Pages

Monday, October 25, 2010

ಉನ್ನತ ಬದುಕಿಗಾಗಿ ವೇದದ ಸೂತ್ರಗಳು

ಶ್ರೀ ಸುಧಾಕರಶರ್ಮರ ಮಾತುಗಳನ್ನು ಕೇಳುವುದೇ ಒಂದು ಸೊಗಸು.ಅವರ ಮಾತುಗಳಿಗೆ ಅಕ್ಷರ ಕೊಡುವುದೆಂದರೆ ಬಲು ಸಾಹಸದ ಕೆಲಸ. ಅಂತಹ ಸಾಹಸಕ್ಕೆ ಕೈ ಹಾಕದೆ ಅವರ ಮಾತುಗಳನ್ನು ನಿಮಗೆ ನೇರವಾಗಿ ಕೇಳಿಸುವ ಪ್ರಯತ್ನ ಇಲ್ಲಿದೆ.ಬಲು ಒತ್ತಾಯಪೂರ್ವಕವಾಗಿಯೇ ಶರ್ಮರ ಮಾತುಗಳನ್ನು ಹಲವರಿಗೆ ನಾನು ಕೇಳಿಸಲು ಕಾರಣವಿದೆ. ನಾವೆಲ್ಲಾ ಅಂತಿಮವಾಗಿ ಹುಡುಕುತ್ತಿರುವುದಾದರೂ ಏನು? ನೆಮ್ಮದಿಯ ಬದುಕು!ಅಲ್ಲವೇ? ಜೀವನದಲ್ಲಿ ನೆಮ್ಮದಿಯನ್ನು ಕಾಣಲು, ಲವಲವಿಕೆಯಾಗಿ ಕುಟುಂಬ ನಿರ್ವಹಿಸಲು, ಸದಾ ಹರ್ಷಚಿತ್ತರಾಗಿರಲು, ಉನ್ನತಬದುಕು ನಡೆಸಲು ಯಾವುದಾದರೂ ಸರಳ ಮಾರ್ಗವಿದೆಯೇ? ಎಂಬ ಪ್ರಶ್ನೆ ಎದ್ದಾಗ-ಶರ್ಮರು ಹೇಳುತ್ತಾರೆ" ಬೆಣ್ಣೆಯನ್ನು ಕೈಲಿಟ್ಟುಕೊಂಡು ತುಪ್ಪಕ್ಕೆ ಅಲೆಯುವುದೇ?
                               ಜನ್ಮ ಜನ್ಮಾಂತರಗಳ ಪುಣ್ಯದ ಫಲದಿಂದಲೇ ಭಾರತ ದೇಶದಲ್ಲಿ ನಮ್ಮ ಜನ್ಮವಾಗಿದೆ ಎಂಬುದು ನನ್ನ ದೃಢವಾದ ನಂಬಿಕೆ. ಅದೆಷ್ಟು ಸಹಸ್ರ ಜನ ಋಷಿಮುನಿಗಳು ಈ ಭೂಮಿಯಲ್ಲಿ ಜನಿಸಿ ತಪಸ್ಸನ್ನುಗೈದು ಈ ಭೂಮಿಯ ಕಣಕಣವನ್ನೂ ಪುನೀತಗೊಳಿಸಿರುವರೋ ಅಂತಹ ಪವಿತ್ರಭೂಮಿಯಲ್ಲಿ ನಮ್ಮ ಜನ್ಮ ವಾಗಿದೆ.ಇಡೀ ಮಾನವ ಕುಲದ ಉನ್ನತಬದುಕಿಗಾಗಿ ಸೂತ್ರವನ್ನು ಕೊಟ್ಟ ವೇದವನ್ನು ಜಗತ್ತಿಗೆ ನೀಡಿದ ಪುಣ್ಯ ಭೂಮಿ ಇದು. ಆದರೆ ಅಂತಹ ಮಹಾನ್ ಜ್ಞಾನದ ತೌರಿನಲ್ಲೇ ವೇದವನ್ನು ಅರಿತವರು ಬಹಳ ಜನರಿಲ್ಲ.ವೇದವೆಂದರೆ ಕೇವಲ ಸ್ವರಬದ್ಧವಾಗಿ ಮಂತ್ರಗಳನ್ನು ಪಠಿಸುವುದೆಂದೇ ಬಹುಜನರ  ನಂಬಿಕೆ. ವೇದವು ನಮ್ಮ ಬದುಕನ್ನು ಹಸನುಗೊಳಿಸಬಲ್ಲ ಸರಳ ಸೂತ್ರಗಳನ್ನು ಹೊಂದಿದೆ ಎಂದರೆ ಆಶ್ಚರ್ಯವಾಗುತ್ತದೆ. ಲಿಂಗಭೇದವಿಲ್ಲದೆ, ಜಾತಿಭೇದವಿಲ್ಲದೆ, ಪ್ರಾಂತ ಭೇದವಿಲ್ಲದೆ ಈ ವಿಶ್ವದಲ್ಲಿರುವ ಎಲ್ಲಾ ಮಾನವರು ತಮ್ಮ ಉನ್ನತಬದುಕಿಗಾಗಿ ವೇದಾಧ್ಯಯನ ಮಾಡಲು ಅರ್ಹರೆಂಬುದನ್ನು ಶರ್ಮರು ವೇದ ಮಂತ್ರಗಳಿಂದಲೇ ಮನಮುಟ್ಟುವಂತೆ ವಿವರಿಸುತ್ತಾರೆ. ಅಷ್ಟೇ ಅಲ್ಲ, ಇಲ್ಲಿರುವ ನಾಲ್ಕಾರುಮಂತ್ರಗಳ ವಿವರಣೆಯನ್ನು ಮನಸ್ಸಿಟ್ಟು ಕೇಳಿದರೆ ಜೀವನಕ್ಕೆ ಒಂದು ಸತ್ಯಪಥದ ದರ್ಶನವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಸುಮಾರು ೭-೮ ಗಂಟೆಗಳಿರುವ  ಈ ಉಪನ್ಯಾಸವನ್ನು  ನಾಲ್ಕಾರು ಭಾರಿ ಕೇಳಬೇಕು. ಅಂತಿಮವಾಗಿ ಜೀವನಕ್ಕೆ ಅಷ್ಟು ಸಾಕೆಂಬ  ಸತ್ಯದ ದರ್ಶನವಾಗುವುದರಲ್ಲಿ ಸಂಶಯವಿಲ್ಲ. ಇನ್ನು ಮುಂದೆ  ಉಪನ್ಯಾಸವನ್ನು ಕೇಳಿ. ಒಂದೆರಡು ಗಂಟೆಗಳು ಸತತವಾಗಿ ಕೇಳುವುದು ಕಷ್ಟ ವೆನ್ನಿಸಬಹುದು. ಆದರೂ ಅನಿವಾರ್ಯ. ಅಂತಿಮವಾಗಿ ಕೇಳಿದ್ದು ಸಾರ್ಥಕವೆನಿಸದಿರದು. ಉಪನ್ಯಾಸವನ್ನು ಕೇಳಿದಮೇಲೆ ನಿಮ್ಮಲ್ಲಿ ಮೂಡಬಹುದಾದ ಸಂದೇಹಗಳಿಗೆ ನೀವು  ವೇದಸುಧೆಗೆ ಮೇಲ್ ಮಾಡಬಹುದು. ವೇದಸುಧೆಯ ಪ್ರತಿಕ್ರಿಯೆ ಕಾಲಮ್ ನಲ್ಲಿ ನಿಮ್ಮ ಸಂದೇಹಗಳನ್ನು ಬರೆಯಬಹುದು. ಎಲ್ಲಕ್ಕೂ ಶ್ರೀ ಶರ್ಮರು ಉತ್ತರಿಸುವರು. 
vedasudhe@gmail.com |

ಭಾಗ-1



ಭಾಗ-2



ಭಾಗ-3


ಭಾಗ-4