Pages

Saturday, June 29, 2013

ವೇದೋಕ್ತಜೀವನ ಶಿಬಿರ

ಓಂ
ವೇದಭಾರತೀ,ಹಾಸನ,

ವೇದೋಕ್ತಜೀವನ ಶಿಬಿರ

ಇದೇ ಆಗಸ್ಟ್ 23,24 ಮತ್ತು  25  ಮೂರು ದಿನಗಳ ವಸತಿ ಶಿಬಿರ

ಮಾರ್ಗದರ್ಶನ:
 ವೇದಾಧ್ಯಾಯೀ ಸುಧಾಕರಶರ್ಮ
ಬೆಂಗಳೂರು

ಸ್ಥಳ:  ಸಹೃದಯ  ಮಂದಿರ,ಶ್ರೀ ಶಂಕರಮಠದ ಆವರಣ,ಹಾಸನ

ಶುಲ್ಕ: 500:00 ರೂಗಳು

ಮೊದಲು ಬಂದ ಕೇವಲ 40  ಜನರಿಗೆ ಅವಕಾಶ

ನೊಂದಾಯಿಸಿಕೊಳ್ಳಲು ಕಡೆಯದಿನ 15.07.2013

ಹರಿಹರಪುರಶ್ರೀಧರ್-9663572406             ಕವಿನಾಗರಾಜ್-9448501804
---------------------------------------------------------------------
ತಾತ್ಕಾಲಿಕ ಸಮಯ ಸಾರಿಣಿ

ಪ್ರಾತ:ಕಾಲ 

5:00  :ಉತ್ಥಾನ

5:00 ರಿಂದ 6:15  :ಶೌಚ-ಸ್ನಾನ-ಪಾನೀಯ

6:15 ರಿಂದ 7:00 :ಯೋಗ-ಪ್ರಾಣಾಯಾಮ [ಶ್ರೀ ಪಾರಸ್ ಮಲ್]

7:15 ರಿಂದ 8:00 :ಸಂಧ್ಯೋಪಾಸನೆ-ಅಗ್ನಿಹೋತ್ರ [ಶ್ರೀ ವಿಶ್ವನಾಥ ಶರ್ಮ]

8:00 ರಿಂದ 8.30  :ಉಪಹಾರ

8:45 ರಿಂದ 11:00 :ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ  ಅವಧಿ-1 ಶ್ರೀ ಸುಧಾಕರಶರ್ಮ]

11:00 ರಿಂದ 12:00 :ವೇದಾಭ್ಯಾಸ [ಶ್ರೀ ವಿಶ್ವನಾಥ ಶರ್ಮ]

ಮಧ್ಯಾಹ್ನ:

12:15 ರಿಂದ 2:30 :ಭೋಜನ ವಿಶ್ರಾಂತಿ

2:45 ರಿಂದ 4:00  :ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ  ಅವಧಿ-2 ಶ್ರೀ ಸುಧಾಕರಶರ್ಮ]

4:00 ರಿಂದ 4:30  :ಪಾನೀಯ

4:30 ರಿಂದ 6:00 :ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ ಅವಧಿ-3 ಶ್ರೀ ಸುಧಾಕರಶರ್ಮ]

6:00 ರಿಂದ 6:40 :ಸಂಧ್ಯೋಪಾಸನೆ-ಅಗ್ನಿಹೋತ್ರ [ಶ್ರೀ ವಿಶ್ವನಾಥ ಶರ್ಮ]

ರಾತ್ರಿ: 

7:00 ರಿಂದ  8:00 :ಉಪನ್ಯಾಸ - ಶ್ರೀ ಸುಧಾಕರಶರ್ಮ

8:15 ರಿಂದ  9:00  :ಭೋಜನ

9:00 ರಿಂದ 10:00  :ವೇದಾಭ್ಯಾಸ [ಶ್ರೀ ವಿಶ್ವನಾಥ ಶರ್ಮ]

ಕೆಲವು ಮಾಹಿತಿಗಳು:

*   ವ್ಯವಸ್ಥೆ:  ವಸತಿ: ಪುರುಷರಿಗೆ ಮತ್ತು ಸ್ತ್ರೀಯರಿಗೆ ಪ್ರತ್ಯೇಕ.  ಸಾತ್ವಿಕ ಆಹಾರ -ವೇದೋಕ್ತ ವಿಚಾರ.

*   ಶಿಬಿರದಲ್ಲಿ ವೇದ ಸಾಹಿತ್ಯ ಮಾರಾಟಕ್ಕೆ ಲಭ್ಯ.

*  ಹೊರ ಊರುಗಳಿಂದ ಬಂದು ಪಾಲ್ಗೊಳ್ಳುವ  ಸ್ತ್ರೀ ಮತ್ತು ಪುರುಷರಿಗೆ  ಪ್ರತ್ಯೇಕವಾದ ಮಲಗುವ ಮತ್ತು ಸ್ನಾನ- ಶೌಚ    
     ಗೃಹದ  ವ್ಯವಸ್ಥೆ ಇರುತ್ತದೆ ಹೊರತೂ ಒಬ್ಬೂಬ್ಬರಿಗೂ ಪ್ರತ್ಯೇಕ ಕೊಠಡಿಗಳಿರುವುದಿಲ್ಲ.

*   ವೇದೋಕ್ತ ಜೀವನ ಶಿಬಿರವು ವಿಹಾರಕ್ಕಾಗಿ ಅಲ್ಲ.

* ಶಿಬಿರಾರ್ಥಿಗಳಿಗೆ ವಿವರವಾದ ಸೂಚನೆಯನ್ನು ಮುಂದೆ ಪ್ರಕಟಿಸಲಾಗುವುದು.ಶಿಬಿರಾರ್ಥಿಗಳು ತಮ್ಮ ಅಂಚೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ವೇದಸುಧೆ ಗೆ ಮೇಲ್ ಮಾಡಬೇಕಾಗಿ ಕೋರಿಕೆ.

* ಹೊರ ಊರಿನಿಂದ ಶಿಬಿರ ಶುಲ್ಕ ಪಾವತಿಸಿರುವವರು 
1.ಶ್ರೀ ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2.ಶ್ರೀ ಸುಹಾಸ್ ದೇಶಪಾಂಡೆ,ಬೆಂಗಳೂರು
3.ಶ್ರೀ ಸುಬ್ರಹ್ಮಣ್ಯ, ಬೆಂಗಳೂರು
4.ಶ್ರೀಮತಿ ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5.ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6.ಶ್ರೀ ಗಿರೀಶ್ ನಾಗಭೂಷಣ್, ಬೆಂಗಳೂರು
* ಹೊರ ಊರಿನಿಂದ  ದೂರವಾಣಿಯ ಮೂಲಕ ನೊಂದಾಯಿಸಿಕೊಂಡಿರುವವರು
1.ಶ್ರೀ ವಿಶ್ವನಾಥ್ ಕಿಣಿ-ಪುಣೆ 
2.ಶ್ರೀ ಮೋಹನ್ ಕುಮಾರ್, ನಂಜನ ಗೂಡು
3.ಶ್ರೀಗುರುಪ್ರಸಾದ್, ಭದ್ರಾವತಿ
4.ಶ್ರೀ ಮಹೇಶ್, ಭದ್ರಾವತಿ
5.ಶ್ರೀ ಶಿವಕುಮಾರ್, ಬೆಂಗಳೂರು
6.ಶ್ರೀ ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ

ಶಿಬಿರಶುಲ್ಕವನ್ನು ಈಗಾಗಲೇ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಶುಲ್ಕ ಪಾವತಿಸಿರುವವರ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಒಟ್ಟು 40 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಹೊರ ಊರುಗಳಿಂದ 15 ಜನರಿಗೆ ಮತ್ತು ಹಾಸನ ಜಿಲ್ಲೆಯಿಂದ 25 ಸಂಖ್ಯೆಗೆ ಮಿತಿಗೊಳಿಸಲಾಗುವುದು. ಶುಲ್ಕ ಪಾವತಿಸಲು  ಕಡೆಯ ದಿನ ಜುಲೈ 15. 



ನಿಜವೋ? ಸುಳ್ಳೋ ? ನಿರ್ಧರಿಸಿ

ಇಂದು ಬೆಳಿಗ್ಗೆ ಜನಶ್ರೀಯಲ್ಲಿ "ಬದುಕಿನ ಬಗೆ" ಕಾರ್ಯಕ್ರಮ ನೋಡಲು ಕುಳಿತೆ. ಆ ಕಾರ್ಯಕ್ರಮಕ್ಕಿಂತ ಮುಂಚೆ ಡಾ. ಆರತಿಯವರು ಹೇಳುವ ಪುರಾಣದ ಕಥೆ ಪ್ರಕಟವಾಗುತ್ತೆ. ಎರಡೂ ಕಾರ್ಯಕ್ರಮ ವೀಕ್ಷಿಸುತ್ತಾ ಅದನ್ನು ರೆಕಾರ್ಡ್ ಮಾಡಿದೆ. ಎರಡೂ ಕ್ಲಿಪ್ ಕೇಳಿ. ಪುರಾಣದ ಕಥೆ ಬೇಕಾ? ನಿಜವಾದ ವೇದದ ಅರಿವು ಜೀವನಕ್ಕೆ ಬೇಕಾ? ನೀವೇ ನಿರ್ಧರಿಸಿ.ಡಾ.ಆರತಿಯವರು ತುಂಬಾ ಸೊಗಸಾಗಿ ಕಥೆ ಹೇಳುತ್ತಾರೆ. ಆದರೆ ಯಾವ ಕಥೆ ಹೇಳಿದರೆ ಜನರಲ್ಲಿ ನಿಜವಾದ ಅರಿವು ಮೂಡುತ್ತದೆ, ಎಂಬುದನ್ನು ಅವರು ವಿಮರ್ಶಿಸಿ ಕಥೆ ಹೇಳಿದರೆ ಜನರಿಗೆ ಏನು ಕೊಡಲು ಹೊರಟಿದ್ದಾರೋ ಅದು ಸಾರ್ಥಕವಾದೀತು, ಎಂಬುದು ನನ್ನ ಅನಿಸಿಕೆ. ವೇದಸುಧೆಯ ಅಭಿಮಾನಿಗಳು ಧ್ವನಿ ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.ವೇದವ್ಯಾಸರು ಇಂತಾ ಕಥೆಯನ್ನೆಲ್ಲಾ ರಚಿಸಿದರೇ? ನನಗೆ ಅನುಮಾನ ಕಾಡಿದೆ. ನಿಮಗೆ?

             ಪೂರ್ವಾಗ್ರಹವಿಲ್ಲದೆ ಪುರಾಣ ಮತ್ತು ವೇದದ ವಿಚಾರವನ್ನು ಏಕ ಕಾಲಕ್ಕೆ ಪ್ರಕಟಿಸುತ್ತಿರುವ ಜನಶ್ರೀವಾಹಿನಿಗೆ ವೇದಸುಧೆಯು ಆಭಾರಿಯಾಗಿದೆ.

ಕೆಳಗಿನ   ಕ್ಲಿಪ್ ಗಳ ಮೇಲೆ ಕ್ಲಿಕ್ ಮಾಡಿ ಪ್ಲೆಯರ್ ನಲ್ಲಿ ಧ್ವನಿ ಕೇಳಿ


ನಿಮ್ಮ ಮಾತನ್ನು ವೇದಸುಧೆಯು ಗೌರವಿಸುತ್ತದೆ

ವೇದಸುಧೆಯ ಆರಂಭದಿಂದಲೂ ಸತ್ಯಾನ್ವೇಶಣೆಯಲ್ಲಿ ತನ್ನ ಎಲ್ಲಾ ಪ್ರಯತ್ನವನ್ನೂ ಅದರ ಸಾಮರ್ಥ್ಯಕ್ಕಿಂತಲೂ ಹೆಚ್ಚು ಮಾಡುತ್ತಿದೆ..ನಮ್ಮ ಪ್ರಯತ್ನವಾದರೂ ನಾವು ಮೌಡ್ಯದಿಂದ ಆಚೆ ಬರುವ ಪ್ರಯತ್ನ. ಅದಕ್ಕೆ ವೇದದ ಆಶ್ರಯ. ಹಲವು ವೇಳೆ ನಾವು ಮಾಡುವ ಪ್ರಯತ್ನಗಳಿಂದ ಮೇಲ್ನೋಟಕ್ಕೆ ನಮ್ಮ ಆಚರಣೆಗಳ  ವಿರುದ್ಧವಾಗಿ ಕಂಡು ಇವರೇನು, ನಾಸ್ತಿಕರೇನೋ ಎನಿಸದೆ, ಇರದು. ಆದರೆ ನಿಜವಾಗಿ ಪರಿಶುದ್ಧ ಆಸ್ತಿಕ ಪ್ರಯತ್ನವಿದು. ನಮಗೆ ಹೆಚ್ಚು ಸಹಕಾರಿಯಾಗಿರುವವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರ ಒಂದೊಂದು ಮಾತನ್ನು ಬಹಳ ಆಳವಾಗಿ ನಾನು ಚಿಂತನೆ ಮಾಡುವುದುಂಟು. ಮೇಲ್ನೋಟಕ್ಕೆ ಅವರ ಮಾತುಗಳು ನಮ್ಮ ಆಚರಣೆಗಳ ವಿರುದ್ಧವಾಗಿ ಕಂಡು ಅವರೊಡನೆ ಸಾಕಷ್ಟು ವಾದ ಮಾಡಿದ್ದೇನೆ. ಆದರೆ ಕೊನೆಗೂ ಅವರಮುಂದೆ ನನ್ನದೇ ಸೋಲು.ಅವರ ಎಲ್ಲಾ  ಮಾತಿಗೂ ವೇದದ ಆಧಾರವಿದೆ. ಈ ಸಂಪಾದಕೀಯ ಬರೆಯಲು ಕಾರಣವಿದೆ. ವೇದಸುಧೆಯನ್ನು ನಿತ್ಯವೂ ಕನಿಷ್ಠ   ಮೂವತ್ತು ಜನರು  ಓದುತ್ತಾರೆ. ಸುಮಾರು 230 ಜನರಿಗೆ  ಮೇಲ್ ಮೂಲಕ ನಿತ್ಯವೂ ತಲುಪುತ್ತದೆ. ಓದುತ್ತಾರೆ. ಆದರೆ ಆ ಬಗ್ಗೆ ಮಾತನ್ನೇ ಆಡುವುದಿಲ್ಲವಲ್ಲಾ! ನಮ್ಮ ಸಂದೇಹಗಳನ್ನು ಹಂಚಿಕೊಳ್ಳಬೇಕು. ಒಂದು ವೇಳೆ ಶರ್ಮರ ಮಾತುಗಳು ನಿಮಗಿಷ್ಟವಾಗಿಲ್ಲದಿದ್ದರೆ ಅದರ ಕಾರಣ ತಿಳಿಸಿದರೆ ಸರಿಯಾದ ಉತ್ತರ ಪಡೆಯಬಹುದು. ಶರ್ಮರ ಹಲವು ಉಪನ್ಯಾಸಗಳ  ಸಂಗ್ರಹ "ಶರ್ಮರ ಪುಟದಲ್ಲಿದೆ" ಅಲ್ಲದೆ ಜನಶ್ರೀ ಟಿ.ವಿ.ಯಲ್ಲಿ ಪ್ರಸಾರವಾಗುವ ಅವರ ಮಾತುಗಳ ಆಡಿಯೋ ಕೂಡ   ಇಲ್ಲಿ ಪ್ರಕಟವಾಗುತ್ತಿದೆ.ನಾವು ನಮ್ಮೆಲ್ಲಾ ಪ್ರಯತ್ನವನ್ನೂ ಅತ್ಯಂತ ಶ್ರದ್ಧೆಯಿಂದ ಮಾಡುತ್ತೇವೆ.ನಮಗೆ ಅಗತ್ಯವಿರುವುದು ನಿಮ್ಮ ಅಭಿಪ್ರಾಯ. ಕಾರಣ   ನಮ್ಮ ಪ್ರಯತ್ನ ನಿಶ್ಪ್ರಯೋಜಕ ವಾಗಬಾರದು. ಅದರಿಂದ ನಾಲ್ಕು ಜನರ ನೆಮ್ಮದಿಯ ಜೀವನಕ್ಕೆ ಅನುಕೂಲವಾಗಬೇಕು. ನಮ್ಮೊಡನೆ ನಿಮ್ಮ ಭಿಪ್ರಾಯವನ್ನು  ಹಂಚಿಕೊಳ್ಳಲು vedasudhe@gmail.comಮೇಲ್ ಮಾಡುವಿರಾ?ಶ್ರೀ ಸುಧಾಕರ ಶರ್ಮರ  ಮಾತುಗಳನ್ನು ವೇದಸುಧೆ ಡಾಟ್ ಕಾಮ್ ನಲ್ಲಿ  ಕೇಳಿ.