Pages

Wednesday, September 28, 2011

ವಿರಜ್ಯವಿಷಯವ್ರಾತಾತ್




ಗ್ರಂಥದ ಮುಂದುವರಿದ ಭಾಗ

विरज्य विषयव्रातात् दोषदृष्ट्या मुहुर्मुहुः ।
स्वलक्ष्ये नियतावस्था मनसः शम उच्यते ॥२२॥


ವಿರಜ್ಯವಿಷಯವ್ರಾತಾತ್ ದೊಷದೃಷ್ಟ್ಯಾ ಮುಹುರ್ಮುಹುಃ |
(= ಭೋಗವಸ್ತುಗಳಲ್ಲಿರುವ ದೋಷಗಳನ್ನು ಮತ್ತೆ-ಮತ್ತೆ ಕಂಡು ಭೋಗ ವಿಷಯಾಸಕ್ತಿಯನ್ನು ಬಿಡುವುದು)
ಸ್ವಲಕ್ಷ್ಯೇ ನಿಯತಾವಸ್ಥಾ ಮನಸಃ ಶಮ ಉಚ್ಯತೇ ||೨೨॥
(=ಗುರಿಯ ಸಾಧನೆಗೆ ಮನೋನಿಗ್ರಹವನ್ನಿಟ್ಟುಕೊಳ್ಳುವುದೆ ಶಮವು )

ಸಾಧನ ಚತುಷ್ಟಯದ ಮೂರನೆಯ ಸಾಧನದ ನಿರೂಪಣೆಯನ್ನು ಮಾಡುತ್ತಾ ’ಶಮದಮಾದಿ’ ಆರು ಸಂಪತ್ತುಗಳ ವಿಚಾರವನ್ನು ಶ್ರೀ ಶಂಕರರು ವಿವರಿಸುತ್ತಾರೆ.
ಮೊದಲನೆಯದಾಗಿ ’ಶಮ’ :-
ಭೋಗವಸ್ತುಗಳಲ್ಲಿ ಕಂಡುಬರುವ ದೋಷಗಳನ್ನು ಗ್ರಹಿಸಿ ಅವುಗಳಲ್ಲಿ ಜಿಗುಪ್ಸೆಯನ್ನು ಹೊಂದಿ ಆತ್ಮವಿಷಯದಲ್ಲಿ ಮಾತ್ರವೇ ಮನಸ್ಸನ್ನು ತಲ್ಲೀನಗೊಳಿಸಿಕೊಳ್ಳುವುದನ್ನು ’ಶಮ’ ಎಂದು ಹೇಳುತ್ತಾರೆ. ಮನಸ್ಸನ್ನು ಹತೋಟಿಯಲ್ಲಿಡುವುದು ಎಂದರೆ, ಇಂದ್ರಿಯಯಗಳನ್ನು ನಿಗ್ರಹಿಸುವುದು ಎಂದು ತಿಳಿಯಬೇಕಾಗುತ್ತದೆ. ಮುಖ್ಯವಾಗಿ ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ಮೂಗು, ಚರ್ಮ, ನಾಲಿಗೆ) ವಿಷಯವಸ್ತುವಿನ ಗೊಡವೆಗೆ ಹೋಗದಂತೆ ಹತೋಟಿಯಲ್ಲಿಟ್ಟುಳ್ಳುವುದು ಎಂದು ಅರ್ಥ. ಅಪೇಯಪಾನವು ಮನೆಯಲ್ಲಿಯೂ ಆರೋಗ್ಯಕ್ಕೆ ಹಾನಿಕಾರಕ ಹೊರಗಿನ ಅಂಗಡಿಯಲ್ಲೂ ಹಾನಿಕಾರಕವೆ !. ಜಾಗ ಬದಲಾದ ಮಾತ್ರಕ್ಕೆ ಅದರ ದೋಷಗುಣವೇನೂ ಬದಲಾಗುವುದಿಲ್ಲ. ದೋಷವನ್ನು ಗ್ರಹಿಸಿ ಒಟ್ಟಾರೆಯಾಗಿ ಭೋಗಲಾಲಸೆಯನ್ನು ಬಿಟ್ಟು ಮತ್ತೊಮ್ಮೆ ಜ್ಞಾನೇಂದ್ರಿಯಗಳು ಅತ್ತ ಸುಳಿಯದಂತೆ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಆ ಮನೋನಿಶ್ಚಯದಂತೆ ನಡೆಯುವುದೇ ’ಶಮ’ ಎನ್ನುವ ಅರ್ಥದಲ್ಲಿ ಹೇಳಿರುತ್ತಾರೆ.

ಎರಡನೆಯದು ’ದಮ’ :-

विषयेभ्यःपरावर्त्य स्थापनं स्वस्वगोलके ।
उभयेषामिंद्रियाणां स दमः परिकीर्तितः ॥२३॥

ವಿಷಯೇಭ್ಯಃ ಪರಾವರ್ತ್ಯ ಸ್ಥಾಪನಂ ಸ್ವಸ್ವಗೋಲಕೇ |
(=ಇಂದ್ರಿಯಗಳನ್ನು ವಿಷಯಭೋಗವಸ್ತುವಿನ ಕಡೆಯಿಂದ ಸ್ವಸ್ಥಾನಕ್ಕೆ ತರುವುದು)
ಉಭಯೇಷಾಮಿಂದ್ರಿಯಾಣಾಂ ಸ ದಮಃ ಪರಿಕೀರ್ತಿತಃ ||೨೩||
(=’ಇಂದ್ರಿಯಗಳೆರಡನ್ನೂ’ ಅಂಕೆಯಲ್ಲಿಡುವುದೇ ’ದಮ’ವು)

ಭೋಗವಸ್ತುಗಳಲ್ಲಿ ತಲ್ಲೀನವಾಗಿರುವ ಇಂದಿಯಗಳನ್ನು ಅದೇ ದಾರಿಯಲ್ಲಿ ಹಿಮ್ಮುಖವಾಗಿ ತಂದು (=ಪರಾವರ್ತ್ಯ ) ಸ್ವಸ್ಥಾನಗಳಲ್ಲಿ ನಿಲ್ಲಿಸಿ ಅವುಗಳು ಕೇವಲಬ್ರಹ್ಮದಲ್ಲಿ ಲೀನವಾಗುವಂತೆ ಮಾಡಿಕೊಳ್ಳುವುದೇ  ’ದಮ’ ಎಂದು ಹೇಳುತ್ತಾರೆ. ’ಇಂದ್ರಿಯಗಳು’ ಎಂಬಲ್ಲಿ ಜ್ಞಾನೇಂದಿಯಗಳು ಮತ್ತು ಕರ್ಮೇಂದ್ರಿಯಗಳೆರಡನ್ನೂ ( ಕೈ, ಕಾಲು, ಬಾಯಿ ಮುಂತಾದವು) ಹತೋಟಿಯಲ್ಲಿಟ್ಟುಕೊಳ್ಳುವುದು ಎಂದು ತಿಳಿಯಬೇಕಾಗುತ್ತದೆ.
’ಸ್ಥಾಪನಂ ಸ್ವಸ್ವಗೋಲಕೆ’ ಎನ್ನುವಲ್ಲಿ ಇಂದ್ರಿಯವಿಷಯಗಳು ಮೊದಲಾದ ಜಾಗಕ್ಕೆ ಮನಸ್ಸನ್ನು ಪುನಃ ಎಳೆದು ತರುವುದು ಎಂದು ಅರ್ಥ.  ರುಚಿಯ ಮೂಲವಿರುವುದು ನಾಲಿಗೆಯಲ್ಲಿ ಅಲ್ಲ, ಅದರ ಮೇಲಿರುವ ರುಚಿಯ ಮೊಗ್ಗುಗಳಲ್ಲಿ (taste buds). ಅಲ್ಲಿಂದ ಆರಂಭವಾಗುವ ರುಚಿಯ ಕಾರ್ಯಕ್ರಮಗಳು ಅಜೀರ್ಣವಾಗುವಷ್ಟು ತಿಂದು ವೈದ್ಯರಲ್ಲಿಗೆ ತೆರಳುವವರೆಗೂ ಮುಂದುವರಿಯುತ್ತದೆ. ವೈದ್ಯರಲ್ಲಿಗೆ ಹೋದ ಮನಸ್ಸನ್ನು ತಿರುಗಿ ರುಚಿಯ ಮೊಗ್ಗುಗಳೆಡೆಗೆ ತಂದು ಬಿಡುವುದು ಮತ್ತು ನಂತರದಲ್ಲಿ ತನಗೆ ರುಚಿಯ ಮೊಗ್ಗುಗಳಿವೆ ಎನ್ನುವುದನ್ನೇ ಮರೆತುಬಿಡುವುದು, ಇದನ್ನು ದಮ ಎಂದು ನಿರೂಪಿಸುತ್ತಾರೆ. ಕೆಟ್ಟದ್ದನ್ನು ಕೇಳಬೇಡ ಎನ್ನುವಲ್ಲಿ ಕಿವಿಯನ್ನು ಕೆಟ್ಟದ್ದರ ಕಡೆಗೆ ಆಲಿಸಬೇಡ ಅಥವಾ ಅಂತಹ ವಿಚಾರಗಳ ಪ್ರತಿಯಾಗಿ ತನಗೆ ಕಿವಿಯ ತಮಟೆಯೇ ಕೆಲಸ ಮಾಡುತ್ತಿಲ್ಲ ಎಂಬ ಭಾವವನ್ನು ತಳೆದು ನಿರ್ಲಿಪ್ತರಾಗುವುದು ಎಂದು ತಿಳಿಯಬಹುದು.

ಆಕ್ಷೇಪ : ಶಮ ಅಥವಾ ಮನೋನಿಗ್ರಹವು (ಅಂತರಿಂದ್ರಿಯ=ಶಬ್ದ, ಸ್ಪರ್ಶ, ರೂಪ,ರಸ, ಗಂಧ) ಇದ್ದಾಗ ಕರ್ಮೇಂದ್ರಿಯ (ಬಹಿರಿಂದ್ರಿಯ=ಕೈ,ಕಾಲು,ಬಾಯಿ,ಗುದ,ಮತ್ತು ಲಿಂಗ)ಗಳ ಮೇಲಿನ ಹತೋಟಿಯು ತಾನೇ ಬರುವುದಲ್ಲವೇ ? ’ದಮ’ದ ಪ್ರತ್ಯೇಕತೆಯ ಅಗತ್ಯವಾದರೂ ಏಕೆ ?

ಸಮಾಧಾನ : ಶಮದಮಾದಿಗಳು ಒಂದಕ್ಕೊಂದು ಪೂರಕವಾಗಿದ್ದರೂ ಸಹ ಶಾಸ್ತ್ರಾನುಕೂಲತೆಗಾಗಿ ಬಿಡಿಸಿ ಹೇಳಲಾಗಿದೆ ಎನ್ನಬಹುದು. ಹೆಚ್ಚು ಸ್ಪಷ್ಟತೆಗಾಗಿ ಒಂದೊಂದನ್ನೂ ಬಿಡಿಸಿ ಹೇಳಲಾಗುತ್ತದೆ.  ’ಸ್ವಾಗತ’(ವೆಲ್ಕಮ್) ವೇ ಸಾಕು, ’ಸುಸ್ವಾಗತ’ ಏಕೆ? (ವೆಲ್ ವೆಲ್ಕಮ್ಮು !). ನಲಿಯುತ್ತಾ ಬರುವುದೇನೋ ಸರಿ, ನಲಿ-ನಲಿಯುತ್ತಾ ಬರುವುದು ಏಕೆ ? ಎಂದರೆ, ವಿಷಯದ ಮಹತ್ವದ ತಿಳಿವಿಗಾಗಿ ಅಥವಾ ವಿಷಯಕ್ಕೆ ಪುಷ್ಟಿ ನೀಡುವುದಕ್ಕಾಗಿ ಹೇಳಲಾಗಿದೆ ಎನ್ನಬಹುದು. ’ಶ್ರೇಷ್ಠತಮಾಯ ಕರ್ಮಣೆ’ ಎಂಬ ವಾಕ್ಯವೊಂದು ವೇದದಲ್ಲಿ ಬರುತ್ತದೆ. ಶ್ರೇಷ್ಠ ಎನ್ನುವುದೇ superlative ಆಗಿರುವಾಗ ಶ್ರೇಷ್ಠತಮ ಎನ್ನುವುದು ಏಕೆ ? ಎಂದರೆ , ಪುಷ್ಟಿಗಾಗಿ, ಮಹತ್ವಕ್ಕಾಗಿ ಹೇಳಿದ್ದಾರೆ ಎನ್ನಬಹುದು. ( Sachin is one of the best player ಎನ್ನುತ್ತಾರೆ. Best ಎನ್ನುವುದೇ unique ಆಗಿರುವಾಗ one of the best ಏಕೆ ? ಎಂದರೆ , ದ್ರಾವಿಡ್ ಕೂಡಾ ಸಚಿನ್ ನಷ್ಟೇ talented ಆಗಿರುವುದರಿಂದ ವ್ಯತ್ಯಾಸವನ್ನು ಗುರುತಿಸಲು ಮಹತ್ವವನ್ನು ಹೇಳಲು ಬಳಸಲಾಗುತ್ತದೆ ಎನ್ನಬಹುದು !).

ಮೂರನೆಯದು ಉಪರತಿ :-

बाह्यालम्बनं वृत्तेरेषोपरतिरुत्तमा ॥२४॥

ಬಾಹ್ಯಾಲಂಬನಂ ವೃತ್ತೇರೇಷೋಪರತಿರುತ್ತಮಾ ||೨೪||
(=ಹೊರಗಿನ ವಿಷಯಗಳ ಅವಲಂಬನೆಯನ್ನು ಬಿಡುವುದೇ ಉಪರತಿ)

ದಮವನ್ನು ಸಾಧಿಸುವುದು ಹೇಗೆ ? ಎನ್ನುವದನ್ನು ’ಉಪರತಿ’ ಎಂಬಲ್ಲಿ ಹೇಳುತ್ತಾರೆ.  ಹೊರಗಿನ ಭೋಗವಸ್ತುಗಳ ಅವಲಂಬನೆಯನ್ನು ಬಿಟ್ಟು ತನ್ನಲ್ಲಿ ತಾನು ನೆಮ್ಮದಿಯನ್ನು ಕಾಣುವುದು ’ಉಪರತಿ’ ಎಂದು ಹೇಳುತ್ತಾರೆ. ಬಯಕೆಗಳು ಏಳದೆ ಇದ್ದಾಗ ವೈರಾಗ್ಯವು ಹುಟ್ಟುತ್ತದೆ. ವೈರಾಗ್ಯವಿದ್ದಲ್ಲಿ ವಿಷಯವಸ್ತುಗಳ ಮೇಲಿನ ಅವಲಂಬನೆಯೂ ಇರುವುದಿಲ್ಲ. ಹೊರಗಿನ ವಿಷಯವಸ್ತುಗಳಾವುದನ್ನೂ ನೆಚ್ಚಿಕೊಳ್ಳದೆ ಸಾಧನೆಯ ದಾರಿಯಲ್ಲಿ ಸಾಗುವುದನ್ನು ಉಪರತಿ ಎಂದು ಹೇಳುತ್ತಾರೆ. ಕೆರೆಯ ನೀರು ಕೆರೆಯ ತೂಬಿನ ಮೂಲಕ ಹೊರಟು ಮುಂದೆ ನಾಲೆಗಳಲ್ಲಿ , ಹೊಲ-ಗದ್ದೆಗಳಲ್ಲಿ ಹೇಗೆ ಬೇರೆ ರೂಪವನ್ನು ಪಡೆಯುವುದೋ ಹಾಗೆಯೇ ಮನಸ್ಸಿನ ಮೂಲಕ ಉಂಟಾಗುವ ವಿಷಯಭೋಗವು ಹೊರಗಿನ ಅವಲಂಬನೆಗಳು ಹೆಚ್ಚಾದಂತೆ ಹಲವು ರೂಪಗಳನ್ನು ಪಡೆದುಕೊಂಡು ನಿವೃತ್ತಿಧರ್ಮಕ್ಕೆ ಅಡ್ಡಿಯಾಗುತ್ತದೆ. ಹೀಗೆ ಶಮದಮಾದಿಗಳು ಒಂದಕ್ಕೊಂದು ಪೂರಕವಾಗಿದ್ದರೂ ಸಹ ಒಂದೊಂದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಮುಂದಿನ ಕಂತಿನಲ್ಲಿ ’ತಿತಿಕ್ಷಾ’ ಮುಂತಾದ ಗುಣಗಳ ವಿಚಾರವನ್ನು ತಿಳಿಯೋಣ.


-------------------------------------------

"   ಐಂಕಾರ ಹ್ರೀಂಕಾರ ರಹಸ್ಯಯುಕ್ತಃ ಶ್ರೀಂಕಾರ ಗೂಢಾರ್ಥ ಮಹಾ ವಿಭೂತ್ಯಾ,
ಓಂಕಾರ ಮರ್ಮ ಪ್ರತಿಪಾದಿನೀಭ್ಯಃ ನಮೋನಮಃ ಶ್ರೀ ಗುರುಪಾದುಕಾಭ್ಯಾಮ್ "

ಮಹಾಲಯ ಅಮಾವಾಸ್ಯೆಯು ಸದ್ಗುರು ಶ್ರೀ ಚಂದ್ರಶೇಖರಭಾರತಿಸ್ವಾಮಿಗಳು ಬ್ರಹ್ಮೈಕ್ಯರಾದ ದಿನ. ಜೀವನ್ಮುಕ್ತರೆಂದೇ ಅವರು ಪ್ರಸಿದ್ದರು. ಅಂತಹ ಸದ್ಗುರುವನ್ನು ವ್ಯಕ್ತಿಗತವಾಗಿ ಕಾಣುವ ಸುಯೋಗ ನನಗಿಲ್ಲವಾದರೂ ಅವರೇ ಬರೆದಿರುವ ವಿವೇಕ ಚೂಡಾಮಣಿಯ ಸಂಸ್ಕೃತ ವ್ಯಾಖ್ಯಾನದಲ್ಲಿ ಪ್ರತ್ಯಕ್ಷವಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು. ಕೆಲವೊಮ್ಮೆ(ಬಹುತೇಕ) ವ್ಯಕ್ತಿಯ ವಿಚಾರಕ್ಕಿಂತಲೂ ವ್ಯಕ್ತಿಯೇ ಪರಮಾರ್ಥವಾಗಿ ವಿಜೃಂಭಿಸುವ ಅಪಾಯಗಳೇ ಹೆಚ್ಚಾಗಿರುವ ಕಾಲದಲ್ಲೂ ಅಂತಹ ವ್ಯಕ್ತಿಪೂಜೆ, ಬಾಹ್ಯಾಡಾಂಬರ ಮುಂತಾದವುಗಳನ್ನೆಲ್ಲಾ ನಿರಾಕರಿಸುತ್ತಲೇ ಬಂದು ಕೊನೆಯಲ್ಲಿ ಹೆಚ್ಚು-ಹೆಚ್ಚು ಅಂತರ್ಮುಖರಾಗಿಯೇ ಇದ್ದು ಬ್ರಹ್ಮಜ್ಞಾನದ ನಿಜಾರ್ಥವನ್ನು ಪ್ರತಿಪಾದಿಸಿ ತೋರಿಸಿದ ಚೈತನ್ಯಕ್ಕೆ ನನ್ನ ನಮನಗಳು. ಆರಾಧನೆಗಳು ಬರುತ್ತವೆ, ಹೋಗುತ್ತವೆ. ವಿವೇಕ ಚೂಡಾಮಣಿಯ ವ್ಯಾಖ್ಯಾನವನ್ನು ನನ್ನ ಬಾಲಿಶ ಮತಿಗೆ ಹೊಳೆದಂತೆ ನಿಮ್ಮೆಲ್ಲರ ಮುಂದೆ ಇಡುತ್ತಿರುವುದಕ್ಕೂ ಸದ್ಗುರುಗಳ ಪ್ರೇರಣೆಯೇ ಕಾರಣವೆನ್ನುತ್ತೇನೆ. ಈ ನಿಟ್ಟಿನಲ್ಲಿ ನಾನಿಂದು, ಇಲ್ಲಿ ಸದ್ಗುರುವಿನ ಚರಣಕ್ಕೆ ಬಾಗಿದ್ದೇನೆ.

-------------------------------------------

ವಂದನೆಗಳೊಂದಿಗೆ.......
--

Tuesday, September 27, 2011

ವಿವೇಕ ಚೂಡಾಮಣಿ - ಭಾಗ -೧೨


ಗ್ರಂಥದ ಮುಂದುವರಿದ ಭಾಗ


विरज्य विषयव्रातात् दोषदृष्ट्या मुहुर्मुहुः ।
स्वलक्ष्ये नियतावस्था मनसः शम उच्यते ॥२२॥


ವಿರಜ್ಯವಿಷಯವ್ರಾತಾತ್ ದೊಷದೃಷ್ಟ್ಯಾ ಮುಹುರ್ಮುಹುಃ |
(= ಭೋಗವಸ್ತುಗಳಲ್ಲಿರುವ ದೋಷಗಳನ್ನು ಮತ್ತೆ-ಮತ್ತೆ ಕಂಡು ಭೋಗ ವಿಷಯಾಸಕ್ತಿಯನ್ನು ಬಿಡುವುದು)
ಸ್ವಲಕ್ಷ್ಯೇ ನಿಯತಾವಸ್ಥಾ ಮನಸಃ ಶಮ ಉಚ್ಯತೇ ||೨೨॥
(=ಗುರಿಯ ಸಾಧನೆಗೆ ಮನೋನಿಗ್ರಹವನ್ನಿಟ್ಟುಕೊಳ್ಳುವುದೆ ಶಮವು )

ಸಾಧನ ಚತುಷ್ಟಯದ ಮೂರನೆಯ ಸಾಧನದ ನಿರೂಪಣೆಯನ್ನು ಮಾಡುತ್ತಾ ’ಶಮದಮಾದಿ’ ಆರು ಸಂಪತ್ತುಗಳ ವಿಚಾರವನ್ನು ಶ್ರೀ ಶಂಕರರು ವಿವರಿಸುತ್ತಾರೆ.
ಮೊದಲನೆಯದಾಗಿ ’ಶಮ’ :-
ಭೋಗವಸ್ತುಗಳಲ್ಲಿ ಕಂಡುಬರುವ ದೋಷಗಳನ್ನು ಗ್ರಹಿಸಿ ಅವುಗಳಲ್ಲಿ ಜಿಗುಪ್ಸೆಯನ್ನು ಹೊಂದಿ ಆತ್ಮವಿಷಯದಲ್ಲಿ ಮಾತ್ರವೇ ಮನಸ್ಸನ್ನು ತಲ್ಲೀನಗೊಳಿಸಿಕೊಳ್ಳುವುದನ್ನು ’ಶಮ’ ಎಂದು ಹೇಳುತ್ತಾರೆ. ಮನಸ್ಸನ್ನು ಹತೋಟಿಯಲ್ಲಿಡುವುದು ಎಂದರೆ, ಇಂದ್ರಿಯಯಗಳನ್ನು ನಿಗ್ರಹಿಸುವುದು ಎಂದು ತಿಳಿಯಬೇಕಾಗುತ್ತದೆ. ಮುಖ್ಯವಾಗಿ ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ಮೂಗು, ಚರ್ಮ, ನಾಲಿಗೆ) ವಿಷಯವಸ್ತುವಿನ ಗೊಡವೆಗೆ ಹೋಗದಂತೆ ಹತೋಟಿಯಲ್ಲಿಟ್ಟುಳ್ಳುವುದು ಎಂದು ಅರ್ಥ. ಅಪೇಯಪಾನವು ಮನೆಯಲ್ಲಿಯೂ ಆರೋಗ್ಯಕ್ಕೆ ಹಾನಿಕಾರಕ ಹೊರಗಿನ ಅಂಗಡಿಯಲ್ಲೂ ಹಾನಿಕಾರಕವೆ !. ಜಾಗ ಬದಲಾದ ಮಾತ್ರಕ್ಕೆ ಅದರ ದೋಷಗುಣವೇನೂ ಬದಲಾಗುವುದಿಲ್ಲ. ದೋಷವನ್ನು ಗ್ರಹಿಸಿ ಒಟ್ಟಾರೆಯಾಗಿ ಭೋಗಲಾಲಸೆಯನ್ನು ಬಿಟ್ಟು ಮತ್ತೊಮ್ಮೆ ಜ್ಞಾನೇಂದ್ರಿಯಗಳು ಅತ್ತ ಸುಳಿಯದಂತೆ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಆ ಮನೋನಿಶ್ಚಯದಂತೆ ನಡೆಯುವುದೇ ’ಶಮ’ ಎನ್ನುವ ಅರ್ಥದಲ್ಲಿ ಹೇಳಿರುತ್ತಾರೆ.

ಎರಡನೆಯದು ’ದಮ’ :-

विषयेभ्यःपरावर्त्य स्थापनं स्वस्वगोलके ।
उभयेषामिंद्रियाणां स दमः परिकीर्तितः ॥२३॥

ವಿಷಯೇಭ್ಯಃ ಪರಾವರ್ತ್ಯ ಸ್ಥಾಪನಂ ಸ್ವಸ್ವಗೋಲಕೇ |
(=ಇಂದ್ರಿಯಗಳನ್ನು ವಿಷಯಭೋಗವಸ್ತುವಿನ ಕಡೆಯಿಂದ ಸ್ವಸ್ಥಾನಕ್ಕೆ ತರುವುದು)
ಉಭಯೇಷಾಮಿಂದ್ರಿಯಾಣಾಂ ಸ ದಮಃ ಪರಿಕೀರ್ತಿತಃ ||೨೩||
(=’ಇಂದ್ರಿಯಗಳೆರಡನ್ನೂ’ ಅಂಕೆಯಲ್ಲಿಡುವುದೇ ’ದಮ’ವು)

ಭೋಗವಸ್ತುಗಳಲ್ಲಿ ತಲ್ಲೀನವಾಗಿರುವ ಇಂದಿಯಗಳನ್ನು ಅದೇ ದಾರಿಯಲ್ಲಿ ಹಿಮ್ಮುಖವಾಗಿ ತಂದು (=ಪರಾವರ್ತ್ಯ ) ಸ್ವಸ್ಥಾನಗಳಲ್ಲಿ ನಿಲ್ಲಿಸಿ ಅವುಗಳು ಕೇವಲಬ್ರಹ್ಮದಲ್ಲಿ ಲೀನವಾಗುವಂತೆ ಮಾಡಿಕೊಳ್ಳುವುದೇ  ’ದಮ’ ಎಂದು ಹೇಳುತ್ತಾರೆ. ’ಇಂದ್ರಿಯಗಳು’ ಎಂಬಲ್ಲಿ ಜ್ಞಾನೇಂದಿಯಗಳು ಮತ್ತು ಕರ್ಮೇಂದ್ರಿಯಗಳೆರಡನ್ನೂ ( ಕೈ, ಕಾಲು, ಬಾಯಿ ಮುಂತಾದವು) ಹತೋಟಿಯಲ್ಲಿಟ್ಟುಕೊಳ್ಳುವುದು ಎಂದು ತಿಳಿಯಬೇಕಾಗುತ್ತದೆ.
’ಸ್ಥಾಪನಂ ಸ್ವಸ್ವಗೋಲಕೆ’ ಎನ್ನುವಲ್ಲಿ ಇಂದ್ರಿಯವಿಷಯಗಳು ಮೊದಲಾದ ಜಾಗಕ್ಕೆ ಮನಸ್ಸನ್ನು ಪುನಃ ಎಳೆದು ತರುವುದು ಎಂದು ಅರ್ಥ.  ರುಚಿಯ ಮೂಲವಿರುವುದು ನಾಲಿಗೆಯಲ್ಲಿ ಅಲ್ಲ, ಅದರ ಮೇಲಿರುವ ರುಚಿಯ ಮೊಗ್ಗುಗಳಲ್ಲಿ (taste buds). ಅಲ್ಲಿಂದ ಆರಂಭವಾಗುವ ರುಚಿಯ ಕಾರ್ಯಕ್ರಮಗಳು ಅಜೀರ್ಣವಾಗುವಷ್ಟು ತಿಂದು ವೈದ್ಯರಲ್ಲಿಗೆ ತೆರಳುವವರೆಗೂ ಮುಂದುವರಿಯುತ್ತದೆ. ವೈದ್ಯರಲ್ಲಿಗೆ ಹೋದ ಮನಸ್ಸನ್ನು ತಿರುಗಿ ರುಚಿಯ ಮೊಗ್ಗುಗಳೆಡೆಗೆ ತಂದು ಬಿಡುವುದು ಮತ್ತು ನಂತರದಲ್ಲಿ ತನಗೆ ರುಚಿಯ ಮೊಗ್ಗುಗಳಿವೆ ಎನ್ನುವುದನ್ನೇ ಮರೆತುಬಿಡುವುದು, ಇದನ್ನು ದಮ ಎಂದು ನಿರೂಪಿಸುತ್ತಾರೆ. ಕೆಟ್ಟದ್ದನ್ನು ಕೇಳಬೇಡ ಎನ್ನುವಲ್ಲಿ ಕಿವಿಯನ್ನು ಕೆಟ್ಟದ್ದರ ಕಡೆಗೆ ಆಲಿಸಬೇಡ ಅಥವಾ ಅಂತಹ ವಿಚಾರಗಳ ಪ್ರತಿಯಾಗಿ ತನಗೆ ಕಿವಿಯ ತಮಟೆಯೇ ಕೆಲಸ ಮಾಡುತ್ತಿಲ್ಲ ಎಂಬ ಭಾವವನ್ನು ತಳೆದು ನಿರ್ಲಿಪ್ತರಾಗುವುದು ಎಂದು ತಿಳಿಯಬಹುದು.

ಆಕ್ಷೇಪ : ಶಮ ಅಥವಾ ಮನೋನಿಗ್ರಹವು (ಅಂತರಿಂದ್ರಿಯ=ಶಬ್ದ, ಸ್ಪರ್ಶ, ರೂಪ,ರಸ, ಗಂಧ) ಇದ್ದಾಗ ಕರ್ಮೇಂದ್ರಿಯ (ಬಹಿರಿಂದ್ರಿಯ=ಕೈ,ಕಾಲು,ಬಾಯಿ,ಗುದ,ಮತ್ತು ಲಿಂಗ)ಗಳ ಮೇಲಿನ ಹತೋಟಿಯು ತಾನೇ ಬರುವುದಲ್ಲವೇ ? ’ದಮ’ದ ಪ್ರತ್ಯೇಕತೆಯ ಅಗತ್ಯವಾದರೂ ಏಕೆ ?

ಸಮಾಧಾನ : ಶಮದಮಾದಿಗಳು ಒಂದಕ್ಕೊಂದು ಪೂರಕವಾಗಿದ್ದರೂ ಸಹ ಶಾಸ್ತ್ರಾನುಕೂಲತೆಗಾಗಿ ಬಿಡಿಸಿ ಹೇಳಲಾಗಿದೆ ಎನ್ನಬಹುದು. ಹೆಚ್ಚು ಸ್ಪಷ್ಟತೆಗಾಗಿ ಒಂದೊಂದನ್ನೂ ಬಿಡಿಸಿ ಹೇಳಲಾಗುತ್ತದೆ.  ’ಸ್ವಾಗತ’(ವೆಲ್ಕಮ್) ವೇ ಸಾಕು, ’ಸುಸ್ವಾಗತ’ ಏಕೆ? (ವೆಲ್ ವೆಲ್ಕಮ್ಮು !). ನಲಿಯುತ್ತಾ ಬರುವುದೇನೋ ಸರಿ, ನಲಿ-ನಲಿಯುತ್ತಾ ಬರುವುದು ಏಕೆ ? ಎಂದರೆ, ವಿಷಯದ ಮಹತ್ವದ ತಿಳಿವಿಗಾಗಿ ಅಥವಾ ವಿಷಯಕ್ಕೆ ಪುಷ್ಟಿ ನೀಡುವುದಕ್ಕಾಗಿ ಹೇಳಲಾಗಿದೆ ಎನ್ನಬಹುದು. ’ಶ್ರೇಷ್ಠತಮಾಯ ಕರ್ಮಣೆ’ ಎಂಬ ವಾಕ್ಯವೊಂದು ವೇದದಲ್ಲಿ ಬರುತ್ತದೆ. ಶ್ರೇಷ್ಠ ಎನ್ನುವುದೇ superlative ಆಗಿರುವಾಗ ಶ್ರೇಷ್ಠತಮ ಎನ್ನುವುದು ಏಕೆ ? ಎಂದರೆ , ಪುಷ್ಟಿಗಾಗಿ, ಮಹತ್ವಕ್ಕಾಗಿ ಹೇಳಿದ್ದಾರೆ ಎನ್ನಬಹುದು. ( Sachin is one of the best player ಎನ್ನುತ್ತಾರೆ. Best ಎನ್ನುವುದೇ unique ಆಗಿರುವಾಗ one of the best ಏಕೆ ? ಎಂದರೆ , ದ್ರಾವಿಡ್ ಕೂಡಾ ಸಚಿನ್ ನಷ್ಟೇ talented ಆಗಿರುವುದರಿಂದ ವ್ಯತ್ಯಾಸವನ್ನು ಗುರುತಿಸಲು ಮಹತ್ವವನ್ನು ಹೇಳಲು ಬಳಸಲಾಗುತ್ತದೆ ಎನ್ನಬಹುದು !).

ಮೂರನೆಯದು ಉಪರತಿ :-

बाह्यालम्बनं वृत्तेरेषोपरतिरुत्तमा ॥२४॥

ಬಾಹ್ಯಾಲಂಬನಂ ವೃತ್ತೇರೇಷೋಪರತಿರುತ್ತಮಾ ||೨೪||
(=ಹೊರಗಿನ ವಿಷಯಗಳ ಅವಲಂಬನೆಯನ್ನು ಬಿಡುವುದೇ ಉಪರತಿ)

ದಮವನ್ನು ಸಾಧಿಸುವುದು ಹೇಗೆ ? ಎನ್ನುವದನ್ನು ’ಉಪರತಿ’ ಎಂಬಲ್ಲಿ ಹೇಳುತ್ತಾರೆ.  ಹೊರಗಿನ ಭೋಗವಸ್ತುಗಳ ಅವಲಂಬನೆಯನ್ನು ಬಿಟ್ಟು ತನ್ನಲ್ಲಿ ತಾನು ನೆಮ್ಮದಿಯನ್ನು ಕಾಣುವುದು ’ಉಪರತಿ’ ಎಂದು ಹೇಳುತ್ತಾರೆ. ಬಯಕೆಗಳು ಏಳದೆ ಇದ್ದಾಗ ವೈರಾಗ್ಯವು ಹುಟ್ಟುತ್ತದೆ. ವೈರಾಗ್ಯವಿದ್ದಲ್ಲಿ ವಿಷಯವಸ್ತುಗಳ ಮೇಲಿನ ಅವಲಂಬನೆಯೂ ಇರುವುದಿಲ್ಲ. ಹೊರಗಿನ ವಿಷಯವಸ್ತುಗಳಾವುದನ್ನೂ ನೆಚ್ಚಿಕೊಳ್ಳದೆ ಸಾಧನೆಯ ದಾರಿಯಲ್ಲಿ ಸಾಗುವುದನ್ನು ಉಪರತಿ ಎಂದು ಹೇಳುತ್ತಾರೆ. ಕೆರೆಯ ನೀರು ಕೆರೆಯ ತೂಬಿನ ಮೂಲಕ ಹೊರಟು ಮುಂದೆ ನಾಲೆಗಳಲ್ಲಿ , ಹೊಲ-ಗದ್ದೆಗಳಲ್ಲಿ ಹೇಗೆ ಬೇರೆ ರೂಪವನ್ನು ಪಡೆಯುವುದೋ ಹಾಗೆಯೇ ಮನಸ್ಸಿನ ಮೂಲಕ ಉಂಟಾಗುವ ವಿಷಯಭೋಗವು ಹೊರಗಿನ ಅವಲಂಬನೆಗಳು ಹೆಚ್ಚಾದಂತೆ ಹಲವು ರೂಪಗಳನ್ನು ಪಡೆದುಕೊಂಡು ನಿವೃತ್ತಿಧರ್ಮಕ್ಕೆ ಅಡ್ಡಿಯಾಗುತ್ತದೆ. ಹೀಗೆ ಶಮದಮಾದಿಗಳು ಒಂದಕ್ಕೊಂದು ಪೂರಕವಾಗಿದ್ದರೂ ಸಹ ಒಂದೊಂದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಮುಂದಿನ ಕಂತಿನಲ್ಲಿ ’ತಿತಿಕ್ಷಾ’ ಮುಂತಾದ ಗುಣಗಳ ವಿಚಾರವನ್ನು ತಿಳಿಯೋಣ.


-------------------------------------------




"   ಐಂಕಾರ ಹ್ರೀಂಕಾರ ರಹಸ್ಯಯುಕ್ತಃ ಶ್ರೀಂಕಾರ ಗೂಢಾರ್ಥ ಮಹಾ ವಿಭೂತ್ಯಾ,
ಓಂಕಾರ ಮರ್ಮ ಪ್ರತಿಪಾದಿನೀಭ್ಯಃ ನಮೋನಮಃ ಶ್ರೀ ಗುರುಪಾದುಕಾಭ್ಯಾಮ್ "

ಮಹಾಲಯ ಅಮಾವಾಸ್ಯೆಯು ಸದ್ಗುರು ಶ್ರೀ ಚಂದ್ರಶೇಖರಭಾರತಿಸ್ವಾಮಿಗಳು ಬ್ರಹ್ಮೈಕ್ಯರಾದ ದಿನ. ಜೀವನ್ಮುಕ್ತರೆಂದೇ ಅವರು ಪ್ರಸಿದ್ದರು. ಅಂತಹ ಸದ್ಗುರುವನ್ನು ವ್ಯಕ್ತಿಗತವಾಗಿ ಕಾಣುವ ಸುಯೋಗ ನನಗಿಲ್ಲವಾದರೂ ಅವರೇ ಬರೆದಿರುವ ವಿವೇಕ ಚೂಡಾಮಣಿಯ ಸಂಸ್ಕೃತ ವ್ಯಾಖ್ಯಾನದಲ್ಲಿ ಪ್ರತ್ಯಕ್ಷವಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು. ಕೆಲವೊಮ್ಮೆ(ಬಹುತೇಕ) ವ್ಯಕ್ತಿಯ ವಿಚಾರಕ್ಕಿಂತಲೂ ವ್ಯಕ್ತಿಯೇ ಪರಮಾರ್ಥವಾಗಿ ವಿಜೃಂಭಿಸುವ ಅಪಾಯಗಳೇ ಹೆಚ್ಚಾಗಿರುವ ಕಾಲದಲ್ಲೂ ಅಂತಹ ವ್ಯಕ್ತಿಪೂಜೆ, ಬಾಹ್ಯಾಡಾಂಬರ ಮುಂತಾದವುಗಳನ್ನೆಲ್ಲಾ ನಿರಾಕರಿಸುತ್ತಲೇ ಬಂದು ಕೊನೆಯಲ್ಲಿ ಹೆಚ್ಚು-ಹೆಚ್ಚು ಅಂತರ್ಮುಖರಾಗಿಯೇ ಇದ್ದು ಬ್ರಹ್ಮಜ್ಞಾನದ ನಿಜಾರ್ಥವನ್ನು ಪ್ರತಿಪಾದಿಸಿ ತೋರಿಸಿದ ಚೈತನ್ಯಕ್ಕೆ ನನ್ನ ನಮನಗಳು. ಆರಾಧನೆಗಳು ಬರುತ್ತವೆ, ಹೋಗುತ್ತವೆ. ವಿವೇಕ ಚೂಡಾಮಣಿಯ ವ್ಯಾಖ್ಯಾನವನ್ನು ನನ್ನ ಬಾಲಿಶ ಮತಿಗೆ ಹೊಳೆದಂತೆ ನಿಮ್ಮೆಲ್ಲರ ಮುಂದೆ ಇಡುತ್ತಿರುವುದಕ್ಕೂ ಸದ್ಗುರುಗಳ ಪ್ರೇರಣೆಯೇ ಕಾರಣವೆನ್ನುತ್ತೇನೆ. ಈ ನಿಟ್ಟಿನಲ್ಲಿ ನಾನಿಂದು, ಇಲ್ಲಿ ಸದ್ಗುರುವಿನ ಚರಣಕ್ಕೆ ಬಾಗಿದ್ದೇನೆ.

-------------------------------------------

ವಂದನೆಗಳೊಂದಿಗೆ.......

Saturday, September 24, 2011

ಏಕೆ೦ದರೆ ಕನ್ನಡಿಯ ಗಾಜು ಒಡೆದಂತಿದೆ!!!

ಮನಸ್ಸಿನ ಮೂಲೆಯಲ್ಲೆಲ್ಲೋ ಬುಧ್ಧನ ನಗು
ಹನಿ-ಹನಿಯ೦ತೆ ತೊಟ್ಟಿಕ್ಕುತ್ತಿರುವ ನಳದ ನೀರು
ಸದ್ಯಕ್ಕೆ ಜ್ಞಾನೋದಯವೆ೦ದರೆ ನೀರಿನ ಟ್ಯಾ೦ಕು ತು೦ಬಿದ೦ತೆ…

ಜಿರಿಜಿರಿ ಮಳೆ ಸದಾ ಬೀಳುತ್ತಿದ್ದರೂ
ತೊಟ್ಟಿಕ್ಕುತ್ತಲೇ ಇರುವ ನಳದ ನೀರಿನಿ೦ದ
ಆಗಾಗ ಟ್ಯಾ೦ಕು ತು೦ಬಿದಂತೆ ಕಂಡರೂ
ಟ್ಯಾ೦ಕಿಯೊಳಗಿನ ಸಣ್ಣ ರ೦ಧ್ರದಿ೦ದ ನೀರು ಸದಾ ಪೋಲು!!
ನೀರು ತೊಟ್ಟಿಕ್ಕುತ್ತಲೇ ಇದೇ.. ತೂತಿನಿ೦ದ ನೀರು ಹೊರಬೀಳುತ್ತಲೇ ಇದೆ!!

ಭೋಧಿವೃಕ್ಷದ ಸುತ್ತೆಲ್ಲಾ ಅಯೋಮಯವೆನ್ನಿಸುವ ಸು೦ಟರಗಾಳಿ
ಧ್ಯಾನಕ್ಕೆ ಕೂತ ಬುಧ್ಧನ ಮನವೆಲ್ಲಾ ಅಲ್ಲೋಲ ಕಲ್ಲೋಲ
ನಳವನ್ನು ನಿಲ್ಲಿಸಿದರೆ ಬೆಳಿಗ್ಗೆ ಸ್ನಾನಕ್ಕೆ ನೀರಿಲ್ಲ…
ಟ್ಯಾ೦ಕು ತು೦ಬುವ ಹಾಗಿಲ್ಲ!!

ಮನದ ತು೦ಬೆಲ್ಲಾ ಏನೋ ಒ೦ದು ರೀತಿಯ ವ್ಯಾಕುಲತೆ, ಅಕ್ಕರೆ
ಆರೈಕೆಗಾಗಿ ಸದಾ ಬಯಸುವ ಮನದೊಳಗೆ
ಸ೦ಸಾರ ಭೀತಿ- ಸನ್ಯಾಸ ಸ್ವೀಕರಿಸುವ ಭ್ರಾಂತಿ!

ಕಾಲಕ್ಕಿಲ್ಲ ಉತ್ತರ.. ಕನ್ನಡಿಯಲ್ಲಿ ಕ೦ಡದ್ದು
ಬೇರಾರದ್ದೋ ಮುಖ! ನನ್ನದೂ ಅಲ್ಲ-ಬುಧ್ಧನದೂ ಅಲ್ಲ!!
ಕಾಲದ ಕನ್ನಡಿಯಲ್ಲೀಗ ಯಾವ ಪ್ರತಿಬಿ೦ಬ ವೂ ಕಾಣಲು ಅಸಾಧ್ಯ…
ಏಕೆ೦ದರೆ ಕನ್ನಡಿಯ ಗಾಜು ಒಡೆದಂತಿದೆ!!!

Friday, September 23, 2011

ಗಾಯಿತ್ರೀ ಹೋಮ

||ಓ೦ ಭೂರ್ಭುವ: ಸ್ವ: ತತ್ಸವಿತುರ್ವರೇಣ್ಯ೦ ಭರ್ಗೋ ದೇವಸ್ಯ ಧೀಮಹಿ ಧೀಯೋಯನ ಪ್ರಚೋದಯಾತು||


ವೇದಗಳು ದೇವರ ಹಾಗೂ ದೇವತೆಗಳ ಅಸ್ತಿತ್ವವನ್ನು ಬಹಳ ನಿಖರವಾದ ಮಾತಿಗಳಲ್ಲಿ ಹೇಳಿವೆ. ದೇವತೆಗಳು ಹಾಗೂ ಜಗತ್ತಿನ ಸಮಸ್ತ ಜೀವ ಕೋಟಿಗಳೆಲ್ಲವೂ ನಾವು “ದೇವರು“ ಎ೦ದು ಕರೆಯುವ ಪರಮೋಚ್ಛ ಶಕ್ತಿಯ ಸೃಷ್ಟಿ! ಎಲ್ಲಾ ದೇವತೆಗಳೂ ಅ೦ದರೆ ಸೂರ್ಯ, ಚ೦ದ್ರ,ಅಗ್ನಿ,ವಾಯು ವರುಣ ನಭ ಮು೦ತಾದ ಎಲ್ಲವಕ್ಕೂ ಒಬ್ಬೊಬ್ಬ ದೇವತೆಯನ್ನು ಅಧಿಪತಿಯಾಗಿ ನೇಮಿಸಿ, ಸಕಾಲಕ್ಕೆ ಸತ್ಯದ ಸ್ಥಾಪನೆ ಹಾಗೂ ಜೀವಕೋಟಿಗಳ ಕಲ್ಯಾಣವನ್ನು ಅನುಗ್ರಹಿಸಿದ್ದಾನೆ. ಸೂರ್ಯ ಬೆಳಕಿನ ಅಧಿಪತಿಯಾದರೆ, ಕಾಲಕಾಲಕ್ಕೆ ಬುವಿಗೆ ಮಳೆಯನ್ನು ಬರಿಸುವುದು ವರುಣನ ಕಾರ್ಯ.. ನಾವು ಉಸಿರಾಡುವ ಗಾಳಿಯು ವಾಯುದೇವನ ಕರುಣೆ.
ವೇದಗಳ ಕಾಲದಿ೦ದಲೂ ಮಾನವ ಹೋಮ –ಹವನಗಳ ಮೂಲಕ ದೇವಾನುದೇವತೆಗಳನ್ನು ಆರಾಧಿಸುತ್ತಾ ಬ೦ದಿದ್ದಾನೆ. ವೇದಗಳ ಕಾಲದಲ್ಲಿ ಈಗಿರುವ೦ತೆ ದೇವಸ್ಥಾನಗಳ ಕಲ್ಪನೆಯಿರಲಿಲ್ಲ. ಮಾನವ ಪ್ರಕೃತಿ ಪ್ರೇಮಿಯೂ ಆರಾಧಕನೂ ಆಗಿದ್ದ. ದೇವಾನುದೇವತೆಗಳನ್ನು ಅಗ್ನಿಯನ್ನು ಆರಾಧಿಸುವ ಮೂಲಕ ಸ೦ಪ್ರೀತಗೊಳಿಸುತ್ತಿದ್ದ ಮಾನವ ಎಲ್ಲಾ ಕೆಡುಕುಗಳನ್ನೂ/ಒಳಿತನ್ನೂ ಅಪೋಶನ ತೆಗೆದುಕೊ೦ಡೂ ಶುಧ್ಧವಾಗಿ ಉಳಿಯುವುದೆ೦ದರೆ ಅಗ್ನಿದೇವನೊಬ್ಬನೇ! ಅ೦ತೆಯೇ ವೈದಿಕ ಕಾಲವು ಹೋಮ ಹಾಗೂ ಹವನಗಳ ಮೂಲಕದ ಕರ್ಮಾನುಷ್ಠಾನಕ್ಕೆ ದಾರಿ ಮಾಡಿತು. ಬ್ರಹ್ಮಾ೦ಡ ( ಜಗತ್ತು) ಹಾಗೂ “ಪಿ೦ಡಾ೦ಡ“ ( ನಮ್ಮ ದೇಹ) ಎರಡರಲ್ಲಿಯೂ ಉಪಸ್ಥಿತನಾಗಿರುವ ಆ ಅಗ್ನಿಯನ್ನು ಆರಾಧಿಸುವ ಮೂಲಕ ನಮ್ಮೆಲ್ಲಾ ತಾಮಸಗಳನ್ನೂ ಅವನಲ್ಲಿ ದಹಿಸುವ ಮೂಲಕ ಮೋಕ್ಷದ ಹಾದಿಯತ್ತ ನಡೆಯಲು ಹೋಮಾಚರಣೆಗಳು ಅತ್ಯ೦ತ ಸೂಕ್ತ.
ಆದ್ದರಿ೦ದಲೇ ಕರ್ಮಗಳನ್ನು ಮಾಡಲಿಚ್ಛಿಸುವವರು ಅಗ್ನಿಯನ್ನು ಆರಾಧಿಸುವುದರ ಮೂಲಕ ಅ೦ದರೆ ಹೋಮ-ಹವನಗಳನ್ನು ಮಾಡುವುದರ ಮೂಲಕ ಆ ದೇವರನ್ನು ಪ್ರಾರ್ಥಿಸಬೇಕೆ೦ದು ಹೇಳುತ್ತಾರೆ.
“ಹೋಮ“ವೆ೦ದರೆ ದೇವರನ್ನು ವೇದಮ೦ತ್ರಗಳ ಸ್ಪಷ್ಟ ಉಚ್ಛರಣೆಯೊ೦ದಿಗೆ,ಅಗ್ನಿಗೆ ಹವಿಸ್ಸನ್ನು ನೀಡುವುದರ ಮೂಲಕ ಆ ಪರಮೋಚ್ಛ ಶಕ್ತಿಯನ್ನು ಸ೦ಪ್ರೀತಗೊಳಿಸುವಒ೦ದು ಕರ್ಮ. ಹೋಮಾನುಷ್ಟಾನವನ್ನು ನಡೆಸುತ್ತಿರುವಾಗ ಕರ್ತನು ತನ್ನ ಕರ್ಮಾ೦ಗದಲ್ಲಿ ಸ೦ಪೂರ್ಣ ನಿಷ್ಟೆ/ಭಕ್ತಿ ಹಾಗೂ ಆದೇವನಲ್ಲಿ ಶರಣಾಗತಿಯ ಭಾವವನ್ನು ಹೊ೦ದಿರಬೇಕೆ೦ದು ವೇದಗಳು ಹೇಳುತ್ತವೆ. “ಯಜ್ಣ“ವೆ೦ದರೆ ತ್ಯಾಗಗಳ ಮೂಲಕ ನಮ್ಮನ್ನು ನಾವು ಈ ಲೌಕಿಕತೆಯಿ೦ದ ಬಿಡುಗಡೆಗೊಳಿಸಿಕೊಳ್ಳುವುದೆ೦ದು ಅರ್ಥ. “ಯಜ್ಞ“ ಪದದ ಮೊದಲ ಅಕ್ಷರವಾದ “ಯ“ ವು ತ್ಯಾಗವನ್ನು ಸೂಚಿಸಿದರೆ ಎರಡನೇ ಪದವಾದ “ಜ್ಞ“ ವು “ತಿಳುವಳಿಕೆ“ ಯಾ “ಅರಿವನ್ನು‘ ಹೊ೦ದುವುದನ್ನು ಸೂಚಿಸುತ್ತದೆ. ಅ೦ದರೆ ಕರ್ಮವನ್ನು ನಡೆಸುವವನು ಮೊದಲು ತ್ಯಾಗಕ್ಕೆ ಸಿಧ್ಧನಾಗಿರಬೇಕು.. ತ್ಯಾಗವನ್ನು ಮಾಡುವುದರ ಮೂಲಕ ಆ ಪರಮೋಚ್ಛ ಶಕ್ತಿಯ ಬಗ್ಗೆ ಅರಿವನ್ನು ಹೊ೦ದುತ್ತಲೇ, ನಿಧಾನವಾಗಿ ಲೌಕಿಕತೆಯ ತ್ಯಾಗಕ್ಕೆ ಅರಿವನ್ನು ಹೊ೦ದಬೇಕು.ಶುಧ್ಧ ಹೃದಯಿಗಳಿಗೆ ಆ ದೇವರ ಅನುಗ್ರಹ ಸದಾ ಇರುತ್ತದೆ ಎ೦ಬ ಅರಿವನ್ನು ಹೊ೦ದಿ, ಲೌಕಿಕ ಬಯಕೆಗಳನ್ನು ತ್ಯಾಗ ಮಾಡುವುದರ ಮೂಲಕ ಆ ಶಕ್ತಿಗೆ ಪರಮಾಪ್ತನಾಗಬೇಕೆ೦ದು ಹೋಮಾನುಚಾರಣೆಯು ತಿಳಿಸುತ್ತದೆ. ವೇದಮ೦ತ್ರಗಳ ಉಚ್ಚಾರದಿ೦ದಲೇ ನಮ್ಮ ಎಷ್ಟೊ ಪಾಪಗಳು ಸುಟ್ಟು ನಾಶವಾಗುತ್ತವೆ. ಇದನ್ನೇ “ತ್ರಿಕರಣ ಶುಧ್ಧಿ“ ಎನ್ನುತ್ತಾರೆ. ( ನಮ್ಮ ದೈಹಿಕ ಶುಧ್ಧಿ, ಮಾನಸಿಕ ಶುಧ್ಧಿ ತನ್ಮೂಲಕ ಹೃದಯ ಶುಧ್ಧಿ ಯನ್ನು ಸಾಧಿಸುವುದೇ “ತ್ರಿಕರಣ ಶುಧ್ಧಿ“)ಹೋಮ-ಹವನಗಳನ್ನು ಆಚರಿಸುವುದರಿ೦ದ ಬಲುಬೇಗ ತ್ರಿಕರಣ ಶುಧ್ಧಿಯನ್ನು ಸಾಧಿಸಬಹುದೆ೦ದು ವೇದಗಳು ಹೇಳುತ್ತವೆ.

“ಗಾಯಿತ್ರೀ ಮ೦ತ್ರ“ವು ಎಲ್ಲಾ ಮ೦ತ್ರಗಳಿಗೂ ಮೂಲ ಮ೦ತ್ರ. ವೈದಿಕ ಸ೦ಸ್ಕೃತ ಭಾಷೆಯ ಈ ಮ೦ತ್ರವನ್ನು ಋಗ್ವೇದವು (೩.೬೨.೧೦) ಉಲ್ಲೇಖಿಸುತ್ತಾ “ ವಿಶ್ವಾಮಿತ್ರ“ ಋಷಿಗೆ ಇದನ್ನು ಅರ್ಪಣೆ ಮಾಡಿದೆ. ಈ ಮ೦ತ್ರೋಚ್ಛಾರಣೆಯ ಮೂಲಕ ಅಥವಾ ಈ ಮ೦ತ್ರದ ಸತತ ಧ್ಯಾನ ಜಗತ್ತಿನ ಪರಮೋಚ್ಛ ಅರಿವನ್ನು ಸ೦ಪಾದಿಸುವುದೇ ಆಗಿದೆ.
“ಹರಿವ೦ಶ“, “ಮನುಸ್ಮೃತಿ“ ಮತ್ತು “ಭಗವದ್ಗೀತೆ“ಗಳು ಗಾಯತ್ರೀ ಮ೦ತರದ ಶ್ರೇಷ್ಟತೆಯನ್ನು ಉಲ್ಲೇಖಿಸಿವೆ.
ತೈತ್ತಿರೀಯ ಅರಣ್ಯಕದಲ್ಲಿ ( ೨.೧೧.೧-೮) ಸಕಲ ಮಾನವರೂ ಹೆಣ್ಣು-ಗ೦ಡೆ೦ಬ ಬೇಧವಿಲ್ಲದೆ ಈ ಮ೦ತ್ರವನ್ನು ಸದಾ ಧ್ಯಾನಿಸಬೇಕೆ೦ದು ಹೇಳಲಾಗಿದೆ. ಗಾಯತ್ರೀ ಮ೦ತ್ರವು “ಅಧ್ಯಾತ್ಮಿಕ ಜ್ಯೋತಿ“ಯ ಮೂಲವೆನ್ನುತ್ತಾರೆ. ಈ ಮ೦ತರದ ಸತತ ಧ್ಯಾನದಿ೦ದ ಯಾ ಉಚ್ಛಾರಣೆಯಿ೦ದ ಒ೦ದು ವಿಶೇಷ ಶಕ್ತಿ ( ಉತ್ಸಾಹ)ಯು ನಮ್ಮ ದೇಹವನ್ನೆಲ್ಲಾ ವ್ಯಾಪಿಸಿ, ನಿರಾಶೆಯನ್ನು ದೂರಗೊಳಿಸುತ್ತದೆ. ಗಾಯತ್ರೀ ಮ೦ತ್ರದ ಸತತ ಧ್ಯಾನದಿ೦ದ ನಮ್ಮೆಲ್ಲಾ ಪಾಪಗಳನ್ನೂ ಕಳೆದುಕೊ೦ಡು, ಎಲ್ಲಾ ಹೊರೆಗಳಿ೦ದಲೂ ಮುಕ್ತರಾಗಿ, ತ್ರಿಕರಣ ಶುಧ್ಧಿಯನ್ನು ಸಾಧಿಸಬಹುದೆ೦ದು ನಮ್ಮೆಲ್ಲಾ ವೇದ ಗ್ರ೦ಥಗಳೂ ಸೂಚಿಸುತ್ತವೆ. “ಅಧ್ಯಾತ್ಮಿಕ ಜ್ಞಾನೋದಯ“ವನ್ನು ಗಳಿಸುವ ಮಾರ್ಗಕ್ಕೆ ಗಾಯತ್ರೀ ಮ೦ತ್ರವು ಸೂಕ್ತವಾದ ವಾಹನ ವ್ಯವಸ್ಥೆಯಾಗಿದೆ.
ಗಾಯತ್ರೀ ಮ೦ತ್ರವು ಸಕಲ “ವೇದಗಳ ಸಾರ“ವೆ೦ದು ಪರಿಗಣಿಸಲ್ಪಟ್ಟಿದೆ. “ವೇದ“ವೆ೦ದರೆ ಅರಿವು.. ಗಾಯತ್ರೀ ಮ೦ತ್ರದ ಸತತ ಧ್ಯಾನದಿ೦ದ ಆ ಅರಿವನ್ನು ಸಾಧಿಸಬಹುದೆ೦ದು ವೇದಗಳು ಹೇಳುತ್ತವೆ. ಎಲ್ಲಾ ನಾಲ್ಕು ವೇದಗಳೂ ಈ ಮಾತನ್ನು ಅನುಮೋದಿಸುತ್ತವೆ. ಹೇಗೆ ಚಿನ್ನವು ಒ೦ದೇ ಆಗಿದ್ದು, ಆ ಮೂಲದಿ೦ದ ಹಲವು ರೀತಿಯ ಆಭರಣಗಳನ್ನು ತಯಾರಿಸಲಾಗುತ್ತದೋ, ಹಾಗೆಯೇ ಜೇಡಿ ಮಣ್ಣು ಒ೦ದೇ ಆಗಿದ್ದು, ಆ ಮಣ್ಣೀನಿ೦ದ ಹಲವು ರೀತಿಯ ಮಡಕೆಗಳನ್ನು ಹೇಗೆ ತಯಾರಿಸಲಾಗುತ್ತದೆಯೋ ಅ೦ತೆಯೇ ಗಾಯಿತ್ರೀ ಮ೦ತ್ರವು ಎಲ್ಲಾ ವೈದಿಕ ಕರ್ಮಾನುಷ್ಟಾನಗಳಿಗೂ ಮೂಲ. ಅ೦ತೆಯೇ ನಾವು ಯಾವುದೇ ಕರ್ಮಾ೦ಗಗಳನ್ನು ಮಾಡುವಾಗಲೂ ಮೊದಲಿಗೆ ಗಾಯತ್ರೀ ಮ೦ತ್ರವನ್ನು ಹೇಳುವುದು ಇದಕ್ಕೇ ಆಗಿದೆ. ಜಗತ್ತಿನ ಸಕಲ ಜೀವಕೋಟಿಗಳ ದೇಹಗಳು ಬೇರೆ-ಬೇರೆಯಾದರೂ ಅವುಗಳಲ್ಲಿ ನೆಲೆಸಿರುವ ಆತ್ಮವು ಒ೦ದೇ! ಆ ಆತ್ಮೋಧ್ಧಾರಕ್ಕಾಗಿ, ಗಾಯತ್ರೀ ಮ೦ತ್ರದ ಸತತ ಅನುಷ್ಠಾನ ಹಾಗೂ ಗಾಯತ್ರೀ ಹೋಮವನ್ನು ಸತತವಾಗಿ ಆಚರಿಸುವುದರ ಮೂಲಕ ತ್ರಿಕರಣ ಶುಧ್ಧಿಯನ್ನು ಸಾಧಿಸಿ, ಎಲ್ಲಾ ಲೌಕಿಕ ಮಾಯೆಗಳನ್ನೂ ತ್ಯಜಿಸಿ, ಎಲ್ಲಾ ಹೊರೆಗಳನ್ನೂ ನೀಗಿಕೊ೦ಡು, ಆ ಪರಮೋಚ್ಛ ಶಕ್ತಿಯ ಬಗ್ಗೆ ಅರಿವನ್ನು ಹೊ೦ದುವುದು ಅತ್ಯ೦ತ ಸೂಕ್ತವಾದುದು.

Thursday, September 22, 2011

ಅಲ್ಲ ಅಲ್ಲ

೧ ಅಲ್ಲ ಅಲ್ಲ;
ಅಲ್ಲಮನಲ್ಲ, ಕಲ್ಲೇಶನಲ್ಲ;
ಏಸು ಈಸೂ ಜೈಸಲಿಲ್ಲ;
ಹರಿ ಸರಿಯಲ್ಲ;
ಹರನೂ ತರವಲ್ಲ;
ಜಿನನು ಜಿತನಲ್ಲ;
ಬುಧ್ಧನೇನೂ ಗೆದ್ದವನಲ್ಲ.

ಎಲ್ಲ ಬಲ್ಲವ ಗೊಲ್ಲನಿರಲೇ ಇಲ್ಲ;
ರಾಮ, ರಾವಣರು ಮಹಾ ಬೇಡ ಕವಿಯ ಕಾವ್ಯ ಪ್ರಲಾಪ;
ಹಿರಣ್ಯ ಕಶುಪುವು ಇರಲಿಲ್ಲ;
ಬಾಲಕನ ಕರೆಗೆ ಹರಿಯು ಸಿಂಹವಾಗಿ ಧರೆಗೆ ಇಳಿಯಲಿಲ್ಲ;
ಬಲಿಯು ಎಲ್ಲೂ ಇರಲಿಲ್ಲ;
ಕುಳ್ಳ ವಾಮನನು ಜಗವೆಲ್ಲ ಪಡೆಯಲಿಲ್ಲ.

ಗಡ್ಡದ ಗುರುಗಳು ಬರಿಗೊಡ್ಡು;
ನುಣ್ಣ ತಲೆಯ ಬಣ್ಣದ ಬಟ್ಟೆಯ ಬಾಲಕನ
ವೇದಾಂತದಲಿ ನಂಬಿಕೆಯಿಲ್ಲ;
ಬಣ್ಣ ಬಣ್ಣದ ಲೇಪನವ,
ಚಿತ್ರ, ವಿಚಿತ್ರ ನಾಮವನೂ,
ಹಾಕಿ, ಹಾಡಿ, ಬೇಡಿ
ಚಿಟಿಕೆ ಚಪ್ಪಾಳೆ, ತಾಳವ
ಹೊಡೆಯುತ, ಕುಣಿಯುತ
ಜನ ಜಂಗುಳಿಯ ಮರಳುಮಾಡಿ,
ಕೊನೆಗೆ ನನ್ನಂತೆ, ನಿಮ್ಮಂತೆ, ಮಿಕ್ಕೆಲ್ಲರಂತೆ,
ಕೊನೆಯ ಉಸಿರನು ಬಿಟ್ಟು,
ಧರೆಯ ಬಸುರಿಗೆ ತಿರುಗಿದವರೆಲ್ಲ,
ಏನೂ ತಿಳಿದಿರಲಿಲ್ಲ.

ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಎಲ್ಲಿಯೂ ಇಲ್ಲ;
ಎಲ್ಲ ಬಲ್ಲವ ನಾನೊಬ್ಬನೆ ನಾಸ್ತಿಕ.

೨. ಇಲ್ಲಿ, ಅಲ್ಲಿ
ಒಳಗಡೆಯಲ್ಲಿ, ಹೊರಗಡೆಯಲ್ಲಿ,
ಎಲ್ಲ ಅಣುವಿನಲ್ಲಿ, ಕಣ್ಣಿಗೆ ಎಟುಕದ ತಾಣದಲ್ಲಿ,
ಇರುವ, ಪೊರೆವ, ಕರೆದರೆ ಬರುವ,
ಹಾಡಿದರೆ ಓಡಿ ಓಡಿ ಬಂದು ಬಿಡುವ,
ಕಾಲಡಿಯಲಿ ತಲೆಯಿಟ್ಟರೆ, ಕೈ ನೀಡಿ ಕೊಡುವ,
ಮನತುಂಬಿದ ಗಾನಕ್ಕೆ ತಲೆತೂಗಿಸಿ ನಲಿವ,
ನಂಬಿದರೆ ಇಲ್ಲೂ, ಅಲ್ಲೂ ತಪ್ಪದೆಯೆ ಪೊರೆವ,
ನಮ್ಮ ದೇವರ ನೆರೆ ನಂಬಿದವ ನಾನೇ ಆಸ್ತಿಕ.

೩. ಅದೂ ಅಲ್ಲ, ಇದೂ ಅಲ್ಲ, ಇನ್ನೊಂದೂ ಅಲ್ಲ
ಒಂದು, ಎರಡು, ಮೂರು....
ನೂರು, ಸಾವಿರ, ಲಕ್ಷ, ಕೋಟಿ, ಕೋಟಿ ಅನೇಕ;
ನೋಡಾಯ್ತು, ಕಂಡಾಯ್ತು, ಹುಡುಕಾಯ್ತು, ತಡಕಾಯ್ತು;
ಮಂಡಿಸಿದೆಲ್ಲವ ಖಂಡಿಸಿಯಾಯ್ತು;
ಮತ್ತೆ, ಮತ್ತೆ ಮನಬಿಚ್ಚಿ ಯೋಚಿಸಿಯಾಯ್ತು.

ಕೊನೆಗೆ ಅಲ್ಲ, ಅಲ್ಲ ನನ್ನ ಮಂತ್ರವಾಯ್ತು ನಾನಾರು?
ನಾನಾರು ಕೂಡ ಗೊತ್ತಿಲ್ಲವಾಯ್ತು.
ಅದೇನು? ಇದೇನು? ಎನಂದರೆ ಏನು?
ತಲೆಯನು ಕೆಡೆಸಿಕೊಳ್ಳುವ,
ಒಳ್ಳೆಯ ಕೆಲಸ ನನ್ನ ಬಲು ದೊಡ್ಡ ಆಸ್ತಿ.
ನಾನು ಆಸ್ತಿಕನಲ್ಲ; ನಾಸ್ತಿಕನಂತೂ ಅಲ್ಲವೇ ಅಲ್ಲ;
ಪ್ರಶ್ನಾಸ್ತಿಕನನ್ನಿ, ಅಗ್ನಾಸ್ತಿಕನನ್ನಿ.
ಸ್ಮಶಾನದಲ್ಲಿ ತಣ್ಣಗೆ, ಮಣ್ಣಾಗುವ ತನಕ,
ಹಣ್ಣಾಗದ, ಬಲು ಹೆಮ್ಮೆಯ, ಕಸಕಟ್ಟೆ ಕಾಯಿ ನಾನು.
-ಕೆ. ಆರ್. ಎಸ್. ಮೂರ್ತಿ

Tuesday, September 20, 2011

ಗುಡಿಗೆ ತಂದ ಹೂಗಳೆಲ್ಲಾ

ನನ್ನ ರಚನೆ
ಗಾಯಕಿ: ಕು|| ಇನ್ಚರಾ ನಾಗೇಶ್

Monday, September 19, 2011

ಮುಚ್ಚಿರುವ ಕದವ ತೆರೆ

ಈಗ್ಗೆ ಐದಾರು ವರ್ಷಗಳ ಮಾತು. ಆಗಿನ್ನೂ ಅಂತರ್ಜಾಲದ ಪರಿಚಯವು ನನಗೆ ಅಷ್ಟಾಗಿ ಇರಲಿಲ್ಲ. ಹಾಸನದಲ್ಲಿ "ಮನೆ ಮನೆ ಕವಿಗೊಷ್ಟಿಯನ್ನು" ನಾನು ಪ್ರಾಯೋಜಿಸಬೇಕಾದರೆ  ಅದು ವಿಶಿಷ್ಟ ವಾಗಿರಬೇಕೆಂದು ಮಿತ್ರರಾದ ಜನಮಿತ್ರ ಪತ್ರಿಕೆಯ ಸಂಪಾದಕರಾದ ಶ್ರೀ ನಾಗೇಶ್ ಅವರೊಡನೆ ಸಮಾಲೋಚಿಸಿ " ಭಾವ ಸಂಗಮ" ಎಂಬ ಕಾರ್ಯಕ್ರಮ ಯೋಜಿಸಿದೆವು. ಅದರಲ್ಲಿ ನಾನು ಬರೆದ ಕವನಗಳನ್ನು  ನಾಗೇಶ ಪುತ್ರಿ ಇನ್ಚರಾ ನಾಗೇಶ್ ಮತ್ತು ಶ್ರೀಮತಿ ಲಲಿತಾ ರಮೇಶ್ ಹಾಡಿದರು. ಆಗಿನ್ನೂ ಇನ್ಚರಾ ಹೈಸ್ಕೂಲ್ ಓದುತ್ತಿದ್ದಳು. ಈಗ ಕೇಳಿ 'ಮುಚ್ಚಿರುವ ಕದವ ತೆರೆ"  

Sunday, September 18, 2011

ಗೌರಿ ಪೂಜಾ ವಿಧಾನ


ಈ ಹಿಂದೆ ಮೂರ್ತಿ ಪೂಜೆಯ ಬಗ್ಗೆ ಕವಿ ನಾಗರಾಜರು ವಿಚಾರ ಮಂಥನ ಆರಂಭಿಸಿದರಷ್ಟೇ. ಅಲ್ಲಿ ನಾನೊಂದು ವಿಷಯ ಪ್ರಸ್ತಾಪಿಸಿದೆ.ಅದು ಗೌರಿ ಪೂಜಾ ವಿಧಾನ. ಅರಿಶಿನ-ಕುಂಕುಮ-ಮೊರದ ಜೊತೆ ಯನ್ನು ಗೃಹಿಣಿಯರು ಕೊಡು-ತೆಗೆದುಕೊಳ್ಳುವ ಬಗೆಗೆ.ಸಾಮಾನ್ಯವಾಗಿ ಇಂಥಹ ವಿಷಯದ ಬಗ್ಗೆ ಯಾರೂ ಚರ್ಚೆ  ಮಾಡಲು ಸಿದ್ಧರಿರುವುದಿಲ್ಲ. ಆಚರಣೆ ಗಳ ಬಗ್ಗೆ ಚರ್ಚಿಸಿದರೆ ಎಲ್ಲಿ ನಮ್ಮ ಮುಂದುವರೆದ ಪೀಳಿಗೆಯು ಹಬ್ಬ ಹರಿದಿನವನ್ನೇ ನಿಲ್ಲಿಸಿಬಿಟ್ತಾರೋ ಎಂಬ ಚಿಂತೆ ಹಲವರಿಗೆ ಇರಬಹುದು!
ಆದರೆ ನಮ್ಮ ಪರಂಪರೆಯ ಬಗ್ಗೆ ಆಚರಣೆಗಳ ಬಗ್ಗೆ ಅತ್ಯಂತ ಶ್ರದ್ಧೆ ಇರುವ ನಮ್ಮಂತವರು  ಮಂಗಳ ದ್ರವ್ಯಗಳ ಪಾವಿತ್ಯ್ರದ ಬಗ್ಗೆ ಚಿಂತನೆ ನಡೆಸ ಬೇಡವೇ? ಯಾಕೆ ಇಷ್ಟು ಭಯ? 
ವಿಷಯಕ್ಕೆ ನೇರವಾಗಿ ಬರುವೆ. ಈ ಭಾರಿ ನಮ್ಮ ಮನೆಯಲ್ಲಿ ಗೌರಿ ಹಬ್ಬದ ತಯಾರಿ ಮಾಡುವಾಗಲೇ ಒಂದಿಷ್ಟು ತಿಳುವಳಿಕೆ ಹೇಳಿದ್ದೆ.
 ಮೊರದ ಬಾಗಿನ ಕೊಡುವಾಗ ಅದರಲ್ಲಿಡುವ  ಧಾನ್ಯಗಳು, ಬಳೆ, ಅರಿಶಿನ-ಕುಂಕುಮ ಪೊಟ್ಟಣಗಳು, ತೆಂಗಿನಕಾಯಿ, ಹಣ್ಣು , ಕನ್ನಡಿ-ಬಾಚಣಿಗೆ ,ಇತ್ಯಾದಿ ಎಲ್ಲವನ್ನೂ ಜನರು ಉಪಯೋಗಿಸಲು ಸಾಧ್ಯವಾಗುವ ಗುಣ ಮಟ್ಟದ ವಸ್ತುಗಳಾಗಿರಬೇಕು. ಅರಿಶಿನ ಕುಂಕುಮದ ಹೆಸರಲ್ಲಿ  ಬಣ್ಣಗಳನ್ನು ಕೊಡಬೇಡಿ...ಇತ್ಯಾದಿ.... 
ನನ್ನ ಪತ್ನಿ  ನನ್ನ ಮಾತನ್ನು ನೆರವೇರಿಸಿದಳು. ಹಬ್ಬ ಮುಗಿಯಿತು. ನಾಲ್ಕಾರು ದಿನಗಳು ಕಳೆದ ನಂತರ ನೋಡುವಾಗ ನಾಲ್ಕೈದು ಮೊರದ ಬಾಗಿನ ಒಂದರ ಮೇಲೊಂದು ಪೇರಿಸಿರುವುದನ್ನು ತೆಗೆದು ನನ್ನ ಪತ್ನಿಯು ಎಲ್ಲವನ್ನೂ ಪ್ರತ್ಯೇಕ ಗೊಳಿಸುವುದನ್ನು ಕಂಡೆ. ನನ್ನ ಮಾತನ್ನು ನನ್ನ ಪತ್ನಿಯು ಉಳಿಸಿದರೂ ಅವಳಿಗೆ ಬಂದ ಬಾಗಿನಗಳಲ್ಲಿ ಎಲ್ಲವೂ ಮಕ್ಕಳಾಟಕ್ಕೆ ಯೋಗ್ಯವಾದವು!!. ಈಗ ಅವನ್ನೇನು ಮಾಡಬೇಕು? ಮಂಗಳ ದ್ರವ್ಯಗಳ ಪಾವಿತ್ರ್ಯವನ್ನು  ಉಳಿಸುವುದಾದರೂ ಹೇಗೆ? ಬಲ್ಲವರು ತಿಳಿಸಿ.ನನ್ನ ಮದುವೆ ಯಾದ ದಿನಗಳಿಂದ ಆಡಿದ ಮಕ್ಕಳಾಟದ ಬಳೆ ಬಿಚ್ಚೋಲೆ, ಅರಿಶಿನ ಕುಂಕುಮದ ಪೊಟ್ಟಣಗಳು, ಕನ್ನಡಿ-ಬಾಚಣಿಗೆ  ಮೂಟೆಯನ್ನು ಗೌರಿ  ಹಬ್ಬದ ಹಿಂದಿನ ದಿನ  ಖಾಲಿ ಮಾಡಿದ್ದೆ. ಈಗ ಪುನ: ಶುರುವಾಯ್ತಲ್ಲ!! ಇದಕ್ಕೆ ಪರಿಹಾರ ಇದೆಯೇ? 
ನನ್ನ ವಿನಂತಿ ಇಷ್ಟೇ. ನಮ್ಮ ಹಬ್ಬ ಹರಿದಿನಗಳು ಮಕ್ಕಳಾಟ ಆಗಬಾರದು. ನಮ್ಮ ಬದುಕಿಗೆ ನೆಮ್ಮದಿ ನೀಡುವ, ಸಂತಸ ಕೊಡುವ ಸಾಧನವಾಗಬೇಕು. ಏನಂತೀರಿ? 


Saturday, September 17, 2011

ಮಾಯೆ-4

ಕುಲವೆನ್ನುವರು... ಕಳೆ ಎನ್ನುವರು
ಕಳೆಯಿರದಾ ಕುಲವಿಹುದೇನಯ್ಯಾ..
ಹುಲುಸಾಗಿ ಬೆಳೆವ ಕಳೆಗೂ
ಅಭದ್ರತೆ ಎ೦ಬುದು ಇಹುದಯ್ಯಾ...
ಎನ್ನ೦ತರ೦ಗದೇವಾ ಕುಲದ ಕಳೆಯ
ಕಲೆಯೊಳಗೆ ಬೆರೆತು ಮುಳುಗಿಹೋಗಿರುವ
ನಾನೆ೦ತ ಕುಲೀನನಯ್ಯಾ..
ಇದಕೆ ಕಲಾಯಿ ಹಾಕುವ ಬಗೆ ಹೇಳಯ್ಯಾ..

ಮನದಲೊ೦ದು ನಡೆಯಲೊ೦ದು..
ನಿನ್ನಲೊ೦ದು ಎನ್ನಲೊ೦ದು..
ನನಗೆ ಸ೦ಕಟ ನಿನಗೆ ಪರೀಕ್ಷೆ...
ಕರೆದರೂ ಬರದಿರುವ ನೀನು
ಹಿ೦ಬದಿಯೇ ನಿ೦ತು ನೋಡುವೆಯಲ್ಲಯ್ಯಾ
ಕರೆದರೂ ಬರದಿದ್ದವನು ನೀನೊಬ್ಬನಯ್ಯಾ!
ಎನ್ನ೦ತರ೦ಗದೇವ.. ಕಷ್ಟಕ್ಕಾದವನೇ ನೀನಯ್ಯಾ
ಎ೦ಬುದರ ಅರಿವಿರದ ನಾನೆ೦ತ ಬ೦ಧುವಯ್ಯಾ

ವಿವೇಕ ಚೂಡಾಮಣಿ - ಭಾಗ -೧೧



ಗ್ರಂಥದ ಮುಂದುವರಿದ ಭಾಗ

तद्वैराग्यं जुगुप्सा या दर्शनश्रवणादिभिः ।
देहादिब्र्ह्मपर्यन्ते ह्यनित्ये भोगवस्तुनि ॥२१॥

ತದ್ವೈರಾಗ್ಯಂ ಜುಗುಪ್ಸಾ ಯಾ ದರ್ಶನಶ್ರವಣಾದಿಭಿಃ |
(= ನೋಡುವುದು, ಕೇಳುವುದು ಮುಂತಾದವುಗಳಿಂದ ಹುಟ್ಟುವ ವೈರಾಗ್ಯ )
ದೇಹಾದಿಬ್ರಹ್ಮಪರ್ಯಂತೇ ಹ್ಯನಿತ್ಯೇ ಭೋಗವಸ್ತುನಿ ||೨೧||
(=ದೇಹದಿಂದ ಮೊದಲಾಗಿ ಬ್ರಹ್ಮದವರೆಗಿನ ಅನಿತ್ಯವಾದ ಭೋಗವಸ್ತುಗಳಲ್ಲಿ)

ಬ್ರಹ್ಮವೇ ಸತ್ಯ ಜಗತ್ತು ಮಿಥ್ಯೆ ಎಂಬ ಧೃಡ ನಿಶ್ಚಯವು ಬಂದ ನಂತರ ಜಗತ್ತಿನ ವ್ಯಾವಹಾರಿಕ, ಪ್ರಾಪಂಚಿಕ ಭೋಗವಸ್ತುಗಳ ಬಗೆಗೆ ಜಿಗುಪ್ಸೆ ಅಥವಾ ಅನಾಸಕ್ತಿಯು ಹುಟ್ಟಬೇಕು ಮತ್ತು ಅಂತಹ ವೈರಾಗ್ಯದ ಭಾವವನ್ನು ಉಂಟುಮಾಡಿಕೊಳ್ಳಬೇಕು ಎಂದು ’ಇಹಾಮುತ್ರಫಲಭೋಗವೈರಾಗ್ಯ’ ಎಂಬ ಎರಡನೆಯ ಸಾಧನದಲ್ಲಿ ಶ್ರೀ ಶಂಕರರು ನಿರೂಪಿಸುತ್ತಾರೆ.
’ಇಹ’ ಎಂದರೆ ಈ ಜಗತ್ತಿನಲ್ಲಿ ದೇಹದ ಮೂಲಕ ಮೊದಲಾಗುವ ಎಲ್ಲಾ ಪ್ರಾಪಂಚಿಕ ಸುಖ-ಭೋಗಗಳ ಮೇಲಿನ ಜಿಗುಪ್ಸೆ ಎಂದಾಗುತ್ತದೆ. ವ್ಯಾವಹರಿಕ ಜಗತ್ತಿನಲ್ಲಿ ಆಕರ್ಷಣೆಗಳು, ಭೋಗಗಳು ಹುಟ್ಟುವುದೇ ದೇಹದ ಕರ್ಮೇಂದ್ರಿಯಗಳು, ಜ್ಞಾನೇಂದ್ರಿಯಗಳ ಮೂಲಕ ಎನ್ನುವಾಗ ಅಂತಹ ಎಲ್ಲಾ ಸುಖ-ಭೋಗಗಳ ಮೇಲಿನ ಆಸಕ್ತಿಯನ್ನು ಬಿಟ್ಟು ಕೇವಲಬ್ರಹ್ಮದಲ್ಲಿ ನಿಶ್ಚಯವಾಗುವುದು ಎಂದು ತಿಳಿಯಬೇಕಾಗುತ್ತದೆ.
’ಅಮುತ್ರ’ ಅಥವಾ ಪರಲೋಕ ಎಂದರೆ ನಮ್ಮ ಪುರಾಣಗಳಲ್ಲಿ ವರ್ಣಿಸಿರುವಂತೆ ಸಿಗಬಹುದಾದ ’ಸ್ವರ್ಗ’ ಸುಖ-ಭೋಗಗಳು.  ಸ್ವರ್ಗಸುಖವನ್ನೂ ತ್ಯಜಿಸುವುದು ವೈರಾಗ್ಯದ ಲಕ್ಷಣ ಎನ್ನುವ ಅರ್ಥದಲ್ಲಿ ಹೇಳಿರುತ್ತಾರೆ.
’ರಾಗ’ ಎಂದರೆ ಬಣ್ಣ ಅಥವಾ ಸೆಳೆತ ಎಂದುಕೊಂಡರೆ ’ವಿರಾಗ’ ಎನ್ನುವುದು ’ರಾಗ’ ದ ವಿರೋಧಸೂಚಕವಾಗಿ ಬರುತ್ತದೆ. ವಿರಾಗದ ಭಾವವೇ ವೈರಾಗ್ಯ. ವೈರಾಗ್ಯವು ಹುಟ್ಟದೇ ಇದ್ದಲ್ಲಿ ಆತ್ಮಾಭ್ಯಾಸವೂ ಸಾಧ್ಯವಿಲ್ಲ.
ಈ ಜಗತ್ತಿನಲ್ಲಿ ಆಚರಿಸುವ ಕರ್ಮಗಳಿಂದ ಮತ್ತು ಅದರ ಪುಣ್ಯಫಲಗಳಿಂದ ಸ್ವರ್ಗಪ್ರಾಪ್ತಿಯಾಗುತ್ತದೆ ಎನ್ನುವುದಾದರೆ, ಆ ಸ್ವರ್ಗದಲ್ಲೂ ಸಹ ಇರುವುದು ಸುಖ-ಭೋಗಗಳೆ !.  ಇಲ್ಲಿ ಸಾಧಾರಣ ಕುರ್ಚಿಯ ಮೇಲೆ ಕುಳಿತುಕೊಂಡರೆ ಅಲ್ಲಿ ರತ್ನಸಿಂಹಾಸನದ ಮೇಲೆ ಕೂರಿಸಲಾಗುತ್ತದೆ.  ಹೀಗಿರುವಾಗ ಸ್ವರ್ಗಪ್ರಾಪ್ತಿಯೂ ಮೋಕ್ಷವಲ್ಲ ಎಂಬುದು ಇಲ್ಲಿ ನಿರೂಪಿತವಾಗುತ್ತದೆ.  "ಇಲ್ಲಿ ನಮ್ಮ ಸಿನಿಮಾ ನರ್ತಕಿಯರು ಕುಣಿದರೆ ಅಲ್ಲಿ ರಂಭೋರ್ವಶಿಯರು ನರ್ತಿಸುತ್ತಾರೆ. ಎರಡೂ ನರ್ತನವೇ ಆದರೆ, quality ಬದಲಾಗಬಹುದು "  ಎಂದು ರಾ. ಗಣೇಶರು ರಸವತ್ತಾಗಿ ಹೇಳುತ್ತಾರೆ.
ಕಾಶಿಗೆಂದು ಯಾತ್ರೆ  ಹೋದವರು ಅಲ್ಲಿ ಮೂರು ವಸ್ತುಗಳನ್ನು (ಪ್ರಿಯವಾದುದು ಎಂದು ಕೆಲವರು ಒತ್ತಿ ಹೇಳುತ್ತಾರೆ. ನನಗೆ ಅದರ ಬಗ್ಗೆ ಆಸಕ್ತಿಯಿಲ್ಲ) ಬಿಟ್ಟು (ತ್ಯಜಿಸಿ) ಬರಬೇಕು ಎಂಬ ಆಚರಣೆಯೊಂದಿದೆ. ಹಾಗೆ ಬಿಟ್ಟು ಬರುವವರೂ ಬಹುಸಂಖ್ಯೆಯಲ್ಲಿದ್ದಾರೆ. (ನಮ್ಮ ತಂದೆಯವರು ಅವರ ಗೆಳೆಯರೊಬ್ಬರಿಗೆ "ನೀನು ಸಿಟ್ಟನ್ನು ಬಿಟ್ಟು ಬಾರಯ್ಯಾ" ಎಂದು ಹೇಳಿದ್ದರು !).  ಕಾಶಿಯಲ್ಲಿ ಮೈಸುರು ಪಾಕನ್ನು ಬಿಟ್ಟು ಬಂದವರು ಮೈಸೂರಿನಲ್ಲಿ ಮೈಸೂರು ಪಾಕನ್ನು ತಿಂದರಂತೆ. ಯಾರೋ ವಿವೇಕಿಗಳು "ಬಿಟ್ಟದ್ದು ಏಕೆ ? " ಎಂದು ಕೇಳಿದ್ದಕ್ಕೆ ’ನಾನು ಬಿಟ್ಟದ್ದು ಕಾಶಿಯಲ್ಲಿ, ಅಲ್ಲಿ ತಿನ್ನೋದಿಲ್ಲ ಅಂತಲೇ ಹೊರತು ಮೈಸೂರಿನಲ್ಲಿ ಅಲ್ಲ’ ಎಂದರಂತೆ !. ಕೆಲವರು ಸಾವಿರದಲ್ಲಿ ಕೊಡುವ ಲಂಚವನ್ನು ಮುಟ್ಟುವುದೇ ಇಲ್ಲ, ಲಕ್ಷದಲ್ಲಾದರೆ ಬಿಡುವುದೇ ಇಲ್ಲ !.   "ಬಿಟ್ಟೆ" ಎನ್ನುವುದಾದರೆ ಎಲ್ಲೆಡೆಯೂ ಎಲ್ಲವನ್ನೂ ಬಿಡುವುದು ಎಂದಾಗಬೇಕಾಗುತ್ತದೆ ಮತ್ತು ಅದೇ ’ಇಹಾಮುತ್ರಫಲಭೋಗವೈರಾಗ್ಯ’ ಎಂದು ಸದ್ಗುರುಗಳು ಹೇಳುತ್ತಾರೆ.
ದಾರಿಬದಿಯ ತಳ್ಳುವಗಾಡಿಯಲ್ಲಿ ಮಾಡುವ ದೋಸೆಯನ್ನು ತಿನ್ನೋದಿಲ್ಲ ಎಂದು ಆಣೆ ಮಾಡಿ , ದೊಡ್ಡ ಸ್ಟಾರ್ ಹೋಟೆಲ್ಲಿನ ದೋಸೆಯನ್ನು ಮಾತ್ರ ತಿನ್ನುತ್ತೇನೆ ಎನ್ನುವುದು ದೋಸೆಯನ್ನು ಬಿಟ್ಟ ಲಕ್ಷಣವಂತೂ ಅಲ್ಲ. ಲಕ್ಷ-ಲಕ್ಷ ಬೆಲೆಬಾಳುವ ಕಾರಿನ ಕುಶನ್ ಸೀಟಿನ ಮೇಲೆ ಕೃಷ್ಣಾಜಿನವನ್ನು ಹಾಸಿಕೊಂಡು ಕುಳಿತು ದಿಗ್ವಿಜಯಕ್ಕೆ ತೆರಳುವುದು ಕಾರಿನ ಸುಖ-ಭೋಗಗಳನ್ನು ಬಿಟ್ಟಂತೇನೂ ಅಲ್ಲ !.

ದೇಹದಿಂದ ಮೊದಲಾಗಿ ಬ್ರಹ್ಮದವರೆಗಿನ ಎಲ್ಲಾ ಸುಖ-ಭೋಗಗಳನ್ನು ಬಿಡುವುದೇ ವೈರಾಗ್ಯ ಎಂದು ಶಂಕರರು ಮೇಲ್ಕಂಡ ಶ್ಲೋಕದಲ್ಲಿ ಹೇಳಿರುತ್ತಾರೆ.  ಬಿಡುವುದಾದರೂ ಹೇಗೆ ? ಎಂಬ ಪ್ರಶ್ನೆ ಬರುತ್ತದೆ.
ಇಹಭೋಗವಸ್ತುಗಳನ್ನು ಮತ್ತೆ ಮತ್ತೆ ತಿಳಿಯುವುದರಿಂದ ಅದರ ಬಗೆಗೆ ವಿಚಾರ ಮಾಡುವುದರಿಂದ ಅದರಲ್ಲಿನ ಹುಳುಕುಗಳು(ದೋಷಗಳು) ಕಾಣುತ್ತಾ ಹೋಗುತ್ತದೆ. ಕೋಟಿ-ಕೋಟಿ ಹಣವನ್ನು ಕೂಡಿಟ್ಟರೂ ಆಪಾದನೆಗಳಿಗೆ ತಲೆಬಾಗಿ ಜೈಲುಪಾಲಾದಾಗ ಹಣವನ್ನು ಕೂಡಿಸಿದ ಅಡ್ಡದಾರಿಯ ಬಗೆಗೆ ಜಿಗುಪ್ಸೆ ಹುಟ್ಟಬೇಕಾಗುತ್ತದೆ. ಹುಳುಕುಗಳನ್ನು ತಿಳಿಯಬೇಕಾಗುತ್ತದೆ.

ಸದ್ಗುರು ಚಂದ್ರಶೇಖರ ಭಾರತಿಗಳು ತಮ್ಮ ವ್ಯಾಖ್ಯಾನದಲ್ಲಿ ವಿಷ್ಣುಪುರಾಣದಿಂದ ಆಯ್ದ ಸೊಗಸಾದ ವಾಕ್ಯವೊಂದನ್ನು ಉದಾಹರಿಸುತ್ತಾರೆ.
"ಸ್ವದೇಹಾಶುಚಿಗಂಧೇನ ನ ವಿರಜ್ಯೇತ ಯಃ ಪುಮಾನ್ |
ವೈರಾಗ್ಯಕಾರಣಂ ತಸ್ಯ ಕಿಮನ್ಯದುಪದಿಷ್ಯತಾಮ್ || " ಎಂದು.
" ಯಾರಿಗೆ ತನ್ನ ಮೈಯಿನ ಬೆವರಿನ ವಾಸನೆಯು (ದೇಹದ ದುರ್ವಾಸನೆ) ಬಾಧಿಸಿ ಅದರ ಬಗೆಗೆ ಜಿಗುಪ್ಸೆಯನ್ನು ಹುಟ್ಟಿಸುವುದಿಲ್ಲವೋ ಆತನಿಗೆ ಯಾರು ತಾನೆ ವೈರಾಗ್ಯದ ಉಪದೇಶವನ್ನು ಮಾಡಲು ಸಾಧ್ಯ ?!" ಎಂದು ಸೊಗಸಾದ ವ್ಯಾಖ್ಯಾನವನ್ನು ಕೊಡುತ್ತಾರೆ. ಹಂತ-ಹಂತವಾಗಿ ಬಾಡಿ ಉದುರಿಹೋಗುವ ಈ ದೇಹದ ವಿಚಾರವಾಗಿ ಜಿಗುಪ್ಸೆಯು ಹುಟ್ಟಿ ಎಲ್ಲಾ ಸುಖ-ಭೋಗಗಳ ಮೇಲಿನ ಆಸಕ್ತಿಯು ನಿವಾರಣೆಯಾಗಿ ವೈರಾಗ್ಯವು ಹುಟ್ಟುವುದೇ ಎಲ್ಲವನ್ನೂ ’ಬಿಟ್ಟೆ’ ಎನ್ನುವ ಭಾವ ಎಂದು ಅರಿಯಬೇಕಾಗುತ್ತದೆ.

ಇಹದ ಭೋಗಗಳನ್ನೆನೋ ನೋಡಿ-ತಿಳಿದು ಆಸಕ್ತಿ ಕಳೆದುಕೊಂಡು ಜಿಗುಪ್ಸೆಯನ್ನು ತಾಳಬಹುದು. ಆದರೆ, ಪರದ ಬಗೆಗಿನ ಆಸಕ್ತಿಯು ನಿವಾರಣೆಯಾಗುವುದು ಹೇಗೆ ?. ಪರದ ಅಥವಾ ಸ್ವರ್ಗಸುಖದ ವಿಚಾರವನ್ನು ಇಹಲೋಕದಲ್ಲಿರುವವರು ಕೇಳಿ ತಿಳಿದುಕೊಳ್ಳಬೇಕೆ ಹೊರತು ಕಾಣಲಂತೂ ಸಾಧ್ಯವಿಲ್ಲ. ನಮ್ಮ ಪುರಾಣಗಳಲ್ಲಿ ಸ್ವರ್ಗಸುಖಗಳನ್ನು ರಸವತ್ತಾಗಿ ವರ್ಣಿಸಿರುವುದರಿಂದ ಪುರಾಣಶ್ರವಣದಿಂದಲೂ ಪರದ ಭೋಗವಸ್ತುಗಳ ಪ್ರತಿ ಆಸಕ್ತಿಯು ಹುಟ್ಟಿ ಆತ್ಮಾಭ್ಯಾಸಕ್ಕೆ ತೊಡಕಾಗುತ್ತದೆ. ’ಮುಂದಿನ ರಸ್ತೆಯಲ್ಲಿರುವ ಹೋಟೆಲಿನಲ್ಲಿ ರುಚಿಯಾದ ಮಸಾಲೆದೋಸೆ ಸಿಗುತ್ತದೆ’ ಎನ್ನುವುದನ್ನು ಕೇಳಿದಾಗಲೇ ಬಾಯಲ್ಲಿ ಒಂದೆರೆಡು ಹನಿ ನೀರೂರುವುದು ಮಾನವ ಸಹಜ ಗುಣ. ಆತ್ಮಾಭ್ಯಾಸದಲ್ಲಿ ತೊಡಗುವವರು ಇವುಗಳಿಂದಲೂ ಜಿಗುಪ್ಸೆಯನ್ನು ಹೊಂದಬೇಕಾಗುತ್ತದೆ.  ಪುರಾಣಗಳಿಂದ ತಿಳಿದುಕೊಳ್ಳುವ , ಕೇಳುವ ವಿಚಾರಗಳು ಮನಸ್ಸನ್ನು ಸ್ವರ್ಗಪ್ರಾಪ್ತಿಗೆ ಕಾರಣವಾಗುವ ಕರ್ಮಗಳೆಡೆಗೆ ಎಳೆದೊಯ್ಯುತ್ತದೆ. ಹಲವು ಮಹಾಯಾಗಗಳನ್ನು ಮಾಡಿ ಅದರ ಪುಣ್ಯಫಲದಿಂದ ಅನನ್ಯವಾದ ಸ್ವರ್ಗವನ್ನು ಪಡೆದರೂ ಅಲ್ಲಿಯೂ ಸುಖ-ಭೋಗಗಳನ್ನೇ ಅನುಭವಿಸುವುದರಿಂದ ಸಂಪಾದಿಸಿದ ಪುಣ್ಯವು ಕಡಿಮೆಯಾಗುತ್ತಾ (ಕ್ಷಯಿಸಿ) ಬಂದು ಕೊನೆಗೆ ಪುಣ್ಯವು ಬರಿದಾದ ನಂತರ ಯಾವುದಾದರೊಂದು ರೂಪದಲ್ಲಿ ಭೂಮಿಗೆ ಬೀಳಬೇಕಾಗುತ್ತದೆ. ಸ್ವರ್ಗದಲ್ಲಿ ಇರಲೇನೋ ಆಸೆಯಿರುತ್ತದೆ ಆದರೆ, ಪುಣ್ಯವು ಮುಗಿದ ನಂತರ ತಳ್ಳಿಸಿಕೊಂಡು ಬರಬೇಕಾಗುತ್ತದೆ. (ಭಗವದ್ಗೀತೆಯಲ್ಲಿ ಬರುವ ವಿಚಾರ).
ಸ್ವರ್ಗದ ಕತೆಯೂ ಹೀಗಿರುವಾಗ ಅದಾದರೂ ಏಕೆ ? ಅದೂ ಅನಿತ್ಯವೇ ಆಗಿದೆಯಲ್ಲಾ !, ಎಂಬ ಭಾವದಿಂದ ವೈರಾಗ್ಯವು ಹುಟ್ಟಬೇಕಾಗುತ್ತದೆ.  ದೇಹದಿಂದ ಮೊದಲಾಗಿ ಬ್ರಹ್ಮದವರೆಗಿನ ಎಲ್ಲಾ ಅನಿತ್ಯಗಳ ವಿಚಾರವನ್ನು ಕೇಳಿ-ನೋಡಿ-ತಿಳಿದು ಅದರಲ್ಲಿ ದೋಷಗಳನ್ನು ಕಂಡನಂತರ ಭೋಗವಸ್ತುಗಳ ಪ್ರತಿಯಾಗಿ ಜಿಗುಪ್ಸೆಯು ಹುಟ್ಟಿ ಆತ್ಮಾಭ್ಯಾಸಕ್ಕೆ ದಾರಿಯಾಗುತ್ತದೆ ಎಂದು ತಿಳಿಸುತ್ತಾರೆ.
ಆತ್ಮಜ್ಞಾನಕ್ಕೆ ಬ್ರಹ್ಮಸತ್ಯ ಜಗನ್ಮಿಥ್ಯಾ ಎಂದು ನಿಶ್ಚಯಿಸಿಕೊಳ್ಳುವುದು ಎಷ್ಟು ಮುಖ್ಯವೋ ವೈರಾಗ್ಯ ಸಾಧನೆಯ ಮೂಲಕ ಅದನ್ನು ಅನುಸರಿಸುವುದೂ ಅಷ್ಟೇ ಮುಖ್ಯ ಎಂದು ಸದ್ಗುರುಗಳು ವ್ಯಾಖ್ಯಾನಿಸುತ್ತಾರೆ.

ಇಹದ ಬಂಧನಕ್ಕೆ ಬೀಳುವ ಪರಿಯನ್ನು ಶ್ರೀ ರಾಮಕೃಷ್ಣ ಪರಮಹಂಸರು ಒಂದು ಕತೆಯ ಮೂಲಕ ಸೊಗಸಾಗಿ ಹೇಳುತ್ತಾರೆ.
"ಒಂದೂರಿನಲ್ಲಿ ಒಬ್ಬ ಸಾಧು ವಾಸಮಾಡುತ್ತಿದ್ದ. ಪ್ರತಿದಿನ ಸ್ನಾನಮಾಡಿದ ನಂತರ ತನ್ನ ಲಂಗೋಟಿಯನ್ನು ಕುಟೀರದೊಳಗೆ ಹರವುತ್ತಿದ್ದ. ಒಂದು ಇಲಿ ಬಂದು ಆತನ ಲಂಗೋಟಿಯನ್ನು ದಿನವೂ ಕಚ್ಚಿಕೊಂಡು ಹೋಗುತ್ತಿತ್ತು. ಸಾಧುವಿಗೆ ಲಂಗೋಟಿಯನ್ನು ಹೊಂದಿಸಲು ಕಷ್ಟವಾಗಿ ಇಲಿಯಿಂದ ಪಾರಾಗಲು ಬೆಕ್ಕನ್ನು ಸಾಕಿದನಂತೆ. ಬೆಕ್ಕಿನ ಹೊಟ್ಟೆಯನ್ನು ತಣಿಸಲು ಹಾಲಿಗಾಗಿ ಹಸುವನ್ನು ಸಾಕಿದನಂತೆ. ಹಸುವಿನ ಮೇವಿಗಾಗಿ ಒಂದು ಹೊಲವನ್ನು  ಬೇಡಿ ಪಡೆದುಕೊಂಡು ಹುಲ್ಲನ್ನು ಬೆಳೆದನಂತೆ. ಒಬ್ಬನಿಂದಲೇ ಹೊಲವನ್ನು ನೊಡುವುದು ಕಷ್ಟವಾಗಿ ಕೆಲವು ಆಳುಗಳನ್ನು ಹೊಂದಿಸಿಕೊಂಡನಂತೆ. ಆಳುಗಳ ಊಟೋಪಚಾರಕ್ಕಾಗಿ ಒಬ್ಬಳನ್ನು ಮದುವೆಯಾದನಂತೆ, ನಂತರ ಮಕ್ಕಳಾಯಿತಂತೆ !.  ಕೊನೆಗೆ ಅವನೊಬ್ಬ ದೊಡ್ಡ ಬೇಸಾಯಗಾರನೂ ಗ್ರಾಮದ ಮುಖಂಡನೂ ಆಗಿ ಸಂಸಾರದೊಳಗೆ ಸೇರಿಕೊಂಡನಂತೆ". ಇಷ್ಟೆಲ್ಲಾ ಆಗಿದ್ದು ಕೇವಲ ಒಂದು ಲಂಗೋಟಿಯ ಸಲುವಾಗಿ !. ಒಂದು ಸಣ್ಣವಸ್ತುವಿನ ಮೇಲಿನ ಆಸಕ್ತಿಯೂ ಕೂಡ ಆತ್ಮಾಭ್ಯಾಸಿಗೆ ಹೇಗೆ ತೊಡಕಾಗಬಹುದು ಎಂಬುದನ್ನು ಹೀಗೆ ನಿರೂಪಿಸುತ್ತಾರೆ.

ಮುಂದಿನ ಕಂತಿನಲ್ಲಿ ಶಮದಮಾದಿ ಆರು ಗುಣಗಳ ವಿಷಯವನ್ನು ತಿಳಿಯೋಣ.

ವಂದನೆಗಳೊಂದಿಗೆ...
--------------------------------------------------------

Friday, September 16, 2011

ಯೋಚಿಸಲೊ೦ದಿಷ್ಟು...೪೧

೧. ಮೂರು ವರ್ಷ ಸತತ ಕಾಲೇಜು ವ್ಯಾಸ೦ಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ, ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್ಣವಾದುದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨.ವಿಜ್ಞಾನವು ಪ್ರತಿಯೊ೦ದಕ್ಕೂ ಕಾರಣವಿದೆ ಎ೦ಬುದನ್ನು ಕಲಿಸಿದರೆ, ಗಣಿತವು ಪ್ರತಿಯೊ೦ದು ಸಮಸ್ಯೆಗೂ ಪರಿಹಾರವಿದೆಯೆ೦ಬುದನ್ನು ಕಲಿಸುತ್ತದೆ!!
೩.ಯಾರಿ೦ದಲಾದರೂ ನಿಜವಾದ ಪ್ರೀತಿಯನ್ನು ನಾವು ಬಯಸುವುದಕ್ಕಿ೦ತ.. ಅದನ್ನು ಮೊದಲು ನಾವೇ ಅವರಿಗೆ ನೀಡುವುದು ಲೇಸು!!
೪. ಸ೦ಬ೦ಧಗಳೊ೦ದಿಗೆ ನಮ್ಮ ಭಾವನೆಯ ಆಳ ಮುಖ್ಯವಲ್ಲ... ಭಾವನೆಗಳ ನಿರ್ವಹಣೆ ಅತಿ ಮುಖ್ಯ!
೫. ನಮ್ಮನ್ನು ನಾವು ಆರೈಕೆ ಮಾಡಿಕೊಳ್ಳಲು ಶಕ್ತರಾಗಿದ್ದರೂ ಬೇರೊಬ್ಬರು ನಮ್ಮ ಮೇಲೆ ತೋರಿಸುವ ಅಕ್ಕರೆ ಹಾಗೂ ಮಾಡುವ ಆರೈಕೆಯನ್ನು ನಾವು ಹೆಚ್ಚು ಇಷ್ಟಪಡುತ್ತೇವೆ!
೬.ಕೆಲವರು ಯಾವುದೇ ವಿಚಾರದ ಬಗ್ಗೆಗಿನ ಮ೦ಥನದಲ್ಲಿ ವಿಷಯವನ್ನು ತಿಳಿದುಕೊಳ್ಳಲು ಪ್ರಶ್ನಿಸದೇ.. ಕೇವಲ ಮರುತ್ತರ ನೀಡುವುದಕ್ಕಾಗಿಯೇ ಪ್ರಶ್ನಿಸುತ್ತಾರೆ!!
೭.ನಮ್ಮ ಯಶಸ್ಸು ನಮ್ಮ ಸಾಮರ್ಥ್ಯವನ್ನು ಲೋಕಕ್ಕೆ ಪರಿಚಯಿಸಿದರೆ.. ನಮ್ಮ ಸೋಲು ನಮಗೆ ಲೋಕದ ಪರಿಚಯ ಮಾಡಿಸುತ್ತದೆ!!
೮. ಯಾವ ಪರ್ವತವೂ ನಮ್ಮ ಆತ್ಮವಿಶ್ವಾಸಕ್ಕಿ೦ತ ಎತ್ತರವಲ್ಲ.. ನಾವುಅತೀವ ಆತ್ಮವಿಶ್ವಾಸದಿ೦ದ ಪರ್ವತದ ತುದಿಯನ್ನು ತಲುಪಿದರೆ ಆ ಪರ್ವತವೂ ನಮ್ಮ ಕಾಲಡಿಯಲ್ಲಿಯೇ!!
೯. ಜೀವನವು ನಮ್ಮನ್ನು ಯಾವತ್ತೂ ಖಾಲಿಯಾಗಲು ಬಿಡುವುದಿಲ್ಲ.. ಒ೦ದು ಸಮಸ್ಯೆಯಿ೦ದ ಹೊರಬ೦ದ೦ತೆಯೇ ಮತ್ತೊ೦ದು ಸಮಸ್ಯೆ ಧುತ್ತನೇ ಎದುರಾಗುತ್ತದೆ!!
೧೦. ಪರಿಪರಿಯಾಗಿ ಹೆಣಗಾಡಿಯೂ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕ೦ಡುಕೊಳ್ಳಲಾಗದಿದ್ದಾಗ ಅವುಗಳಿಗಾಗಿ ಚಿ೦ತಿಸುವುದು ವ್ಯರ್ಥ!
೧೧.ಎಷ್ಟು ಜನ ಮಿತ್ರರನ್ನು ಹೊ೦ದಿದ್ದೇವೆ ಎನ್ನುವುದಕ್ಕಿ೦ತಲೂ ಅವರೊ೦ದಿಗೆ ಎಷ್ಟು ಕಾಲ ಮಿತೃತ್ವವನ್ನು ಕಾಪಾಡಿಕೊ೦ಡಿದ್ದೇವೆ೦ಬುದು ಮುಖ್ಯ!
೧೨. ವೈರಿಯ ಶಕ್ತಿಯು ಕು೦ದುವವರೆಗೂ ನಮ್ಮ ಶಕ್ತಿ ಹಾಗೂ ಸಾಮರ್ಥ್ಯಗಳನ್ನು ಜತನವಾಗಿ ಕಾಪಿಟ್ಟುಕೊಳ್ಳಬೇಕು!!
೧೩. ತಿದ್ದಿಕೊಳ್ಳುವ ಅವಕಾಶವೇ ಇರದಷ್ಟು ತಪ್ಪುಗಳನ್ನು ಮಾಡುವುದೆ೦ದರೆ.. ನಾವು ಸರಿಯನ್ನು ಮಾಡುವುದಿಲ್ಲವೆ೦ದೇ ಅರ್ಥ!!
೧೪. ಒಬ್ಬರ ಜೀವನದಿ೦ದ ಬಹುಬೇಗ ದಾಟಿ ಹೋಗಬಹುದು.. ಆದರೆ ಅವರ ಸ೦ಗದೊ೦ದಿಗೆ ಕಳೆದ ದಿನಗಳ ನೆನಪುಗಳನ್ನು ದಾಟಿ ಹೋಗಲಾಗದು!!
೧೫. ನೆಮ್ಮದಿಯನ್ನು ಹುಡುಕಿಕೊ೦ಡು ಹೋಗದೆ.. ಜೀವನವನ್ನು ಇದ್ದ೦ತೆಯೇ ಒಪ್ಪಿಕೊ೦ಡರೆ ನೆಮ್ಮದಿಯೇ ನಮ್ಮನ್ನು ಹುಡುಕಿಕೊ೦ಡು ಬರುತ್ತದೆ!!

Thursday, September 15, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೯:


     ಮನಸ್ಸು ಸಂಕಲ್ಪ-ವಿಕಲ್ಪ ಸಾಧನ. ಬುದ್ಧಿ ತತ್ತ್ವಗ್ರಹಣ ಸಾಧನ. ಮನಸ್ಸಿನ ಆಲೋಚನ-ವಿಲೋಚನಗಳನ್ನು ತಡೆಗಟ್ಟಿ ಬುದ್ಧಿಯನ್ನು ಬಾಹ್ಯ ವಿಷಯಗ್ರಹಣದಿಂದ ಬೇರ್ಪಡಿಸಿ, ಎರಡನ್ನೂ ಅಭ್ಯಂತರ ವೃತ್ತಿಯ ಪರಿಧಿಗಳೆತಂದು, ಭಗವದ್ಗುಣಗಳನ್ನು ಚಿಂತಿಸುತ್ತಾ, ಗ್ರಹಿಸುತ್ತಾ, ಎರಡನ್ನೂ ಆ ಕಾರ್ಯಗಳಲ್ಲಿಯೇ ವಿನಿಯೋಗಿಸುವುದು ಭಗವದುಪಾಸನೆ. ಇದು ಸರ್ವಥಾ ಅಭ್ಯಂತರ ಕರ್ಮ. ಈ ಉಪಾಸನೆಗೆ ಪೂರ್ವಹಂತಗಳಾಗಿ ಭಗವಂತನಲ್ಲಿ ಪ್ರೇಮ ಬೆಳೆಯಿಸುವ ಸ್ತುತಿ ಮತ್ತು ಹೃದಯದಲ್ಲಿ ನಮ್ರತೆಯನ್ನು ಬಿತ್ತುವ ಪ್ರಾರ್ಥನೆ. ಇವೆರಡನ್ನೂ ಉಪಯೋಗಿಸಿಕೊಳ್ಳಬೇಕು. ಈ ಬಗೆಯ ಸತ್ಯೋಪಾಸನೆಯಿಂದ ಹೃದಯದಲ್ಲಿ ಪವಿತ್ರವಾದ ಹಾಗೂ ವಿಶಾಲವಾದ ಭಾವನೆಗಳುದಿಸುವುದಲ್ಲದೆ, ಅನಿರ್ವಚನೀಯವಾದ ಶಾಂತಿ, ಆನಂದ ಹಾಗೂ ಸ್ಫೂರ್ತಿಗಳ ಉದಯವೂ ಆಗಿ , ಜೀವನ ಸರಸವೂ, ಬಲಿಷ್ಠವೂ ಆಗುತ್ತದೆ. ಭಗವದ್ಗುಣಧ್ಯಾನದಲ್ಲಿ ನಿಂತ ಚಿತ್ತ, ಕ್ರಮಕ್ರಮವಾಗಿ ಆ ಗುಣಗಳನ್ನು ಉಪಾಸಕನಾದ ಮಾನವನ ಜೀವನಕ್ಕೆ ತುಂಬುತ್ತಾ ಹೋಗುತ್ತದೆ. ಭಗವಂತನೊಂದಿಗೆ ಸಮಾನ ಗುಣಗಳನ್ನು ಹೊಂದಿದ ಭಕ್ತ, ಬೇಗನೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಸಮರ್ಥನಾಗುತ್ತಾನೆ. ಅವನು ಶಕ್ತಿ-ಸ್ಫೂರ್ತಿಗಳ, ಕೀರ್ತಿ-ಪ್ರೀತಿಗಳ ಬುಗ್ಗೆಯೇ ಆಗಿಹೋಗುತ್ತಾನೆ. ಋಗ್ವೇದ ಹೇಳುತ್ತದೆ:-


ತ್ವಂ ಹ್ಯಗ್ನೇ ಅಗ್ನಿನಾ ವಿಪ್ರೋ ವಿಪ್ರೇಣ ಸನ್ ತ್ಸತಾ|
ಸಖಾ ಸಖ್ಯಾ ಸಮಿಧುಸೇ || (ಋಕ್. ೮.೪೩.೧೪.)


     [ಅಗ್ನೇ] ಜ್ಞಾನಜ್ಯೋತಿರ್ಮಯನೇ! [ವಿಪ್ರಃ] ವಿಶೇಷ ಪ್ರಜ್ಞನೂ [ಸನ್] ಸತ್ಯಸ್ವರೂಪನೂ [ಸಖಾ] ಸರ್ವಮಿತ್ರನೂ ಆದ, [ತ್ವಮ್] ನೀನು, [ಹಿ] ನಿಜವಾಗಿ [ಅಗ್ನಿನಾ] ಜ್ಞಾನಜ್ಯೋತಿರ್ಮಯನೂ [ವಿಪ್ರೇಣ] ವಿಶೇಷ ಪ್ರಜ್ಞನೂ [ಸತಾ] ಸತ್ಯಮಯನೂ [ಸಖ್ಯಾ] ಮೈತ್ರೀಭಾವ ಪ್ರಧಾನನೂ ಆದ ಮಾನವನಿಂದ [ಸಂ ಇಧ್ಯಸೇ] ಚೆನ್ನಾಗಿ ಪ್ರಕಾಶಿಸಲ್ಪಡುತ್ತೀಯೆ.


     ಭಗವದ್ಗುಣಸದೃಶ ಗುಣಧಾರಣವೇ ವೈದಿಕೋಪಾಸನೆಯ ಆದರ್ಶ. ಈ ಉಪಾಸನೆ ಧರ್ಮದ ಹೃದಯವಿದ್ದಂತೆ. ಹೀಗೆ ಪೂರ್ಣಧರ್ಮ ಜೀವನದಲ್ಲಿ ಪ್ರಸ್ಫುಟಿತವಾಗಬೇಕಾದರೆ, ಜ್ಞಾನ-ಕರ್ಮ-ಉಪಾಸನಾ ಮೂರನ್ನೂ ರೂಢಿಸಿಕೊಳ್ಳಬೇಕು. 

Tuesday, September 13, 2011

ಮಾಯೆ-೩

ಬ್ರಹ್ಮನನು ಅರಿತಿಲ್ಲ.. ನಾ ಬ್ರಾಹ್ಮಣನಲ್ಲಾ..
ಜನಿವಾರವಿಹುದಲ್ಲಾ.. ಅದ ನಾ ಕಿತ್ತೊಗೆದಿಲ್ಲ..
ಸ೦ಸ್ಕಾರವಿದಯ್ಯಾ.. ನಾಮದಲಿ ನಾ ದ್ವಿಜ..
ಸ೦ಸ್ಕಾರದೊಳೂ ಕಾಣುವರು ಬ್ರ್ತಹ್ಮನನು
ಎನ್ನ೦ತರ೦ಗದೇವಾ.. ನಾನಾವ ಬ್ರಾಹ್ಮಣನಯ್ಯ..
ನಿನ್ನರಿಯಲಾಗದವನು...

ಕಣ್ಣಿದ್ದವರೆಲ್ಲಾ ಕಾಣಲಾರರಯ್ಯಾ...
ಬಾಯಿದ್ದವರೆಲ್ಲಾ ಮಾತಾಡರಯ್ಯಾ..
ಆ೦ತರ್ಯದಾ ಚಕ್ಷುಗಳಿ೦ದ ಕಾಣಲು
ನೀನಾರೆ೦ಬುದನು ಅರಿವೆವಯ್ಯಾ..
ಕಣ್ಣಿದ್ದರೂ ಎನಗೆ ಎನ್ನ ರೂಪವು ಕಾಣಿಸದಯ್ಯಾ..
ಎನ್ನ೦ತರ೦ಗದೇವಾ..ನಿನ್ನನ್ನರಿವ ಚಕ್ಷುಗಳ ನೀಡಯ್ಯಾ..

Friday, September 9, 2011

ಯೋಚಿಸಲೊ೦ದಿಷ್ಟು...೪೦

೧. ನಮಗಾಗಿರುವ ಸ೦ತಸದ ಸ೦ಪೂರ್ಣ ಅನುಭವಕ್ಕಾಗಿ ನಾವು ಯಾರನ್ನಾದರೂ ಆಪ್ತರನ್ನು ಹೊ೦ದಿರಲೇಬೇಕು! ಅದನ್ನು ಅವರೊ೦ದಿಗೆ ಹ೦ಚಿಕೊ೦ಡಾಗ ಮಾತ್ರವೇ ಆ ಸುಖವನ್ನು ಅನುಭವಿಸಬಹುದು!!
೨. ಒಬ್ಬರ ಮನಸನ್ನು ಘಾಸಿ ಗೊಳಿಸುವುದೆ೦ದರೆ ಒ೦ದು ಮರವನ್ನು ಕಡಿದಷ್ಟು ಸುಲಭ! ಆದರೆ ಒಬ್ಬರನ್ನು ಸ೦ತಸಗೊಳಿಸುವುದೆ೦ದರೆ ಒ೦ದು ಗಿಡವನ್ನು ನೆಟ್ಟು, ಅದನ್ನು ಮರವನ್ನಾಗಿ ಬೆಳೆಸಿದ೦ತೆ... ಆ ಪ್ರಕ್ರಿಯೆ ಸಾಕಷ್ಟು ಸಮಯವನ್ನು ಬೇಡುತ್ತದೆ!!
೩. ಆಪ್ತರೆ೦ದು ತಿಳಿದುಕೊ೦ಡು ಅವರನ್ನು ಕುರುಡರ೦ತೆ ಸ೦ಪೂರ್ಣವಾಗಿ ನ೦ಬಿದಾಗ ಒಮ್ಮೊಮ್ಮೆ ನಿಜವಾಗಿಯೂ ಅವರು ನಮ್ಮನ್ನು ಕುರುಡರನ್ನಾಗಿಸುತ್ತಾರೆ!!
೪. ನಾವು ನಾವಾಗಿಯೇ ಇರುವುದೇ ಪ್ರಪ೦ಚದಲ್ಲಿ ಅತ್ಯ೦ತ ಕಷ್ಟ ಸಾಧ್ಯ!!
೫. ಗು೦ಪಿನಲ್ಲಿ ನಮ್ಮೊ೦ದಿಗೆ ನಮ್ಮಷ್ಟೇ ವೇಗವಾಗಿ.. ನಮ್ಮ ಧ್ವನಿಯನ್ನಾಲಿಸುತ್ತಾ ನಡೆಯುವರೊ೦ದಿಗೆ ನಡೆಯೋಣ..
೬.ಎಲ್ಲವನ್ನೂ ರಿಯಾಯಿತಿ ದರದಲ್ಲಿ ಕೊಳ್ಳಬಹುದಾದರೂ ಮಾನಸಿಕ ತೃಪ್ತಿಯನ್ನು ಕೊಳ್ಳಲಾಗದು!!
೭. ಕೆಲವು ವ್ಯಕ್ತಿತ್ವಗಳು ಹಾಗೆಯೇ... ಎಷ್ಟೇ ಸ್ವತ: ಸಮಾಜದಿ೦ದ ,ಪರರಿ೦ದ ಯಾತನೆಗಳನ್ನು ಅನುಭವಿಸಿದರೂ ಅವರಿಗಾಗಿ ಒಳಿತನ್ನೇ ಬಯಸುತ್ತಾರೆ!
೮. ಜೀವನವೆ೦ದರೆ ಬಹುಶ: ಹಾಗೆಯೇ.. ನಾವು ನಿರೀಕ್ಷಿಸಿದ ಬಹು ಪಾಲು ಸ೦ಭವಿಸದೇ.. ಸ೦ಭವಿಸುವ ಅನಿರೀಕ್ಷಿತವಾದ ಘಟನೆಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲಬೇಕಾಗುತ್ತದೆ!!
೯. ಜೀವನದಲ್ಲಿ ನಾವು ಭೇಟಿಯಾಗಬಹುದಾದ ಜನರಲ್ಲಿ ಸಾಮಾನ್ಯವಾಗಿ ಯಾರೂ ನಮ್ಮನ್ನು ಅರ್ಥೈಸಿಕೊಳ್ಳದೇ, ನಾವು ಮಾತ್ರ ಅವರನ್ನು ಅರ್ಥೈಸಿಕೊಳ್ಳಬೇಕೆ೦ದು ಬಯಸುವವರೇ ಹೆಚ್ಚಿರುತ್ತಾರೆ!!
೧೦. ವೈರಿಗಳ ಸಲಹೆಯನ್ನೂ ತಿರಸ್ಕರಿಸಬಾರದು.. ಒಮ್ಮೊಮ್ಮೆ ಆ ಸಲಹೆಗಳೇ ನಮ್ಮನ್ನು ಸಮಸ್ಯೆಯಿ೦ದ ಮುಕ್ತಗೊಳಿಸಬಹುದಾದ ದಾರಿಯಾಗಿರಬಹುದು!!
೧೧. ಜೀವನ ಅನಿರೀಕ್ಷಿತ ಘಟನೆಗಳ ಸರಮಾಲೆಯೆ೦ದು ತಿಳಿದು, ಸ೦ಭವಿಸುವ ಘಟನೆಗಳೊ೦ದಿಗೆ ಸಾಗುವುದೇ ಬುಧ್ಧಿವ೦ತಿಕೆ!
೧೨.ಜೀವನದಲ್ಲಿ ನಾವು ಕಳೆದ ಸು೦ದರ ರಸ ನಿಮಿಷಗಳ ಮತ್ತೊಮ್ಮೆ ಬರುವುದಿಲ್ಲವಾದರೂ ಸ೦ಬ೦ಧಗಳು ಹಾಗೂ ಕಳೆದುಹೋದ ನೆನಪುಗಳು ಹಾಗೇಯೇ ಉಳಿಯುತ್ತವೆ!!
೧೩. ನಮ್ಮನ್ನು ಮೊದಲು ನಾವು ನ೦ಬಬೇಕು!!
೧೪.ಒಮ್ಮೊಮ್ಮೆ ತೀರಾ ಭಾವುಕರಾದಾಗ... ಕೆಲವೊ೦ದು ಭಾವನೆಗಳು ನಮ್ಮನ್ನು ತೀರಾ ಕುಗ್ಗಿಸಿದಾಗ.. ಏಕಾ೦ತವು ಸಮಾಧಾನ ನೀಡ ಬಲ್ಲುದು.
೧೫, ಜೀವನದಲ್ಲಿ ಸಮಸ್ಯೆಗಳು ಇರುತ್ತವೆ.. ಸಮಸ್ಯೆಗಳನ್ನು ಗೆದ್ದರೆ ನಾವು ನಾಯಕರಾಗಬಹುದು.. ಸೋತರೆ ಮಾರ್ಗದರ್ಶಿಯಾಗಬಹುದು!!- ಸ್ವಾಮಿ ವಿವೇಕಾನ೦ದ

Thursday, September 8, 2011

ವಿಚಾರ ಮಥನ ನಡೆಯಲಿ

     ಅಧ್ಯಯನ, ಶ್ರವಣ, ಮನನ, ವಿಮರ್ಶೆ, ವಿವೇಚನೆ ಇವುಗಳು ಜ್ಞಾನದ ಮೂಲ. ಯಾವುದೇ ಪೂರ್ವಾಗ್ರಹವಿಲ್ಲದ ಚಿಂತನೆ ರೂಢಿಸಿಕೊಂಡರೆ ಸತ್ಯದ ಸಾಕ್ಷಾತ್ಕಾರಕ್ಕೆ ಸಹಕಾರಿ. ವೇದದ ಅರ್ಥ ಮತ್ತು ಉದ್ದೇಶವೂ ಇದೇ ಆಗಿದೆ. ಶ್ರೀ ಶಂಕರಾಚಾರ್ಯರ ವಿವೇಕ ಚೂಡಾಮಣಿ ಕುರಿತು ಶ್ರೀ ಸುಬ್ರಹ್ಮಣ್ಯರವರು ಉತ್ತಮ ಮಾಲಿಕೆ ಆರಂಭಿಸಿದ್ದು ಮಾಲಿಕೆಯ  ಭಾಗ -೯ರಲ್ಲಿ ಈ ರೀತಿ ಹೇಳಿರುವ ಸಂಗತಿ ಇದೆ:


    " ಗುರುವಾದವನು ಬ್ರಹ್ಮನಿಷ್ಠ ಅಥವಾ ಬ್ರಹ್ಮಸಂಪ್ರದಾಯದವನಾಗಿರಬೇಕು ಎಂದು ಹೇಳುತ್ತಾರೆ. ( ಸಮ್ಯಕ್ ಪ್ರಕೃಷ್ಟತಯಾ ದಾಯವರೂಪೇಣ ಸಮಾಗತಮ್ ಇತಿ ಸಂಪ್ರದಾಯಃ = ಚೆನ್ನಾಗಿ, ವಿಶೇಷವಾಗಿ ಬಳುವಳಿ ಅಥವಾ ನಮ್ಮಪಾಲಿಗೆ ಬಂದಿರುವುದೇ ಸಂಪ್ರದಾಯ ). ನಿಷ್ಠೆಯಿದ್ದಲ್ಲಿ ಬ್ರಹ್ಮಜ್ಞಾನದ ಹಾದಿ ಸುಗಮವಾಗುತ್ತದೆ. ಯಾವುದೋ ಒಂದು ವಿಚಾರಕ್ಕೆ ಕಟ್ಟುಬಿದ್ದು ಇಡೀ ವ್ಯವಸ್ಥೆಯನ್ನು ಕೀಳಾಗಿ ಅರ್ಥೈಸುವುದು ’ನಿಷ್ಠೆ’ ಎನ್ನುವುದಕ್ಕೆ ವಿರೋಧವಾಗುತ್ತದೆ. ನಮಗೆ ಆರನೆ ತರಗತಿಯಲ್ಲಿ ’ದಯಾನಂದ ಸರಸ್ವತಿಯವರ’ ಕುರಿತು ಪಾಠವೊಂದಿತ್ತು. ದೇವ ನಿಷ್ಠರಾದ ದಯಾನಂದ ಸರಸ್ವತಿಯವರು ಶಿವರಾತ್ರಿಯ ಜಾಗರಣೆಗೆಂದು ಹೋದ ದೇವಾಲಯದಲ್ಲಿ ಮಧ್ಯರಾತ್ರಿಯ ಒಂದು ಹೊತ್ತಿನಲ್ಲಿ ಶಿವಲಿಂಗದ ಮೇಲೆ ಇಲಿಗಳು ಓಡಾಡಿದುವಂತೆ. ಅದನ್ನು ಕಂಡ ಸರಸ್ವತಿಗಳು ಹೀಗೆ ಹೇಳುತ್ತಾರೆ " ತನ್ನ ಮೈಮೇಲೆ ಓಡಾಡುವ ಇಲಿಗಳನ್ನು ಓಡಿಸಲಾರದ ಈ ಶಿವ ಜಗತ್ತಿನ ಜೀವಕೋಟಿಯನ್ನು ಹೇಗೆ ತಾನೇ ಕಾಪಾಡಿಯಾನು ?" ಎಂದು. ( ದಯಾನಂದರ ಬಗೆಗೆ ಟೀಕೆ ಮಾಡುವ ಅಥವಾ ಖಂಡನೆ ಮಾಡುವ ಯೋಗ್ಯತೆ ನನಗಿಲ್ಲ. ನನ್ನ ವಿಚಾರವೇನಿದ್ದರೂ ಈ ಒಂದು ವಾಕ್ಯದ ಬಗೆಗೆ ಮಾತ್ರ). ಜಗತ್ತಿನ ಜೀವಕೋಟಿಯಲ್ಲಿ ಪಾಪದ ಇಲಿಯೂ ಸೇರಿದೆ ಎನ್ನುವುದು ಸರಸ್ವತಿಗಳಿಗೆ ಏಕೆ ಹೊಳೆಯಲಿಲ್ಲ ? . ದೇವನಿಷ್ಠರಾಗಿದ್ದಾಗ ಜಡವಾದ ಶಿಲೆಯಲ್ಲೇ ಶಿವನನ್ನು ಕಂಡಿದ್ದ ಸರಸ್ವತಿಗಳಿಗೆ ಜೀವವಿರುವ, ಚೈತನ್ಯಪೂರ್ಣವಾದ ಇಲಿಯಲ್ಲಿ ಶಿವನನ್ನು ಕಾಣಲು ಸಾಧ್ಯವಾಗಲಿಲ್ಲವೇ ?!. ಇದಕ್ಕೆ ಸಾರಸಗಟು ವಿಗ್ರಹಾರಾಧನೆಯನ್ನೇ ಅವರು ತಿರಸ್ಕರಿಸಬೇಕಿತ್ತೇ ?. ಈ ನಿಟ್ಟಿನಲ್ಲಿ ನೋಡಿದರೆ ಆರ್ಯಸಮಾಜದಲ್ಲಿ ಸರಸ್ವತಿಗಳ ಭಾವಚಿತ್ರವನ್ನಿಟ್ಟು ಪೂಜಿಸುವುದೂ, ವೇದಗಳನ್ನು ಹೇಳಿಕೊಂಡು ಹವನ (ಬೆಂಕಿಗೆ ತುಪ್ಪ ಸುರಿಯುವುದು ಎನ್ನೋಣವೇ ?) ಮಾಡುವುದೂ ತಪ್ಪೇ ಆಗುತ್ತದೆ !. ಬ್ರಹ್ಮವಿದ್ಯೆಯ  ಅರಿವಿಗೆ  ನಿಷ್ಠೆ ಎನ್ನುವುದು ಬಹಳ ಮುಖ್ಯವಾದ ಅಂಶವಾಗಿದೆ."
     ಈ ಭಾಗದ ಕುರಿತು ನಡೆದ ಚರ್ಚೆ ಹೀಗಿದೆ:

ಕವಿ ನಾಗರಾಜ್ :
ನಮ್ಮ ಪಾಲಿಗೆ ಬಂದಿರುವ ಎಲ್ಲಾ ಸಂಪ್ರದಾಯಗಳೂ ಚೆನ್ನಾಗಿದೆಯೆಂದಾಗಲೀ, ವಿಶೇಷವಾದ ಬಳುವಳಿಯಾಗಿದೆ ಎಂದು ಅನ್ನಿಸುವುದಿಲ್ಲ. ಎಷ್ಟೋ ಸಂಪ್ರದಾಯಗಳು ಹೊಸ ಹೊಸ ರೂಪ/ಕುರೂಪ ತಳೆಯುತ್ತಿವೆ. ವಿಚಾರಕ್ಕೆ ಮಹತ್ವ ಕೊಡದೆ ಕೇವಲ ಆಚಾರಕ್ಕೆ ಮಹತ್ವ ಕೊಡುವ ಪರಿ ಇಂದು ನಾವು ಕಾಣುತ್ತಿದ್ದೇವೆ. 
ಯಾರದೇ ಆಗಲಿ, ಒಂದು ವಾಕ್ಯದ ಮೇಲೆ ಅವರ ಯೋಗ್ಯತೆ ನಿರ್ಧರಿಸಲಾಗುವುದಿಲ್ಲ. ಅದನ್ನು ಹೇಳಿರಬಹುದಾದ ಸಮಯ, ಸಂದರ್ಭಗಳನ್ನೂ ಗಣಿಸಬೇಕಾಗುತ್ತದೆ. ಮಹರ್ಷಿ ದಯಾನಂದ ಸರಸ್ವತಿಯವರು ಇಲಿಯನ್ನು ಜೀವಕೋಟಿಯಿಂದ ಹೊರತಾದದ್ದು ಎಂದು ಭಾವಿಸಿದ್ದಾರೆಂದು ಅರ್ಥೈಸುವುದು ಸರಿಯಾಗಲಾರದು.


ಸುಬ್ರಹ್ಮಣ್ಯ:
ಮಾನ್ಯ ನಾಗರಾಜರೇ,
ದಯಾನಂದ ಸರಸ್ವತಿಯವರ ಕುರಿತಾಗಿ ನೀವು ಹೇಳಿರುವುದು ಸರಿಯಾಗಿಯೇ ಇದೆ. ಅವರೇನೂ ಹಾಗೆ ಭಾವಿಸಿರಲಾರರು ಎಂದು ಅಂದುಕೊಂಡರೂ ಮತ್ತು ಅವರಾಡಿದ್ದ ಮಾತುಗಳು ಸಾಂಧರ್ಭಿಕವೆಂದೇ ತಿಳಿದರೂ ಮುಂದೆ ವಿಗ್ರಹಾರಾಧನೆಯನ್ನೇ ಬಹಿಷ್ಕರಿಸಿ ಆರ್ಯಸಮಾಜವು ನಡೆದ ದಾರಿ ತಿಳಿದೇ ಇದೆಯಲ್ಲಾ(ಇಂದಿಗೂ) !. ದಯಾನಂದ ಸರಸ್ವತಿಯವರನ್ನೂ ಶಂಕರರಿಗೇ ಹೋಲಿಸುವುದನ್ನೂ ತಿಳಿದಿದ್ದೇನೆ. ಮಹಾಜ್ಞಾನಿಗಳು ಅವರು, ಅವರ ವಿಚಾರಗಳನ್ನು ನಾನು ಖಂಡಿಸುತ್ತಿಲ್ಲ ( ಆ ಯೋಗ್ಯತೆಯೂ ನನಗಿಲ್ಲ ) ಬದಲಾಗಿ ಇಲಿಗಳು ಓಡಾಡಿದ್ದೇ ಒಂದು ನೆಪವಾಯಿತೇ ಎನ್ನುವುದು ನನ್ನ ಜಿಜ್ಞಾಸೆ ಅಷ್ಟೆ.
ನಿಮ್ಮ ಆಸಕ್ತಿಗೆ, ವೈಚಾರಿಕತೆಗೆ ಧನ್ಯವಾದಗಳು.
ಕವಿ ನಾಗರಾಜ್ :
ವಿಗ್ರಹಾರಾಧನೆ ಸರಿಯಲ್ಲವೆಂದು ಪ್ರತಿಪಾದಿಸುವವರ ಪ್ರಧಾನ ಅಂಶ ದೇವರು ನಿರಾಕಾರನೆಂಬುದೇ ಆಗಿದೆ. ಇದಕ್ಕೆ ಅವರು ಕೊಡುವ ಕಾರಣಗಳೂ ತಳ್ಳಿಹಾಕುವಂತಹುದಲ್ಲ. ಈ ಕುರಿತು ಪ್ರತ್ಯೇಕ ಜಿಜ್ಞಾಸೆ/ಚರ್ಚೆ ಮಾಡಬಹುದು. ಹಿಂದೆಯೂ ಆಗಿದೆ. ಮುಂದೆಯೂ ಮುಂದುವರೆಸೋಣ. ನಿಮ್ಮ ಲೇಖನಮಾಲೆಯಲ್ಲಿ ಈ ಅಂಶ ಒಳಗೊಳ್ಳುವುದು ವಿಹಿತವಲ್ಲ. ಈ ಭಾಗವನ್ನು ಈ ಲೇಖನದಿಂದ ಕೈಬಿಡುವುದು ಸೂಕ್ತವೆನಿಸೀತು. ಏಕೆಂದರೆ ಇಂತಹ ಚರ್ಚೆ ಈ ಲೇಖನದ ಅಡಿಯಲ್ಲಿ ಮುಂದುವರೆಯುವುದು ಸರಿಯಾಗಲಾರದು.
ಸುಬ್ರಹ್ಮಣ್ಯ:
ಮಾನ್ಯ ನಾಗರಾಜರೆ,
ದೇವರನ್ನು ಸೀಮಿತ ಮಾಡಿಕೊಂಡು ನೋಡುವುದರಿಂದ ಆಗುವ ಎಡವಟ್ಟುಗಳು ಇವು. ನನ್ನ ಲೇಖನದಲ್ಲಿ ’ಬ್ರಹ್ಮವಿದುತ್ತಮ್’ ಎನ್ನುವುದಕ್ಕೆ ಪೂರಕವಾಗಿ ಉದಾಹರಣೆಯನ್ನು ಬರೆಯುವಾಗ ನನಗೆ ನೆನಪಿದ್ದ ಶಾಲೆಯ ಪಠ್ಯದಲ್ಲಿದ್ದ ಈ ವಾಕ್ಯವನ್ನು ಹಾಕಿದೆ ಅಷ್ಟೆ. ನೀವು ಹೇಳಿದಂತೆ ಇದಕ್ಕೆ ಪ್ರತ್ಯೇಕ ಚರ್ಚೆಯನ್ನೇ ನೆಡೆಸುವುದು ಒಳಿತು. 
ಇನ್ನು ಸಂಪ್ರದಾಯದ ವಿಷಯವಾಗಿ ಹೇಳುವುದಾದರೆ , ವಿವೇಕಚೂಡಾಮಣಿಯಲ್ಲಿ ಪ್ರಸ್ತಾವಿರುವುದು ಅಧಿಕಾರಿಯು ಬ್ರಹ್ಮಸಂಪ್ರದಾವಿತ್ ಆಗಿರಬೇಕು ಎಂಬ ಹಿನ್ನಲೆಯಲ್ಲಿ ಸಂಪ್ರದಾಯ ಎನ್ನುವುದನ್ನು ಬಳಸಲಾಗಿದೆ. ಇದು ಜನರಲ್ ಸಂಪ್ರದಾಯಗಳಲ್ಲ. 
ವಿವೇಕ ಚೂಡಾಮಣಿಯನ್ನು ಆತ್ಮಜ್ಞಾನದ ನೆಲೆಗಟ್ಟಿನಲ್ಲಷ್ಟೇ ನೋಡಬೇಕಾಗುತ್ತದೆ. ಇಲ್ಲದಿದ್ದರೆ ಗೊಂದಲಮಯವಾಗುತ್ತದೆ. 
ನಿಮ್ಮ ಪ್ರೋತ್ಸಾಹಕಾರಕ ನುಡಿಗಳಿಗೆ ನಾನು ಆಭಾರಿ.


ನನ್ನ ಅನಿಸಿಕೆ: [ದೇವರನ್ನು ಸೀಮಿತ ಮಾಡಿಕೊಂಡು ನೋಡುವುದರಿಂದ ಆಗುವ ಎಡವಟ್ಟುಗಳು ಇವು.] ನನ್ನ ಭಾವವೂ ಇದೇ. ಆದರೆ ಸೀಮಿತ ಅನ್ನುವುದು ಯಾವುದು ಎಂಬುದೂ ಚರ್ಚಾರ್ಹ. ಜಿಜ್ಞಾಸುಗಳು ಅರ್ಥ ಮಾಡಿಕೊಳ್ಳಬಲ್ಲರು. ಅದರೆ ಅರ್ಥ ಮಾಡಿಕೊಳ್ಳದೆ ಮಾಡುವ ಆಚರಣೆಗಳು ಕುರುಡು ಸಂಪ್ರದಾಯಗಳಾಗಿ ಮುಂದುವರೆಯುವ ಅಪಾಯವನ್ನೂ ಅರಿಯಬೇಕು.
ದಯಾನಂದ ಸರಸ್ವತಿಯವರು ಹೇಳಿದ ಮಾತು ಅವರ ಬಾಲ್ಯಕಾಲದಲ್ಲಿ ಎಂದು ತಿಳಿದಿದ್ದೇನೆ. ವಿಚಾರ ಮಾಡುವ ಪ್ರವೃತ್ತಿ ಅವರಿಗೆ ಚಿಕ್ಕಂದಿನಿಂದಲೇ ಬಂದಿತ್ತು. ಅವರ ಈ ಮಾತಿನ ಉಲ್ಲೇಖದಿಂದ ಈ ಚರ್ಚೆಗೆ ಕಾರಣವಾಗಿದ್ದು ವಿಚಾರಮಥನದಿಂದ ಸತ್ಯ ತಿಳಿಯುವಲ್ಲಿ ಸಹಕಾರಿಯಾಗಲಿ.


ಸನ್ಮಾನ್ಯ ವೇದಸುಧೆಯ ಓದುಗರು ಈ ಕುರಿತು ಸುಯೋಗ್ಯ ಚರ್ಚೆ, ಜಿಜ್ಞಾಸೆ ಮಾಡಲಿ, ಅಭಿಪ್ರಾಯ ವ್ಯಕ್ತಪಡಿಸಲಿ ಎಂದು ಕೋರುವೆ. ಯಾವುದೇ ದೂಷಣೆ, ನಿಂದೆಗಳಿಗೆ ಅವಕಾಶವಿಲ್ಲ. ಖಂಡನೆಗಿಂತ ಮಂಡನೆಗೆ ಆದ್ಯತೆ ಇರಲಿ ಎಂದು ಬಿನ್ನಹ.
-ಕ.ವೆಂ.ನಾಗರಾಜ್.
---------------------------
ನನ್ನ ಅನಿಸಿಕೆ :


ನೇರವಾಗಿ ಹೇಳಬೇಕೆಂದರೆ ಇಲ್ಲಿ ಚರ್ಚೆ ನಡೆಯುವುದೆಂದರೆ ದಯಾನಂದ ಸರಸ್ವತಿಯವರ  ಆರ್ಯ ಸಮಾಜಬಗ್ಗೆಯೇ ನಡೆಯಬೇಕಾಗುತ್ತದೆ. ಮೂರ್ತಿ ಪೂಜೆ ಬೇಕೇ? ಬೇಡವೇ? ಇದೇ ವಿಚಾರ. ಈ ಬಗ್ಗೆ ನನ್ನ ಸ್ಪಷ್ಟ ಅಭಿಪ್ರಾಯ ತಿಳಿಸಿ ಬಿಡುವೆ. ನಾನೀಗಾಗಲೇ ವೇದಸುಧೆಯಲ್ಲಿಯೇ ಪ್ರಸ್ತಾಪಿಸಿರುವಂತೆ ನನ್ನ ಹಿಂದಿನ ಒಂದು ಘಟನೆ ನೆನಪು ಮಾಡುವುದು ಅನಿವಾರ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿ ರಸ್ತೆಯಲ್ಲಿ ಬಿದ್ದಿರುತ್ತಿದ್ದ ಬೀಡಿ -ಬೆಂಕಿಪೊಟ್ಟಣದ ಮೇಲಿರುತ್ತಿದ್ದ ದೇವರ ಚಿತ್ರಗಳನ್ನು  ಅತ್ಯಂತ ಭಕ್ತಿಯಿಂದ ಕಣ್ಣಿಗೆ ಒತ್ತಿಕೊಂಡು ಜೋಪಾನವಾಗಿ ತೆಗೆದಿಡುತ್ತಿದ್ದೆ. ಹೀಗೆ ಮಾಡುತ್ತಾ ಮಾಡುತ್ತಾ ನಮ್ಮ ಮನೆಯಲ್ಲಿ ಅದೊಂದು ದೊಡ್ದ ಸಂಗ್ರಹವೇ ಆಗಿ ತಲೆನೋವಾಯ್ತು. 
ಮುಂದಿನ ಹೆಜ್ಜೆ.ವಿಗ್ರಹಗಳ ಮೇಲಿನ ಶ್ರದ್ಧೆ. ಕಂಡಕಂಡ ವಿಗ್ರಹಗಳಿಗೆಲ್ಲಾ ಕೈ ಮುಗಿದು ಅಡ್ದ ಬಿದ್ದಿದ್ದಾಯ್ತು. ನಂತರ ನಿತ್ಯ ಪೂಜಾ ಕ್ರಮ. ಇಲ್ಲಿ ನೋಡಿ ಸ್ವಲ್ಪ ದ್ವಂದ್ವ ಶುರುವಾಯ್ತು. ಹತ್ತಾರು ವರ್ಷ ನಿತ್ಯ ಪೂಜೆ ಮಾಡಿತ್ತಿದ್ದ ನನಗೆ ಒಂದು ದಿನ ಪುಟ್ಟ ಪುಟ್ಟ ವಿಗ್ರಹಗಳಿಗೆ ಅಭಿಶೇಕ ಮಾಡುವಾಗ ಮನದಲ್ಲಿ ಮೂಡಿ ಬಂದ ವಿಚಾರ ತಿಳಿಸಿ ಬಿಡುವೆ" ಅರೇ, ಈ ಪುಟ್ಟಬೊಂಬೆಗಳಿಗೆ ಅಭಿಶೇಕ ಮಾಡುತ್ತಿದ್ದೀನಲ್ಲಾ! ತಕ್ಷಣ ನಾನು ಚಿಕ್ಕ ವಯಸ್ಸಿನಲ್ಲಿ ಹಂಚಿಪಕರೆ,ಮಣ್ಣಿನಲ್ಲಿ ಮಾಡಿದ ಪಾತ್ರೆಗಳನ್ನು ಇಟ್ಟುಕೊಂಡು ಆಡುತ್ತಿದ್ದ ದಿನಗಳು ನೆನಪಾಯ್ತು. ಕೂಡಲೇ ಪೂಜೆಯನ್ನು ಅಷ್ಟಕ್ಕೇ ಮುಗಿಸಿದೆ. ಪೂಜಾಗೃಹದಲ್ಲೇ ಕಣ್ಮುಚ್ಚಿ ಕುಳಿತೆ. ಮುಂದೆ ಹಲವಾರು ವರ್ಷಗಳು ಹೀಗೇ ನಡೆದು ಬಂತು. ಕೊನೆಗೆ ಅಗ್ನಿಹೋತ್ರದ ಪರಿಚಯವಾಯ್ತು. ಈಗ ಹಲವಾರು ದಿನಗಳಿಂದ ರೆಗ್ಯುಲರ್ ಆಗಿ ಅಗ್ನಿಹೋತ್ರ ಮಾಡುತ್ತಿರುವೆ. ಅದರಿಂದ ನೆಮ್ಮದಿ ಇದೆ.

ಯಾಕಾಗಿ ಇಷ್ಟೆಲ್ಲಾ ಪುರಾಣ ಹೇಳಿದೆ ನೆಂದರೆ [ಬಹುಷ: ಪುರಾಣ ಹೀಗೆಯೇ ಹುಟ್ಟಿರಬೇಕು] ವಯಸ್ಸಾದಂತೆಲ್ಲಾ ಹಂತಹಂತವಾಗಿ ಪ್ರೌಢಿಮೆ ಬರುವುದು ಸಹಜ. ಕೆಲವರು ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲೂ ಏಳು ವರ್ಷದ ಮಕ್ಕಳ ಮನೋಭಾವ ಹೊಂದಿರುತ್ತಾರೆ. ಕೆಲವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಎಪ್ಪತ್ತರ ಅನುಭವ ಪಡೆದವರಂತಿರುತ್ತಾರೆ. ಇಷ್ಟೆ!!
ಪೂರ್ತಿ ಪೂಜೆ ಮಾಡುವುದು ಬಿಡುವುದು ಅವರವರ ಮನೋಭಾವ. ಆದರೆ ಸಾಮಾನ್ಯವಾಗಿ ಇಲ್ಲಿ[ವೇದಸುಧೆಗೆ] ಬಂದವರೆಲ್ಲಾ ಭಗವಂತನಲ್ಲಿ ಅತ್ಯಂತ ಶ್ರದ್ಧೆ ಹೊಂದಿದವರೇ ಆಗಿರುತ್ತಾರೆ. ಈ ಕುರಿತು ಚರ್ಚೆ ಮಾಡಲು ಸಿದ್ಧರಿರುವುದಿಲ್ಲ. ಆದರೆ ನಾಗರಾಜ್ ರಂತವರಾಗಲೀ ಸುಬ್ರಹ್ಮಣ್ಯ ರಂತವರಾಗಲೀ ಬರೆದದ್ದನ್ನು ಶ್ರದ್ಧೆಯಿಂದ ಓದುತ್ತಾರೆ. ಆದರೆ  ಪ್ರತಿಶತ ಒಬ್ಬರಿಗೂ ಚರ್ಚೆ ಮಾಡುವ ಸ್ವಭಾವ ಇರುವುದಿಲ್ಲ. ವೇದಸುಧೆಯ ಒಂದುವರೆ ವರ್ಷದ ಅನುಭವವಿದು. ನಾವು ಹೇಳಬೇಕೆಂದಿದ್ದನ್ನು       ಹೇಳಿ ಬಿಡೋಣ.ಅಷ್ಟೆ.ನಮ್ಮ ಹಲವು ಆಚರಣೆಗಳನ್ನು ಎಷ್ಟು ಕುರುಡಾಗಿ ಆಚರಿಸುತ್ತೇವೆಂದರೆ ಮೊನ್ನೆ ನಡೆದ ಗೌರಿಹಬ್ಬದ ಮೊರದಜೊತೆಯಲ್ಲಿ ಮಂಗಲ ದ್ರವ್ಯಗಳನ್ನು ಕೊಡುವಾಗ ಉಪಯೋಗಿಸಲು ಸಾಧ್ಯವಾಗದ ಬಳೆ ಬಿಚ್ಚೋಲೆಗಳು, ಕನ್ನಡಿ ಬಾಚಣಿಗೆಗಳು, ಅರಿಶಿನ ಕುಂಕುಮದ ಪೊಟ್ಟಣಗಳು[ ಕೇವಲ  ಬಣ್ಣಗಳು  ]ಇವನ್ನೆಲ್ಲಾ ಎಲ್ಲರೂ ನೋಡಿಲ್ಲವೇ? ಮಂಗಳ ದ್ರವ್ಯಗಳ ಪಾವಿತ್ರ್ಯವಾಗಲೀ ಸದುಪಯೋಗವಾಗಲೀ ಅಲ್ಲಿದೆಯೇ? ಕೆಲವರು " ನಮ್ಮ ಮನೆಯಲ್ಲಿ ಇದನ್ನೆಲ್ಲಾ ಸದುಪಯೋಗವಾಗುವಂತೆಯೇ ಹಬ್ಬದ ಆಚರಣೆ ಮಾಡುತ್ತೇವೆಂದು ಬೊಗಳೆ ಬಿಡಬಹುದು. ಆದರೆ ನಾನು ಪ್ರತೀ ವರ್ಷ ಹತ್ತಾರು ಮನೆಗಳಲ್ಲಿ ನೂರಾರು ಮಹಿಳೆಯರು ಮಂಗಳ ದ್ರವ್ಯಗಳ ಪಾವಿತ್ರ್ಯ ಅರಿಯದೆ ಮಕ್ಕಳಾಟದಂತೆ ಕುರುಡಾಗಿ ಆಚರಿಸುವುದನ್ನು ಕಂಡು ತಿಳುವಳಿಕೆ ಹೇಳಿ ಅದಕ್ಕೆ ಬೆಲೆ ಸಿಗದಿದ್ದಾಗ   ನೊಂದು  ಕೊಂಡಿದ್ದೇನೆ. ಹೀಗಾದರೂ ನಾಲ್ಕು ಜನರಿಗೆ ತಿಳಿಯಲೆಂದು ಇಲ್ಲಿ ಸೂಕ್ತವೋ ಅಸೂಕ್ತವೋ ವಿಚಾರವನ್ನು ಹರಿಬಿಟ್ಟಿದ್ದೇನೆ.

ಅಂತಿಮವಾಗಿ ನನ್ನ ಅನಿಸಿಕೆ: ಸಮಾಜದ ಬಗ್ಗೆ /ಭಗವಂತನ ಬಗ್ಗೆ ಶ್ರದ್ಧೆ ಇರುವಂತವರು ಸಾಧ್ಯವಾದಷ್ಟೂ ಧಾರ್ಮಿಕ ಆಚರಣೆಯ ಹೆಸರಲ್ಲಿ ನಡೆಯುವ ಮಕ್ಕಳಾಟವನ್ನು ಆಚರಿಸುವಂತವರಿಗೆ ಮನದಟ್ಟು ಮಾಡಲು ಪ್ರಯತ್ನಿಸಬೇಕು. ಆದರೆ ನಾನು ಭಾರೀ ದೊಡ್ದವನೆಂಬ ಅಹಂ ಇರಬಾರದು ಅಷ್ಟೆ. ಇಷ್ಟಾದರೂ ಹಲವಾರು ಆಚರಣೆಗಳ ಒಳಮರ್ಮ ನಮಗೆ ಅರಿವಾಗದಿರಬಹುದು.ನಾವು ಕೆಲವೆಡೆ ಸೋಲಲೂ ಬಹುದು. 
-ಹರಿಹರಪುರ ಶ್ರೀಧರ್ 


Wednesday, September 7, 2011

ವಿವೇಕ ಚೂಡಾಮಣಿ - ಭಾಗ -೧೦


ಗ್ರಂಥದ ಮುಂದುವರಿದ ಭಾಗ:-

साधनान्यत्र चत्वारि कथितानि मनीषिभिः ।
येषु सत्स्वेव सन्निष्ठा यदभावे न सिध्यति ॥१८॥

ಸಾಧನಾನ್ಯತ್ರ ಚತ್ವಾರಿ ಕಥಿತಾನಿ ಮನೀಷಿಭಿಃ |
(= ಆತ್ಮವಿದ್ಯೆಯ ಸಾಧನಗಳು ನಾಲ್ಕು)
ಯೇಷು ಸತ್ಸ್ವೇವ ಸನ್ನಿಷ್ಠಾ ಯದಭಾವೇ ನ ಸಿಧ್ಯತಿ ||೧೮||
(= ಸಾಧನಗಳಿದ್ದರೆ (=ಏವ) ಸಾಧನೆಯು ಸಾಧ್ಯ, ಇಲ್ಲದಿದ್ದರೆ ಇಲ್ಲ)

ವಿಚಾರದಿಂದಲೇ ಜ್ಞಾನ ಎನ್ನುವುದನ್ನು ಈಗಾಗಲೇ ತಿಳಿದಿದ್ದೇವೆ. ಆತ್ಮವಿದ್ಯೆಯ ಸಿದ್ಧಿಗೆ ಇರುವ ಸಾಧನಗಳು ನಾಲ್ಕು . ಹೆಚ್ಚೆಂದರೂ ಇಷ್ಟೆ ಕಡಿಮೆಯೆಂದರೂ ಇಷ್ಟೆ ಎನ್ನುವುದು ಸೂಚಿತ. ನಾಲ್ಕು ಸಾಧನಗಳಿದ್ದರೆ ಆತ್ಮವಿದ್ಯೆಯು ಸಿದ್ಧಿಸುತ್ತದೆ ಮತ್ತು ಇವು ಇಲ್ಲದಿದ್ದರೆ ಸಿದ್ಧಿಯೂ ಇಲ್ಲ ಎಂಬರ್ಥದದಲ್ಲಿ ಹೇಳುತ್ತಾರೆ. ಇದೊಂದು ರೀತಿಯ ವ್ಯಾವರ್ತಕ ನಿಯಮ ಎನ್ನಬಹುದು. ಪಾಯಸಕ್ಕೆ ಮೆಣಸಿನಕಾಯಿ ಒಗ್ಗರಣೆ ಹಾಕುವುದು ಪಾಯಸದ ತಯಾರಿಕೆಯ ಸಾಧನಗಳಲ್ಲಿ ಇಲ್ಲ, ಹಾಗೂ ಒಗ್ಗರಣೆ ಹಾಕಿದರೆ ಪಾಯಸದ ಸಾಂಪ್ರದಾಯಿಕ ರುಚಿಯು ಕೆಡುತ್ತದೆ !. ಇಲ್ಲೂ ಕೂಡ ಇರುವುದು ನಾಲ್ಕೇ ಸಾಧನಗಳು. ಇದೇ ಕನಿಷ್ಠ ಮತ್ತು ಗರಿಷ್ಠ ಎನ್ನುವುದು ಸೂಚಿತ.
’ಮನೀಷಿಭಿಃ’ ಎಂಬಲ್ಲಿ ವೇದಜ್ಞಾನವುಳ್ಳವರು (ಶ್ರುತಿತಾತ್ಪರ್ಯ ಜ್ಞಾನವುಳ್ಳವರು) ಎಂದು ತಿಳಿಯಬೇಕು ಎನ್ನುವುದು ಸದ್ಗುರು ಚಂದ್ರಶೇಖರ ಭಾರತಿಗಳ ಒಕ್ಕಣೆ.  ಶ್ರುತಿಯ ಅವಲಂಬನೆಯಿಲ್ಲದೆ ಸಾಧಕರಿಗೆ ನಾಲ್ಕು ಸಾಧನಗಳ ವಿಚಾರವನ್ನು ತಿಳಿಯುವುದು ಮತ್ತು ಅನುಸರಿಸುವುದು ಕಷ್ಟ ಎಂಬರ್ಥದಲ್ಲಿ ಹೇಳಿರುತ್ತಾರೆ.
’ಏವ’ ಎಂದು ಹೇಳುವುದರ ಮೂಲಕ ಯಾರಿಗೆ ಸಾಧನ ಚತುಷ್ಟಯಗಳ ಸಾಧನೆ ಇರುವುದೋ ಆತನೇ ಆತ್ಮಾಭ್ಯಾಸಕ್ಕೆ ಅರ್ಹನು ಎಂದು ತಿಳಿಸುತ್ತಾರೆ.  ಸಾಧನಗಳಿಲ್ಲದಿದ್ದರೆ ಸಾಧನೆಯೂ ಇಲ್ಲ ಎಂದು ಅರ್ಥ.

ಮುಂದೆ ಸಾಧನ ಚತುಷ್ಟಯವನ್ನು ನಿರೂಪಿಸುತ್ತಾರೆ

आदौ नित्यानित्यवस्तुविवेकः परिगण्यते ।
इहामुत्रफलभोगविरागस्तदनन्तरम् ।
शमादिषट्कसम्पत्तिः मुमुक्षु्त्वमिति स्फुटम् ॥१९॥

ಆದೌ ನಿತ್ಯಾನಿತ್ಯವಸ್ತುವಿವೇಕಃ ಪರಿಗಣ್ಯತೇ |
(= ಶಾಶ್ವತ (ಉಳಿಯುವ) ಮತ್ತು ಕ್ಷಣಿಕ (ಅಳಿಯುವ) ವಸ್ತುಗಳ ವಿವೇಕವು)
ಇಹಾಮುತ್ರಫಲಭೋಗ ವಿರಾಗಸ್ತದನಂತರಮ್ |
(=ಇಹಪರಗಳಲ್ಲಿನ ಆಸೆಯ ಮೇಲಿನ ಅನಾಸಕ್ತಿ )
ಶಮಾದಿ ಷಟ್ಕ ಸಂಪತ್ತಿರ್ಮುಮುಕ್ಷುತ್ವಮಿತಿ ಸ್ಫುಟಮ್ ||೧೯||
(= ಶಮವೇ ಮೊದಲಾದ ಆರು ಗುಣಗಳು ಮತ್ತು ಮೋಕ್ಷಾಪೇಕ್ಷೆಯು)

ಆತ್ಮಾಭ್ಯಾಸಕ್ಕೆ ಮೊದಲಾಗುವ ಮುನ್ನ ಇರಬೇಕಾದ ಅರ್ಹತೆಗಳನ್ನು ತಿಳಿದುಕೊಂಡೆವು. ಅರ್ಹತೆಯನ್ನು ಸಂಪಾದಿಸಿಕೊಂಡ ನಂತರ ಸಾಧನೆಗೆ ಮೊದಲಾಗುವಾಗ ನಾಲ್ಕು ಸಾಧನಗಳು ಅರಿವು ಇರಬೇಕಾಗುತ್ತದೆ. ಅರಿತುಕೊಂಡ ನಂತರ ಅನುಸರಿಸಬೇಕಾಗುತ್ತದೆ. ಸತತ ಅನುಸರಣೆಯಿಂದ ಆತ್ಮಜ್ಞಾನವು ಸಿದ್ಧಿಸುತ್ತದೆ. ಹೊಲವನ್ನು ಉಳುಮೆ ಮಾಡಲು ನೇಗಿಲು, ಎತ್ತು ಮುಂತಾದ ಸಾಧನಗಳು ಬೇಕಾಗುತ್ತವೆ. ಉತ್ತುವ ಬಗೆಯನ್ನು ತಿಳಿದಿದ್ದೇನೆ ಹಾಗಾಗಿ ಬೆಳೆಯು ತಂತಾನೇ ಹುಲುಸಾಗಿ ಬಂದು ಬಿಡುತ್ತದೆ ಎನ್ನುವುದು ಮೂಳತನವಾಗುತ್ತದೆ.  ಬೇಸಾಯಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೊಂದಿಸಿಕೊಂಡು ಉತ್ತಿ ಬಿತ್ತಿದಾಗ ಬೆಳೆಯು ಬರುತ್ತದೆ.
ಹಾಗೆ ಇಲ್ಲಿಯೂ ಆತ್ಮಾಭ್ಯಾಸಕ್ಕಾಗಿ ನಾಲ್ಕು ಸಾಧನಗಳನ್ನು ಹೇಳಿರುತ್ತಾರೆ. ಅವು ಹೀಗಿವೆ
೧) ನಿತ್ಯಾನಿತ್ಯವಸ್ತುವಿವೇಕ
೨) ಇಹಾಮುತ್ರಫಲಭೋಗ ವೈರಾಗ್ಯ
೩) ಶಮದಮಾದಿ ಷಟ್ಕ ಸಂಪತ್ತಿ
೪) ಮುಮುಕ್ಷುತ್ವ

ಇಲ್ಲಿಂದ ಮುಂದೆ ಒಂದೊಂದಾಗಿ ಸಾಧನಗಳ ವಿಶಿಷ್ಟತೆಗಳನ್ನು ವಿವರಿಸುತ್ತಾ ಹೋಗುತ್ತಾರೆ. ಮೊದಲಿಗೆ ’ನಿತ್ಯಾನಿತ್ಯವಸ್ತುವಿವೇಕ’.

ब्रह्मसत्यं जगन्मिथ्येत्येवं रूपो विनिश्चयः ।
सोऽयं नित्यानित्यवस्तुविवेकः समुदाहृतः॥२०॥

ಬ್ರಹ್ಮಸತ್ಯಂ ಜಗನ್ಮಿಥ್ಯೇತ್ಯೇವಂ ರೂಪೋವಿನಿಶ್ಚಯಃ।
(=ಬ್ರಹ್ಮವು ಸತ್ಯ ಮತ್ತು ಜಗತ್ತು ಮಿಥ್ಯೆ )
ಸೋಽಯಂ ನಿತ್ಯಾನಿತ್ಯವಸ್ತುವಿವೇಕಃ ಸಮುದಾಹೃತಃ||೨೦||
(= ಇದೇ ನಿತ್ಯಾನಿತ್ಯವಸ್ತುವಿವೇಕವು)

ಆತ್ಮಜ್ಞಾನವೇ (ನಾನು ಮತ್ತು ನನ್ನ ದೈವ ಒಂದೇ ಎನ್ನುವ ಅನುಭವ - ಸುನಾಥ) ’ಬ್ರಹ್ಮ’ ಎಂದು ತಿಳಿದುಕೊಂಡಿದ್ದೇವೆ. ಇಂತಹ ಬ್ರಹ್ಮವೊಂದೇ ಸತ್ಯ, ಇನ್ನುಳಿದ ಜಗತ್ತು ಮಿಥ್ಯೆ (ಸತ್ಯವಲ್ಲದ್ದು) ಎಂಬ ಅದ್ವೈತ ತತ್ವವನ್ನು ಶ್ರೀ ಶಂಕರರು ಈ ಶ್ಲೋಕದಲ್ಲಿ ನಿರೂಪಿಸುತ್ತಾರೆ. ಇಂತಹ ಬ್ರಹ್ಮಭಾವವೇ ನಿತ್ಯಾನಿತ್ಯವಸ್ತುವಿವೇಕ ಎನ್ನುತ್ತಾರೆ.
ಬ್ರಹ್ಮವು ಸತ್ಯ ಮತ್ತು ನಿತ್ಯ (ಹುಟ್ಟು ಸಾವುಗಳ ಗೊಡವೆಯಿಲ್ಲದ್ದು) ಎನ್ನುವುದನ್ನು ದ್ವೈತ ಮತ್ತು ವಿಶಿಷ್ಟಾದ್ವೈತ ತತ್ವಗಳೂ ಮಾನ್ಯಮಾಡುತ್ತವೆ. ಆದರೆ, ಜಗತ್ತು ಅನಿತ್ಯವಲ್ಲ ಅದೂ ಸಹ ಸತ್ಯವಾದುದು ಎಂದು ದ್ವೈತಸಿದ್ಧಾಂತವು ಹೇಳುತ್ತದೆ.
" ಈ ಜಗತ್ತು ಹಿಂದೆ ಯಾವ ಕಾಲದಲ್ಲಿಯೂ ಯಾವ ದೇಶದಲ್ಲಿಯೂ ಯಾರಿಗೂ ಬಾಧಿತವಾಗಲಿಲ್ಲ ಮುಂದೆಯೂ ಆಗಲಾರದು. ಆದುದರಿಂದ ಜಗತ್ತು ನಿತ್ಯವೂ ಅಬಾಧಿತವೂ ಆಗಿದೆ " ಎಂದು ದ್ವೈತ ಸಿದ್ಧಾಂತದಲ್ಲಿ ಶ್ರೀ ಮಧ್ವಾಚಾರ್ಯರು ಭೇದವನ್ನು ಪ್ರತಿಪಾದಿಸುತ್ತಾರೆ. ಒಂದು ಪ್ರಸಿದ್ಧವಾದ ಶ್ಲೋಕದಲ್ಲಿ *(೧) ಮಧ್ವಾಚಾರ್ಯರ ತತ್ವವು ಬಹಳ ಚೆನ್ನಾಗಿ ಹೇಳಲ್ಪಟ್ಟಿದೆ. ರಾಮಾನುಜಾಚಾರ್ಯರ ವಿಶಿಷ್ಟಾದ್ವೈತಕ್ಕೂ ಅದ್ವೈತಕ್ಕೂ ಹೆಚ್ಚೇನೂ ಭಿನ್ನತೆಯಿಲ್ಲದಿದ್ದರೂ
  " ವಿಶ್ವಮಾನವರೆಲ್ಲರೂ ಪರಮಾತ್ಮನ ಸ್ವರೂಪರೇ " ಎನ್ನುವ ಅದ್ವೈತವನ್ನು ಬಿಟ್ಟು ಎಲ್ಲವೂ ಶ್ರೀ ಹರಿಯೇ , ಅವನೊಬ್ಬನೇ ಶೇಷಿ ಮಿಕ್ಕದ್ದೆಲ್ಲಾ ಶೇಷ ಎಂದು ಹೇಳುತ್ತಾರೆ. ದ್ವೈತದಲ್ಲಿಯೂ ಸಹ ’ ಹರಿ ಸರ್ವೋತ್ತಮ’ ಎನ್ನುವುದು ಅಂತಿಮ ನಿಶ್ಚಯ. ಬ್ರಹ್ಮವೆಂದರೆ ಬೇರೇನೂ ಅಲ್ಲ, ಜಗತ್ತಿನ ನಿಯಾಮಕನೂ ಸರ್ವಶಕ್ತನೂ ಆದ ಶ್ರೀಹರಿಯೇ ಮತ್ತು ಅವನೊಬ್ಬನೇ ಎಂದು ನಿರೂಪಿಸುತ್ತಾರೆ. ಹರಿಯೊಬ್ಬನೆ ಸ್ವತಂತ್ರ ಸತ್ಯ ಇನ್ನುಳಿದದ್ದೆಲ್ಲಾ ಅಧೀನ ಸತ್ಯ ಎನ್ನುವ ಪ್ರತಿಪಾದನೆಯನ್ನು ಕಾಣಬಹುದಾಗಿರುತ್ತದೆ. ಇಲ್ಲಾದರೂ ಸಹ ನಾವು ಶಂಕರರ ತತ್ವವನ್ನೇ ಕಾಣಬಹುದಾಗಿರುತ್ತದೆ. ಬ್ರಹ್ಮವೊಂದೇ ಸತ್ಯ ಜಗತ್ತು ಮಿಥ್ಯೆ ಎನ್ನುವ ಶಂಕರರ ಅದ್ವೈತಕ್ಕೂ ಹರಿಯೊಬ್ಬನೇ ( ಸಗುಣ ಬ್ರಹ್ಮ) ಸತ್ಯ ಉಳಿದುದೆಲ್ಲವೂ ಅನಿತ್ಯ ಅಥವಾ ಅಧೀನ ಸತ್ಯ (ಅಸ್ವತಂತ್ರ ಸತ್ಯ) ಮತ್ತು ಹರಿಯಿಂದಲೇ ಜಗತ್ತು ನೆಡೆಯುವುದು ಎನ್ನುವಾಗ ’ಜಗತ್ತು’ ಕೂಡಾ ಹರಿಯ ಮಾಯೆಯೇ ಎನ್ನುವುದು ನಿರೂಪಿತವಾಗುತ್ತದೆ ಮತ್ತು ಹೆಚ್ಚು ವ್ಯತ್ಯಾಸವೂ ಕಾಣದಾಗುತ್ತದೆ. ಇದು ನಿತ್ಯ ಅದು ಅನಿತ್ಯ ಎನ್ನುವ ಪೃಥಃಕರಣ ಎನ್ನಬಹುದು. (ಅರ್ಜುನನ ಗುರಿಯು ಪಕ್ಷಿಯ ಅಕ್ಷಿಯೊಂದೇ ಆಗಿದ್ದಾಗ ಉಳಿದ ಅಂಗಗಳೆಲ್ಲಾ ಆತನಿಗೆ ನಿಮಿತ್ತವಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬಹುದು).
ಬ್ರಹ್ಮವು ಸತ್ಯ ಎಂದು ಮೊದಲೇ ಹೇಳಿಬಿಡುವುದರಿಂದ ಆತ್ಮಜ್ಞಾನವನ್ನು ಪಡೆಯಬೇಕೆಂಬ ಆಸಕ್ತನ ಆಸಕ್ತಿಯು ಇಮ್ಮಡಿಯಾಗುತ್ತದೆ ಎಂಬ ಸೂಕ್ಷ್ಮ ಸಂವೇದನೆಯನ್ನು ಇಟ್ಟುಕೊಂಡು ಶ್ರೀ ಶಂಕರರು ಸಾಧನ ಚತುಷ್ಟಯದಲ್ಲಿ ನಿತ್ಯಾನಿತ್ಯವಿವೇಕವನ್ನು ಮೊದಲಿಗೆ ಸೇರಿಸಿದ್ದಾರೆ ಎನ್ನಬಹುದು. ’ಪರಿಗಣ್ಯತೇ’ ಎಂದು ವಿಶೇಷವಾಗಿ ಹೇಳಿರುವುದನ್ನು ಗಮನಿಸಬಹುದಾಗಿರುತ್ತದೆ. ಪುಸ್ತಕವೊಂದು ಓದಲು ಚೆನ್ನಾಗಿದೆ ನಾಳೆಯಿಂದ ಓದೋಣ ಎಂದು ಕೊಂಡಿದ್ದವನಿಗೆ ಅವನ ಹತ್ತು ಮಂದಿ ಗೆಳೆಯರು ’ಆ ಪುಸ್ತಕ ತುಂಬಾ ಚೆನ್ನಾಗಿದೆ’ ಎಂದು recommend ಮಾಡಿದರೆ ಆತನು ನಾಳೆ ಬಿಟ್ಟು ಇಂದಿನಿಂದಲೇ ಓದಲು ಮೊದಲಾಗಬಹುದು !.
ಆತ್ಮನೇ ಪರಮಾತ್ಮ ಎನ್ನುವ ಧೃಡನಿಶ್ಚಯವು ಬಂದು ಬಿಟ್ಟರೆ ಮುಂದೆ ಅನುಭವದಿಂದ ತಿಳಿಯಲು ಆಸಕ್ತಿಯೂ ಹೆಚ್ಚುತ್ತದೆ ಅನುಕೂಲವೂ ಆಗುತ್ತದೆ ಎಂಬ ಭಾವವನ್ನು ’ಬ್ರಹ್ಮಸತ್ಯಂ’ ಎನ್ನುವುದರಲ್ಲಿ ಕಾಣಬಹುದು.

ಮುಂದೆ ’ಜಗತ್ತು ಮಿಥ್ಯೆ’ ಎಂದು ಹೇಳುತ್ತಾರೆ. ಜಗತ್ತು ಯಾರಿಗೆ ಬಾಧಿತವಾಗದಿದ್ದರೂ ಸಹ ಅದು ಇದ್ದಂತೆ ಇರುವುದಿಲ್ಲ. ’ಜಗತ್ತು’ ಎನ್ನುವಾಗ ಜಗತ್ತಿನಲ್ಲಿರುವ ಎಲ್ಲಾ ಜೀವ-ಜಡ ವಸ್ತುಗಳನ್ನೂ ಗಣಿಸಬೇಕಾಗುತ್ತದೆ. ಜೀವ-ಜಡವಸ್ತುಗಳಿಂದಲೇ ಜಗತ್ತು ಎನ್ನುವುದು ವಿಜ್ಞಾನವೂ ಆಗಿರುವಾಗ ಒಂದನ್ನು ಬಿಟ್ಟು ಮತ್ತೊಂದು ಇರಲಾರದು ಎನ್ನುವುದು ತಿಳಿಯುತ್ತದೆ. ಆದರೆ, ಅದ್ಯಾವುದೂ ಶಾಶ್ವತವಲ್ಲ ಎನ್ನುವುದು ವಾಸ್ತವ ಮತ್ತು ಸತ್ಯ !. ’ಬದಲಾವಣೆಯೇ ಜಗದ ನಿಯಮ’ ಎಂಬ ಗೀತಾವಾಕ್ಯದಿಂದಲೆ ಜಗತ್ತು ಅನಿತ್ಯ ಎನ್ನುವುದು ನಿಶ್ಚಯವಾಗುತ್ತದೆ.  ’ಅನಿತ್ಯ’ ಎನ್ನುವುದೇನೋ ಸರಿ ಆದರೆ, ಮಿಥ್ಯೆ ಎನ್ನುವುದು ಎಷ್ಟು ಸರಿ ? ಎಂಬ ಪ್ರಶ್ನೆಯು ಬರುತ್ತದೆ.
ಆತ್ಮಾಭ್ಯಾಸಿಯು ಅನಿತ್ಯವಾದ ಜಗತ್ತನ್ನು ನೆಚ್ಚಿ ಕುಳಿತರೆ ತನ್ನ ಪರಮಾರ್ಥದ ಉದ್ದೇಶವನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗದು. ಆತನ ಲಕ್ಷ್ಯವೇನಿದ್ದರೂ ಬ್ರಹ್ಮದೆಡೆಗೆ ಮಾತ್ರ ಇರಬೇಕಾಗುತ್ತದೆ. ಹೀಗೆ ಗಟ್ಟಿಯಾಗುತ್ತಾ ಸಾಗಿದಂತೆ ಮೊಟ್ಟಮೊದಲ ವೈರಾಗ್ಯವು(=ಅನಾಸಕ್ತಿ, ತಟಸ್ಥ ಭಾವ) ಹುಟ್ಟುತ್ತದೆ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಬೇಕೆನ್ನುವವನು ಅದನ್ನು ವಾಸ್ತವದಲ್ಲಿ ಬಯಸುತ್ತಾನೆಯೇ ಹೊರತು ಕೇವಲ ಕನಸಿನಲ್ಲಿ ಕಂಡು ತೃಪ್ತನಾಗುವುದಿಲ್ಲ !. ಮಿಥ್ಯಾಪ್ರಂಪಚದ ಗೊಡವೆಯಿಂದ ಪರಮಾರ್ಥ ಚಿಂತನೆಯು ಸಾಧ್ಯವಾಗುವುದಿಲ್ಲ ಎಂಬ ಭಾವವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ ಎಂದುಕೊಳ್ಳಬಹುದು.
"ವೈರಾಗ್ಯವು ತಪ್ಪದೆ ಹುಟ್ಟುವುದಕ್ಕಾಗಿ ಬ್ರಹ್ಮವು ನಿತ್ಯ ಜಗತ್ತು ಅನಿತ್ಯ ಎಂದು ಹೇಳದೆ ಬ್ರಹ್ಮವು ಸತ್ಯ ಜಗತ್ತು ಮಿಥ್ಯೆ ಎಂದು ಹೇಳಿದ್ದಾರೆ " ಎಂಬುದು ಸದ್ಗುರು ಚಂದ್ರಶೇಖರ ಭಾರತಿಗಳ ವಿವರಣೆ.
’ವಿನಿಶ್ಚಯಃ’ (=ಸರಿಯಾದ , ವಿಶೇಷವಾದ ತಿಳುವಳಿಕೆ) ಎಂಬ ವಿಶೇಷಣದ ಮೂಲಕ ಆತ್ಮಾಭ್ಯಾಸಿಯು ನಿತ್ಯಾನಿತ್ಯವಿವೇಕವನ್ನು  ಧೃಡವಾಗಿ ನಿಶ್ಚಯಿಸಿಕೊಳ್ಳಬೇಕು ಎನ್ನುವುದನ್ನು ಸೂಚಿಸಿರುತ್ತಾರೆ.
ಇಂತಹ ನಿತ್ಯಾನಿತ್ಯವಿವೇಕವೆ ವೈರಾಗ್ಯಕ್ಕೆ ಕಾರಣ ಎಂಬುದನ್ನು ’ಸಮ್-ಉದಾಹೃತಃ’ ಎಂಬಲ್ಲಿ ’ಸಮ್’ ಎಂಬ ಉಪಸರ್ಗದಿಂದ ಸೂಚಿಸಿರುತ್ತಾರೆ.

ವಿವೇಕ ಚೂಡಾಮಣಿಯ ಆಂತರ್ಯವು ನಾವು ಇದೀಗ ತಿಳಿದುಕೊಂಡ ಶ್ಲೋಕದಲ್ಲಿ ಚೆನ್ನಾಗಿ ಒಡಮೂಡಿದೆ ಎನ್ನಬಹುದು. ’ಸರ್ವಕರ್ಮ ಸನ್ಯಾಸ-ವೈರಾಗ್ಯ-ಮುಮುಕ್ಷುತ್ವ-ಬ್ರಹ್ಮಭಾವ’ ಇವುಗಳು ಈ ಗ್ರಂಥದ ಮೂಲೋದ್ದೇಶ ಎನ್ನುವುದು ಇಲ್ಲಿ ಕಂಡುಬರುತ್ತದೆ. ಕೆಲವರು ’ಕೇವಲ ಸನ್ಯಾಸಿಗಳಿಗಾಗಿಯೇ ಈ ಗ್ರಂಥವಿರುವುದು, ಇದರಿಂದ ಬದುಕಿಗೆ ಯಾವ ಪ್ರಯೋಜನವೂ ಇಲ್ಲ’ ಎಂದು ಹೇಳುವುದನ್ನು ಕೇಳಿದ್ದೇನೆ. ಅವರಿಗಾಗಿ ಒಂದು ಮಾತು.
ಬದುಕುವುದಕ್ಕೆ ಜಗತ್ತಿನಲ್ಲಿ ಬೇಕಾದಷ್ಟು ಜಾಗವಿದೆ, ಮಾಡುವುದಕ್ಕೆ ಕೆಲಸವೂ ಇದೆ. ಅಂತಹವರು ಅವರವರ ಕೆಲಸಗಳನ್ನು ಮಾಡಿಕೊಂಡು ಬದುಕು ನೆಡೆಸಿಕೊಳ್ಳಬಹುದು. ಶ್ರೀ ಶಂಕರ ಭಗವತ್ಪಾದರೇನೂ ಎಲ್ಲರಿಗೂ ಮೋಕ್ಷವನ್ನು ಕೊಟ್ಟುಬಿಡುತ್ತೇನೆಂದು ಎಲ್ಲಿಯೂ ಬರೆದುಕೊಟ್ಟಿಲ್ಲ. ಬಂದವರಿಗೆ, ಆಸಕ್ತರಿಗೆ ಮಾತ್ರವೇ ಈ ಗ್ರಂಥದ ಉಪಯೋಗವಿರುವುದು ಎಂದು ಹೇಳಬೇಕಾಗುತ್ತದೆ.

ಒಬ್ಬರು ಬಹಳ ದೊಡ್ಡ ಪಂಡಿತರಿದ್ದರಂತೆ. ಎಲ್ಲವನ್ನು ತಿಳಿದುಕೊಂಡಿದ್ದ ಅವರನ್ನು ಮೀರಿಸುವವರು ಯಾರೂ ಇರಲಿಲ್ಲವಂತೆ. ಆದರೂ, ಕಾಶಿಯ ಪಂಡಿತರೊಡನೆ ಜಯ ಸಾಧಿಸದೆ ಸಾಧನೆಯು ಅಪೂರ್ಣ ಎಂಬ ಮಾತನ್ನು ಕೇಳಿದ ಪಂಡಿತರು ಕಾಶಿಗೆ ಹೋಗಿ ಮತ್ತಷ್ಟು ವಿದ್ಯೆಯನ್ನು ಕಲಿತು ಅಲ್ಲಿಯ ಪಂಡಿತರನ್ನು ಸೋಲಿಸಿ ತಮ್ಮ ಊರಿಗೆ ಮರಳಿದರಂತೆ. ಒಮ್ಮೆ ಊರಿನಲ್ಲಿದ್ದ ಒಬ್ಬ ಸಾಧಾರಣ ಮುದುಕ ಸಂತರೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಪಂಡಿತರು ಉತ್ತರಿಸಲಾಗದೆ ಪರಾಭವ ಹೊಂದಿ ನಂತರ ಆ ಪ್ರಶ್ನೆಗೂ ಉತ್ತರ ಪಡೆಯಲೋಸುಗ ಮತ್ತೆ ಕಾಶಿಗೆ ತೆರಳಿದರಂತೆ. ನಾಲ್ಕೈದು ವರುಷಗಳ ಕಾಲ ಕಾಶಿಯಲ್ಲಿ ತಂಗಿದ್ದು ಇನ್ನಷ್ಟು ವಿದ್ಯೆಯನ್ನು ಕಲಿತು ಉತ್ತರವನ್ನು ಕಂಡುಕೊಂಡು ಊರಿಗೆ ಮರಳಿದರಂತೆ. ಅವರು ಬರುವಷ್ಟರಲ್ಲಿ ಪ್ರಶ್ನೆ ಹಾಕಿದ್ದ ಸಂತರು ತೀರಿಕೊಂಡಿದ್ದರಂತೆ !. ಉತ್ತರವನ್ನು ಯಾರಿಗೂ ಹೇಳಲಾಗದೆ ಪಂಡಿತರು ಬೇಸರಪಟ್ಟುಕೊಂಡರಂತೆ. ಆದರೇನು ? ಆ ನೆಪದಲ್ಲಿ ಇನ್ನಷ್ಟು ಕಲಿತುಕೊಂಡಿದ್ದು ಅವರಿಗೆ ಪ್ರಯೋಜನವೇ ಆಯಿತಲ್ಲಾ !. ಇಲ್ಲಿ ಮುಖ್ಯವಾಗಿ ಕಾಣುವುದು commitment ಎನ್ನುವುದು. ವಿರಾಗಿಗಳಾಗುದಕ್ಕೋಸ್ಕರವೇ ತಿಳಿಯಬೇಕೆಂದೇನೂ ಇಲ್ಲ ಅಥವಾ ತಿಳಿದಾಕ್ಷಣ ಯಾರೂ ವಿರಾಗಿಗಳಾಗುವುದೂ ಇಲ್ಲ !. ಜಿಜ್ಞಾಸೆಯು (= ಅರಿತುಕೊಳ್ಳಬೇಕೆಂಬ ಬಯಕೆ) ಎಲ್ಲಕ್ಕಿಂತ ಮುಖ್ಯವಾದುದು ಮತ್ತು ಮಾನ್ಯವಾದುದು ಎಂದು ಹೇಳಬಹುದು.

ಮುಂದಿನ ಕಂತಿನಲ್ಲಿ "ಇಹಾಮುತ್ರಫಲಭೋಗವೈರಾಗ್ಯ"ದ ವಿಚಾರವನ್ನು ತಿಳಿಯೋಣ.

------------------------------------------------------

ಟಿಪ್ಪಣಿ:-

*(೧)
ಮಧ್ವಾಚಾರ್ಯರ  ಒಂಬತ್ತು  ತತ್ವವಿರುವ ಪ್ರಸಿದ್ಧ ಶ್ಲೋಕ

ಶ್ರೀಮನ್ಮಧ್ವಮತೇ ಹರಿಃ ಪರತರೋ ಸತ್ಯಂ ಜಗತ್ತತ್ವತೋ
ಭೇದೋ ಜೀವಗಣಾ ಹರೇರನುಚರಾಃ ನೀಚೋಚ್ಛಭಾವಂ ಗತಾಃ |
ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ ||

---------------------------------

ವಂದನೆಗಳೊಂದಿಗೆ....

Tuesday, September 6, 2011

ವಿನಂತಿ

ನನ್ನ ಮನೆಯ ನಿರ್ಮಾಣದ ಕೆಲಸಗಳ ಒತ್ತಡದಿಂದ ಇನ್ನೆರಡು ತಿಂಗಳುಗಳಕಾಲ ನಾನು ವೇದಸುಧೆಯಲ್ಲಿ ಹೆಚ್ಚು  ಪ್ರಕಟಿಸಲಾರೆ. ಬರುವ ನವಂಬರ್ ೨ ಮತ್ತು ೩ ರಂದು ಗೃಹಪ್ರವೇಶ ನಿಮಿತ್ತ ಕೆಲವು ಕಾರ್ಯಕ್ರಮಗಳು ನಿಶ್ಚಯವಾಗಿದೆ . ವೇದಸುಧೆಯಲ್ಲಿಪ್ರಕಟಿಸುವೆ. ವೇದಸುಧೆಯ ಅಭಿಮಾನಿಗಳು ನನ್ನೊಡನಿರಬೇಕೆಂದು ವಿನಂತಿಸುವೆ.
-ಹರಿಹರಪುರಶ್ರೀಧರ್ 

Sunday, September 4, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೮:


     ಉಪಾಸನಾ -  ಎಂದರೆ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು. ಭಗವಂತನ ಸಮೀಪದಲ್ಲಿ ಕುಳಿತುಕೊಳ್ಳುವುದೇ ಭಗವದುಪಾಸನೆ. ಭಗವಂತನೂ ಅನಾದಿ, ಜೀವರಾದ ನಾವೂ ಅನಾದಿ. ಹೀಗಾಗಿ ಅವನೂ, ನಾವೂ ಸಮಕಾಲೀನರು. ಕಾಲದ ದೃಷ್ಟಿಯಿಂದ ನಾವು ಅವನಿಂದ ದೂರವಿಲ್ಲ. ಅವನು ಸರ್ವವ್ಯಾಪಕನಾದ ಕಾರಣ, ನಮ್ಮೊಳಗೂ, ಹೊರಗೂ ಏಕಪ್ರಕಾರವಾಗಿ ವ್ಯಾಪಕನಾಗಿದ್ದೇನೆ. ಆದುದರಿಂದ ದೇಶದ ದೃಷ್ಟಿಯಿಂದಲೂ ಅವನು ನಮ್ಮಿಂದ ದೂರವಿಲ್ಲ. ಹೀಗೆ ಕಾಲ-ದೇಶಗಳ ದೃಷ್ಟಿಯಿಂದ ಉಪಾಸನೆ ನಮಗೆ ಸಹಜವಾಗಿಯೇ ಸಿದ್ಧಿಸಿದೆ. ಆದರೆ. ಸಂಪರ್ಕ ಸಾಧನವಾದ ಮನಸ್ಸು ಸಾಂಸಾರಿಕ ವ್ಯಾಪಾರಗಳಲ್ಲಿ ವ್ಯಾಪ್ರವಾಗಿರುವುದರಿಂದ, ಜ್ಞಾನದ ದೃಷ್ಟಿಯಿಂದ ನಾವು ಪರಮಾತ್ಮನಿಂದ ದೂರವೇ ಇದ್ದೇವೆ. ಈ ಜ್ಞಾನಸಂಬಂಧೀ ದೂರವನ್ನು ದೂರೀಕರಿಸಿ, ಮನಸ್ಸನ್ನು ಅವನಲ್ಲಿ ನಿಲ್ಲಿಸಿ, ಅವನ ಸಾಮೀಪ್ಯವನ್ನನುಭವಿಸುವುದೇ ಉಪಾಸನೆ. ಆಲಿಸಿರಿ:-


ಯುಂಜತೇ ಮನ ಉತ ಯುಂಜತೇ ಧಿಯೋ ವಿಪ್ರಾ ವಿಪ್ರಸ್ಯ ಬೃಹತೋ ವಿಪಶ್ಚಿತಃ |
ವಿ ಹೋತ್ರಾ ದಧೇ ವಯುನಾವಿದೇಕ ಇನ್ಮಹೀ ದೇವಸ್ಯ ಸವಿತುಃ ಪರಿಷ್ಟುತಿಃ ||
(ಯಜು. ೩೭.೨.)


     [ವಿಪ್ರಾಃ] ವಿಶೇಷ ಪ್ರಜ್ಞಾವಂತರಾದ [ವಿಪಶ್ಚಿತಃ] ವಿದ್ವಾಂಸರು [ಬೃಹತಃ ವಿಪ್ರಸ್ಯ] ಮಹಾನ್ ಹಾಗೂ ವಿಶಿಷ್ಟ ಪ್ರಜ್ಞನಾದ ಪ್ರಭುವಿನಲ್ಲಿ [ಮನಃ ಯುಂಜತೇ] ಮನಸ್ಸನ್ನು ನಿಲ್ಲಿಸುತ್ತಾರೆ. [ಉತ] ಹಾಗೆಯೇ [ಧಿಯಃ ಯುಂಜತೇ] ಬುದ್ಧಿಗಳನ್ನು ನಿಲ್ಲಿಸುತ್ತಾರೆ. [ಏಕ ಇತ್ ವಯುನಾವಿತ್] ಏಕಮಾತ್ರ ಪಥಜ್ಞನೂ, ಲೋಕಜ್ಞನೂ ಆದ ಪ್ರಭುವು [ಹೋತ್ರಾ] ಸಂಯೋಗಜನ್ಯವಾದ ನಾನಾ ಜಗತ್ತುಗಳನ್ನು [ವಿದಧೇ] ವಿವಿಧ ರೀತಿಯಲ್ಲಿ ಧರಿಸಿದ್ದಾನೆ. [ಸವಿತುಃ ದೇವಸ್ಯ] ಜಗದುತ್ಪಾದಕ ಹಾಗೂ ಪ್ರೇರಕನಾದ, ಸರ್ವದಾತೃ, ಪ್ರಕಾಶಸ್ವರೂಪ ಭಗವಂತನ, [ಪರಿಸ್ತುತಿಃ ಮಹೀ] ಉನ್ನತ ಸ್ತುತಿ ಮಹತ್ತಾದುದು. 


     ಮನಸ್ಸು ಸಂಕಲ್ಪ-ವಿಕಲ್ಪ ಸಾಧನ. ಬುದ್ಧಿ ತತ್ತ್ವಗ್ರಹಣ ಸಾಧನ. ಮನಸ್ಸಿನ ಆಲೋಚನ-ವಿಲೋಚನಗಳನ್ನು ತಡೆಗಟ್ಟಿ ಬುದ್ಧಿಯನ್ನು ಬಾಹ್ಯ ವಿಷಯಗ್ರಹಣದಿಂದ ಬೇರ್ಪಡಿಸಿ, ಎರಡನ್ನೂ ಅಭ್ಯಂತರ ವೃತ್ತಿಯ ಪರಿಧಿಗೆಳೆತಂದು, ಭಗವದ್ಗುಣಗಳನ್ನು ಚಿಂತಿಸುತ್ತಾ, ಗ್ರಹಿಸುತ್ತಾ, ಎರಡನ್ನೂ ಆ ಕಾರ್ಯಗಳಲ್ಲಿಯೇ ವಿನಿಯೋಗಿಸುವುದು ಭಗವದುಪಾಸನೆ. ಇದು ಸರ್ವಥಾ ಅಭ್ಯಂತರ ಕರ್ಮ. ಈ ಉಪಾಸನೆಗೆ ಪೂರ್ವಹಂತಗಳಾಗಿ ಭಗವಂತನಲ್ಲಿ ಪ್ರೇಮ ಬೆಳೆಯಿಸುವ ಸ್ತುತಿ ಮತ್ತು ಹೃದಯದಲ್ಲಿ ನಮ್ರತೆಯನ್ನು ಬಿತ್ತುವ ಪ್ರಾರ್ಥನೆ. ಇವೆರಡನ್ನೂ ಉಪಯೋಗಿಸಿಕೊಳ್ಳಬೇಕು. ಈ ಬಗೆಯ ಸತ್ಯೋಪಾಸನೆಯಿಂದ ಹೃದಯದಲ್ಲಿ ಪವಿತ್ರವಾದ ಹಾಗೂ ವಿಶಾಲವಾದ ಭಾವನೆಗಳುದಿಸುವುದಲ್ಲದೆ, ಅನಿರ್ವಚನೀಯವಾದ ಶಾಂತಿ, ಆನಂದ ಹಾಗೂ ಸ್ಫೂರ್ತಿಗಳ ಉದಯವೂ ಆಗಿ , ಜೀವನ ಸರಸವೂ, ಬಲಿಷ್ಠವೂ ಆಗುತ್ತದೆ. ಭಗವದ್ಗುಣಧ್ಯಾನದಲ್ಲಿ ನಿಂತ ಚಿತ್ತ, ಕ್ರಮಕ್ರಮವಾಗಿ ಆ ಗುಣಗಳನ್ನು ಉಪಾಸಕನಾದ ಮಾನವನ ಜೀವನಕ್ಕೆ ತುಂಬುತ್ತಾ ಹೋಗುತ್ತದೆ. ಭಗವಂತನೊಂದಿಗೆ ಸಮಾನ ಗುಣಗಳನ್ನು ಹೊಂದಿದ ಭಕ್ತ, ಬೇಗನೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಸಮರ್ಥನಾಗುತ್ತಾನೆ. ಅವನು ಶಕ್ತಿ-ಸ್ಫೂರ್ತಿಗಳ, ಕೀರ್ತಿ-ಪ್ರೀತಿಗಳ ಬುಗ್ಗೆಯೇ ಆಗಿಹೋಗುತ್ತಾನೆ.
***************

Friday, September 2, 2011

ಯೋಚಿಸಲೊ೦ದಿಷ್ಟು...೩೯

೧. ಒಮ್ಮೊಮ್ಮೆ ನಾವು ಬದುಕಿದ್ದಾಗಲೇ ಕೆಲವರಿಗೆ ಕೇವಲ “ನೆನಪಾಗಿ“ ಉಳಿಯುತ್ತೇವೆ!
೨.ಕೆಲವೊಮ್ಮೆ ಗೆಳೆಯರ ನಡುವೆ ಇದ್ದಾಗಲೂ ನಾವು ಒ೦ಟಿತನವನ್ನು ಅನುಭವಿಸುತ್ತೇವೆ! ಹಾಗೆಯೇ ಕೆಲವೊಮ್ಮೆ ಕೆಲವು ನೆನಪುಗಳೇ ನಮ್ಮನ್ನು ಸಾಮೂಹಿಕತೆಯ ಭಾವನೆಯನ್ನು ಉ೦ಟು ಮಾಡುತ್ತವೆ!!
೩. ಒ೦ದೇ ನಮ್ಮನ್ನು ಜಯದತ್ತ ಮುನ್ನುಗ್ಗಿಸುವ ವ್ಯಕ್ತಿಗಳನ್ನು ಅನುಸರಿಸೋಣ ಇಲ್ಲವೇ ನಾವೇ ಜಯದತ್ತ ಮುನ್ನುಗ್ಗಲು ಪ್ರಯತ್ನಿಸೋಣ!!
೪. ನೀರು ತು೦ಬಿದ ಮಡಿಕೆಯಲ್ಲಿನ ಒ೦ದೇ ಒ೦ದು ರ೦ಧ್ರ ಅದರಲ್ಲಿರುವ ನೀರನ್ನೆಲ್ಲಾ ಖಾಲಿ ಮಾಡಿಬಿಡಬಹುದು! ಅ೦ತೆಯೇ ನಮ್ಮ ಒ೦ದು ಸಣ್ಣ ಅಹ೦ಕಾರದ ನಡೆ ಹಾಗೂ ಕೋಪದ ವ್ಯಕ್ತಿತ್ವ ನಮ್ಮ ಹೃದಯದ ಸೌ೦ದರ್ಯವನ್ನೇ ನಾಶ ಮಾಡಿಬಿಬಹುದು!!
೫. ಏನನ್ನೂ ಕಳೆದುಕೊಳ್ಳದೆ ಏನನ್ನೂ ಪಡೆಯಲಾಗದು!
೬. ಗುರಿಯ ದೃಷ್ಟಿ ಇಲ್ಲದ ವಾದ ಎಷ್ಟೇ ತರ್ಕಬಧ್ಧವಾದರೂ ಅರ್ಥಹೀನವಾದುದೇ- ಟಾಲ್ ಸ್ಟಾಯ್
೭.ಮಳೆಯ ಸ೦ಗಡ ಜೂಜಾಟವಾಡಿ ಪ್ರಯೋಜನವಿಲ್ಲ! ಕೊಡೆಯನ್ನು ಬಿಡಿಸುವುದೇ ಲೇಸು!!
೮. ಪ್ರಪ೦ಚವನ್ನು ಪ್ರೀತಿಸುವುದೆ೦ದರೆ ಪರಮಾತ್ಮನನ್ನು ಪ್ರೀತಿಸಿದ೦ತೆಯೇ! ಆದುದರಿ೦ದ ಪರಮಾತ್ಮನ ಪ್ರೀತಿಯೆ೦ದರೆ ಪ್ರಪ೦ಚ ಪ್ರೇಮ!!- ಸಿದ್ದೇಶ್ವರ ಸ್ವಾಮೀಜಿ
೯.ಜನರೊಡನೆ ವ್ಯವಹರಿಸುವುದು ಹಾಗೂ ಅವರನ್ನು ಒಲಿಸಿಕೊಳ್ಳುವುದು ಸುಲಭವಲ್ಲ.. ಅದೊ೦ದೊ ಬಹು ದೊಡ್ಡ ಕಲೆ! ಕೇವಲ ಅಭ್ಯಾಸ ಬಲದಿ೦ದ ಬರುವ೦ಥದ್ದಲ್ಲ!!
೧೦. ಯಾರ ಯೋಗ್ಯತೆಯನ್ನೂ ಅವರ ಲೋಪಗಳ ಆಧಾರದಿ೦ದ ನಿರ್ಣಯಿಸಬಾರದು- ಸ್ವಾಮಿ ವಿವೇಕಾನ೦ದರು
೧೧. ಕಲಿಸಿದ ವಿದ್ಯೆ ಮರೆಯಬಾರದು.. ಕಲಿಸಿದ್ದನ್ನು ಬೆಳೆಸಿಕೊಳ್ಳಬೇಕು! ಎಷ್ಟು ಬೆಳೆಸಿದರೂ ಕೊನೆ ಕಾಣದ್ದೆ೦ದರೆ ವಿದ್ಯೆ ಮಾತ್ರವೇ!! – ತ.ರಾ.ಸು.
೧೨. ಶಾ೦ತನೂ ಸುಖಿಯೂ ಅಲ್ಲದವನಿಗೆ ಯೌವನ ಹಾಗೂ ಮುಪ್ಪು ಎರಡೂ ಹೊರೆಯೇ!!
೧೩. ಒ೦ದು ಕಲಾಕೃತಿಗೆ ಕಲಾವಿದ ನೀಡಿದ ಶೀರ್ಷಿಕೆಯನ್ನೇ ಒಪ್ಪಬೇಕೆ೦ದಿಲ್ಲ.. ನೋಡುಗ ಕಲಾಕೃತಿಯನ್ನು ಅನುಭವಿಸುತ್ತಾ ಹೋದ೦ತೆ ಶೀರ್ಷಿಕೆ ತನ್ನಿ೦ದ ತಾನೇ ಹುಟ್ಟಿಕೊಳ್ಳುತ್ತದೆ- ಹಡಪದ್
೧೪. ನಾವು ಕಳೆದುಕೊ೦ಡದ್ದಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆದಿರುತ್ತೇವೆ ಹಾಗೂ ಏನನ್ನಾದರೂ ಪಡೆದಿದ್ದರೆ ಅದಕ್ಕೆ ಬದಲಾಗಿ ಮತ್ತೇನನ್ನಾದರೂ ಕಳೆದುಕೊ೦ಡಿರುತ್ತೇವೆ!!
೧೫. ವಿಜ್ಞಾನದ ಬೇರನ್ನೇ ಕಿತ್ತೊಗೆಯುವ೦ತದ್ದು ಎ೦ದರೆ “ಗುಟ್ಟು“ ಮಾತ್ರ!!- ಆಪ್ ಹೀಮರ್