Pages

Wednesday, February 1, 2012

ವಿಶಿಷ್ಟ ಸತ್ಯನಾರಾಯಣ ಪೂಜೆ

                ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ಶ್ರೀಮತಿ ಭಾರತಿ  ಇವರ  ಪುತ್ರ  ಚಿ|ರಾ| ವಿನಯ್ ಮತ್ತು ತಿಪಟೂರಿನ ಶ್ರೀಮತಿ ಗೀತಾ ಮತ್ತು ಶ್ರೀ ಶಿವಸ್ವಾಮಿ    ಇವರ ಪುತ್ರಿ ಮಾನಸಳ ವಿವಾವಹವು 29.1.2012 ರಂದು ತಿಪಟೂರಿನಲ್ಲಿ ನಡೆದು ಶ್ರೀ ಸತ್ಯನಾರಾಯಣ ಪೂಜೆ ಮತ್ತು ಆರತಕ್ಷತೆ ಕಾರ್ಯಕ್ರಮಗಳು ಇಂದು  ಹಾಸನದಲ್ಲಿ ನಡೆದವು.ಕಳೆದ ನಾಲ್ಕು ದಶಕಗಳಿಂದ ಸಮಾಜ ಕಾರ್ಯ ಮಾಡುತ್ತಲೇ ಬೆಳೆದ ಶ್ರೀ ನಾಗರಾಜ್ ಅವರು  ಈ ಶುಭಸಂದರ್ಭದಲ್ಲಿ ಸಮಾಜವನ್ನು ಸ್ಮರಿಸುವ ,  ಸಮಾಜದಲ್ಲಿ   ಕುಸಿಯುತ್ತಿರುವ ಕೌಟುಂಬಿಕ ಬಾಂಧವ್ಯವನ್ನು ಬೆಸೆಯುವ  ವಿಶಿಷ್ಟ  ಉಪನ್ಯಾಸವನ್ನು  ಏರ್ಪಡಿಸಿದ್ದರು. ಹಾಸನದ ನಿವೇದಿತಾವಿದ್ಯಾಲಯದ ಕಾರ್ಯದರ್ಶಿಗಳಾದ ಶ್ರೀ ಅನಂತನಾರಾಯಣ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಒಂದು ಉತ್ತಮ ಸಮಾಜಕಟ್ಟುವ ದಿಕ್ಕಿನಲ್ಲಿ ಯುವಪೀಳಿಗೆಗೆ ಉತ್ಸಾಹ ತುಂಬುವ  ಈ ಉಪನ್ಯಾಸವನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಇಲ್ಲಿ ಪ್ರಕಟಿಸಲಾಗಿದೆ.