ಸ್ವಾಗತಿಸಿದರಲ್ಲದೆ, ಕಲಾವಿದೆ ಕು. ಸ್ವಾತಿ ಭಾರದ್ವಾಜ್ ಪರಿಚಯ ಮಾಡಿಕೊಟ್ಟರು. ಬ್ಲಾಗ್ ಸಂಪಾದಕರಾದ ಹರಿಹರಪುರ ಶ್ರೀಧರ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕು. ಸ್ವಾತಿ ತಂದೆ ಪ್ರಕಾಶ್ ಹಾಗೂ ತಾಯಿ ಅನಿತಾ ಪ್ರಕಾಶ್, ಚ.ರಾ. ಪಟ್ಟಣದ ನಾಟ್ಯ ಭೈರವಿ ಟ್ರಸ್ಟ್ ಅಧ್ಯಕ್ಷ ನಾಗರಾಜ್, ಚೈತನ್ಯ ಶಾಲೆ ಮುಖ್ಯಸ್ಥ ರಮೇಶ್, ವಾಸವಿ ಶಾಲೆಯ ಜಿ.ಎಸ್. ಮಂಜುನಾಥ್ ಮತ್ತಿತರರು ಹಾಜರಿದ್ದರು.






ಹಾಸನ  ದಲ್ಲಿ  ಇದೇ ಸಪ್ಟೆಂಬರ್ 30 ರಂದು ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಪಾಲ್ಗೊಳ್ಳಲಿದ್ದು  ಪ್ರಶ್ನೆಗಳನ್ನು ಕಲಿಸುವವರು ಮತ್ತು ವೇದ ಪಾಠಗಳ ಕುರಿತು ಆಸಕ್ತಿ ಇರುವವರು ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜ್ 9448501806   ಅಥವಾ ಸಂಪಾದಕರಾದ ಶ್ರೀ ಹರಿಹರಪುರಶ್ರೀಧರ್  9663572406 ಅವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ದೃಶ್ಯಾವಳಿಗಾಗಿ ಕೊಂಡಿ ಇಲ್ಲಿದೆ.


ವರದಿ:ಹೆಚ್.ಎಸ್. ಪ್ರಭಾಕರ್,ಹಿರಿಯ ಪತ್ರಕರ್ತರು,ಹಾಸನ