Pages

Friday, October 8, 2010

ಭಗವಂತನೇ ಕಾಪಾಡಿದ.

ಇವತ್ತು ಬೆಳಿಗ್ಗೆ .೦೦ ಗಂಟೆಗೆ ವೇದಸುಧೆಯಲ್ಲಿ ಸುಧಾಕರ ಶರ್ಮರ ಉಪನ್ಯಾಸದ ಬರಹ ರೂಪವನ್ನು ಪ್ರಕಟಿಸಬೇಕಾಗಿತ್ತು. ಆದರೆಬೆಳಗಿನ ಜಾವ .೩೦ ಕ್ಕೆ ನಾನು ಕಾರ್ಯನಿರ್ವಹಿಸುವ ವಿದ್ಯುತ್ ಕೇಂದ್ರದಿಂದ ಕರೆಬಂತು " ಟ್ರಾನ್ಸ್ ಪ್ಹಾರ್ಮಮಾರ್ ಡಿಫೆರೆನ್ಶಿಯಲ್ ನಲ್ಲಿ ಟ್ರಿಪ್ ಆಗಿದೆ ಸರ್"- ಪಾಳಿ ಇಂಜಿನಿಯರ್ ಸುನಿತ ಕರೆಮಾಡಿದ್ದರು. ಸರಿ ಮುಖ ತೊಳೆದು ಹೊರಟೆ. ದೋಷವೇನೆಂದು ತಿಳಿದು ಅದನ್ನು ಸರಿಪಡಿಸುವಾಗ ಬೆಳಿಗ್ಗೆ .೩೦ ಆಗಿತ್ತು. ಜೊತೆಯಲ್ಲಿ .. ಮಂಜುನಾಥ್, ಜೆ..ಅಜಯ್ ಹಾಗೂ ಜನ ಸಿಬ್ಬಂಧಿ ಗಳು ಕೆಲಸ ಮಾಡಿದ್ದರು. ಎಲ್ಲಾ ಸರಿಯಾಯ್ತೆನ್ನುವಷ್ಟರಲ್ಲಿ ನಮ್ಮ ಮತ್ತೊಬ್ಬ .. ಅವರು ೧೧೦೦೦ವೋಲ್ಟೇಜ್ ಹರಿಯುತ್ತಿದ್ದ ಉಪಕರಣದ ತೀರಾ ಹತ್ತಿರ ಬಂದಿದ್ದರು. ಭಗವತ್ ಕೃಪೆಯಿಂದ ಕೇವಲ - ಇಂಚುಗಳ ಅಂತರದಲ್ಲಿಪಾರಾದರು. ಅಬ್ಭಾ! ಆದೃಶ್ಯ ನೆನಸಿಕೊಂಡರೆ ಮೈ ಝುಮ್ ಎನ್ನುತ್ತೆ. ಆದರೆ ನಮ್ಮನ್ನು ಮೀರಿದ ಶಕ್ತಿಯೊಂದು ಕಾಪಾಡಿತ್ತು. ನಮ್ಮಬುದ್ಧಿ, ವಿವೇಕ ಎಲ್ಲಾ ಗಾಳಿಗೆ ತೂರಿತ್ತು. ಆದರೆ ದೈವ ಕೃಪೆ ಮಾತ್ರ ನಮ್ಮ ಮೇಲಿತ್ತು. ಎಲ್ಲಾ ಸರಿಹೋದನಂತರ ೧೧. ಕ್ಕೆಮನೆಗೆ ಬರಲು ಸಾಧ್ಯವಾಯ್ತು. ನಂತರ ವೇದಸುಧೆಗೆ ಶರ್ಮರ ಮಾತುಗಳನ್ನು ಪೋಸ್ಟ್ ಮಾಡಿ ತುಣುಕನ್ನೂ ಬರೆದಿರುವೆ.

ನಿಮ್ಮ ಪ್ರಶ್ನೆಗೆ ಶರ್ಮರ ಉತ್ತರ




[ಅರಕಲಗೂಡಿನ ಬ್ರಾಹ್ಮನ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧ್ಯೆ ಮಧ್ಯೆ ಅನೇಕ ಪ್ರಶ್ನೆಗಳನ್ನು ಶರ್ಮರಿಗೆ ಕೇಳಲಾಯ್ತು.ಈಪ್ರಶ್ನೋತ್ತರಗಳನ್ನು ಯಥಾವತ್ತಾಗಿ ಅವರ ಮಾತುಗಳಿಂದಲೇ ಕೇಳುವುದು ಅತ್ಯಂತ ಸೂಕ್ತ. ಆದರೂ ಸಂಗ್ರಹ ರೂಪದಲ್ಲಿ ಕೆಲವನ್ನುಇಲ್ಲಿ ಕೊಡಲಾಗಿದೆ.]
ಸ್ತ್ರೀಯರು ವೇದಾಧ್ಯಯನ ಮಾಡಬಾರದೆಂದು ಹೇಳ್ತಾರಲ್ಲ?
ಸ್ತ್ರೀಯರು ವೇದಾಧ್ಯಯನ ಮಾಡಬಾರದೆಂದು ವೇದದಲ್ಲಿ ಎಲ್ಲಿಯೂ ಹೇಳಿಲ್ಲವಾದ್ದರಿಂದ ಸ್ತ್ರೀಯರು ವೇದಾಧ್ಯಯನಮಾಡಬೇಕು.ವೇದಾಧ್ಯಯನ-ಅಧ್ಯಾಪನವು ಬ್ರಾಹ್ಮಣರ ಕರ್ತವ್ಯವಾದ್ದರಿಂದ ಸ್ತ್ರೀ-ಪುರುಷರೆಂಬ ಭೇದಭಾವವಿಲ್ಲದೆ ಎಲ್ಲರೂವೇದಾಧ್ಯಯನ ಮಾಡಲೇ ಬೇಕು. ಆಗ ಮಾತ್ರ ಬ್ರಾಹ್ಮಣನೆಂದು ಕರೆಸಿಕೊಳ್ಳಲು ಅರ್ಹತೆ ಸಿಗುತ್ತದೆ.ವೇದದ ಈ ಕರೆಯನ್ನುಈಗಾಗಲೇ ಹಿಂದಿನ ಉಪನ್ಯಾಸದಲ್ಲಿ ಕೇಳಿ ಮನವರಿಕೆಯಾಗಿರುವುದರಿಂದ ಸ್ತ್ರೀಯರು ವೇದವನ್ನು ಕಲಿಯಬಾರದು, ಇದು ಶಾಸ್ತ್ರಸಮ್ಮತವಲ್ಲವೆಂದು ಯಾರಾದರೂ ಹೇಳಿದರೆ, ಅವರಿಗೆ ನೇರ ಪ್ರಶ್ನೆಯನ್ನು ಹಾಕಬೇಕು" ಸ್ತ್ರೀಯರು ವೇದವನ್ನು ಕಲಿಯಬಾರದುಎಂದು ವೇದದಲ್ಲಿ ಎಲ್ಲಿ ಹೇಳಿದೆ?" ಅಂದರೆ ಸ್ತ್ರೀಯರು ವೇದವನ್ನು ಕಲಿಯಬಾರದು ಎಂದು ಭಗವಂತನು ಎಲ್ಲೂ ಹೇಳಿಲ್ಲವಾದ್ದರಿಂದ ಹೀಗೆ ಹೆಳುವವರು ಭಗವಂತನವಿರೋಧಿಗಳು.ಅಲ್ಲದೆ ಆತ್ಮಕ್ಕೆ ಸ್ತ್ರೀ-ಪುರುಷನೆಂಬ ಭೇದವಿಲ್ಲವೆಂಬ ವೇದ ಮಂತ್ರಗಳನ್ನು ಈಗಾಗಲೇ ಕೇಳಿದ್ದೇವೆ ಅಲ್ಲವೇ?ಈ ಬಗ್ಗೆಇಲ್ಲ ಸಲ್ಲದ ಪ್ರಶ್ನೆಗಳನ್ನು ಯಾರೇ ಕೇಳಿದರೂ ಅವರು ವೇದದ ಆಧಾರದಲ್ಲಿ ಸೂಕ್ತ ಉತ್ತರವನ್ನು ನನ್ನಿಂದ ಪಡೆಯಬಹುದು. ಈ ಬಗ್ಗೆಸಂದೇಹ ಬೇಡ.ನಮ್ಮ ನಮ್ಮ ಮನೆಗಳಲ್ಲಿ ಶಾಂತಿ, ನೆಮ್ಮದಿ, ಇರಬೇಕೆಂದರೆ ಸ್ತ್ರೀಯರು ವೇದಾಧ್ಯಯನವನ್ನು ಮಾಡಿ ಮಕ್ಕಳಿಗೂವೇದವನ್ನು ಕಲಿಸಬೇಕು.ಆಗ ಮನೆಯಲ್ಲಿ ಆನಂದಮಯ ವಾತಾವರಣವು ಸಾಧ್ಯವಾಗುವುದು.
ಸ್ತ್ರೀಯರಿಗೆ ಉಪನಯನ ಸಂಸ್ಕಾರವಿದೆಯೇ?
ಉಪನಯನ ವೆಂಬುದು ಶೋಡಷ ಸಂಸ್ಕಾರಗಳಲ್ಲಿ ಒಂದು. ಇದು ಗಂಡು-ಹೆಣ್ಣು ಭೇದವಿಲ್ಲದೆ ಎಲ್ಲರಿಗೂ ಅವಶ್ಯವಾದಸಂಸ್ಕಾರ.ಅದು ಹೇಗೆ ನೋಡೋಣ. ನಾಮಕರಣ, ವಿವಾಹ ಮತ್ತು ಅಂತ್ಯೇಷ್ಠಿ ಸಂಸ್ಕಾರಗಳನ್ನು ಸ್ತ್ರೀ-ಪುರುಷ ಭೇದವಿಲ್ಲದೆಮಾಡುತ್ತೇವಲ್ಲವೇ?ಹಾಗೆಯೇ ಉಪನಯನ ಸಂಸ್ಕಾರವೂ ಸ್ತ್ರೀ-ಪುರುಷ ಭೇದವಿಲ್ಲೆ ಎಲ್ಲರಿಗೂ ಆಗಲೇ ಬೇಕಾದಸಂಸ್ಕಾರವಾಗಿದೆ.
ಸ್ತ್ರೀಯರು ಮಾಸಿಕ ರಜಸ್ವಲೆ ಸಂದರ್ಭದಲ್ಲಿ ವೇದಾಧ್ಯನ ಮಾಡಬಾರದೇ?
ಈ ಪ್ರಶ್ನೆ ಎದುರಾದಾಗ ನಾವು ಈ ಹಿಂದೆ ಮಾಡಿದ ಚಿಂತನೆಗಳನ್ನು ನೆನಪು ಮಾಡಿಕೊಳ್ಳಬೇಕು.ವೇದಾಧ್ಯಯನ ಮಾಡುವುದುಆತ್ಮೋನ್ನತಿಗಾಗಿ.ರಜಸ್ವಲೆ ಎಂಬುದು ಭಗವಂತನೇ ಮಾಡಿದ ಸ್ತ್ರೀಯರ ಶರೀರ ಧರ್ಮ.ಪ್ರಪಂಚದ ಉದ್ಧಾರಕ್ಕಾಗಿ ಭಗವಂತನೇಮಾಡಿರುವ ಈ ಕ್ರಿಯೆಯು ಶುಭವೇ ಆಗಿದೆ.ಅಲ್ಲದೆ ಆತ್ಮನಿಗೂ ಇದಕ್ಕೂ ಸಂಬಂಧವಿಲ್ಲ.ಶರೀರ ಶುದ್ಧಿಗಾಗಿ ಅಗತ್ಯವಾದ ಕ್ರಮವನ್ನುಅನುಸರಿಸಿ ಆತ್ಮೋನ್ನತಿಗಾಗಿ ಮಾಡಬೇಕಾದ ಕರ್ತವ್ಯಗಳನ್ನು ಮಾಡುವುದು ಸೂಕ್ತವೇ ಆಗಿದೆ.
ಸ್ತ್ರೀಯರು ಗಾಯತ್ರಿ ಮಂತ್ರ ಹೇಳುವುದರಿಂದ ಅವರಿಗೆ ತೊಂದರೆ ಯಾಗುತ್ತದೆ, ಅಂತಾರಲ್ಲಾ!
ಹೀಗೆ ಹೇಳುವುವವರಲ್ಲಿ ಯಾವ ಆಧಾರವೂ ಇಲ್ಲ. ವೇದದಲ್ಲಿ ಹೀಗೆ ಹೆಳಿಲ್ಲ. ಅಲ್ಲದೆ ಗಾಯತ್ರಿ ಮಂತ್ರ ಪಠಿಸಿದ್ದರಿಂದ ಸ್ತ್ರೀಯರಿಗೆತೊಂದರೆಯಾದ ಒಂದು ನಿದರ್ಶನವೂ ಇದುವರೆಗೆ ಕಂಡಿಲ್ಲ. ಇದೆಲ್ಲಾ ಅಪಪ್ರಚಾರ.ಅಷ್ಟೇ ಅಲ್ಲ, ಅದರ ಬದಲಿಗೆ ನೂರಾರುಹೆಣ್ಣುಮಕ್ಕಳಿಗೆ ಉಪನಯನ ಸಂಸ್ಕಾರ ಮಾಡಿಸಿ ನಿತ್ಯವೂ ಗಾಯತ್ರಿ ಪಠಿಸುತ್ತಾ ಆನಂದವಾಗಿರುವ ಹೆಣ್ಣು ಮಕ್ಕಳ ದೊಡ್ದಸಂಖ್ಯೆಯನ್ನು ನಾವೇ ತಯಾರು ಮಾಡಿದ್ದೇವೆ.ಅವರ್ಯಾರಿಗೂ ಗಾಯತ್ರಿ ಮಂತ್ರ ಹೇಳಿದ್ದರಿಂದ ತಮ್ಮ ಆರೋಗ್ಯಕೆಟ್ಟಿತೆಂಬ ಒಂದುಉಧಾಹರಣೆಯೂ ಇಲ್ಲ, ಬದಲಿಗೆ ಉತ್ತಮ ಆರೋಗ್ಯ ಪಡೆದು ಆನಂದವಾದ ಜೀವನಮಾಡಲು ಇದರಿಂದ ಅನುಕೂಲ ವಾಗಿದೆಎಂದು ಅಭಿಮಾನದಿಂದ ಹೇಳುವ ನೂರಾರು ಸ್ತ್ರೀಯರಿದ್ದಾರೆ.ಆದ್ದರಿಂದ ಆಧಾರವಿಲ್ಲದ ಮಾತುಗಳಿಗೆ ಕಿವಿಗೊಡದೆ ಸತ್ಯದಹಾದಿಯಲ್ಲಿ ಸಾಗುವ ಧೈರ್ಯವನ್ನು ಮಾಡಬೇಕು.ವೇದದ ಅಧ್ಯಯನ-ಅಧ್ಯಾಪನ ಮಾಡುತ್ತಾ ಸತ್ಯದ ಹಾದಿಯಲ್ಲಿ ನಡೆಯುತ್ತಾ ಅಂತೆಕಂತೆಗಳಿಗೆ ಕಿವಿಗೊಡದೆ ಧೈರ್ಯವಾಗಿ ವೇದದಲ್ಲಿ ಹೇಳಿರುವಂತೆ ನಡೆಯುವುದು ಬ್ರಾಹ್ಮಣನ ಕರ್ತವ್ಯವಾಗಿದೆ.
ಸ್ತ್ರೀಯರಿಗೆ ಉಪನಯನ ಸಂಸ್ಕಾರವನ್ನು ಮಾಡಿಸುವಿರಾ?
ಉಪನಯನ ಸಂಸ್ಕಾರ ಪಡೆಯುವ ಇಚ್ಛೆ ವ್ಯಕ್ತಪಡಿಸುವ ಯಾವುದೇ ಸ್ತ್ರೀಯರಿಗೆ ಅವರ ವಯಸ್ಸಿನ ಭೇದವಿಲ್ಲದೆ ಉಪನಯನಸಂಸ್ಕಾರವನ್ನು ಉಚಿತವಾಗಿ ಮಾಡಿಸಲು ನಾನು ಸಿದ್ಧ.
ನೀವೇನೋ ಅನೇಕ ಆಧಾರಗಳನ್ನು ಕೊಟ್ಟು ಹೀಗೆಲ್ಲಾ ಹೇಳ್ತೀರಿ, ಆದರೆ ಅನೂಚಾನವಾಗಿ ನಡೆಸಿಕೊಂಡು ಬಂದಿರುವ ಆಚರಣೆಗಳು?

ಆಚರಣೆಗಳಲ್ಲಿ ದೋಷವಿದ್ದರೆ ಬಿಡಬೇಕು. ನಮಗಿರುವ ಆಯ್ಕೆ ಎರಡೇ. ವೇದದಲ್ಲಿರುವ ಸತ್ಯವಾದ ವಿಚಾರವನ್ನು ಒಪ್ಪಿ ನಡೆಯಬೇಕು, ಅಥವಾ ದೋಷವಿದ್ದರೂ ಪರವಾಗಿಲ್ಲ, ನಮ್ಮ ಆಚರಣೆಗಳನ್ನು ಬಿಡಲು ಸಾಧ್ಯವಿಲ್ಲವೆಂದಾದರೆ ವೇದ ವಿರೋಧ ವಿಚಾರಗಳಂತೆ ನಡೆಯಬಹುದು ಆದರೆ ಅದರಿಂದ ಪ್ರಯೋಜನವಂತೂ ಇಲ್ಲ. ದೋಷವಿರುವ ಆಚರಣೆಗಳನ್ನು ಬಿಟ್ಟು ವೇದದಲ್ಲಿರುವಂತೆ ಸತ್ಯವಾದ ಮಾರ್ಗದಲ್ಲಿ ಸಾಗಿದಾಗ ಸಮಾಜವು ನಮ್ಮನ್ನು ಬಹಿಷ್ಕರಿಸಲು ಸಾಧ್ಯವಿಲ್ಲ. ಅದಕ್ಕೆ ನಾನೇ ಸ್ವತ: ಉಧಾಹರಣೆಯಾಗಿದ್ದೀನಿ. ನನ್ನ ಮಗಳಿಗೆ ಉಪನಯನ ಸಂಸ್ಕಾರವನ್ನು ನಾನು ಮಾಡಿದ್ದರೂ ಸಮಾಜವು ನನ್ನನ್ನು ಬಹಿಷರಿಸಿಲ್ಲ. ದೋಷವಿರುವ ಆಚರಣೆಗಳನ್ನು ಬಿಟ್ಟರೆ ಎಲ್ಲಿ ಸಮಾಜವು ನಮ್ಮನ್ನು ಬಹಿಷ್ಕರಿಸೀತೋ ಎಂಬ ಭಯ ಇದ್ದರೆ ಅದನ್ನು ಮೊದಲು ಬಿಡಿ. ಕಾರಣ ನಮ್ಮ ಬೆಂಬಲಕ್ಕೆ ವೇದವೇ ಇದೆ. ಆದರೆ ದೋಷವಿರುವ ಆಚರಣೆಗಳನ್ನು ಆಚರಿಸುವವರಿಗೆ ವೇದದ ಬೆಂಬಲವೂ ಇಲ್ಲ, ಭಗವಂತನ ಬೆಂಬಲವೂ ಇರುವುದಿಲ್ಲ. ನಮ್ಮ ನಡೆ ಹೀಗೆ ಕಕಠೋರವಾಗಿಯೇ ಸತ್ಯನಿಷ್ಥವಾಗಿರಬೇಕು, ಇಲ್ಲದಿದ್ದರೆ ನೂರು ಜನರು ಮಾಡಿದ ತಪ್ಪೇ ಸಮ್ಮತವಾಗಿಬಿಡುತ್ತದೆ.
ಬ್ರಾಹ್ಮಣೇತರರಿಗೆ ಉಪನಯನ ಸಂಸ್ಕಾರ ವಿದೆಯೇ?
ಹೌದು, ಬ್ರಾಹ್ಮಣೇತರರಿಗೂ ಉಪನಯನ ಸಂಸ್ಕಾರವಿದೆ. ಬ್ರಾಹ್ಮಣೇತರರಿಗೂ ವೇದಾಧ್ಯಯನ ಮಾಡುವ ಅಧಿಕಾರವಿದೆ.ಯಾರಿಗೆ ವೇದಾಧ್ಯಯನ ಮಾಡುವ ಆಸೆ ಇದೆ ಅವರಿಗೆ ಉಪನಯನ ಸಂಸ್ಕಾರವನ್ನು ಮಾಡಿಸಿ ವೇದಾಧ್ಯಯನಕ್ಕೆ ಅವಕಾಶವನ್ನು ಕಲ್ಪಿಸಬೇಕು.
ಉಪನಯನವನ್ನು ಯಾವ ವಯಸ್ಸಿನಲ್ಲಿ ಮಾಡಬೇಕು?
ಎಂಟನೆಯ ವಯಸ್ಸಿನಲ್ಲಿ ಮಾಡಬೇಕೆಂಬುದು ಸೂಕ್ತ, ಆದರೆ ಈಗಾಗಲೇ ಆ ವಯಸ್ಸು ದಾಟಿದೆ ,ಎಂದರೆ ಉಪನಯನವನ್ನು ಮಾಡಿಕೊಳ್ಳಬಾರದೆಂದು ಅರ್ಥವಲ್ಲ. ಸತ್ಯದ ದೀಕ್ಷೆ ಪಡೇಯಲು ವಯಸ್ಸು ಅಡ್ಡಿಬಾರದು. ಪಡೆಯದೇ ಇರುವುದಕ್ಕಿಂತ ನಿಧಾನವಾಗಿಯಾದರೂ ಉಪನಯನ ಸಂಸ್ಕಾರ ಪಡೆಯುವುದು ಒಳ್ಳೆಯದು.