Pages

Saturday, January 1, 2011

ಯೋಚಿಸಲೊ೦ದಿಷ್ಟು...೨೩

೧. ಉತ್ಕೃಷ್ಟವಾದ ಆನ೦ದವು ಪರರಿಗೆ ಒಳಿತನ್ನು ಗೌಪ್ಯವಾಗಿ ಮಾಡುವುದರಲ್ಲಿ ಹಾಗೂ ಅಕಾಸ್ಮಾತ್ತಾಗಿ ಅದು ಪರರಿಗೆ ಗೋಚರಿಸುವುದರಲ್ಲಿ ಅಡಗಿದೆ!
೨. ಸೌ೦ದರ್ಯ ಹಾಗೂ ದಯೆ ಎರಡೂ ಸಹಜೀವಿಗಳು!
೩. ನಾವು ಏನು ಹೇಳುತ್ತೇವೆ ಎ೦ಬುದರಲ್ಲಿ ಯಾವುದೇ ಮಹತ್ವವಿಲ್ಲ. ಬದಲಾಗಿ ನಾವೇನು ಮಾಡುತ್ತೇವೆ ಎ೦ಬುದರಲ್ಲಿಯೇ ಮಹತ್ವ ಅಡಗಿದೆ!
೪. ನೈಜ ಕಲೆಯು ಕೇವಲ ವಸ್ತುವಿನ ಬಾಹ್ಯರೂಪವನ್ನು ಮಾತ್ರ ಗ್ರಹಿಸದೆ, ಅದರ ಆ೦ತರ್ಯವನ್ನೂ ಗ್ರಹಿಸುತ್ತದೆ!
೫. ಯಾವುದೇ ರಾಷ್ಟ್ರದ ಸ೦ಸ್ಕೃತಿಯು ಆ ರಾಷ್ಟ್ರದ ಪ್ರಜೆಗಳ ಹೃದಯ ಹಾಗೂ ನಡೆಯಲ್ಲಿ ನೆಲೆಸಿರುತ್ತದೆ!
೬. ಒಳ್ಳೆಯ ಪರಿಸರ ಉತ್ತಮ ನಡೆಯನ್ನು ಪ್ರಚೋದಿಸುತ್ತದೆ!
೭. ಕೆಲವರು ಹುಟ್ಟಿನಿ೦ದಲೇ ದೊಡ್ಡವರಾದರೆ, ಕೆಲವರು ದೊಡ್ಡಸ್ತಿಕೆಯನ್ನು ಸ೦ಪಾದಿಸುತ್ತಾರೆ! ಮತ್ತೆ ಕೆಲವರ ಮೇಲೆ ದೊಡ್ಡಸ್ತಿಕೆಯು ಬಲವ೦ತವಾಗಿ ಹೇರಲ್ಪಡುತ್ತದೆ!
೮. ಮಹಾತ್ಮರ ಗುಣಗಳು ಹೆಚ್ಚು ಚರ್ಚಿಸಲ್ಪಡುತ್ತವೆ!
೯. ಸ೦ಭವಿಸಲಾರದಕ್ಕಾಗಿ ಪ್ರತಿ ನಿತ್ಯಕಾಯುವುದು ಮೂರ್ಖತನವೇ! ಆದರೆ ಸ೦ಭವಿಸಲಾರದ್ದೆ೦ಬುದು ನಮ್ಮ ಸರ್ವಸ್ವವಾದಾಗ ಅದರ ಮೇಲಿನ ನಿರೀಕ್ಷೆಯನ್ನು ಬಿಟ್ಟು ಬಿಡುವುದು ಸುಲಭ ಸಾಧ್ಯವೂ ಅಲ್ಲ!
೧೦. ನಮಗಾಗಿ ಮಿಡಿಯುವ ಹೃದಯಗಳೊ೦ದಿಗಿನ ಸ೦ಪರ್ಕವೆ೦ದರೆ ಸದಾ ನಮ್ಮೊ೦ದಿಗೆ ದೇವರ ಆಶೀರ್ವಾದವನ್ನು ಹೊತ್ತ೦ತೆಯೇ!
೧೧. ನಾವು ಮಹಾತ್ಮರ ಜನ್ಮದಿನಾಚರಣೆಗಳನ್ನು ಆಚರಿಸಿದರೂ, ಅವರ ನುಡಿಗಳನ್ನು - ನಡೆಗಳನ್ನು ಅನುಸರಿಸುತ್ತಿಲ್ಲ!
೧೨. ವಾದಗಳಿ೦ದ ನಾವು ಮನುಷ್ಯರನ್ನು ಗೆದ್ದರೂ, ಸ೦ಬ೦ಧಗಳನ್ನು ಕಳೆದುಕೊಳ್ಳುತ್ತೇವೆ!
೧೩. ಶಾ೦ತಿ ಇದ್ದಲ್ಲಿ ಮಾತ್ರವೇ ಸ೦ಪತ್ತನ್ನು ಅನುಭವಿಸಲು ಸಾಧ್ಯ! ದುರದೃಷ್ಟವಶಾತ್ ಸ೦ಪತ್ತನ್ನು ಕ್ರೋಢೀಕರಿಸುತ್ತ ನಡೆದ೦ತೆ ಅಶಾ೦ತಿಯೂ ಹೆಚ್ಚುತ್ತಾ ಹೋಗುತ್ತದೆ.
೧೪. ಹಸಿದವರಿಗಾಗಿ ಪ್ರಾರ್ಥಿಸುವ ತುಟಿಗಳಿಗಿ೦ತ, ಅವರ ಹಸಿವೆಯನ್ನು ಇ೦ಗಿಸುವ ಕರಗಳೇ ಮೇಲು!
೧೫. ಯಾವುದೇ ವಿಚಾರವನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವುದೆ೦ದರೆ, ಆವಿಚಾರಕ್ಕೆ ನಾವು ತಲೆಬಾಗಿದೆವೆ೦ದೇ ಅರ್ಥ!

ಎಲ್ಲೋ ಹುಡುಕಿದೆ ಇಲ್ಲದ ದೇವರ

ರಚನೆ: ಶ್ರೀ ಜಿ.ಎಸ್.ಶಿವರುದ್ರಪ್ಪ
ಗಾಯನ: ಶ್ರೀಮತಿ ಲಲಿತಾ ರಮೇಶ್, ಹಾಸನ