Pages

Saturday, July 28, 2012

ತಾನು ಮಾಡಿದ ಕರ್ಮದ ಫಲವನ್ನು ತಾನು ಅನುಭವಿಸಲೇ ಬೇಕು




* ಸಂಚಿತ,ಪ್ರಾರಬ್ಧ ಮತ್ತು ಆಗಾಮಿ ಕರ್ಮಗಳೆಂದರೇನು?

* ನಮ್ಮ ನಮ್ಮ ಯೋಗ್ಯತೆಗನುಗುಣವಾಗಿ ಮುಂದಿನ ಜನ್ಮ    

   ನಿರ್ಧಾರಿತವಾಗಲಿದೆಯೇ?

* ಸಾವಿಗೆ ಹೆದರ ಬೇಕೆ?

* ನಮ್ಮ ಆಯಸ್ಸು ಪೂರ್ವ ನಿರ್ಧಾರಿತವೇ?

* ಇನ್ನೂ ಹಲವು    ವಿಚಾರಗಳ    ಮೇಲೆ ಬೆಳಕು ಚೆಲ್ಲಿದ್ದಾರೆ

      ಶ್ರೀ ಸುಧಾಕರ ಶರ್ಮರು



ನಮ್ಮೊಡನೆ ಶ್ರೀ ಸುಧಾಕರಶರ್ಮರು



ವೇದಾಧ್ಯಾಯೀ ಶ್ರೀ  ಶ್ರೀ ಸುಧಾಕರಶರ್ಮರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ತೀವ್ರ ಬಳಲಿದ್ದರು. ಅವರ ಸ್ಥಿತಿಯನ್ನು  ಕಳೆದ ಹತ್ತು ತಿಂಗಳ ಹಿಂದೆ  ಪ್ರತ್ಯಕ್ಷ ನೋಡಿದ ನನ್ನ ತಂಗಿ ಹೇಳುತ್ತಾಳೆ " ಅವರ ಅಂದಿನ ಸ್ಥಿತಿಯಲ್ಲಿ ಅವರು ಬದುಕುಳಿಯುತ್ತಾರೆಂಬ ನಂಬಿಕೆ ನನಗಿರಲಿಲ್ಲ! ಶರ್ಮರ ಸಂದರ್ಶನ ಮಾಡಲು ಹೋಗುವೆನೆನ್ನುತ್ತೀಯಲ್ಲಾ!! ಅವರು ಮಾತನಾಡಬಲ್ಲರೇ?
ಅಬ್ಭಾ! ನನ್ನಂತವನಾಗಿದ್ದರೆ ನನ್ನ ಬದುಕಿನ ಆಸೆ ಮರೆಯುತ್ತಿದ್ದೆ. ಅಷ್ಟು ತೀವ್ರ ಸ್ಥಿತಿಯಿಂದ ಚೇತರಿಸಿಕೊಂಡು ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರಷ್ಟೇ ಅಲ್ಲಾ, ಈ ಸ್ಥಿತಿಯಲ್ಲೂ  ಚಂದನದಲ್ಲಿ ನಡೆಯುವ "ಹೊಸ ಬೆಳಕು" ದಾರವಾಹಿಗಾಗಿ  ಮುಂದಿನ ಹಲವು  ಎಪಿಸೋಡ್ ಗಳಿಗಾಗಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ, ಅಷ್ಟೇ ಅಲ್ಲಾ, ಮುಂದಿನ       5-8-2012 ರಂದು ಒಂದು ವೇದೋಕ್ತ ವಿವಾವಹವನ್ನು ಸ್ವತ: ಶರ್ಮರು ನಡೆಸಿಕೊಡಲಿದ್ದಾರೆ. ಮೊನ್ನೆ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ವೀಡಿಯೋ ತೆಗೆದೆ. ಇನ್ನು ಒಂದೊಂದಾಗಿ ಶರ್ಮರ  ಆಡಿಯೋ /ವೀಡಿಯೋ ಕ್ಲಿಪ್ ಗಳನ್ನು ಪ್ರಕಟಿಸಲಾಗುವುದು.  ನಮ್ಮ  ನೆಮ್ಮದಿಯ     ಬದುಕಿಗೆ  ಅಗತ್ಯವಾದ ಹಲವು ಅಂಶಗಳನ್ನು ಶ್ರೀ ಶರ್ಮರು ವೇದಸುಧೆಯ  ಓದುಗರೊಡನೆ ಹಂಚಿಕೊಂಡಿದ್ದಾರೆ. ವೇದಸುಧೆಯ ಅಭಿಮಾನಿಗಳು ಎಂದಿನಂತೆ  ಈ ವಿಚಾರಗಳನ್ನು ಕೇಳಿ  ನಿಮಗೆ ಉಂಟಾಗಬಹುದಾದ ಅನುಮಾನಗಳನ್ನು/ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು  ವೇದಸುಧೆಯಲ್ಲಿ ಹಂಚಿಕೊಂಡರೆ ಶ್ರೀ ಶರ್ಮರು ಉತ್ತರಿಸುವರು